ಅಧೀನ ಕಾರ್ಯದರ್ಶಿ ಆದೇಶಕ್ಕಿಲ್ಲ ಬೆಲೆ


Team Udayavani, Mar 9, 2018, 5:45 PM IST

viij-1.jpg

ಇಂಡಿ: ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆ ಅಧೀನ ಕಾರ್ಯದರ್ಶಿ ವರ್ಗಾವಣೆ ಆದೇಶಕ್ಕೆ ವಿಜಯಪುರ ಜಿಲ್ಲೆಯಲ್ಲಿ ಕವಡೆ ಕಾಸಿನ ಕಿಮ್ಮತ್ತು ಇಲ್ಲದಂತಾಗಿದೆ.

ದಿನಾಂಕ 02-02-2018ರಂದೇ ಇಂಡಿ ತಾಲೂಕಿನ ಪ್ರಸ್ತುತ ಕ್ಷೇತ್ರ ಶಿಕ್ಷಣಾಧಿಕಾರಿ ಜೆ.ಟಿ. ತಳಕೇರಿ ಅವರಿಗೆ ಇಂಡಿ ತಾಲೂಕಿನಿಂದ ವರ್ಗಾವಣೆಗೊಳಿಸಿ ಸಿಟಿಇ ಜಮಖಂಡಿಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದ್ದರೂ ತಮ್ಮ ಜಾಗ ಖಾಲಿ ಮಾಡದೆ ಇಂದಿನವರೆಗೂ ಸರಕಾರದ ಆದೇಶ ಪಾಲನೆಯಾಗಿಲ್ಲ ಎಂಬುದು ಆದೇಶಕ್ಕೆ ಕಿಮ್ಮತ್ತಿಲ್ಲ ಎಂಬಂತಾಗಿದೆ.

ಕೇಂದ್ರ ಚುನಾವಣೆ ಆಯೋಗದ ಶಿಫಾರಸಿನಂತೆ 2018ರ ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಪ್ರಯುಕ್ತ ಕೇಂದ್ರ ಚುನಾವಣಾ ಆಯೋಗದ ಆದೇಶ ಸಂಖ್ಯೆ 437/6/1/ಐಎನ್‌ ಎಸ್‌ಟಿ/ಇಸಿಐ/ಎಫ್‌ಉಎನ್‌ಸಿಟಿ/ಎಮ್‌ ಸಿಸಿ/2018 ದಿ. 17-01-2018ರ ಪ್ರಕಾರ 3 ವರ್ಷ ಮೇಲ್ಪಟ್ಟ ಅಥವಾ ಏಪ್ರೀಲ್‌ 2018ಕ್ಕೆ 3 ವರ್ಷ ಸೇವಾ ಅವಧಿ ಪೂರ್ಣಗೊಳಿಸಲಿರುವ ಅಥವಾ ಸ್ವಂತ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಆಡಳಿತಾತ್ಮಕ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ತಕ್ಷಣದಿಂದಲೇ ಜಾರಿಗೊಳಿಸಿ ಕ್ರಮಸಂಖ್ಯೆ 15ರಲ್ಲಿ ಜೆ.ಟಿ. ತಳಕೇರಿ ಕ್ಷೇತ್ರ ಶಿಕ್ಷಣಾಧಿಕಾರಿ ಅವರನ್ನು ವರ್ಗಾವಣೆಗೊಳಿಸಿ ಸ್ಥಳ ನಿಯುಕ್ತಿಗೊಳಿಸಿದ್ದರೂ, ಬಿಡುಗಡೆಗೊಳ್ಳದೇ
ಸರಕಾರದ ಅಧೀನ ಕಾರ್ಯದರ್ಶಿ ಟಿ.ಡಿ. ನಾಗೇಂದ್ರ ಅವರ ಆದೇಶವನ್ನು ಧಿಕ್ಕರಿಸಲಾಗಿದೆ.

