ಕುಡ್ತೇರಿ ಶ್ರೀ ಮಹಾಮಾಯಾ ದೇವಸ್ಥಾನದ ಜೀರ್ಣೋದ್ಧಾರ ಕಾಮಗಾರಿ ಆರಂಭ
Team Udayavani, May 9, 2018, 10:19 AM IST
ಮಹಾನಗರ: ಜಿಲ್ಲೆಯ ಅತೀ ಪ್ರಾಚೀನ ಜಿ.ಎಸ್.ಬಿ. ಸಮುದಾಯದ ಪ್ರಸಿದ್ಧ ದೇವಾಲಯವಾದ ಮಂಗಳೂರು ಕುಡ್ತೇರಿ ಶ್ರೀ ಮಹಾಮಾಯಾ ದೇವಸ್ಥಾನದ ಜೀರ್ಣೋದ್ಧಾರ ಯೋಜನೆಯ ಅಂಗವಾಗಿ ಅಗ್ರಸಾಲೆ ನಿರ್ಮಾಣದ ಶಿಲಾನ್ಯಾಸವು ವೈಶಾಖ ಶುದ್ಧ ಹುಣ್ಣಿಮೆಯ ದಿನದಂದು ನೆರವೇರಿತು. ಶ್ರೀ ದೇಗುಲ ಮೊಕ್ತೇಸರರು, ಕುಳಾವಿಗಳು ಹಾಗೂ ಭಜಕ ಮಹಾಜನರು ಭಾಗವಹಿಸಿದ್ದರು.
ಸಮಾಜದ ಹಿರಿಯರುಗಳಾದ ವೇ| ಮೂ| ಎಂ. ರಘುನಾಥ್ ಭಟ್, ಸಿಎ ಎಸ್.ಎಸ್. ಕಾಮತ್, ಮರ್ಕಡ್ ಮಂಜುನಾಥ ಕಾಮತ್, ಜಿ.ವಿ. ಕಾಮತ್ ಹಾಗೂ ನಿಡ್ಡೋಡಿ ಉಮಾನಾಥ್ ನಾಯಕ್, ಟ್ರಸ್ಟಿಗಳಾದ ಪ್ರಕಾಶ್ ಕಾಮತ್ ಹಾಗೂ ಸುರೇಂದ್ರ ಕಾಮತ್ ಮೊದಲಾದವರು ಉಪಸ್ಥಿತರಿದ್ದರು.
ವೇ| ಮೂ| ಡೊಂಗರಕೇರಿ ರಾಮ ಚಂದ್ರ ಭಟ್ ಅವರು ಶುಭಾಶಂಸನೆಗೈದರು. ಶ್ರೀ ದೇವಳದ ಪುರೋಹಿತರು ಹಾಗೂ ಅರ್ಚಕರು ಸೇರಿ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು.
ದೇಣಿಗೆ ಸಮರ್ಪಣೆ
ಈ ಅಭಿವೃದ್ಧಿ ಯೋಜನೆಗೆ ಭಜಕರಿಂದ ದೇಣಿಗೆ ಸಮರ್ಪಣೆ ಈಗಾಗಲೇ ಪ್ರಾರಂಭಗೊಂಡಿದ್ದು, ಎಲ್ಲ ಭಜಕ ಮಹಾಜನರ ತನುಮನ ಧನಗಳ ಸಹಕಾರವನ್ನು ಕೋರಲಾಗಿದೆ ಎಂದು ಆಡಳಿತ ಮಂಡಳಿಯ ಮೊಕ್ತೇಸರ ಟಿ. ಗೋವಿಂದ ಪೈ ಹಾಗೂ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಸಿ. ಎ. ಶ್ರೀನಿವಾಸ್ ಎಸ್. ಕಾಮತ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