ಪತ್ನಿ ಕೊಲೆ ಮಾಡಿದ್ದ ಪೇದೆ ಬಂಧನ
Team Udayavani, Nov 4, 2022, 3:17 PM IST
ಯಲಬುರ್ಗಾ: ಪತ್ನಿಯನ್ನು ಅಗಳಕೇರಾ ಹತ್ತಿರದ ತುಂಬಿ ಹರಿಯುತ್ತಿರುವ ಕಾಲುವೆಗೆ ನೂಕಿ ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ತಾಲೂಕಿನ ಕಲಭಾವಿ ಗ್ರಾಮದ ಪೊಲೀಸ್ ಪೇದೆ ಹನುಮೇಶ ಮೇಟಿಯನ್ನು ಭಾನಾಪುರ ಕ್ರಾಸ್ ಬಳಿ ಗುರುವಾರ ಬೆಳಗ್ಗಿನ ಜಾವ ಬಂಧಿಸಿದ್ದಾರೆ.
ತನ್ನ ಪುತ್ರಿ ರೇಷ್ಮಾಳಿಗೆ ವರದಕ್ಷಿಣೆ ಕಿರುಕುಳ ನೀಡಿ ಶಿವಪುರ ಕೆರೆಗೆ ನೂಕಿದ್ದಾರೆ ಎಂದು ಮೃತಳ ತಂದೆ ನ. 1ರಂದು ತಾಲೂಕಿನ ಬೇವೂರು ಠಾಣೆಯಲ್ಲಿ ದೂರು ನೀಡಿದ್ದರು. ತನಿಖೆ ಕೈಗೊಂಡ ಪೊಲೀಸರು ನ. 3ರಂದು ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದ ಪೊಲೀಸ್ ಪೇದೆ ಹನುಮೇಶ ಮೇಟಿಯನ್ನು ಬಂ ಧಿಸಿದ್ದಾರೆ. ಆರೋಪಿಯನ್ನು ಬಂಧಿಸಿ ನ್ಯಾಯಂಗ ಬಂಧನಕ್ಕೆ ಕಳುಹಿಸಿದ್ದಾರೆ.
ಫೆಬ್ರವರಿ 2022ರಲ್ಲಿ ಪೊಲೀಸ್ ಪೇದೆ ಹನುಮೇಶ ಮೇಟಿ ಜತೆ ರೇಷ್ಮಾಳ ವಿವಾಹ ಆಗಿತ್ತು. ಮದುವೆ ವೇಳೆ 11 ತೊಲೆ ಚಿನ್ನ, 2.5 ಲಕ್ಷ ವರದಕ್ಷಿಣೆ ನೀಡಿ, ಇನ್ನೂ ಒಂದು ಲಕ್ಷ ಹಣ ಬಾಕಿ ಉಳಿಸಿಕೊಂಡಿದ್ದರು. ವರದಕ್ಷಿಣೆ ಹಣ ಬಾಕಿ ಇದ್ದಿದ್ದರಿಂದ ಹನುಮೇಶ ಹಾಗು ಆತನ ಸಂಬಂಧಿಗಳು ರೇಷ್ಮಾಳಿಗೆ ಕಿರುಕುಳ ನೀಡುತ್ತಿದ್ದರು. ಅಲ್ಲದೇ ದೀಪಾವಳಿ ಹಬ್ಬಕ್ಕೆ ಆಕೆಯನ್ನು ತವರು ಮನೆಗೆ ಕರೆಯಲು ಬಂದರೆ ಕಳುಹಿಸಿ ಕೊಡದೆ ಅ. 22ರಂದು ರಾತ್ರಿ ಹತ್ತು ಗಂಟೆಯಿಂದ ಅ. 23 ಬೆಳಗಿನ ಜಾವ 7:30ರವೆರೆಗೆ ಯಾವುದೋ ಜಾಗದಲ್ಲಿ ಕೂಡಿ ಹಾಕಿ ವರದಕ್ಷಿಣೆ ಹಾಗೂ ಚಿನ್ನ ತರುವಂತೆ ಕಿರುಕುಳ ಕೊಟ್ಟು, ಹೊಡಿದ್ದಾರೆ. ಅಲ್ಲದೇ ನ.1ರಂದು ಶಿವಪುರ ಕೆರೆಯಲ್ಲಿ ಹಾಕಿ ಕೊಲೆ ಮಾಡಿದ್ದಾರೆ ಎಂದು ಮೇತಳ ತಂದೆ ದೂರು ದಾಖಲಿಸಿದ್ದರು.