ಚುನಾವಣೆ ನಿಮಿತ್ತ ವರ್ಗಾವಣೆಗೊಳಿಸಿದ ಸದರಿ ಅಧಿಕಾರಿ ಬಿಡುಗಡೆ ಹೊಂದಿದ ಹಾಗೂ ಕರ್ತವ್ಯಕ್ಕೆ ಹಾಜರಾದ ಬಗ್ಗೆ ಜಿಲ್ಲಾಧಿಕಾರಿಗಳು/ಜಿಲ್ಲಾ ಚುನಾವಣಾ ಅಧಿಕಾರಿಗಳು ಹಾಗೂ ಜಿಲ್ಲಾಮಟ್ಟದ ಶಿಕ್ಷಣಾಧಿ ಕಾರಿಗಳು ಹಾಗೂ ಆಯುಕ್ತರು ಗಮನ ಹರಿಸದೇ ಇರುವುದು ಸಾರ್ವಜನಿಕರಲ್ಲಿ ಸೋಜಿಗ ಉಂಟು ಮಾಡಿದೆ.

ಇತ್ತೀಚಿಗೆ ವಿಜಯಪುರ ನಗರ ಹಾಗೂ ಚಡಚಣ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯಗಳಲ್ಲಿ ನಿಯಮಗಳನ್ನು ಗಾಳಿಗೆ ತೂರಿ ಬೇಕಾಬಿಟ್ಟಿ ಪ್ರಭಾರ ವಹಿಸಿಕೊಂಡಿದ್ದನ್ನು ಇಲ್ಲಿ ಗಮನಿಸಬಹುದಾಗಿದೆ.

ಸುತ್ತೋಲೆ ಅನುಸಾರ ಈಗಾಗಲೇ ಮೂರುವರೆ ವರ್ಷ ಪ್ರಭಾರವಿದ್ದ ಬಿಇಒ ಜೆ.ಟಿ. ತಳಕೇರಿ ಅವರು ಬಿಡುಗಡೆಗೊಳ್ಳಬೇಕು. ಇಂಡಿ ಬಿಇಒಗೆ ನಿಯುಕ್ತಿಗೊಂಡ ಬಸವರಾಜ ತಳವಾರ ಅವರು ಬಂದು ಕರ್ತವ್ಯಕ್ಕೆ ಹಾಜರಾಗಬೇಕು ಎಂಬುದು ಶಿಕ್ಷಣ ಚಿಂತಕರ ಅಭಿಪ್ರಾಯವಾಗಿದೆ.

ಚುನಾವಣೆ ನಿಮಿತ್ತ ವರ್ಗಾವಣೆಗೊಂಡ ಅಧಿಕಾರಿಗಳು ತಕ್ಷಣ ಜಾಗ ಖಾಲಿ ಮಾಡಿ ಚುನಾವಣೆ ಪ್ರಕ್ರಿಯೆಯನ್ನು ಸುಸೂತ್ರವಾಗಿ ನಡೆಯಲು ಅನುವುಮಾಡಿ ಕೊಡಬೇಕು ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

ಬಿಇಒ ಅವರಿಗೆ ವರ್ಗಾವಣೆ ಆದೇಶವಿದೆ. ಆದರೆ ಇದುವರೆಗೂ ಅವರು ಏಕೆ ಬಿಡುಗಡೆ ಹೊಂದಿಲ್ಲ ಎಂಬುದು ಗೊತ್ತಾಗಿಲ್ಲ. ಇಂಡಿಗೆ ವರ್ಗಾವಣೆಗೊಂಡ ಅಧಿಕಾರಿ ಬರುವವರೆಗೂ ತಳಕೇರಿ ಅವರು ಇಂಡಿಯಲ್ಲಿಯೇ ಕಾರ್ಯ ಮಾಡಲು ಅವಕಾಶವಿದೆ.
ಪಿ.ಟಿ. ಬೊಂಗಾಳೆ ಉಪ ನಿರ್ದೇಶಕರು, ಸಾ.ಶಿ. ಇಲಾಖೆ ವಿಜಯಪುರ

