ಅಜ್ಜನಿಂದ ದೇಶಸೇವೆಗೆ ಸಿಕ್ಕ  ಹೊಸ ಚೈತನ್ಯ’


Team Udayavani, Jan 28, 2019, 12:50 AM IST

military-1.jpg

ಮಂಗಳೂರು: ಎರಡನೇ ಮಹಾಯುದ್ಧದಲ್ಲಿ ಭಾಗವಹಿಸಿದ್ದ ಅಜ್ಜನಿಂದ ದೇಶಸೇವೆಯ ವೃತ್ತಿಗೆ ಇಳಿಯಲು ಸಿಕ್ಕಿದ ಹೊಸ ;ಚೈತನ್ಯ’ವೇ ಈ ಹುಡುಗನನ್ನು ಸೇನೆಯತ್ತ ಸೆಳೆಯಿತು. ಕಾನೂನು ಪದವಿ ಓದಿದರೂ ರಾಷ್ಟ್ರಭಕ್ತಿಯ ಸ್ರೋತ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುವಂತೆ ಮಾಡಿತು. ಇವರು ಮಂಗಳೂರಿನ ಚೈತನ್ಯ ಕೊಜಪಾಡಿ. ಸೇನೆಯಲ್ಲಿ ಮೇಜರ್‌ ಆಗಿ ಪ್ರಸ್ತುತ ಹೈದರಾಬಾದ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಸೈನಿಕನಾಗಲು ಅವರಿಗೆ ಕುಟುಂಬವೇ ಪ್ರೇರಣೆ. 

ಚೈತನ್ಯ ನಗರದ ಕೊಟ್ಟಾರ ಸೈಂಟ್‌ ಪೀಟರ್ ಪ್ರಾಥಮಿಕ ಶಾಲೆಯಲ್ಲಿ 5ನೇ ತರಗತಿ ತನಕ ಓದಿದರು. ಬಳಿಕ ಉರ್ವ ಕೆನರಾ ಪ್ರೌಢಶಾಲೆಯಲ್ಲಿ ಹೈಸ್ಕೂಲ್‌ ಶಿಕ್ಷಣ, ಕೆನರಾ ಪಿಯು ಕಾಲೇಜಿನಲ್ಲಿ ಪದವಿಪೂರ್ವ ವಿದ್ಯಾಭ್ಯಾಸದ ಬಳಿಕ ಎಸ್‌ಡಿಎಂ ಕಾಲೇಜಿನಲ್ಲಿ ಕಾನೂನು ಪದವಿ ಪಡೆದರು. ಕಾನೂನು ಶಿಕ್ಷಣ ಪೂರೈಸುವ ವೇಳೆ, ಅಂದರೆ 2009ರಲ್ಲಿ ಭಾರತೀಯ ಸೇನೆಗೆ ಆಯ್ಕೆಯಾದರು. ಚೆನ್ನೈಯಲ್ಲಿ ತರಬೇತಿ ಪಡೆದು 2010ರಲ್ಲಿ ಲೆಫ್ಟಿನೆಂಟ್‌ ಆಗಿ ಸೇನೆಗೆ ನಿಯೋಜನೆಗೊಂಡರು. 

