3.90 ಕೋ.ರೂ. ವೆಚ್ಚದಲ್ಲಿ ರಸ್ತೆ ನಿರ್ಮಾಣಕ್ಕೆ ಚಾಲನೆ
ದುಃಸ್ಥಿತಿಯಲ್ಲಿದ್ದ ಹಟ್ಟಿಯಂಗಡಿ-ಜಾಡಿ ಮಾರ್ಗಕ್ಕೆ ಮುಕ್ತಿ
Team Udayavani, Feb 29, 2020, 5:06 AM IST
ಜಾಡಿ: ಡಾಮರು ಕಾಣದೆ ಸಂಚಾರಕ್ಕೆ ತೊಡಕಾಗಿದ್ದ ಹಟ್ಟಿಯಂಗಡಿ-ಜಾಡಿ ರಸ್ತೆಯ ಅಭಿವೃದ್ಧಿ ಕಾಮಗಾರಿಗೆ ಇದೀಗ ಚಾಲನೆ ಸಿಕ್ಕಿದೆ. ಒಟ್ಟು 3.90 ಕೋಟಿ ರೂ. ವೆಚ್ಚದ ಯೋಜನೆ ಇದಾಗಿದ್ದು ಬೈಂದೂರು ಶಾಸಕ ಬಿ.ಎಂ. ಸುಕುಮಾರ ಶೆಟ್ಟಿಯವರ ಮುತುವರ್ಜಿಯಿಂದ ಈಡೇರುತ್ತಿದೆ. ಈ ರಸ್ತೆಯ ಡಾಮರಿಗೆ ಅವರು ಸರಕಾರ ಗಮನ ಸೆಳೆದಿದ್ದರು.
ಕೊಲ್ಲೂರಿಗೆ ಹತ್ತಿರ
ಹಟ್ಟಿಯಂಗಡಿಯಿಂದ ಕೊಲ್ಲೂರಿಗೆ ಸಾಗಲು ಈ ಮಾರ್ಗವು ಸನಿಹವಾಗಿದ್ದು ಯಾತ್ರಿಕರಿಗೆ 5 ಕಿ.ಮೀ.ನಷ್ಟು ಕಡಿಮೆಯಾಗಲಿದೆ. ಈ ಮಾರ್ಗದಲ್ಲಿ ಭಾರೀ ಹೊಂಡ ಗಳಿದ್ದು ಈಗಾಗಲೇ ಪತ್ರಿಕೆ ವರದಿ ಮೂಲಕ ಗಮನಸೆಳೆದಿತ್ತು.
ಕಿರು ಸೇತುವೆ ಬದಲಾವಣೆ ಅಗತ್ಯ
ಜಾಡಿ ಬಳಿ ನಿರ್ಮಿಸಲಾಗಿರುವ ಕಿರು ಸೇತುವೆಯ ನಿರ್ಮಾಣ ಕಾಮಗಾರಿ ಅವೈಜ್ಞಾನಿಕವಾಗಿದ್ದು. ಆಯ ತಪ್ಪಿದಲ್ಲಿ ಆಪಘಾತ ಕಟ್ಟಿಟ್ಟ ಬುತ್ತಿ. ಅದಕ್ಕೆ ಬದಲಾಗಿ ಸೇತುವೆಯನ್ನು ಉದ್ದಕ್ಕೆ ನಿರ್ಮಾಣಗೊಳಿಸಿದರೆ ಸಮಸ್ಯೆ ಪರಿಹಾರ ಅಗಬಹುದು. ಇದರೊಂದಿಗೆ ಒಳಚರಂಡಿ ವ್ಯವಸ್ಥೆಯನ್ನು ಕೂಡ ಮಾಡಬೇಕೆನ್ನುವ ಬೇಡಿಕೆ ಸಾರ್ವಜನಿಕರದ್ದಾಗಿದೆ.
ಬೇಡಿಕೆಗೆ ಸ್ಪಂದನೆ
ಗ್ರಾಮೀಣ ಜನರ ಬೇಡಿಕೆಗೆ ಶಾಸಕರು ಸೂಕ್ತವಾಗಿ ಸ್ಪಂದಿಸಿದ್ದಾರೆ. ಕಾಮಗಾರಿ ಶೀಘ್ರ ಮುಗಿಸುವಲ್ಲಿ ಗುತ್ತಿಗೆದಾರರು ಪ್ರಾಮಾಣಿಕ ಪ್ರಯತ್ನ ಮಾಡಬೇಕು.
-ಸುರೇಂದ್ರ,ಗ್ರಾಮಸ್ಥರು
ಅನುದಾನ ಬಿಡುಗಡೆ
ಕಳೆದ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಹಟ್ಟಿಯಂಗಡಿ-ಜಾಡಿ ರಸ್ತೆ ಡಾಮರಿಗೆ ಅನುದಾನ ಬಿಡುಗಡೆಯಾಗಿದೆ. ಕಾಮಗಾರಿ ಕೂಡಲೇ ಮುಗಿಸಿ ಜನರ ಪ್ರಯಾಣಕ್ಕೆ ಅನುಕೂಲ ಮಾಡಿಕೊಡಲಾಗುವುದು.
-ಬಿ.ಎಂ.ಸುಕುಮಾರ ಶೆಟ್ಟಿ,ಶಾಸಕರು, ಬೈಂದೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…
Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ
ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್ಕುಮಾರ್
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ
MUST WATCH
ಹೊಸ ಸೇರ್ಪಡೆ
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