‘ಟಾಮ್‌ ಅಂಡ್‌ ಜೆರ್ರಿ’ ಚಿತ್ರ ವಿಮರ್ಶೆ: ಆಟದ ನಡುವೆ ಜೀವನ ಪಾಠ


Team Udayavani, Nov 13, 2021, 12:39 PM IST

tom-and-jerry

ಕಾರ್ಟೂನ್‌ನಲ್ಲಿ “ಟಾಮ್‌ ಅಂಡ್‌ ಜೆರ್ರಿ’ ನೋಡಿದವರಿಗೆ ಅಲ್ಲೊಂದು ಕ್ಯೂಟ್‌ ಕಿತ್ತಾಟ, ಮುದ್ದಾಟ ಇಷ್ಟವಾಗಿರುತ್ತದೆ. ಅಂಥದ್ದೇ ಕಿತ್ತಾಟ, ಮುದ್ದಾಟ ಜೊತೆಗೊಂದು ಜೀವನ ಪಾಠ ಈ ವಾರ ತೆರೆಗೆ ಬಂದಿರುವ “ಟಾಮ್‌ ಅಂಡ್‌ ಜೆರ್ರಿ’ ಸಿನಿಮಾದಲ್ಲೂ ಕಾಣ ಸಿಗುತ್ತದೆ.

ಹೆಸರೇ ಹೇಳುವಂತೆ, “ಟಾಮ್‌ ಅಂಡ್‌ ಜೆರ್ರಿ’ಯಂಥ ಎರಡು ವೈರುಧ್ಯವಿರುವ ಧರ್ಮ (ನಾಯಕ) ಮತ್ತು ಸತ್ಯ (ನಾಯಕಿ) ವ್ಯಕ್ತಿತ್ವ, ಮನಸ್ಥಿತಿಯ ಸುತ್ತ ಇಡೀ ಸಿನಿಮಾದ ಕಥೆ ಸಾಗುತ್ತದೆ. ಇಲ್ಲೊಂದು ನವಿರಾದ ಲವ್‌ಸ್ಟೋರಿ ಇದೆ. ಪ್ರೀತಿಯನ್ನು ಹಂಬಲಿಸುವ ಹೃದಯಗಳಿವೆ, ಸಂಬಂಧಗಳನ್ನು ಬೆಂಬಲಿಸುವ ಮನಸ್ಸುಗಳಿವೆ, ಜೀವನ ದರ್ಶನ ಮಾಡಿಸುವಂಥ ಪಾತ್ರಗಳಿವೆ. ಇವೆಲ್ಲವನ್ನೂ ಒಂದೇ ಫ್ರೇಮ್‌ನಲ್ಲಿ “ಟಾಮ್‌ ಅಂಡ್‌ ಜೆರ್ರಿ’ ಜೊತೆ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ ಯುವ ನಿರ್ದೇಶಕ ರಾಘವ ವಿನಯ್‌ ಶಿವಗಂಗೆ.

ಇದನ್ನೂ ಓದಿ:‘ಫಸ್ಟ್ ನೈಟ್’ ಹೇಳಿಕೆ: ರಚಿತಾ ರಾಮ್ ಮೇಲೆ ನಿಷೇಧ ಹೇರಲು ಕ್ರಾಂತಿ ದಳ ಕೋರಿಕೆ

ಇಂದಿನ ಪ್ರೇಕ್ಷಕರಿಗೆ ಇಷ್ಟವಾಗುವಂತ ಸಿನಿಮ್ಯಾಟಿಕ್‌ ಅಂಶಗಳ ಜೊತೆಗೇ, ಜೀವನದ ಅರ್ಥ, ಆಯಾಮ, ವ್ಯಾಖ್ಯಾನ ಹೀಗೆ ಗಂಭೀರ ಅಂಶಗಳನ್ನು ಚಿತ್ರದಲ್ಲಿ ಹೇಳಲಾಗಿದೆ. ಸ್ನೇಹ, ಪ್ರೀತಿ, ಸಂಬಂಧಗಳ ಜೊತೆಗೊಂದು ಜೀವನ ಪಾಠ ಚಿತ್ರದಲ್ಲಿದೆ. ಭೋದನೆ, ರಂಜನೆ ನಡುವೆ “ಟಾಮ್‌ ಅಂಡ್‌ ಜೆರ್ರಿ’ ಆಟ ನಡೆಯುತ್ತದೆ.  ಚಿತ್ರಕಥೆಗೆ ಇನ್ನಷ್ಟು ವೇಗ ಸಿಕ್ಕಿ ಮತ್ತು ಚಿತ್ರದ ಕೆಲ ದೃಶ್ಯಗಳಿಗೆ ಕತ್ತರಿ ಬಿದ್ದಿದ್ದರೆ, “ಟಾಮ್‌ ಅಂಡ್‌ ಜೆರ್ರಿ’ ಆಟ-ಪಾಠ ಎರಡೂ ಇನ್ನಷ್ಟು ಪರಿಣಾಮಕಾರಿಯಾಗುವ ಸಾಧ್ಯತೆಗಳಿದ್ದವು.

