ಗಮನ ಸೆಳೆದ ಪುರಾತನ ವಸ್ತು ಪ್ರದರ್ಶನ, ಸಾಂಸ್ಕೃತಿಕ ವೈವಿಧ್ಯ
ಹಂಪನಕಟ್ಟೆ: ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿಗೆ 150ರ ಸಡಗರ
Team Udayavani, Feb 6, 2020, 10:11 PM IST
ಪುರಾತನ ವಸ್ತು ಸಂಗ್ರಹದ ಪ್ರದರ್ಶನವನ್ನು ಡಾ| ಡಿ. ವೀರೇಂದ್ರ ಹೆಗ್ಗಡೆ ಉದ್ಘಾಟಿಸಿದರು.
ಮಹಾನಗರ: ಕರಾವಳಿಯ ಸಹಸ್ರಾರು ವಿದ್ಯಾರ್ಥಿಗಳ ಪಾಲಿಗೆ ಶಿಕ್ಷಣದ ಕಾಶಿಯಂತೆ ವಿದ್ಯಾರ್ಜನೆಗೈದು, ಸಮಾಜದ ವಿವಿಧ ಸ್ತರಗಳಲ್ಲಿ ಅವರನ್ನು ಪ್ರಜ್ವಲಿಸುವಂತೆ ಮಾಡಿದ ನಗರದ ಹಂಪ ನ ಕಟ್ಟೆಯಲ್ಲಿರುವ “ಕೆಂಪು ಕೋಟೆ’ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಗುರುವಾರ 150ರ ವರ್ಷಾಚರಣೆಯ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿತು. ಕಾಲೇಜಿನಲ್ಲಿ ಕಲಿತ ಸಾವಿರಾರು ಹಳೆ ವಿದ್ಯಾರ್ಥಿಗಳು 150ರ ಸಂಭ್ರಮದಲ್ಲಿ ಪಾಲ್ಗೊಂಡರು. ಹಳೆ ವಿದ್ಯಾರ್ಥಿಗಳು ತಮ್ಮ ಕಾಲೇಜಿನ ದಿನವನ್ನು ನೆನಪು ಮಾಡಿಕೊಂಡು ಗೆಳೆಯರೊಂದಿಗೆ ಅನುಭವ ಹಂಚಿಕೊಂಡರು.
ಆಕರ್ಷಕ ವೇದಿಕೆ
150ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಕೆಂಪುಕೋಟಯನ್ನು ಅದ್ಭುತವಾಗಿ ಸಿದ್ಧಪಡಿಸಲಾಗಿತ್ತು. ಕಾಲೇಜಿನ ಎಲ್ಲ ಕಟ್ಟಡಗಳನ್ನು ವಿದ್ಯುದೀಪಗಳೊಂದಿಗೆ ಜಗಮಗಿಸುವಂತೆ ಮಾಡಲಾಗಿತ್ತು. ಸಭಾ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮಕ್ಕಾಗಿ ವಿ.ವಿ. ಕಾಲೇ ಜಿನ ಹೊರಭಾಗದ ಆವರಣದಲ್ಲಿ ಆಕರ್ಷಕ ವೇದಿಕೆ ನಿರ್ಮಿಸಲಾಗಿತ್ತು. ಗುರು ವಾರ ಸಂಜೆ ಆಕ ರ್ಷಕ ಸಾಂಸ್ಕೃತಿಕ ವೈವಿಧ್ಯ ಕಾರ್ಯಕ್ರಮ ಜರಗಿತು.
ಹೊಸ ಮೆರುಗು ನೀಡಿದ ಪುರಾತತ್ವ ಇಲಾಖೆಯ ವಸ್ತು ಪ್ರದರ್ಶನ
ಕಾಲೇಜಿನ ರವೀಂದ್ರ ಕಲಾಭವನದಲ್ಲಿ ತುಳುನಾಡಿನ ಗತಕಾಲದ ವೈಭವವನ್ನು ಪ್ರಸ್ತುತ ಪಡಿಸುವ ಪುರಾತನ ವಸ್ತು ಸಂಗ್ರಹದ ಪ್ರದರ್ಶನ ಸಂಭ್ರಮಾಚರಣೆಗೆ ಹೊಸ ಮೆರುಗು ನೀಡಿತು. ಕಾಲೇಜಿನ ವಿವಿಧ ವಿಭಾಗಗಳ ವಿದ್ಯಾರ್ಥಿಗಳ ಕೈಚಳ ಕದ ಮಾದರಿಗಳು ಗಮನ ಸೆಳೆದವು.ಗುರುವಾರ ಆರಂಭವಾದ ವಸ್ತು ಪ್ರದರ್ಶನ ಮೂರು ದಿನಗಳ ಕಾಲ ನಡೆಯಲಿದೆ.
ಸಂಸತ್ತಿನ ಮಾದರಿಗಳು
ಸಮಾಜ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳ ಪ್ರದರ್ಶನದಲ್ಲಿ ವಿಧಾನಸೌಧ, ಸಂಸತ್ತಿನ ಮಾದರಿಗಳು ಗಮನ ಸೆಳೆಯುತ್ತಿವೆ. ತಿಮಿಂಗಿಲ, ಕಾಡುಕೋಣ, ಆಮೆ, ಕಾಡೆಮ್ಮೆಗಳ ತಲೆಬುರುಡೆಗಳು ಕೂಡ ವಿವಿ ಕಾಲೇಜಿನಲ್ಲಿ ನಡೆಯುತ್ತಿರುವ ಪುರಾತತ್ವ ಇಲಾಖೆಯ ಪ್ರದರ್ಶನದಲ್ಲಿವೆ.
ಕರೆನ್ಸಿ , ಅಂಚೆ ಚೀಟಿ ಪ್ರದರ್ಶನ
ರವೀಂದ್ರ ಕಲಾಭವನದ 10 ಕೊಠಡಿಗಳಲ್ಲಿ ನಡೆಯುತ್ತಿರುವ ಪ್ರದ ರ್ಶ ನದಲ್ಲಿ ತುಳುನಾಡಿನ ಪ್ರಾಚೀನ ವಸ್ತು ಗಳು, ಪೈಟಿಂಗ್ ಗಳು, ಸಾವಿರಾರು ಸಂಖ್ಯೆಯ ಹಳೆ ನಾಣ್ಯ- ಕರೆನ್ಸಿಗಳು ಅಂಚೆ ಚೀಟಿಗಳ ವೈವಿಧ್ಯತೆಗಳನ್ನು ಸಂಗ್ರಹದಲ್ಲಿ ಅನಾವರಣ ಗೊಂಡಿದೆ. ವಿದ್ಯಾರ್ಥಿಗಳ ವಿಜ್ಞಾನದ ಮಾದರಿಗಳು, ಭತ್ತದ ಸುಮಾರು 70ರಷ್ಟು ವೈವಿ ಧ್ಯಮಯ ಬೀಜಗಳು, ಕಸದಿಂದ ರಸ, ಬೀಜ ಗಳ ವೈವಿಧ್ಯತೆ, ಹಳೆಯ ಎಂಜಿನ್, ಅಳತೆ- ಮಾಪಕಗಳ ಪಳೆಯುಳಿಕೆಗಳು ವಿಜ್ಞಾನ, ಪ್ರಕೃತಿ ಸಾಗಿ ಬಂದ ಹಾದಿಯನ್ನು ಮೆಲುಕು ಹಾಕುವಂತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
MUST WATCH
ಹೊಸ ಸೇರ್ಪಡೆ
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್