ಮುಗಿದೀತೇ ಸುಳ್ಯ ತಾಲೂಕು ಕ್ರೀಡಾಂಗಣ ಕಾಮಗಾರಿ?


Team Udayavani, Dec 20, 2017, 5:00 PM IST

20–dec-36.jpg

ಸುಳ್ಯ : ಸುಳ್ಯ ನಗರ ವ್ಯಾಪ್ತಿಯ ಶಾಂತಿನಗರ ಬಳಿ ತಾಲೂಕು ಕ್ರೀಡಾಂಗಣ ನಿರ್ಮಾಣ ಕಾರ್ಯ 10 ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ಕಾಮಗಾರಿ ಪೂರ್ಣಗೊಳ್ಳದ ಕಾರಣ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಹಸ್ತಾಂತರವಾಗಿಲ್ಲ. ಕ್ರೀಡಾರ್ಥಿಗಳಿಗೆಂದು ನಿರ್ಮಾಣಗೊಂಡು ಪ್ರಸ್ತುತ ನಿರ್ವಹಣೆಯಿಲ್ಲದಿರುವ ಡ್ರೆಸಿಂಗ್‌ ಹಾಗೂ ವಿಶ್ರಾಂತಿ ಕೊಠಡಿಗಳು ಸಂಜೆಯಾಗುತ್ತಿದ್ದಂತೆ ಪಡ್ಡೆಗಳ ಹಾಗೂ ಸಮಾಜಘಾತುಕರ ಆಶ್ರಯ ತಾಣವಾಗಿ ಮಾರ್ಪಟ್ಟಿವೆ.

400 ಮೀ. ಟ್ರ್ಯಾಕ್‌
ಭೌಗೋಳಿಕ ರಚನೆ ಮತ್ತು ತಾಂತ್ರಿಕ ಅಧ್ಯಯನವನ್ನು ಸೂಕ್ತವಾಗಿ ನಡೆಸಿಲ್ಲವೆಂದು ಕ್ರೀಡಾಂಗಣ ನಿರ್ಮಾಣದ ಆರಂಭದಲ್ಲಿ ಅಪಸ್ವರಗಳಿದ್ದವು. 2006-07ರಲ್ಲಿ 400 ಮೀ. ಟ್ರ್ಯಕ್‌ನ ಕ್ರೀಡಾಂಗಣಕ್ಕೆಂದು 90 ಲಕ್ಷ ರೂ. ವೆಚ್ಚದ ಟೆಂಡರ್‌ ಮಂಜೂರಾಗಿತ್ತು.  ಈ ಮೊತ್ತದಲ್ಲಿ ಕ್ರೀಡಾಂಗಣ ವಿಸ್ತರಣೆ, ಮೇಲ್ಭಾಗದಲ್ಲಿ ಸುಸಜ್ಜಿತ ಡ್ರೆಸಿಂಗ್‌ ರೂಮ್‌, ವಿಶ್ರಾಂತಿ ಕೊಠಡಿಗಳು ನಿರ್ಮಾಣಗೊಂಡಿದ್ದವು. ಅನುದಾನ ಕೊರತೆಯಿಂದಾಗಿ ವಿಸ್ತರಣೆ ಕಾಮಗಾರಿ 200 ಮೀ. ಆಗುವಷ್ಟರಲ್ಲಿ ಸ್ಥಗಿತಗೊಂಡಿತು. ಈಗಾಗಲೇ ನಿರ್ಮಾಣಗೊಂಡಿರುವ ಕಟ್ಟಡಗಳೂ ಪಾಳುಬಿದ್ದಿವೆ. 

