ಮೆಸ್ಕಾಂ ವಿತರಣ ಘಟಕಕ್ಕೆ ನಿವೇಶನವೇ ಇಲ್ಲ!
Team Udayavani, Jul 6, 2018, 10:20 AM IST
ಉಪ್ಪಿನಂಗಡಿ: ಮೆಸ್ಕಾಂನ ವಿದ್ಯುತ್ ವಿತರಣ ಘಟಕಕ್ಕೆ ನಿವೇಶನ ನಿಗದಿಯಾಗದೆ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಇಪ್ಪತ್ತು ವರ್ಷಗಳಿಂದ ವಿದ್ಯುತ್ ವಿತರಣ ಘಟಕಕ್ಕಾಗಿ ಬೇಡಿಕೆ ಇಡುತ್ತಿದ್ದರೂ ಈ ತನಕ ಈಡೇರಿಲ್ಲ. ಉಪ್ಪಿನಂಗಡಿ ವಿದ್ಯುತ್ ಶಾಖಾ ಕಚೇರಿ ಎಂಟಕ್ಕೂ ಮಿಕ್ಕ ಗ್ರಾಮ ವ್ಯಾಪ್ತಿಯ ಗೋಳಿತೊಟ್ಟು, ಅಲಂತಾಯ, ಬಜತ್ತೂರು, ಕೊçಲ, ರಾಮಕುಂಜ, ಹಿರೇಬಂಡಾಡಿ, 34ನೇ ನೆಕ್ಕಿಲಾಡಿ ಸಹಿತ 15,500 ಗ್ರಾಹಕರನ್ನು ಹೊಂದಿದ್ದು, ಮಾಸಿಕ 2 ಕೋಟಿ ರೂ.ಗೂ ಅಧಿಕ ಆದಾಯ ಗಳಿಸುತ್ತಿದೆ.
ಹುದ್ದೆ ಏರಿಕೆ, ಶಾಖೆ ಯಥಾಸ್ಥಿತಿ
ನಿಗಮದ ನಿಯಮದಂತೆ 7,000 ಗ್ರಾಹಕರಿರುವ ಶಾಖೆಗೆ ಕಿರಿಯ ಎಂಜಿನಿಯರ್, ಅದಕ್ಕಿಂತ ಹೆಚ್ಚು ಗ್ರಾಹಕರಿದ್ದರೆ ಶಾಖೆಯನ್ನು ಮೇಲ್ದರ್ಜೆ ಗೇರಿಸಿ, ಸಹಾಯಕ ಎಂಜಿನಿಯರ್ ನೇಮಿಸಬೇಕು. ಉಪ್ಪಿನಂಗಡಿಯಲ್ಲಿ ಹುದ್ದೆ ಏರಿಕೆ ಆಯಿತೇ ಹೊರತು ಸಮರ್ಪಕ ವಿದ್ಯುತ್ ಒದಗಿಸುವ ವಿತರಣ ಕೇಂದ್ರ ತೆರೆಯುವ ಪ್ರಯತ್ನವನ್ನೇ ಮಾಡಿಲ್ಲ. ಹಲವು ಕಿರಿಯ ಎಂಜಿನಿಯರ್ ಗಳು ಕರ್ತವ್ಯ ನಿರ್ವಹಿಸಿದ್ದು, ಬರುವ ವರ್ಷದಿಂದ ಸಮರ್ಪಕ ವಿದ್ಯುತ್ ಒದಗಿಸುವುದಾಗಿ ಗ್ರಾಮಸಭೆಗಳಲ್ಲಿ ಭರವಸೆ ನೀಡುವುದು ವಾಡಿಕೆಯ ಮಾತಾಗಿದೆ. ಈಗಲೂ ಪುತ್ತೂರಿನಿಂದಲೇ ವಿದ್ಯುತ್ ಸರಬರಾಜು ಆಗುವುದು. ಎಕ್ಸ್ಪ್ರೆಸ್ ಲೈನ್ ಬಂದರೆ ಮಾತ್ರ ಸಮಸ್ಯೆ ಸರಿಹೋದೀತು. ಬಳಿಕ ಬೆಳ್ತಂಗಡಿ ತಾಲೂಕು ತಣ್ಣೀರುಪಂತ ಗ್ರಾಮದಲ್ಲಿ 110 ಕೆ.ವಿ. ವಿದ್ಯುತ್ ವಿತರಣೆ ಘಟಕ ಶೀಘ್ರ ರಚನೆಯಾಗಬೇಕು ಎಂಬ ಆಗ್ರಹವೂ ವ್ಯಕ್ತವಾಗಿದೆ.