ಚೈತನ್ಯ ಅವರ ಒಂಬತ್ತು ವರ್ಷಗಳ ಸೇನಾ ಸೇವಾನುಭವದಲ್ಲಿ ಜಮ್ಮು-ಕಾಶ್ಮೀರದ ರಜೌರಿ ಸೆಕ್ಟರ್‌ನಲ್ಲಿ ಎರಡು ವರ್ಷ, ಗುಜರಾತಿನ ಜಾಮ್‌ನಗರದಲ್ಲಿ 3 ವರ್ಷ ಹಾಗೂ ಅರುಣಾಚಲ ಪ್ರದೇಶದಲ್ಲಿ ಕಾರ್ಯನಿರ್ವಹಿಸಿದ 5 ತಿಂಗಳುಗಳ ಅಮೂಲ್ಯ ಅನುಭವಗಳು ಸೇರಿವೆ. ಬಳಿಕ ನಾಗಾಲ್ಯಾಂಡಿನ ತ್ಯುನ್‌ಸಂಗ್‌ ಮತ್ತು ದಿಮಾಪುರ್‌ನಲ್ಲಿ ತಲಾ ಒಂದೂವರೆ ವರ್ಷ ಕಾಲ ಕರ್ತವ್ಯ ನಿರ್ವಹಿಸಿ, ನಾಲ್ಕೂವರೆ ತಿಂಗಳುಗಳಿಂದ ಹೈದರಾಬಾದ್‌ನಲ್ಲಿದ್ದಾರೆ. ಈಗ ಅವರು ರಾಷ್ಟ್ರೀಯ ಭದ್ರತಾ ದಳ(ಎನ್‌ಎಸ್‌ಜಿ)ದ ಹೆಮ್ಮೆಯ ಸದಸ್ಯ.

ಕೃಷಿ ಮೂಲ
ಕೃಷಿಕರಾಗಿರುವ ಕೊಟ್ಟಾರಚೌಕಿ ನಿವಾಸಿ ವಸಂತ ಕೊಜಪಾಡಿ ಮತ್ತು ನಿವೃತ್ತ ಅಕೌಂಟೆಂಟ್‌ ಗಾಯತ್ರಿ ವಿ.ಕೆ. ಅವರ ಮೂವರು ಪುತ್ರರಲ್ಲಿ ಚೈತನ್ಯ ಕೊನೆಯವರು. ಅವರ ಪತ್ನಿ ತ್ರಿಷಾ ಗಿರೀಶ್‌ ಸ್ಟಾ Âಚುಟರಿ ಅಡಿಟರ್‌ ಆಗಿದ್ದಾರೆ. ಸಹೋದರರಾದ ದುರ್ಗಾರಾಮ್‌ ಪ್ರಸಾದ್‌ ಡಿಸೈನ್‌ ಎಂಜಿನಿಯರ್‌ ಹಾಗೂ ಧನಂಜಯ ವಿ.ಕೆ. ಬಿಎಸ್‌ಎನ್‌ಎಲ್‌ನಲ್ಲಿ ಜೆಇ ಆಗಿದ್ದಾರೆ.

ಎರಡನೇ ಮಹಾಯುದ್ಧದಲ್ಲಿ  ಅಜ್ಜ !
ಚೈತನ್ಯ ಅವರ ದೇಶಸೇವೆಯ ತುಡಿತದ ಹಿಂದೆ ಕೌಟುಂಬಿಕ ಹಿನ್ನೆಲೆಯ ಬಲವಾದ ಪ್ರೇರಣೆ ಇದೆ. ಅವರ ತಂದೆಯ ತಂದೆ ಅಜ್ಜ ರಾಮಣ್ಣ  ಭಂಡಾರಿ ಅವರು ಎರಡನೇ ಮಹಾಯುದ್ಧದಲ್ಲಿ ಭಾಗವಹಿಸಿದ್ದರು. ಅಜ್ಜನ ಅನುಭವ ಕಥನಗಳನ್ನೇ ತಂದೆ ವಸಂತ ಕೊಜಪಾಡಿ ಅವರಿಂದ ಬಾಲ್ಯಕಾಲದ ಕಥೆಗಳಾಗಿ ಕೇಳುತ್ತ ಬೆಳೆದ ಚೈತನ್ಯ ಅವರಿಗೆ ಸೈನಿಕನಾಗುವ ಬಯಕೆ ಮೊಳೆತದ್ದು ಸಹಜ. ಜತೆಗೆ ಚಿಕ್ಕಪ್ಪ, ದೊಡ್ಡಪ್ಪ ಪೊಲೀಸ್‌ ಇಲಾಖೆಯಲ್ಲಿದ್ದುದು ಆ ಬಯಕೆಗೆ ನೀರೆರೆಯಿತು.