ಕ್ರೀಡಾಂಗಣ ವಿಸ್ತರಣೆಗಾಗಿ ಎತ್ತರದ ಗುಡ್ಡವನ್ನು ನೆಲಸಮತಟ್ಟು ಮಾಡಲಾಗಿದೆ. ಗುಡ್ಡಕ್ಕಿಂತ ಸುಮಾರು 50 ಅಡಿಗೂ ಹೆಚ್ಚು ಆಳದಲ್ಲಿ ಕ್ರೀಡಾಂಗಣವಿದೆ. ತಡೆಗೋಡೆ ಇಲ್ಲದ ಈ ಭಾಗದಲ್ಲಿ ಸುಮಾರು 5 ಜಾನುವಾರುಗಳು ಮೈದಾನಕ್ಕೆ ಉರುಳಿ ಬಲಿಯಾಗಿವೆ. ಮಕ್ಕಳು, ಸಾರ್ವಜನಿಕರು ಇಲ್ಲಿ ಅಡ್ಡಾಡುತ್ತಿದ್ದು, ಬಿದ್ದು ಅಪಾಯ ಮಾಡಿಕೊಳ್ಳುವ ಸಾಧ್ಯತೆಯಿದೆ ಎನ್ನುತ್ತಾರೆ, ಸ್ಥಳೀಯರಾದ ನಾಸಿರ್‌ ಮತ್ತು ಬಾತಿಶ್‌ ಬೆಟ್ಟಂಪಾಡಿ.

ಕ್ರೀಡಾಂಗಣ ಅಗತ್ಯ
ತಾಲೂಕಿನ ಹಲವಾರು ಕ್ರೀಡಾ ಪ್ರತಿಭೆಗಳಿಗೆ ಕ್ರೀಡಾಂಗಣ ಅಗತ್ಯವಾಗಿದೆ. ಕಾಮಗಾರಿ ಪೂರ್ಣಗೊಳ್ಳಲು ಕನಿಷ್ಠ 1.50 ಕೋಟಿ ರೂಪಾಯಿ ಅನುದಾನ ಅಗತ್ಯವಿದೆ. ವರ್ಷದ ಹಿಂದೆ ಸಹಾಯಕ ಕಮಿಷನರ್‌ ರಾಜೇಂದ್ರ ಅವರ ನೇತೃತ್ವದಲ್ಲಿ ವಿಶೇಷ ಸಭೆ ನಡೆದಿತ್ತು. ಕಾಮಗಾರಿ ಸ್ಥಗಿತಗೊಂಡಿದ್ದರ ಬಗ್ಗೆ ಚರ್ಚಿಸಲಾಗಿತ್ತು. ಖೇಲೋ ಇಂಡಿಯಾ ಯೋಜನೆಯಡಿ ಅನುದಾನ ಪಡೆಯಲು, ಲೋಪದ ಕುರಿತಾಗಿ ಸಮಗ್ರ ತನಿಖೆ ನಡೆಸಲು ಮತ್ತು ಅಂದಾಜು 2 ಕೋಟಿ ರೂ.ಗಳನ್ನು ವಿವಿಧ ಮೊತ್ತಗಳಲ್ಲಿ ಭರಿಸಿ ಕನಿಷ್ಠ 200 ಮೀಟರ್‌ ಟ್ರ್ಯಾಕ್‌ ರಚಿಸಿ ಕ್ರೀಡಾ ಚಟುವಟಿಕೆಗೆ ಚಾಲನೆ ನೀಡಲು ಉದ್ದೇಶಿಸಲಾಗಿತ್ತು. ಅದಿನ್ನೂ ಈಡೇರಿಲ್ಲ. ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷರೂ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಸರಕಾರದ ಗಮನಕ್ಕೆ ತರುವುದಾಗಿ ಭರವಸೆ ನೀಡಿದ್ದಾರೆ.

ನಿತ್ಯ ‘ಅವ್ಯವಹಾರ’
ಕಟ್ಟಡಗಳ ಸುತ್ತಲೂ ತಂತಿ ಬೇಲಿ ನಿರ್ಮಿಸಿ ಒಳಪ್ರವೇಶಿಸದಂತೆ ಭದ್ರತೆ ಏರ್ಪಡಿ ಸಿದ್ದರೂ ಈಗ ಹಾಳಾಗಿದೆ. ರಾತ್ರಿ ವೇಳೆ ಮದ್ಯವ್ಯಸನಿಗಳು, ಪಡ್ಡೆಗಳು ಕಟ್ಟಡದತ್ತ ತೆರಳಿ ಮೋಜು – ಮಸ್ತಿ ಮಾಡುತ್ತಿದ್ದಾರೆ. ಸುಂದರ ಕಟ್ಟಡದ ಗೋಡೆಗಳು, ಬಾಗಿಲುಗಳು, ನೀರಿನ ಪೈಪ್‌ಗ್ಳು, ಕಿಟಕಿಗಳು, ಶೌಚಾಲಯ ಎಲ್ಲವೂ ಹಾನಿಗೊಂಡಿವೆ. ಗೋಡೆಯಲ್ಲಿ ಅಸಭ್ಯ ಬರಹಗಳು ಕಾಣಿಸುತ್ತಿವೆ. ಕೊಠಡಿಯೊಳಗೆ ಮದ್ಯದ ಬಾಟಲಿ, ಸಿಗರೇಟು ಪ್ಯಾಕ್‌ ರಾಶಿ ಬಿದ್ದಿವೆ. ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ದೂರಿದ್ದಾರೆ.

