ಬಂಕ್ ಬಂದ್: ಮುಗಿಯದ ಗೊಂದಲ
Team Udayavani, Mar 29, 2020, 12:58 PM IST
ಕಲಬುರಗಿ: ಕೋವಿಡ್ 19 ಸೋಂಕು ಭೀತಿ ಹಿನ್ನೆಲೆಯಲ್ಲಿ ಜನರ ಓಡಾಟ ನಿಯಂತ್ರಿಸಲು ಪೆಟ್ರೋಲ್ ಬಂಕ್ಗಳ ಬಂದ್ ಕುರಿತು ಜಿಲ್ಲಾಡಳಿತ ಹೊರಡಿಸಿದ ಆದೇಶ ಗೊಂದಲ ಮೂಡಿಸಿದೆ.
ಶುಕ್ರವಾರ ರಾತ್ರಿ 9 ಗಂಟೆ ಸುಮಾರಿಗೆ ಜಿಲ್ಲಾದ್ಯಂತ ಎಲ್ಲ ಬಂಕ್ಗಳನ್ನು ಅನಿರ್ದಿಷ್ಟ ಅವಧಿಯವರೆಗೆ ಮುಚ್ಚಿಸಿ ಜಿಲ್ಲಾಧಿಕಾರಿ ಶರತ್ ಬಿ. ಆದೇಶ ಹೊರಡಿಸಿದ್ದರು. ಈ ಆದೇಶ ಹೊರಬೀಳುತ್ತಿದ್ದಂತೆ ಸಾರ್ವಜನಿಕರು ಪೆಟ್ರೋಲ್, ಡೀಸೆಲ್ ತುಂಬಿಸಿಕೊಳ್ಳಲು ಬಂಕ್ ಗಳತ್ತ ದಾಂಗುಡಿ ಇಟ್ಟರು. ಬಂಕ್ಗಳಲ್ಲಿ ಜನ ಜಮಾವಣೆಗೊಂಡ ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕಾಗಮಿಸಿ ತಕ್ಷಣದಿಂದಲೇ ಬಂಕ್ ಗಳನ್ನು ಬಂದ್ ಮಾಡಿ ಮಾಲೀಕರಿಗೆ ಹೇಳಿ ಬಂದ್ ಮಾಡಿಸಿದರು.
ಇದಾದ ಒಂದು ಗಂಟೆ ಅವಧಿಯೊಳಗೇ ತಮ್ಮ ಆದೇಶವನ್ನು ಜಿಲ್ಲಾಧಿಕಾರಿಗಳು ಮಾರ್ಪಾಡು ಮಾಡಿದರು. ಅಗತ್ಯ ಅನುಸಾರಗಾಗಿ ಎಲ್ಲರಿಗೂ ಇಂಧನ ಲಭ್ಯತೆ ಇರಲಿದೆ. ಪ್ರಥಮವಾಗಿ ವೈದ್ಯರು, ಆರೋಗ್ಯ ಸಿಬ್ಬಂದಿಗೆ ಆದ್ಯತೆ, ಎರಡನೇ ಅಗತ್ಯ ವಸ್ತುಗಳ ಸಾಗಾಟಗಾರರು ನಂತರದಲ್ಲಿ ಸಾರ್ವಜನಿಕವಾಗಿ ಎಲ್ಲರಿಗೂ ಇಂಧನ ಸಿಗಲಿದೆ ಎಂದು ಹೇಳಿದರು.
ಆದರೆ, ಶನಿವಾರ ಬೆಳಗ್ಗೆ ಮತ್ತೆ ತಮ್ಮ ಆದೇಶವನ್ನು ಬದಲಿಸಿ ಈ ಮೊದಲು ಹೊರಡಿಸಿದ ಆದೇಶವನ್ನೇ ಮರು ಜಾರಿ ಮಾಡಿದರು. ಮುಂದಿನ ಆದೇಶದವರೆಗೂ ಎಲ್ಲ ಪೆಟ್ರೋಲ್ ಬಂಕ್ಗಳು ಮುಚ್ಚಬೇಕು ಎಂದು ಸೂಚಿಸಿದರು. ಅಲ್ಲದೇ, ಸರ್ಕಾರಿ ವಾಹನಗಳು, ವೈದ್ಯರು, ವೈದ್ಯಕೀಯ ಸಿಬ್ಬಂದಿ, ಆ್ಯಂಬುಲೆನ್ಸ್ಗಳು, ಔಷಧಿ ವ್ಯಾಪಾರಿಗಳು, ಪತ್ರಕರ್ತರು ಮತ್ತು ಕೆಲ ಅವಶ್ಯ ಸೇವಾ ವಲಯದ ಇಲಾಖೆಗಳು ಮತ್ತು ಸರ್ಕಾರಿ ನೌಕರರಿಗೆ ಈ ಆದೇಶ ಅನ್ವಯಿಸಿಲ್ಲ. ಇವರಿಗೆ ಇಂಧನ ತುಂಬುವಾಗ ಗುರುತಿನ ಚೀಟಿ ಪರಿಶೀಲಿಸಬೇಕೆಂದು ಪೆಟ್ರೋಲ್ ಮಾಲೀಕರಿಗೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.
ಜಿಲ್ಲಾಧಿಕಾರಿಗಳ ಈ ಆದೇಶದಿಂದ ಪೆಟ್ರೋಲ್ ಬಂಕ್ ಮಾಲೀಕರು ಗೊಂದಲಕ್ಕೀಡಾದರು. ಕೆಲ ಪೆಟ್ರೋಲ್ ಬಂಕ್ಗಳನ್ನು ಸಂಪೂರ್ಣವಾಗಿ ಬಂದ್ ಮಾಡಿದರು. ಅಲ್ಲದೇ, ತುರ್ತು ಸೇವೆ ಒದಗಿಸುವರಿಗೂ ಪೆಟ್ರೋಲ್ ಬಿಸಿ ತಟ್ಟಿತು. ಹೋಂ ಕ್ವಾರೆಂಟೈನ್ನಲ್ಲಿದ್ದವರ ತಪಾಸಣೆಗೆ ಹೋಗಬೇಕಾದ ಆರೋಗ್ಯ ಸಿಬ್ಬಂದಿ, ಪೆಟ್ರೋಲ್ ಹಾಕಿಸಿಕೊಳ್ಳಲು ಹೋದರೆ ಬಂಕ್ ಸಿಬ್ಬಂದಿ ಪೆಟ್ರೋಲ್ ತುಂಬಲಿಲ್ಲ. ಗುರುತಿನ ಚೀಟಿ ತೋರಿಸಿದರೂ ಸಹ ಬಂಕ್ನವರು ಪೆಟ್ರೋಲ್ ಹಾಕದ ಘಟನೆಗಳು ನಡೆದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್
ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್
Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ
Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ
Lok Sabha elections ನಂತರ ರಾಜ್ಯ ವಿಧಾನಸಭೆ ವಿಸರ್ಜನೆಯಾದರೂ ಆಶ್ಚರ್ಯವಿಲ್ಲ: ಯತ್ನಾಳ್
MUST WATCH
ಹೊಸ ಸೇರ್ಪಡೆ
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು
LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…