ವರಿಷ್ಠರು ಸಮ್ಮತಿಸಿದರೆ ನಾಗಠಾಣಾ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧೆ: ಜಿಗಜಿಣಗಿ
ಕಾರಜೋಳ ಸಾಹೇಬ ನನ್ನ ಸಹೋದರ ; ಭಿನ್ನಾಭಿಪ್ರಾಯ ಕಲ್ಪಿತ ಸುದ್ದಿ
Team Udayavani, Apr 28, 2022, 7:35 PM IST
ವಿಜಯಪುರ : ಬರುವ ವಿಧಾನಸಭೆ ಚುನಾವಣೆಯಲ್ಲಿ ಪರಿಶಿಷ್ಟ ಜಾತಿಗೆ ಮೀಸಲಾಗಿರುವ ನಾಗಠಾಣ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸುವ ಕುರಿತು ಸಚಿವ ಕಾರಜೋಳ ಅವರ ಜೊತೆ ಚರ್ಚಿಸುತ್ತೇನೆ. ಪಕ್ಷದ ವರಿಷ್ಠರು ಸಮ್ಮತಿಸಿದರೆ ರಾಜ್ಯ ರಾಜಕಾರಣಕ್ಕೂ ಬರುತ್ತೇನೆ ಎಂದು ವಿಜಯಪುರ ಸಂಸದ ರಮೇಶ ಜಿಗಜಿಣಗಿ ಇಂಗಿತ ವ್ಯಕ್ತಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಪಕ್ಷ ಲೋಕಸಭೆಗೆ ಸ್ಪರ್ಧಿಸು ಎಂದರೆ ಅಲ್ಲೇ ಮುಂದುವರೆಯುತ್ತೇನೆ. ಬೇಡ ಎಂದರೆ ಸಕ್ರಿಯ ರಾಜಕೀಯದಿಂದ ದೂರ ಸರಿದು ತೋಟದಲ್ಲಿ ತಣ್ಣಗೆ ಇದ್ದು ಬಿಡುತ್ತೇನೆ ಎಂದು ಸಮಜಾಯಿಷಿ ನೀಡಿದರು.
ಇದನ್ನೂ ಓದಿ: ಶೇ.23 ರಷ್ಟಿರುವ ದಲಿತರು ಸಿಎಂ ಆಗಬಾರದಾ : ಜಿಗಜಿಣಗಿ ಪುನರುಚ್ಛಾರ
ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಸಾಹೇಬ ನನ್ನ ಸಹೋದರ ಇದ್ದಂತೆ. ನಮ್ಮ ಸಮಾಜದದ ಓರ್ವ ವ್ಯಕ್ತಿ ರಾಜ್ಯ ರಾಜಕಾರಣದಲ್ಲಿ ಬೆಳೆಯಲಿ ಎಂದೇ ನಾನು ರಾಜ್ಯ ರಾಜಕಾರಣಕ್ಕೆ ತಲೆ ಎತ್ತಿಯೂ ನೋಡಿರಲಿಲ್ಲ.ಸ್ಟೋರ್ ಕೀಪರ್ ಆಗಿದ್ದ ನಮ್ಮ ಸಮಾಜದ ವ್ಯಕ್ತಿಯೊಬ್ಬ ರಾಜಕೀಯವಾಗಿ ಬೆಳೆದು ನಿಂತಿದ್ದಾರೆ ಎಂದರೆ ಅದೇ ನನಗೆ ದೊಡ್ಡ ಖುಷಿ. ಹೀಗಾಗಿ ಕಾರಜೋಳ ಹಾಗೂ ನನ್ನ ನಡುವೆ ಯಾವ ಭಿನ್ನಾಭಿಪ್ರಾಯವಿಲ್ಲ. ಕೆಲವರು ಸುಖಾಸುಮ್ಮನೆ ಕಾರಜೋಳ-ಜಿಗಜಿಣಗಿ ಮಧ್ಯೆ ಸರಿ ಇಲ್ಲ ಎಂದೆಲ್ಲ ಕಲ್ಪಿತ ಸುದ್ದಿ ಹರಡಿಸುತ್ತಿದ್ದಾರೆ ಎಂದು ಸ್ಪಷ್ಟೀಕರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arrest ಪ್ರಶ್ನಿಸಿ ಹೇಮಂತ್ ಸೊರೇನ್ ಸುಪ್ರೀಂ ಮೊರೆ
Madhya Pradesh: ಮತ್ತೊಬ್ಬ ಕಾಂಗ್ರೆಸ್ ಎಂಎಲ್ಎ ಬಿಜೆಪಿಗೆ
Prajwal Revanna Case: ಮಾತೃಶಕ್ತಿಗೆ ಅವಮಾನವಾಗೋದನ್ನು ಸಹಿಸಿಕೊಳ್ಳಲ್ಲ: ಅಮಿತ್ ಶಾ
ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್ಕುಮಾರ್
ರಾಜ್ಯ ದಿವಾಳಿ ಮಾಡಿ ಚೊಂಬು ತೋರಿಸುತ್ತಿದ್ದಾರೆ: ಬಸವರಾಜ ಬೊಮ್ಮಾಯಿ