1.50 ಕೋ.ರೂ. ಅಗತ್ಯ
400 ಮೀಟರ್‌ ಟ್ರ್ಯಾಕ್‌ನ ಕ್ರೀಡಾಂಗಣಕ್ಕಾಗಿ ಕನಿಷ್ಠ 1.50 ಕೋಟಿ ರೂಪಾಯಿ ಅಗತ್ಯವಿದೆ. ಅಷ್ಟೊಂದು ಮೊತ್ತ ವಿನಿಯೋಗಿಸಿದರೆ ಕ್ರೀಡಾ ಚಟುವಟಿಕೆ ಆರಂಭಗೊಂಡೀತು.
ದೇವರಾಜ್‌ ಮುತ್ಲಾಜೆ, ಸಹಾಯಕ
   ಯುವ ಸಬಲೀಕರಣ ಕ್ರೀಡಾಧಿಕಾರಿ

ಅನುದಾನವಿಲ್ಲ
ಪ್ರಾಧಿಕಾರದಲ್ಲಿ ಯಾವುದೇ ಅನುದಾನ ವಿಲ್ಲ . ಆದರೆ ಇಲ್ಲಿನ ಸಮಸ್ಯೆಬಗ್ಗೆ ಕ್ರೀಡಾ ಸಚಿವರು, ಸರಕಾರದ ಗಮನ ಸೆಳೆಯುತ್ತೇನೆ. ಸ್ಥಳೀಯ ಶಾಸಕರೂ ಹೆಚ್ಚು ಗಮನ ವಹಿಸಬೇಕು.
ಮೀರ್‌ ರೋಶನ್‌ ಆಲಿ, ರಾಜ್ಯ
   ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ 

 ಭರತ್‌ ಕನ್ನಡ್ಕ

ಟಾಪ್ ನ್ಯೂಸ್

Mehabooba

POCSO ಪ್ರಕರಣದಲ್ಲಿ ಬಿಎಸ್‌ವೈಗೆ ಕೋರ್ಟ್‌ ರಕ್ಷಣೆ ಸರಿಯಲ್ಲ: ಮುಫ್ತಿ

1-imek-22

Controversy ನಡುವೆ “ಪ್ರೇರಣಾ ಸ್ಥಳ’ ಉದ್ಘಾಟನೆ

1-imek

ನಮ್ಮ ‘ಐಮೆಕ್‌’ ಪ್ರಾಜೆಕ್ಟ್ ಗೆ ಜಿ7 ನಾಯಕರ ಬೆಂಬಲ!

vande bharat

ಜೂ.20ಕ್ಕೆ ಬೆಂಗಳೂರು-ಮಧುರೈ ವಂದೇ ಭಾರತ್‌: ಕರ್ನಾಟಕಕ್ಕೆ 9ನೇ ರೈಲು

1-sugopi

ಇಂದಿರಾ ಗಾಂಧಿ ಕಾಂಗ್ರೆಸ್‌ ಮಾತೆ: ಉಲ್ಟಾ ಹೊಡೆದ ಸುರೇಶ್‌ ಗೋಪಿ

ಶಕ್ತಿ ಯೋಜನೆಯಿಂದ ಪ್ರವಾಸೋದ್ಯಮ ಚುರುಕು: ಸಚಿವ ಎಚ್‌.ಕೆ. ಪಾಟೀಲ್‌

ಶಕ್ತಿ ಯೋಜನೆಯಿಂದ ಪ್ರವಾಸೋದ್ಯಮ ಚುರುಕು: ಸಚಿವ ಎಚ್‌.ಕೆ. ಪಾಟೀಲ್‌

ಎಚ್‌ಡಿಕೆ ಕಾಲದಲ್ಲೂ ತೈಲ ದರ ಏರಿಸಿದ್ದರು: ಸಿದ್ಧರಾಮಯ್ಯ

ಎಚ್‌ಡಿಕೆ ಕಾಲದಲ್ಲೂ ತೈಲ ದರ ಏರಿಸಿದ್ದರು: ಸಿದ್ಧರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Missing Case ಉಪ್ಪಿನಂಗಡಿ: ತಾಯಿ, ಮಗ ನಾಪತ್ತೆMissing Case ಉಪ್ಪಿನಂಗಡಿ: ತಾಯಿ, ಮಗ ನಾಪತ್ತೆ

