ಬೆಳ್ತಂಗಡಿ: ಕತ್ತರಿಗುಡ್ಡ ರಸ್ತೆ ಕುಸಿಯುವ ಭೀತಿ
Team Udayavani, Jun 1, 2018, 11:53 AM IST
ಬೆಳ್ತಂಗಡಿ: ತಾಲೂಕಿನಲ್ಲಿ ಉತ್ತಮ ಮಳೆಯಾಗುತ್ತಿದ್ದು, ಚಾರ್ಮಾಡಿ ಗ್ರಾಮದ ಕತ್ತರಿಗುಡ್ಡ ರಸ್ತೆ ಕುಸಿಯುವ ಭೀತಿ ಎದುರಾಗಿದೆ. ಕಕ್ಕಿಂಜೆ ಕೆರೆ ತಡೆಗೋಡೆ ಬಹುತೇಕ ಕುಸಿದಿದೆ. ಸ್ಥಳಕ್ಕೆ ಶಾಸಕ ಹರೀಶ್ ಪೂಂಜ ಅವರು ಸ್ಥಳಕ್ಕೆ ಭೇಟಿ ನೀಡಿ ತತ್ಕ್ಷಣ ಕ್ರಮ ಕೈಗೊಳ್ಳುವಂತೆ ತಹಶೀಲ್ದಾರ್ ಟಿ.ಸಿ. ಹಾದಿಮನಿ ಅವರಿಗೆ ಸೂಚಿಸಿದರು.
ಕತ್ತರಿಗುಡ್ಡ ರಸ್ತೆ ಹಾದು ಹೋಗುವ ಮಾರ್ಗದ ಬಳಿ ಕೆರೆಯಿದ್ದು, ಸುತ್ತಲಿನ ಗೋಡೆ ಮಳೆಯಿಂದ ಶಿಥಿಲಗೊಂಡಿತ್ತು. ವಾರದ ಹಿಂದೆಯೇ ಕುಸಿತವಾಗಿದ್ದು, ಸುದಿನದಲ್ಲಿ ವರದಿ ಪ್ರಕಟಿಸ ಲಾಗಿತ್ತು. ಆದರೆ ಸಂಬಂಧ ಪಟ್ಟವರು ಕ್ರಮ ಕೈಗೊಳ್ಳದ ಹಿನ್ನೆಲೆ ರಸ್ತೆವರೆಗೂ ಗೋಡೆ ಕುಸಿದಿದೆ. ನಿರಂತರ ಮಳೆ ಸುರಿದಲ್ಲಿ ರಸ್ತೆಯೂ ಕೆರೆ ಪಾಲಾಗುವ ಸಾಧ್ಯತೆ ಹೆಚ್ಚಾಗಿದೆ. ಕೆರೆ ಬಳಿ ಬೋರ್ವೆಲ್ ಇದ್ದು, ಮಣ್ಣು ಕುಸಿತದಿಂದ ಈಗಾಗಲೇ ಹಾನಿಗೊಳಗಾಗಿದೆ. ಕೆರೆ ಸುತ್ತ ಕಾಂಕ್ರೀಟ್ ಕಾಮಗಾರಿ ಆರಂಭವಾಗಿತ್ತು. ಆದರೆ ಪೂರ್ಣಗೊಂಡಿರಲಿಲ್ಲ. ಕೆರೆ ಮಟ್ಟದಲ್ಲೇ ಕಾಮಗಾರಿ ನಿಂತಿದೆ. ಇದೀಗ ತಹಶೀಲ್ದಾರ್ ಸ್ಥಳದಲ್ಲಿದ್ದ ಎಂಜಿನಿಯರ್ ಹಾಗೂ ಪಿಡಿಒ ಅವರಿಗೆ ರಸ್ತೆ ಮಟ್ಟಕ್ಕೆ ಕಾಂಕ್ರೀಟ್ ಗೋಡೆ ನಿರ್ಮಿಸಲು ಅಂದಾಜುಪಟ್ಟಿ ಸಲ್ಲಿಸಿ ಜಿ.ಪಂ. ಮೂಲಕ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ. ಚುನಾವಣ ನೀತಿಸಂಹಿತೆ ಇದ್ದರೂ ಪ್ರಕೃತಿ ವಿಕೋಪ ಪರಿಗಣಿಸಿ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.
ತತ್ಕ್ಷಣ ಕ್ರಮ ಕೈಗೊಳ್ಳದಿದ್ದಲ್ಲಿ ರಸ್ತೆ ಕುಸಿಯುವ ಭೀತಿ ಎದುರಾಗಿರುವುದರಿಂದ ತ್ವರಿತ ಕಾಮಗಾರಿಗೆ ಆದ್ಯತೆ ನೀಡಬೇಕಿದೆ. ಸ್ಥಳದಲ್ಲಿ ಪಿಡಿಒ ಪ್ರಕಾಶ್ ಶೆಟ್ಟಿ ನೊಚ್ಚ, ತಾ.ಪಂ. ಸದಸ್ಯ ಶಶಿಧರ್ ಎಂ. ಕಲ್ಮಂಜ, ಗ್ರಾ.ಪಂ. ಸದಸ್ಯ ಓಬಯ್ಯ ಮೊದಲಾದವರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್
Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