ವಿದ್ಯುತ್ ಪೂರೈಕೆಗೆ ಸಮಸ್ಯೆ
ಪುತ್ತೂರಿನಿಂದ ವಿದ್ಯುತ್ ಪೂರೈಕೆಯಲ್ಲಿ ಆಗಾಗ ಸಣ್ಣಪುಟ್ಟ ತೊಡಕುಗಳು ಕಾಣಿಸಿಕೊಳ್ಳುತ್ತಿವೆ. ತಣ್ಣೀರುಪಂತ ವಿತರಣ ಕೇಂದ್ರದಲ್ಲಿ ಕಳಪೆ ಸಾಮಗ್ರಿಗಳ ಜೋಡಣೆಯಾಗಿದೆ ಎನ್ನುವ ಆರೋಪವಿದೆ. ಇಲ್ಲಿಂದ ಸಮರ್ಪಕ ವಿದ್ಯುತ್ ನಿರೀಕ್ಷೆ ಮಾಡಲಾಗದು. ನೆಲ್ಯಾಡಿ 33 ಕೆವಿ ಕೇಂದ್ರವಾಗಿದ್ದು, ಓವರ್ ಲೋಡ್ ಸಮಸ್ಯೆ ಸದಾ ಇರುತ್ತದೆ. ಇದೀಗ ಉಪ್ಪಿನಂಗಡಿ ಮಠ ಎಂಬ 38 ಕೆವಿ ವಿತರಣ ಕೇಂದ್ರ ಬೇಕು ಎನ್ನುತ್ತಾರೆಯೇ ಹೊರತು, ನಿವೇಶನ ಕ್ಕಾಗಿ ಹುಡುಕಾಟ ನಡೆದಿಲ್ಲ. ಈ ಮಧ್ಯೆ ನಿವೇಶನಕ್ಕಾಗಿ ಜನಪ್ರತಿನಿಧಿಗಳ ಸಲಹಾ ಸಮಿತಿ ಕಚೇರಿಗಳಿಗೆ ಅಲೆದಾಟ ನಡೆಸಿತ್ತು. ಈಗ ಸಮಿತಿಯೇ ರದ್ದುಕೊಂಡು ಕಡತ ಬಾಕಿ ಉಳಿದಿದೆ. ನಿವೇಶನ ಪ್ರಕ್ರಿಯೆ ನನೆಗುದಿಗೆ ಬಿದ್ದಿದೆ. 33 ಕೆವಿ ವಿತರಣ ಕೇಂದ್ರ ಮಂಜೂರಾಗುವ ಹೊತ್ತಿಗೆ ಆ ನಿವೇಶನದಲ್ಲಿ ಅನಧಿಕೃತವಾಗಿ ಮನೆಗಳು ನಿರ್ಮಾಣವಾದರೂ ಅಚ್ಚರಿಯಿಲ್ಲ. ಅಂತಹ ಮನೆಗಳಿಗೆ 94 ಸಿ ಯೋಜನೆಯಡಿ ಅಕ್ರಮ -ಸಕ್ರಮ ಹಕ್ಕುಪತ್ರ ನೀಡಿದರೆ, ನಿವೇಶನ ಒಂದು ಹಕ್ಕುಪತ್ರ ಎರಡು ಆಗಲಿದ್ದು, ಸಮಸ್ಯೆಯಾಗಲಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.