ವಿಧಾನಸಭೆ ಚುನಾವಣೆ ನಿಮಿತ್ತ ಚುನಾವಣಾ ಆಯೊಗದ ಆದೇಶದಂತೆ ವರ್ಗಾವಣೆಗೊಂಡಿರುವ ಅಧಿಕಾರಿಗಳು ತಕ್ಷಣ ಬಿಡುಗಡೆಗೊಳ್ಳಬೇಕು. ಆದರೆ ಏಪ್ರಿಲ್‌ 2ರಂದು ಆದೇಶ ಹೊರಡಿಸಿದ್ದರೂ ಇದುವರೆಗೂ ಬಿಡುಗಡೆಗೊಂಡಿಲ್ಲ ಎಂದರೆ ಏನರ್ಥ? ಇದರಲ್ಲಿ ರಾಜಕೀಯ ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳ ಕೈವಾಡವಿದೆ. ವರ್ಗಾವಣೆಯಾದವರು ಬಿಡುಗಡೆಗೊಳ್ಳಬೇಕು. ಇಲ್ಲಿ ನಿಯೋಜನೆಗೊಳ್ಳಬೇಕಾದವರು ಹಾಜರಾಗಿ ಕೆಲಸ ಮಾಡಬೇಕು. 
ಡಾ| ಸಾರ್ವಭೌಮ ಬಗಲಿ, ಮಾಜಿ ಶಾಸಕ

ಉಮೇಶ ಬಳಬಟ್ಟಿ

ಟಾಪ್ ನ್ಯೂಸ್

Mangaluru; ಲವ್‌ ಜಿಹಾದ್‌ ತಡೆಯಲು ಶ್ರೀರಾಮ ಸೇನೆಯಿಂದ ಸಹಾಯವಾಣಿ ಆರಂಭ

Mangaluru; ಲವ್‌ ಜಿಹಾದ್‌ ತಡೆಯಲು ಶ್ರೀರಾಮ ಸೇನೆಯಿಂದ ಸಹಾಯವಾಣಿ ಆರಂಭ

11

ಗಣೇಶ ದೇವಸ್ಥಾನ ನಿರ್ಮಿಸಲು ಹಿಂದೂಗಳಿಗೆ ಭೂಮಿಯನ್ನು ದಾನವನ್ನಾಗಿ ನೀಡಿದ ಮುಸ್ಲಿಂ ಜಮಾತ್

Bellary; ಸಚಿವ ನಾಗೇಂದ್ರ ವಿರುದ್ಧ ಭುಗಿಲೆದ್ದ ಆಕ್ರೋಶ; ಬಳ್ಳಾರಿಯಲ್ಲಿ ಪ್ರತಿಭಟನೆ

Bellary; ಸಚಿವ ನಾಗೇಂದ್ರ ವಿರುದ್ಧ ಭುಗಿಲೆದ್ದ ಆಕ್ರೋಶ; ಬಳ್ಳಾರಿಯಲ್ಲಿ ಪ್ರತಿಭಟನೆ

MLC Election ಪ್ರಚಾರ ಪತ್ರದಲ್ಲಿ ಬಿಜೆಪಿಯ ಉದಯ ಕುಮಾರ್ ಶೆಟ್ಟಿ: ಕಾಂಗ್ರೆಸ್ ಎಡವಟ್ಟು

MLC Election ಪ್ರಚಾರ ಪತ್ರದಲ್ಲಿ ಬಿಜೆಪಿಯ ಉದಯ ಕುಮಾರ್ ಶೆಟ್ಟಿ: ಕಾಂಗ್ರೆಸ್ ಎಡವಟ್ಟು

Desi Swara: ಚೈತ್ರದ ಚುಮುಚುಮು ಚಳಿಯ ಸುಂದರಿ “ಡ್ಯಾಂಡೆಲೈನ್‌’

Desi Swara: ಚೈತ್ರದ ಚುಮುಚುಮು ಚಳಿಯ ಸುಂದರಿ “ಡ್ಯಾಂಡೆಲೈನ್‌’

