ಧನಕ್ಕಾಗಿ ಅಂತರ ಮರೆತ ಜನ
ಜನ್ಧನ್ ಖಾತೆಗೆ 500 ರೂ. ಜಮೆ ; ಹಣ ಬಿಡಿಸಿಕೊಳ್ಳಲು ಮುಗಿಬಿದ್ದ ಜನ
Team Udayavani, Apr 14, 2020, 4:36 PM IST
ಗದಗ: ಕೋವಿಡ್-19 ಆತಂಕದ ಹಿನ್ನೆಲೆಯಲ್ಲಿ ದೇಶದಲ್ಲಿ ಲಾಕ್ಡೌನ್ ಜಾರಿಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಬಡ ಕುಟುಂಬಗಳಿಗೆ ನೆರವಾಗಲೆಂದು ಕೇಂದ್ರ ಸರಕಾರ ಜನ್ಧನ್ ಖಾತೆಗೆ 500 ರೂ. ಜಮೆ ಮಾಡಿದೆ. ಆದರೆ ಹಣಕ್ಕಾಗಿ ಮಹಿಳೆಯರು ಬ್ಯಾಂಕ್ಗಳಿಗೆ ಮುಗಿಬೀಳುತ್ತಿದ್ದು, ಸಾರ್ವಜನಿಕರ ಈ ನಡೆ ಕೋವಿಡ್-19 ಆಹ್ವಾನಿಸುವಂತಿದೆ. ಬಹುತೇಕ ಏ. 1ರಂದೇ ಜನ್ಧನ್ ಖಾತೆಗಳಿಗೆ 500 ರೂ. ಹಣ ಜಮೆಯಾಗಿದೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ
“ತಕ್ಷಣವೇ ನಿಮ್ಮ ಹಣ ಡ್ರಾ ಮಾಡಬೇಕು. ಇಲ್ಲವೇ ಕೇಂದ್ರ ಸರಕಾರ 500 ರೂ. ಮರಳಿ ಪಡೆಯುತ್ತದೆ’ ಎಂಬ ವದಂತಿ ಹರಿದಾಡುತ್ತಿವೆ ಎನ್ನಲಾಗಿದೆ. ಇದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದ್ದು, ಮಹಿಳೆಯರು ಬ್ಯಾಂಕ್ ಗಳಿಗೆ ಮುಗಿಬೀಳುತ್ತಿದ್ದಾರೆ.
2.51 ಲಕ್ಷ ಖಾತೆಗೆ ಜಮಾ: 2014ರಲ್ಲಿ ಜನ್ಧನ್ ಯೋಜನೆ ಆರಂಭಗೊಂಡಿದ್ದು, ಜಿಲ್ಲೆಯಲ್ಲಿ ಈವರೆಗೆ 7,07,254 ಖಾತೆಗಳನ್ನು ತೆರೆಯಲಾಗಿದೆ. ಆ ಪೈಕಿ 2,51,038 ಮಹಿಳೆಯರ ಖಾತೆಗಳಿದ್ದು, ಈಗಾಗಲೇ ತಲಾ 500 ರೂ. ಜಮಾ ಆಗಿದೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಹರಡಿದ ವದಂತಿಗಳಿಂದ ಜನರು ಗೊಂದಲಕ್ಕೀಡಾಗುತ್ತಿದ್ದು, ಹಣ ಬಿಡಿಸಿಕೊಳ್ಳಲು ಬ್ಯಾಂಕ್ಗಳಿಗೆ ಧಾವಿಸುತ್ತಿದ್ದಾರೆ. ಗದಗ-ಬೆಟಗೇರಿ ಸೇರಿದಂತೆ ಜಿಲ್ಲೆಯ ವಿವಿಧ ಬ್ಯಾಂಕ್ಗಳ ಎದುರು ಬೆಳಗಾಗುತ್ತಿದ್ದಂತೆ ನೂರಾರು ಸಂಖ್ಯೆಯಲ್ಲಿ ಜನರು ಜಮಾಯಿಸುತ್ತಿದ್ದಾರೆ. ಪೊಲೀಸರು ಕೊಂಚ ಅತ್ತಿತ್ತ ಹೋದರೂ ಮಹಿಳೆಯರು ಗುಂಪುಗೂಡುತ್ತಾರೆ.
ಜನ್ಧನ್ ಖಾತೆದಾರರಿಗೆ ಈಗಾಗಲೇ ಎಟಿಎಂ ಮಾದರಿಯ ರೂಪೇ ಕಾರ್ಡ್ ನೀಡಲಾಗುತ್ತಿದೆ. ಅವುಗಳು ಬಳಕೆಯಲ್ಲಿಲ್ಲದೇ, ಅಮಾನತು ಹಾಗೂ ರದ್ದುಗೊಂಡಿವೆ. ಇನ್ನೂ, ಕೆಲವರಿಗೆ ಎಟಿಎಂ ಬಳಕೆಯೇ ಗೊತ್ತಿಲ್ಲದಿದ್ದರೆ, ಹಲವರಿಗೆ ತಮ್ಮ ಪಿನ್ ನಂಬರ್(ಗುಪ್ತ ಸಂಖ್ಯೆ) ಮರೆತು ಹೋಗಿದೆ. ಹೀಗಾಗಿ ಬ್ಯಾಂಕ್ಗಳಿಗೆ ಮೊರೆ ಹೋಗುವುದು ಅನಿವಾರ್ಯ ಎನ್ನಲಾಗಿದೆ. 500 ರೂ.ಗಾಗಿ ಅಪಾಯವನ್ನು ಮೈಮೇಲೆ ಎಳೆದುಕೊಳ್ಳುತ್ತಿದ್ದಾರೆ ಎಂಬುದರಲ್ಲಿ ಎರಡು
ಮಾತಿಲ್ಲ.
ಜನ್ಧನ್ ಮಹಿಳಾ ಖಾತೆಗಳಿಗೆ ಸರಕಾರದಿಂದ ಈಗಾಗಲೇ 500 ರೂ. ಜಮಾ ಮಾಡಲಾಗಿದೆ. ಆದರೆ ತಕ್ಷಣವೇ ಹಣ ಡ್ರಾ ಮಾಡಬೇಕು ಎಂಬ ನಿಯಮವಿಲ್ಲ. ಇನ್ನೂ ಮೂರು ತಿಂಗಳು ಸರಕಾರದಿಂದ ಹಣ ಜಮೆಯಾಗುತ್ತದೆ. ಅಗತ್ಯವಿದ್ದವರು ಮಾತ್ರ ಹಣ ಬಿಡಿಸಿಕೊಳ್ಳಬೇಕು.
ಮುರಳಿ ನಾಯಕ್, ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ
ಗದಗ: ಸೈಕ್ಲಿಂಗ್ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಪವಿತ್ರಾ ಆಯ್ಕೆ
Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ
Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ
Gadaga: 28 ರಂದು ಯುವಚೈತನ್ಯ ಕಾರ್ಯಕ್ರಮ: ಜ್ಯೂ. ಕೆ.ಎಚ್. ಪಾಟೀಲ
MUST WATCH
ಹೊಸ ಸೇರ್ಪಡೆ
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