ಪ್ರತಿ ಮಗುವಿಗೂ ಶಿಕ್ಷಣ ದೊರಕಬೇಕು: ಪುಷ್ಪಲತಾ
Team Udayavani, Jul 4, 2017, 12:41 PM IST
ಬನ್ನೂರು: 6 ರಿಂದ 14 ವರ್ಷ ಒಳಪಟ್ಟ ಯಾವುದೇ ಮಗು ಶಾಲೆಯಿಂದ ಹೊರಗುಳಿಯದಂತೆ ಶಾಲೆಯ ಶಿಕ್ಷಕರು ಹೆಚ್ಚಿನ ಕಾಳಜಿವಹಿಸುವ ಮೂಲಕ ಸಮುದಾಯದ ಮುಖಂಡರು, ಸಂಘ-ಸಂಸ್ಥೆಯ ಮುಖ್ಯಸ್ಥರು, ಪಾಲಕರ ಸಹಕಾರದೊಂದಿಗೆ ಪ್ರತಿ ಮಗುವನ್ನು ಶಾಲೆಗೆ ಸೇರಿಸಿ ಮಕ್ಕಳಿಗೆ ಶಿಕ್ಷಣ ದೊರಕಿಸಿ ಕೊಡಬೇಕಿರುವುದು ನಮ್ಮೆಲ್ಲರ ಕರ್ತವ್ಯ ಎಂದು ಸಂಪನ್ಮೂಲ ವ್ಯಕ್ತಿ ಪುಷ್ಪಲತಾ ಹೇಳಿದರು.
ಪಟ್ಟಣದ ಸಮೀಪದ ಬೀಡನಹಳ್ಳಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ನಡೆದ ಪಂಚಾಯತ್ ಮಟ್ಟದ ಸಭೆಯಲ್ಲಿ 2017-18ನೇ ಸಾಲಿನ ವಿಶೇಷ ಹಾಗೂ ಸಾಮಾನ್ಯ ದಾಖಲಾತಿ ಮತ್ತು ಶೈಕ್ಷಣಿಕ ತಯಾರಿ ಪರಿಶೀಲನೆಯ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹಿಂದೆ ಇದ್ದ ಶಿಕ್ಷಣದ ವ್ಯವಸ್ಥೆ ಇಂದು ಸಂಪೂರ್ಣವಾಗಿ ಬದಲಾಗುತ್ತಿದ್ದು, ಸರ್ಕಾರದ ಪ್ರತಿ ಮಗುವನ್ನು ಗಮನದಲ್ಲಿರಿಸಿಕೊಂಡು ಶಿಕ್ಷಣ ನೀಡುವ ಕಾರ್ಯ ಮಾಡುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಸರ್ಕಾರ ಅಕ್ಷರದಾಸೋಹ, ಕ್ಷೀರಭಾಗ್ಯ, ಸಮವಸ್ತ್ರ, ಶೂಭಾಗ್ಯ, ಉಚಿತ ಸೈಕಲ್, ವಿದ್ಯಾರ್ಥಿ ವೇತನಗಳನ್ನು ನೀಡುತ್ತಿದ್ದು, ಇವುಗಳ ಸೌಲಭ್ಯವನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಂಡು ತಮ್ಮ ಮಕ್ಕಳಿಗೆ ಶಿಕ್ಷಣ ದೊರಕಿಸಿಕೊಡಬೇಕೆಂದು ತಿಳಿಸಿದರು.
ಬೀಡನಹಳ್ಳಿ ಎಸ್ಡಿಎಂಸಿ ಅಧ್ಯಕ್ಷ ದಾಸೇಗೌಡ, ತಲಕಾಡು ಶಿಕ್ಷಣ ಸಂಯೋಜನಾಧಿಕಾರಿ ವೀರಭದ್ರಯ್ಯ, ಬನ್ನೂರು ಹೋಬಳಿ ಶಿಕ್ಷಣ ಸಂಯೋಜಕ ನಂಜುಂಡಸ್ವಾಮಿ, ಬೀಡನಹಳ್ಳಿ ಗ್ರಾಪಂ ಸದಸ್ಯ ತಮ್ಮೇಗೌಡ, ವೆಂಕಟೇಗೌಡ, ಗ್ರಾಮದ ಯಜಮಾನರಾದ ನವೀನ್ ಪ್ರಕಾಶ್, ಗ್ರಾಮದ ಮುಖಂಡ ಸಣ್ಣೇಗೌಡ, ಉಮೇಶ್, ಗೌರಮ್ಮ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cm Siddaramaiah: ಸಿಎಂ ಮೈಸೂರು ಭೇಟಿ ಹಿನ್ನೆಲೆ; ದೇವೇಗೌಡರ ಕಟೌಟ್ ತೆರವು
H. D. Kumaraswamy ಆ ಮಹಾನುಭಾವರು 1980ರಲ್ಲೇ ಸಿ.ಡಿ. ಫ್ಯಾಕ್ಟರಿ ಓಪನ್ ಮಾಡಿದ್ದಾರೆ
H. D. Kumaraswamy ನೈತಿಕತೆ ಉಳಿಸಿಕೊಳ್ಳಲು ಪ್ರಜ್ವಲ್ ವಾಪಸ್ ಬರಬೇಕು
HD Kumaraswamy “ಪತ್ರ ಬರೆದರೆ ಸಾಲದು, ಅಧಿಕಾರಿಯನ್ನು ಕಳುಹಿಸಿ ಮೊದಲು ಚರ್ಚೆ ನಡೆಸಲಿ’
Mysuru;ಕೆ.ಸಾಲುಂಡಿ ಗ್ರಾಮದಲ್ಲಿ ಕಾಲರಾ ಲಕ್ಷಣಗಳು: ಸಚಿವ ಡಾ.ಮಹದೇವಪ್ಪ ಭೇಟಿ
MUST WATCH
ಹೊಸ ಸೇರ್ಪಡೆ
BJP ಸ್ತ್ರೀಯರನ್ನು ದ್ವಿತೀಯ ದರ್ಜೆ ನಾಗರಿಕರಂತೆ ಕಾಣುತ್ತಿದೆ :ರಾಹುಲ್
AAP; ನನ್ನ ಅಪ್ಪ-ಅಮ್ಮನಿಗೇಕೆ ಹಿಂಸೆ ನೀಡುತ್ತಿರುವಿರಿ?: ಪ್ರಧಾನಿಗೆ ಕೇಜ್ರಿ ಪ್ರಶ್ನೆ
Byndoor: ಗಾಳಿ- ಮಳೆಯಿಂದ 16ಕ್ಕೂ ಹೆಚ್ಚು ಕಡೆಗಳಲ್ಲಿ ಆಸ್ತಿಪಾಸ್ತಿ ನಷ್ಟ
Uppinangady ಟ್ರಾಫಿಕ್ ಜಾಮ್ : 2 ಗಂಟೆಗಳ ಕಾಲ ಸಂಚಾರ ಅಸ್ತವ್ಯಸ್ತ
HDK ಆರೋಪಕ್ಕೆ ಸಿಎಂ ತಿರುಗೇಟು; ಯಾವತ್ತೂ ದೂರವಾಣಿ ಕದ್ದಾಲಿಸಿಲ್ಲ