ಎರಡು ದಿನದೊಳಗೆ ಕೊಲೆಗಾರರನ್ನು ಬಂಧಿ ಸಿದ್ದಕ್ಕೆ ಎಸ್ಪಿ ಅರುಣಾಂಗ್ಷು ಗಿರಿ ಪೊಲೀಸ್ ಅಧಿಕಾರಿಗಳಿಗೆ ಹಾಗು ಸಿಬ್ಬಂದಿ ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿ ಬಹುಮಾನ ಘೋಷಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸ್ತ್ರೀ ಶಕ್ತಿ ಗುಂಪಿನ ಸದಸ್ಯೆಯರಿಗೆ ಬ್ಯಾಂಕ್ ಸಿಬ್ಬಂದಿಗಳಿಂದ ಕಿರುಕುಳ, ಪ್ರತಿಭಟನೆ
ಕುಕನೂರು: ಸೌಕರ್ಯವಿಲ್ಲದೇ ಹಮಾಲರ ಕಾಲೋನಿ ಅನಾಥ!
3ನೇ ಸೆಮಿಸ್ಟರ್ ಸಮಾಜಶಾಸ್ತ್ರ ಪರೀಕ್ಷೆಗೆ 1ನೇ ಸೆಮಿಸ್ಟರ್ ಪ್ರಶ್ನೆ ಪತ್ರಿಕೆ ವಿತರಣೆ
Gangavathi ಖಾಸಗಿ ಶಾಲೆಗಳಿಂದ ಪ್ರವೇಶ ನೆಪದಲ್ಲಿ ಲಕ್ಷಾಂತರ ರೂ.ವಸೂಲಿ ಖಂಡಿಸಿ ಪ್ರತಿಭಟನೆ
ದೋಟಿಹಾಳ: ಬೆಂಕಿಯಿಂದ ಬಾಣಲೆಗೆ ಬಿದ್ದ ಕುಟುಂಬ; ಸಂತ್ರಸ್ತರ ಅಳಲು
MUST WATCH
ಹೊಸ ಸೇರ್ಪಡೆ
ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ರಾಜ್ಯ ಸರಕಾರ ಸಂಪೂರ್ಣ ವಿಫಲ: ಶೆಟ್ಟರ್
ಸಂಗೀತಾ ಬರ್ತ್ ಡೇಗೆ ಪ್ರತಾಪ್ ಸ್ಪೆಷೆಲ್ ಗಿಫ್ಟ್; ಪ್ರೀತಿಯ ತಮ್ಮನಿಗೆ ರಾಖಿ ಕಟ್ಟಿದ ನಟಿ
ಕೋಟ: ಕೋಡಿ ಬೆಂಗ್ರೆಗೆ ಸರಕಾರಿ ಬಸ್ ಓಡಿಸಲು ಮೀನಮೇಷ
CAA ಅಡಿಯಲ್ಲಿ ಮೊದಲ ಬಾರಿಗೆ 14 ಜನರಿಗೆ ಭಾರತೀಯ ಪೌರತ್ವ ಪ್ರಮಾಣಪತ್ರ ವಿತರಣೆ
Sirsi: ಕರ್ನಾಟಕ ಜಾನಪದ ಪರಿಷತ್ನ ನೂತನ ಜಿಲ್ಲಾಧ್ಯಕ್ಷರಾಗಿ ಡಾ. ವೆಂಕಟೇಶ ನಾಯ್ಕ ಆಯ್ಕೆ