ದೇಶಸೇವೆಯಲ್ಲೇ ಸಾರ್ಥಕ್ಯ
ಹೆತ್ತವರು ಮತ್ತು ಸಹೋದರರ ಪ್ರೋತ್ಸಾಹವೇ ನಾನು ಭಾರತೀಯ ಸೇನೆಗೆ ತೆರಳಲು ಕಾರಣ. ಅಜ್ಜ ಎರಡನೇ ಮಹಾಯುದ್ಧದಲ್ಲಿ ಭಾಗವಹಿಸಿದ್ದರು. ಅಜ್ಜನ ಅನುಭವಗಳನ್ನು ತಂದೆ ನಮಗೆ ರಸವತ್ತಾಗಿ ವಿವರಿಸುತ್ತಿದ್ದರು. ಇದೇ ನನಗೆ ಸೈನಿಕನಾಗಲು ಪ್ರೇರಣೆಯಾಯಿತು. ದೇಶಸೇವೆಯಲ್ಲಿ  ನನಗೆ ಸಾರ್ಥಕ್ಯವಿದೆ. 
-ಮೇ| ಚೈತನ್ಯ ಕೊಜಪಾಡಿ

ಮೂವರಿಗೂ ಸೇನೆ ಸೇರುವ ಇಚ್ಛೆ
ವಿಶೇಷವೆಂದರೆ ರಾಮಣ್ಣ ಭಂಡಾರಿಯವರ ಮೂವರು ಮೊಮ್ಮಕ್ಕಳೂ ಸೇನೆಯಲ್ಲಿ ಕೆಲಸ ಮಾಡಬೇಕೆಂಬ ಇಚ್ಛೆಯಿಂದ ಸತತ ಪ್ರಯತ್ನ ಮಾಡಿದ್ದರು. ಹಿರಿಯಣ್ಣ ದುರ್ಗಾರಾಮ್‌ ಪ್ರಸಾದ್‌ ನೌಕಾಪಡೆ ಸೇರಬೇಕೆಂಬ ಇಚ್ಛೆ ಹೊಂದಿದ್ದರಾದರೂ ಅದು ಕೈಗೂಡಿರಲಿಲ್ಲ. ಧನಂಜಯ ಅವರು ಎಂಜಿನಿಯರಿಂಗ್‌ ಶಿಕ್ಷಣ ಮುಗಿಸಿ ಸೇನಾ ಪರೀಕ್ಷೆಗಳನ್ನು ಎದುರಿಸಿದ್ದರು. ಅವರಿಗೂ ಅವಕಾಶ ಲಭಿಸಲಿಲ್ಲ.

‘ತಮ್ಮ’ ಕುಟುಂಬದ ಹೆಮ್ಮೆ
ಚೈತನ್ಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವುದು ಇಡೀ ಕುಟುಂಬಕ್ಕೆ  ಹೆಮ್ಮೆಯ ವಿಷಯ. ಕಾಲೇಜು ಹಂತದಲ್ಲಿಯೇ ಅವನು ಎನ್‌ಸಿಸಿಯಲ್ಲಿ  ಸಕ್ರಿಯವಾಗಿದ್ದ, ದಿಲ್ಲಿಯ ಗಣರಾಜ್ಯೋತ್ಸವ ಪರೇಡ್‌ನ‌ಲ್ಲಿ  ಭಾಗವಹಿಸುವ ಅವಕಾಶ ಪಡೆದಿದ್ದ. ಕೌಟುಂಬಿಕ ಹಿನ್ನೆಲೆ ನಮಗೆಲ್ಲರಿಗೂ ಬಲವಾದ ಪ್ರೇರಣೆಯಾಗಿತ್ತು. ನಮಗೆ ಸಿಗದ ಸೌಭಾಗ್ಯ ಅವನಿಗೆ ಸಿಕ್ಕಿದೆ. ಸೇನೆಗೆ ಸೇರಿದ ಮೇಲೆ ಉತ್ತಮ ಅವಕಾಶ ಗಳನ್ನು ಪಡೆದುಕೊಂಡಿದ್ದಾನೆ.
– ಧನಂಜಯ ಕೊಜಪಾಡಿ, ಚೈತನ್ಯ ಅವರ ಸಹೋದರ

