ಬಂಧಿತ ಪಂಚೆನ್ ಲಾಮಾ ಬಿಡುಗಡೆಗೆ ಟಿಬೆಟ್ ಸಂಘಟನೆಗಳ ಒತ್ತಾಯ
Team Udayavani, Apr 30, 2019, 6:30 AM IST
ಮಡಿಕೇರಿ: ಕಳೆದ 24 ವರ್ಷಗಳಿಂದ ಚೀನಾ ಸರಕಾರ ರಾಜಕೀಯ ಕೆೈದಿಯಾಗಿ ಬಂಧಿಸಿರುವ ಪಂಚೆನ್ ಲಾಮಾ ಅವರನ್ನು ತತ್ಕ್ಷಣ ಬಿಡುಗಡೆಗೊಳಿಸುವಂತೆ ಪ್ರಾಂತೀಯ ಟಿಬೆಟ್ ಯುವ ಕಾಂಗ್ರೆಸ್ ಮತ್ತು ಮಹಿಳಾ ಟಿಬೆಟ್ ಸಂಘಟನೆಗಳು ಒತ್ತಾಯಿಸಿದೆ.
ಕುಶಾಲನಗರ ಸಮೀಪ ಬೈಲು ಕೊಪ್ಪೆಯ ಸಂಘಟನೆ ಕಛೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ, ತಶಿ ಲೊಂಪೊ ಬೌದ್ಧ ಮಂದಿರ ಧರ್ಮಗುರುಗಳಾದ ಕೆಲ್ಕನ್ ರಿಂಪೋಚೆ, 11ನೇ ಪಂಚೆನ್ ಲಾಮ ಮತ್ತು ಅವರ ಪೋಷಕರನ್ನು ಚೀನಾ ಸರಕಾರ ತಮ್ಮ ವಶಕ್ಕೆ ಪಡೆದುಕೊಂಡಿದ್ದು ಇದುವರೆಗೂ ಅವರ ವಾಸ್ತವ ಸ್ಥಿತಿ ಬಗ್ಗೆ ಹೊರ ಜಗತ್ತಿಗೆ ಮಾಹಿತಿ ನೀಡುತ್ತಿಲ್ಲ. ಅವರ ಎಲ್ಲ ಹಕ್ಕುಗಳನ್ನು ಮೊಟಕುಗೊಳಿಸಿ ಬಂಧನಕ್ಕೆ ಒಳಪಡಿಸಿದ್ದಾರೆ.
ತಮ್ಮ ಸಮುದಾಯದ ಧರ್ಮ ಗುರುಗಳೆಂದು ಬಿಂಬಿಸಲಾಗಿದ್ದ ಪಂಚೆನ್ ಲಾಮ ಅವರನ್ನು ಕೂಡಲೆ ಬಿಡುಗಡೆ ಗೊಳಿಸುವಂತೆ ಒತ್ತಾಯಿಸಿದರು.
ಪ್ರಸಕ್ತ 30 ವರ್ಷ ಪ್ರಾಯದ ಪಂಚೆನ್ ಲಾಮ ಅವರು ಬೌದ್ಧ ಧರ್ಮೀಯರ ಮುಂದಿನ ಪರಮೋಚ್ಚ ಗುರುಗಳಾಗಬೇಕಾಗಿದ್ದು ಅವರ ಧಾರ್ಮಿಕ ಚಟುವಟಿಕೆಗಳಿಗೆ ಕೂಡ ಅಡ್ಡಿ ಮಾಡಿರುವ ಸಾಧ್ಯತೆಯಿದೆ. ಚೀನಾ ಸರಕಾರ ಟಿಬೇಟಿಯನ್ನರ ವಿರುದ್ಧ ಮಾನವ ಹಕ್ಕುಗಳ ಉಲ್ಲಂಘನೆ ನಡೆಸುತ್ತಾ ಬಂದಿದ್ದು ಈ ಬಗ್ಗೆ ವಿಶ್ವಸಂಸ್ಥೆಗೆ ಹಲವು ಬಾರಿ ದೂರು ನೀಡಲಾಗಿದೆ ಎಂದಿದ್ದಾರೆ.
11ನೇ ಪಂಚೆನ್ ಲಾಮಾರ ಶೀಘ್ರ ಬಿಡುಗಡೆಗೆ ಪ್ರಾರ್ಥಿಸಿ ಬೈಲುಕೊಪ್ಪೆಯ ಟಿಬೇಟಿಯನ್ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿರುವುದಾಗಿ ತಿಳಿಸಿದರು.
ಈ ಸಂದರ್ಭ ಭಾರತೀಯ ಸಮುದಾಯ ಸೇರಿದಂತೆ ವಿಶ್ವದ ಜನರ ಸಹಕಾರ ತಮಗೆ ಅವಶ್ಯಕತೆಯಿದೆ ಎಂದು ಸಹಾಯ ಕೋರಿದರು.
ಸುದ್ದಿಗೋಷ್ಠಿಯಲ್ಲಿ ಟಿಬೇಟಿಯನ್ ಯೂತ್ ಕಾಂಗ್ರೆಸ್ ಅಧ್ಯಕ್ಷರಾದ ಲಕ್ಯಪ್ ಜನಿಯಲ್ ಮತ್ತು ಟಿಬೇಟಿಯನ್ ಮಹಿಳಾ ಘಟಕದ ಅಧ್ಯಕ್ಷೆ ತಶಿ ಚೋಡನ್ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್
Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