Bengaluru: ಕ್ರಿಮಿನಲ್‌ಗ‌ಳಿಗೆ ಸಿಡಿಆರ್‌ ಮಾರಾಟ; 10 ಸೆರೆ

Bengaluru: ಕ್ರಿಮಿನಲ್‌ಗ‌ಳಿಗೆ ಸಿಡಿಆರ್‌ ಮಾರಾಟ; 10 ಸೆರೆ

Desi Swara: ಸೆಲ್ಫಿಗಳ ಹಿಂದಿನ ಮಾನಸಿಕತೆ

Desi Swara: ಸೆಲ್ಫಿಗಳ ಹಿಂದಿನ ಮಾನಸಿಕತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

police

Petrol ಸುರಿದು ಬೆಂಕಿ ಹಚ್ಚಿದ ಘಟನೆ: ಪ್ರಿಯತಮೆಯ ತಂದೆಯ ಬಂಧನ

doctor 2

Vijayapura;ಭ್ರೂಣಲಿಂಗ ಪತ್ತೆ: ವೈದ್ಯರು ಸೇರಿ ನಾಲ್ವರ ವಿರುದ್ಧ ಕ್ರಿಮಿನಲ್ ಕೇಸ್

ramesh-jigajinagi

Vijayapura;’ಮಂಗಳವಾರದ ಮಹಿಮೆ’ ಎನ್ನುತ್ತಿರುವ ಸಂಸದ ಜಿಗಜಿಣಗಿ

Vijayapura ಆಕಸ್ಮಿಕ ಬೆಂಕಿ: ನೂರಾರು ಲಿಂಬೆ ಗಿಡ ಹಾನಿ

Vijayapura; ಆಕಸ್ಮಿಕ ಬೆಂಕಿ: ನೂರಾರು ಲಿಂಬೆ ಗಿಡ ಹಾನಿ

accident

Vijayapura:ಆಯುತಪ್ಪಿ ಬಿದ್ದ ಮಹಿಳೆಯ ಕಾಲಿನ ಮೇಲೆ ಹರಿದ ಬಸ್

MUST WATCH

udayavani youtube

ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧೀಕ್ಷಕನ ಆತ್ಮಹ*ತ್ಯೆ ಪ್ರಕರಣ,ಅಧಿಕಾರಿಗಳ ಭೇಟಿ

udayavani youtube

ಹೆದ್ದಾರಿಯಲ್ಲೇ ಲಾಂಗ್‌ ಹಿಡಿದು ಓಡಾಡಿದ ಯುವಕ!

udayavani youtube

ಆರೋಗ್ಯಕರ ಬೇಕರಿ ಫುಡ್ ತಿನ್ನಬೇಕಾ ? ಇಲ್ಲಿಗೆ ಬನ್ನಿ

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

ಹೊಸ ಸೇರ್ಪಡೆ

9-kodachadri

Kodachadri: ಮಳೆಯಲಿ ಕೊಡಚಾದ್ರಿ ಮಡಿಲಲಿ

Desi Swara: ವಾಸವಿ ಕ್ಲಬ್‌ ಮೆರ್ಲಿಯನ್‌ ಸಿಂಗಾಪುರ- ವಾಸವಿ ಜಯಂತಿ ಪೂಜೆ ಸಂಪನ್ನ

Desi Swara: ವಾಸವಿ ಕ್ಲಬ್‌ ಮೆರ್ಲಿಯನ್‌ ಸಿಂಗಾಪುರ- ವಾಸವಿ ಜಯಂತಿ ಪೂಜೆ ಸಂಪನ್ನ

8-ipl

IPL: ಸನ್‌ ರೈಸರ್ಸ್‌ ಆದ ಡೆಕ್ಕನ್‌ ಚಾರ್ಜಸ್‌

Mangaluru; ಲವ್‌ ಜಿಹಾದ್‌ ತಡೆಯಲು ಶ್ರೀರಾಮ ಸೇನೆಯಿಂದ ಸಹಾಯವಾಣಿ ಆರಂಭ

Mangaluru; ಲವ್‌ ಜಿಹಾದ್‌ ತಡೆಯಲು ಶ್ರೀರಾಮ ಸೇನೆಯಿಂದ ಸಹಾಯವಾಣಿ ಆರಂಭ

11

ಗಣೇಶ ದೇವಸ್ಥಾನ ನಿರ್ಮಿಸಲು ಹಿಂದೂಗಳಿಗೆ ಭೂಮಿಯನ್ನು ದಾನವನ್ನಾಗಿ ನೀಡಿದ ಮುಸ್ಲಿಂ ಜಮಾತ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.