ಕಡತ ಬಾಕಿ
ನಿತ್ಯದ ವಿದ್ಯುತ್ ಸಮಸ್ಯೆ ಪರಿಹರಿಸಬೇಕಾದರೆ ವಿತರಣ ಕೇಂದ್ರ ಸ್ಥಾಪಿಸಬೇಕೆಂಬ ಪ್ರಸ್ತಾವ ಗ್ರಾಮಸಭೆ, ಜನಸಂಪರ್ಕ ಸಭೆಗಳಲ್ಲೂ ಆಗಿತ್ತು. ಅದಾಗ್ಯೂ ಎರಡು ವರ್ಷಗಳಿಂದ ಉಪ್ಪಿನಂಗಡಿ ಹಿರ್ತಡ್ಕ ಮಠ ಎಂಬಲ್ಲಿ ಸರ್ವೆ ನಂ. 170ರ ಗೋಮಾಳ ಜಾಗದಲ್ಲಿ ಸಾರ್ವಜನಿಕ ಸೇವೆಯಡಿ ಒಂದು ಎಕ್ರೆ 36 ಸೆಂಟ್ಸು ಜಾಗಕ್ಕಾಗಿ ಕೋರಿಕೆ ಸಲ್ಲಿಸಿತ್ತು. ಪರಿಶೀಲನೆ ನಡೆಸಿ, ವರದಿ ಸಲ್ಲಿಸಲು ಜಿಲ್ಲಾಧಿಕಾರಿ ತಾಲೂಕು ದಂಡಾಧಿಕಾರಿಗೆ ಕಳುಹಿಸಿರುವ ಕಡತ ಒಂದು ವರ್ಷದಿಂದ ಬಾಕಿ ಉಳಿದುಕೊಂಡಿದೆ.
ನೀರಾಕ್ಷೇಪಣಾ ಪತ್ರಕ್ಕಾಗಿ ನಿರೀಕ್ಷೆ
ಮೆಸ್ಕಾಂ ಸಬ್ಸ್ಟೇಶನ್ಗೆ ನಿವೇಶನಕ್ಕಾಗಿ ತಮ್ಮ ಕಚೇರಿಗೆ ಕಡತ ಸಲ್ಲಿಸಲಾಗಿದೆ. ಈಗಾಗಲೇ ಕಡತ ನಮ್ಮ ಕಚೇರಿಯಲ್ಲಿದ್ದು, ಸದ್ರಿ ಜಮೀನು ರಾಷ್ಟ್ರೀಯ ಹೆದ್ದಾರಿ 75 ಹಾಗೂ ಅರಣ್ಯ ಇಲಾಖಾ ಜಾಗಕ್ಕೆ ತಾಗಿಕೊಂಡಿದೆ. ಇದರಿಂದ ಎರಡೂ ಇಲಾಖೆಗಳ ನಿರಾಕ್ಷೇಪಣಾ ಪತ್ರಕ್ಕಾಗಿ ಕೋರಿಕೆ ಸಲ್ಲಿಸಲಾಗಿದೆ. ಈ ಎರಡು ಇಲಾಖೆಗಳ ಆಕ್ಷೇಪಣೆಗಳು ಇಲ್ಲದೇ ಇದ್ದಲ್ಲಿ, ಮೆಸ್ಕಾಂಗೆ ಕೋರಿದ ನಿವೇಶನ ಮಂಜೂರಾತಿಗೆ ಜಿಲ್ಲಾಧಿಕಾರಿಗಳಿಗೆ ಕಡತವನ್ನು ಕಳುಹಿಸಿಕೊಡಲಾಗುವುದು.
– ಅನಂತ ಶಂಕರ
ಪುತ್ತೂರು ತಾಲೂಕು ದಂಡಾಧಿಕಾರಿಗಳು
ಎಂ.ಎಸ್. ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ
ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು
ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ
ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್ಪಟೇಲ್ ಹೇಳಿಕೆ
ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ
ಹೊಸ ಸೇರ್ಪಡೆ
Taiwan; ಸಂಸತ್ನಲ್ಲಿ ಸಂಸದರ ಭಾರೀ ಬಡಿದಾಟ!
Singapore; ಹೆಚ್ಚಿದ ಕೋವಿಡ್: ಮಾಸ್ಕ್ ಕಡ್ಡಾಯಕ್ಕೆ ಮತ್ತೆ ಆದೇಶ
Gundmi Toll Plaza ಸ್ಥಳೀಯರಿಗೆ ಟೋಲ್ ಬರೆ; ಟೋಲ್ಗೆ ಮುತ್ತಿಗೆ; ರಸ್ತೆ ತಡೆ ಪ್ರತಿಭಟನೆ
Election data ಏರಿಕೆ ಬಗ್ಗೆ ಪ್ರತಿಕ್ರಿಯಿಸಿ: ಇಸಿಗೆ ಸುಪ್ರೀಂ
D.K. ಜಿಲ್ಲೆಯಲ್ಲಿ ಗುಡುಗು ಸಹಿತ ಉತ್ತಮ ಮಳೆ; ಇನ್ನೂ ನಾಲ್ಕು ದಿನ “ಎಲ್ಲೋ ಅಲರ್ಟ್’