ವಿರೂಪಾಪುರ ಗಡ್ಡೆ ರೆಸಾರ್ಟ್ ತೆರವು ಅಸಾಧ್ಯ: ಅಧಿಕಾರಿಗಳು ಬರಿಗೈಲಿ ವಾಪಸ್
Team Udayavani, Mar 13, 2020, 5:21 PM IST
ಗಂಗಾವತಿ: ಐತಿಹಾಸಿಕ ಹಂಪಿ ಸುತ್ತಲಿನ ಪ್ರದೇಶದಲ್ಲಿ ಅಕ್ರಮ ಅನೈತಿಕ ಕಾರ್ಯ ನಡೆಯಲು ರೆಸಾರ್ಟ್ ಹೊಟೇಲ್ ಗಳ ತೆರವು ಕಾರ್ಯ ಮುಂದುವರಿದಿದ್ದು ಶುಕ್ರವಾರ ನಡೆಯಬೇಕಿದ್ದ ತೆರವು ಕಾರ್ಯಕ್ಕೆ ಕಾನೂನು ತೊಡಕಿನ ಹಿನ್ನೆಲೆಯಲ್ಲಿ ತೆರವು ಕಾರ್ಯಕ್ಕೆ ಹೋಗಿದ್ದ ಹಂಪಿ ಅಭಿವೃದ್ಧಿ ಪ್ರಾಧಿಕಾರ ಮತ್ತು ಜಿಲ್ಲಾಡಳಿತದ ಅಧಿಕಾರಿಗಳು ಕೋರ್ಟ್ ತೀರ್ಪಿನ ಆದೇಶ ಪ್ರತಿ ಇಲ್ಲದ ಕಾರಣ ತೆರವು ಕಾರ್ಯ ಮಾಡದೇ ವಾಪಸ್ ಬಂದ ಪ್ರಸಂಗ ಜರುಗಿದೆ.
ವಿರೂಪಾಪುರ ಗಡ್ಡೆಯಲ್ಲಿ 28 ರೆಸಾರ್ಟ್ ಗಳ ಪೈಕಿ ನರ್ಗಿಲಾ ಮತ್ತು ಗೋಪಿ ರೆಸಾರ್ಟ್ ಮಾಲೀಕರು ತೆರದ ವು ಪ್ರಶ್ನಿಸಿ ಬೆಂಗಳೂರು ಹೈಕೋರ್ಟ್ ನಲ್ಲಿ ತಡೆಯಾಜ್ಞೆ ತಂದಿದ್ದರು. ಈ ಕುರಿತು ವಿಚಾರಣೆ ಜರುಗಿ ಹೈಕೋರ್ಟ್ ತಡೆಯಾಜ್ಞೆ ತೆರವು ಮಾಡಿತ್ತು. ಶುಕ್ರವಾರ ತೆರವು ಕಾರ್ಯಾಚರಣೆ ಹಿನ್ನೆಲೆಯಲ್ಲಿ ಎಲ್ಲಾ ಇಲಾಖೆಯ ಅಧಿಕಾರಿಗಳು ಬೆಳ್ಳಿಗ್ಗೆ 6.30ಕ್ಕೆ ಕರ್ತವ್ಯಕ್ಕೆ ಬರುವಂತೆ ಜಿಲ್ಲಾಧಿಕಾರಿಗಳು ಆದೇಶ ಮಾಡಿದ್ದರು. ಕೋರ್ಟಿನ ಆದೇಶ ಕೈಗೆ ಬಾರದ ಕಾರಣ ಬಂದ ದಾರಿಗೆ ಶುಲ್ಕವಿಲ್ಲ ಎಂಬಂತೆ ತಾಲೂಕು ಆಡಳಿತ ವ್ಯವಸ್ಥೆ ಮಾಡಿದ್ದ ಉಪಹಾರ ಸೇವಿಸಿ ಬರಿಗೈಲಿ ವಾಪಸ್ ಆಗಿದ್ದಾರೆ.
ಪೂರ್ಣ ತೆರವು: ಹಂಪಿ ಸುತ್ತಲಿನ ಅನಧಿಕೃತ ವಾಣಿಜ್ಯ ಕಟ್ಟಡಗಳನ್ನು ತೆರವು ಮಾಡುವಂತೆ ಸುಪ್ರೀಂಕೋರ್ಟ್ ಫೆ.11ರಂದು ಆದೇಶದ ಹಿನ್ನೆಲೆಯಲ್ಲಿ ಅಧಿಕಾರಿಗಳು ವಿರೂಪಾಪುರಗಡ್ಡೆ ಗೆ ತೆರಳಿದ್ದರು. ಈ ಮಧ್ಯೆ ಗಡ್ಡೆ ಯಲ್ಲಿರುವ ಲಕ್ಷ್ಮಿ ಗೋಲ್ಡನ್ ಬೀಚ್ ರಂದು ರೆಸಾರ್ಟ್ ತಡೆಯಾಜ್ಞೆಯ ವಿಚಾರಣೆಯನ್ನು ಮಾ.24ಕ್ಕೆ ಮುಂದೂಡಿದೆ. ಎರಡು ಮೂರು ರೆಸಾರ್ಟ್ ಹೊರತುಪಡಿಸಿ ಗಡ್ಡೆಯಲ್ಲಿ ರೆಸಾರ್ಟ್ ಗಳ ತೆರವು ಪೂರ್ಣವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Vijay Mallya ಹಸ್ತಾಂತರಕ್ಕೆ ಫ್ರಾನ್ಸ್ನೊಂದಿಗೆ ಭಾರತ ಮಾತುಕತೆ
ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್ಕಮ್ ಹೊಟೇಲ್ನಲ್ಲಿ ವ್ಯವಸ್ಥೆ
VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್
Muslim ಆದ್ಯತೆ ಹೇಳಿಕೆ ನೀಡಿಲ್ಲವೆಂದು ಸಾಬೀತುಪಡಿಸಿ: ‘ಕೈ’ಗೆ ಮೋದಿ ಸವಾಲು
IPL;ಮುಂಬೈ ಇಂಡಿಯನ್ಸ್ ಎದುರಾಳಿ: ಸೇಡಿನ ತವಕದಲ್ಲಿ ಡೆಲ್ಲಿ