– ಧನ್ಯಾ ಬಾಳೆಕಜೆ

ಟಾಪ್ ನ್ಯೂಸ್

Rain ಕರಾವಳಿ ಸಹಿತ ರಾಜ್ಯದ ವಿವಿಧೆಡೆ ಉತ್ತಮ ಮಳೆ, ನಾಲ್ಕು ಜೀವಹಾನಿ

Rain ಕರಾವಳಿ ಸಹಿತ ರಾಜ್ಯದ ವಿವಿಧೆಡೆ ಉತ್ತಮ ಮಳೆ, ನಾಲ್ಕು ಜೀವಹಾನಿ

Ambedkar ಇಲ್ಲದಿದ್ದರೆ ನೆಹರೂ ಮೀಸಲು ನೀಡುತ್ತಿರಲಿಲ್ಲ : ಮೋದಿ

Ambedkar ಇಲ್ಲದಿದ್ದರೆ ನೆಹರೂ ಮೀಸಲು ನೀಡುತ್ತಿರಲಿಲ್ಲ : ಮೋದಿ

ocon

ಲೀಡ್‌ ಕೊಡಿಸದಿದ್ದರೆ ಅಧಿಕಾರವೂ ಸಿಗದು; ಹುದ್ದೆ ಬಯಸುವ ಕಾರ್ಯಕರ್ತರಿಗೆ ಡಿಕೆಶಿ ಚಾಟಿ

Puttur ಅಂಗಳದಲ್ಲಿದ್ದ ವ್ಯಕ್ತಿ ಸಾವು ಸಿಡಿಲಾಘಾತ / ಹೃದಯಾಘಾತ ಶಂಕೆ

Puttur ಅಂಗಳದಲ್ಲಿದ್ದ ವ್ಯಕ್ತಿ ಸಾವು ಸಿಡಿಲಾಘಾತ / ಹೃದಯಾಘಾತ ಶಂಕೆ

Singapore Airlines; 3 ನಿಮಿಷಗಳಲ್ಲಿ 6 ಸಾವಿರ ಅಡಿ ಕುಸಿದ ವಿಮಾನ: 1 ಸಾವು

Singapore Airlines; 3 ನಿಮಿಷಗಳಲ್ಲಿ 6 ಸಾವಿರ ಅಡಿ ಕುಸಿದ ವಿಮಾನ: 1 ಸಾವು

ಚಲಿಸುತ್ತಿದ್ದ ಕಾರಿನ ಮೇಲೆ ಮರ ಬಿದ್ದು ಇಬ್ಬರಿಗೆ ಗಾಯ

Vitla ಚಲಿಸುತ್ತಿದ್ದ ಕಾರಿನ ಮೇಲೆ ಮರ ಬಿದ್ದು ಇಬ್ಬರಿಗೆ ಗಾಯ

Heavy Rain ಕರಾವಳಿ, ಕೊಡಗು ಜಿಲ್ಲೆಯಲ್ಲಿ ಗುಡುಗು ಸಹಿತ ಬಿರುಸಿನ ಮಳೆ

Heavy Rain ಕರಾವಳಿ, ಕೊಡಗು ಜಿಲ್ಲೆಯಲ್ಲಿ ಗುಡುಗು ಸಹಿತ ಬಿರುಸಿನ ಮಳೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Heavy Rain ಕರಾವಳಿ, ಕೊಡಗು ಜಿಲ್ಲೆಯಲ್ಲಿ ಗುಡುಗು ಸಹಿತ ಬಿರುಸಿನ ಮಳೆ