Missing Case ಉಪ್ಪಿನಂಗಡಿ: ತಾಯಿ, ಮಗ ನಾಪತ್ತೆ

Subramanya: ವಿದ್ಯುತ್‌ ಕಂಬಕ್ಕೆ ಕಾರು ಢಿಕ್ಕಿ

Subramanya: ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಕಾರು

Road Mishap ಕಡಪಾಲ: ಕಾರುಗಳ ಮುಖಾಮುಖಿ ಢಿಕ್ಕಿ

Road Mishap ಕಡಪಾಲ: ಕಾರುಗಳ ಮುಖಾಮುಖಿ ಢಿಕ್ಕಿ

Belthangady ತಾಯಿಗೆ ಅನಾರೋಗ್ಯ: ವಿದ್ಯಾರ್ಥಿನಿ ಆತ್ಮಹತ್ಯೆ

Belthangady ತಾಯಿಗೆ ಅನಾರೋಗ್ಯ: ವಿದ್ಯಾರ್ಥಿನಿ ಆತ್ಮಹತ್ಯೆ

ಕರಾವಳಿಯ ದೇಗುಲಗಳಲ್ಲಿ ಭಾರೀ ಭಕ್ತ ಸಂದಣಿ

ಕರಾವಳಿಯ ದೇಗುಲಗಳಲ್ಲಿ ಭಾರೀ ಭಕ್ತ ಸಂದಣಿ

MUST WATCH

udayavani youtube

ಕೆ‌ಎಸ್‌ಆರ್‌ಟಿಸಿ‌ ಬಸ್- ಬೈಕ್ ಮುಖಾಮುಖಿ ಢಿಕ್ಕಿ ; ಸವಾರ ಮೃತ್ಯು

udayavani youtube

ಇಡ್ಲಿ, ವಡೆ, ಚಟ್ನಿ ಗೆ ತುಂಬಾ ಫೇಮಸ್ ಈ ಹೋಟೆಲ್

udayavani youtube

ಕಾಪು ಸರ್ವೀಸ್ ರಸ್ತೆಯಲ್ಲಿ ರಿಕ್ಷಾ ಚಾಲಕ ಮತ್ತು ಬೈಕ್ ಸವಾರನ ನಡುವೆ ಹೊಡೆದಾಟ

udayavani youtube

ದರ್ಶನ್ ಗ್ಯಾಂಗ್ ಕ್ರೌರ್ಯ ಹೇಗಿತ್ತು ಗೊತ್ತಾ..? ವೈರಲ್ ಆಡಿಯೋ ಇಲ್ಲಿದೆ

udayavani youtube

Udupi: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

ಹೊಸ ಸೇರ್ಪಡೆ

Ajit Doval

ಇಂದಿನಿಂದ ಅಮೆರಿಕ, ಭಾರತ ಭದ್ರತಾ ಸಲಹೆಗಾರರ ಸಭೆ

1-asdsadsad

T 20 WC; ಸೂಪರ್‌-8 ಗಡಿಯಲ್ಲಿ ಬಾಂಗ್ಲಾ: ನೇಪಾಲ ಕೊನೆಯ ಎದುರಾಳಿ

Mehabooba

POCSO ಪ್ರಕರಣದಲ್ಲಿ ಬಿಎಸ್‌ವೈಗೆ ಕೋರ್ಟ್‌ ರಕ್ಷಣೆ ಸರಿಯಲ್ಲ: ಮುಫ್ತಿ

1-imek-22

Controversy ನಡುವೆ “ಪ್ರೇರಣಾ ಸ್ಥಳ’ ಉದ್ಘಾಟನೆ

police crime

ಗೇಮಿಂಗ್‌ ಜೋನ್‌ ದುರಂತ: ಇನ್ನೂ ಇಬ್ಬರು ಪೊಲೀಸ್‌ ವಶಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.