ಈ ಹಿಂದೆ “ಗಂಟುಮೂಟೆ’ ಚಿತ್ರದಲ್ಲಿ ಗಮನ ಸೆಳೆದು ಭರವಸೆ ಮೂಡಿಸಿದ್ದ ಯುವ ನಟ ನಿಶ್ಚಿತ್‌ ಕೊರೋಡಿ “ಟಾಮ್‌ ಅಂಡ್‌ ಜೆರ್ರಿ’ಯಲ್ಲಿ ರಫ್ ಆ್ಯಂಡ್‌ ಟಫ್ ಲುಕ್‌ನಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ತಮ್ಮ ಗೆಟಪ್‌, ಮ್ಯಾನರಿಸಂ, ಡೈಲಾಗ್‌ ಡೆಲಿವರಿ, ಆ್ಯಕ್ಷನ್‌ ದೃಶ್ಯಗಳನ್ನು ನಿಶ್ಚಿತ್‌ ಸಮರ್ಥವಾಗಿ ನಿರ್ವಹಿಸಿದ್ದಾರೆ.

ಇನ್ನು ಕಿರುತೆರೆಯಿಂದ ಮೊದಲ ಬಾರಿಗೆ ಹಿರಿತೆರೆಗೆ ನಾಯಕಿಯಾಗಿ ಪರಿಚಯವಾಗುತ್ತಿರುವ ಚೈತ್ರಾ ರಾವ್‌ ಕೂಡ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ತನ್ನಿಚ್ಛೆಯಂತೆ ಬದುಕುವ ತುಂಬ ಬೋಲ್ಡ್‌ ಹುಡುಗಿಯಾಗಿ ಚೈತ್ರಾ ರಾವ್‌ ಭಾವಾಭಿನಯ ನೋಡುಗರಿಗೆ ಇಷ್ಟವಾಗುವಂತಿದೆ. ಮಗನ ಪ್ರೀತಿ ಹಂಬಲಿಸುವ ತಂದೆ -ತಾಯಿಯಾಗಿ ತಾರಾ ಅನುರಾಧಾ, ಜೈಜಗದೀಶ್‌ ಅವರದ್ದು ಮನ ಮುಟ್ಟುವ ಅಭಿನಯ. ಉಳಿದಂತೆ ಇತರ ಬಹುತೇಕ ಕಲಾವಿದರು ತಮ್ಮ ಸಿಕ್ಕ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡಿದ್ದು, ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ವಾರಾಂತ್ಯದಲ್ಲಿ ಕುಟುಂಬ ಸಮೇತರಾಗಿ “ಟಾಮ್‌ ಅಂಡ್‌ ಜೆರ್ರಿ’ ಗೇಮ್‌ ಒಮ್ಮೆ ನೋಡಿ ಬರಲು ಅಡ್ಡಿಯಿಲ್ಲ.

 ಜಿ.ಎಸ್‌.ಕಾರ್ತಿಕ ಸುಧನ್‌

ಟಾಪ್ ನ್ಯೂಸ್

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Nalkane Ayama Movie Review

Nalkane Ayama Movie Review; ದೆವ್ವದ ಕಾಟದ ಹಿಂದೊಂದು ಅಸಲಿ ಆಟ!

O2 movie review

O2 movie review; ಸುಂದರ ಬೀದಿಯ ತಣ್ಣನೆಯ ಗಾಳಿಯಂತೆ…

scam kannada movie review

Scam review; ವ್ಯವಸ್ಥೆಯ ಹಿಂದಿನ ಘೋರ ದರ್ಶನ

appa i love you movie review

Appa I Love You Review; ತಂದೆ-ಮಗನ ಭಾವ ಲಹರಿ

Bharjari gandu movie review

Bharjari Gandu Review; ಹಳ್ಳಿ ಅಡ್ಡದಲ್ಲಿ ಭರ್ಜರಿ ಆ್ಯಕ್ಷನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.