Heavy Rain ಕರಾವಳಿ, ಕೊಡಗು ಜಿಲ್ಲೆಯಲ್ಲಿ ಗುಡುಗು ಸಹಿತ ಬಿರುಸಿನ ಮಳೆ

Road Mishap ಬೈಕ್‌ ಅಪಘಾತದ ಗಾಯಾಳು ಸಾವು

Road Mishap ಬೈಕ್‌ ಅಪಘಾತದ ಗಾಯಾಳು ಸಾವು

Road Mishap ಬೈಕ್‌-ಸ್ಕೂಟರ್‌ ಢಿಕ್ಕಿ; ಮೂವರಿಗೆ ಗಾಯ

Road Mishap ಬೈಕ್‌-ಸ್ಕೂಟರ್‌ ಢಿಕ್ಕಿ; ಮೂವರಿಗೆ ಗಾಯ

Mangaluru ಮನೆಯ ಬೀಗ ಮುರಿದು ಚಿನ್ನಾಭರಣ ಕಳವು

Mangaluru ಮನೆಯ ಬೀಗ ಮುರಿದು ಚಿನ್ನಾಭರಣ ಕಳವು

Mangaluru ಸಂಶಯಾಸ್ಪದ ವರ್ತನೆ: ಯುವಕ ಪೊಲೀಸರ ವಶಕ್ಕೆ

Mangaluru ಸಂಶಯಾಸ್ಪದ ವರ್ತನೆ: ಯುವಕ ಪೊಲೀಸರ ವಶಕ್ಕೆ

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

Rain ಕರಾವಳಿ ಸಹಿತ ರಾಜ್ಯದ ವಿವಿಧೆಡೆ ಉತ್ತಮ ಮಳೆ, ನಾಲ್ಕು ಜೀವಹಾನಿ

Rain ಕರಾವಳಿ ಸಹಿತ ರಾಜ್ಯದ ವಿವಿಧೆಡೆ ಉತ್ತಮ ಮಳೆ, ನಾಲ್ಕು ಜೀವಹಾನಿ

Ambedkar ಇಲ್ಲದಿದ್ದರೆ ನೆಹರೂ ಮೀಸಲು ನೀಡುತ್ತಿರಲಿಲ್ಲ : ಮೋದಿ

Ambedkar ಇಲ್ಲದಿದ್ದರೆ ನೆಹರೂ ಮೀಸಲು ನೀಡುತ್ತಿರಲಿಲ್ಲ : ಮೋದಿ

ocon

ಲೀಡ್‌ ಕೊಡಿಸದಿದ್ದರೆ ಅಧಿಕಾರವೂ ಸಿಗದು; ಹುದ್ದೆ ಬಯಸುವ ಕಾರ್ಯಕರ್ತರಿಗೆ ಡಿಕೆಶಿ ಚಾಟಿ

Puttur ಅಂಗಳದಲ್ಲಿದ್ದ ವ್ಯಕ್ತಿ ಸಾವು ಸಿಡಿಲಾಘಾತ / ಹೃದಯಾಘಾತ ಶಂಕೆ

Puttur ಅಂಗಳದಲ್ಲಿದ್ದ ವ್ಯಕ್ತಿ ಸಾವು ಸಿಡಿಲಾಘಾತ / ಹೃದಯಾಘಾತ ಶಂಕೆ

Singapore Airlines; 3 ನಿಮಿಷಗಳಲ್ಲಿ 6 ಸಾವಿರ ಅಡಿ ಕುಸಿದ ವಿಮಾನ: 1 ಸಾವು

Singapore Airlines; 3 ನಿಮಿಷಗಳಲ್ಲಿ 6 ಸಾವಿರ ಅಡಿ ಕುಸಿದ ವಿಮಾನ: 1 ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.