ಬಸ್ರೂರು ಪರಿಸರದಲ್ಲಿ ಧಾನ್ಯ ಬಿತ್ತನೆ
Team Udayavani, Nov 29, 2018, 1:05 AM IST
ಬಸ್ರೂರು: ಇಲ್ಲಿನ ಬಳ್ಕೂರು, ಕಂಡ್ಲೂರು, ಕಂದಾವರ, ಜಪ್ತಿ, ಆನಗಳ್ಳಿ, ಕೋಣಿ ಮುಂತಾದೆಡೆ ಸುಗ್ಗಿ ಬೆಳೆಯ ಜತೆಗೆ ಧಾನ್ಯದ ಬಿತ್ತನೆ ಕಾರ್ಯ ಚುರುಕುಗೊಂಡಿದೆ. ಉದ್ದು ಬಿತ್ತನೆಗೇ ರೈತರು ಹೆಚ್ಚಿನ ಪ್ರಾಶಸ್ತ್ಯ ನೀಡಿದ್ದಾರೆ. ಉಳಿದಂತೆ ಹುರುಳಿ, ಅವಡೆ ಮತ್ತು ಕಬ್ಬೆಸರು ಧಾನ್ಯಗಳನ್ನೂ ಬಿತ್ತಿದ್ದಾರೆ. ಕಾತಿ ಬೆಳೆಯ ಬಳಿಕ ಧಾನ್ಯ ಬಿತ್ತನೆಗೆ ಹೆಚ್ಚಿನ ಸಂಖ್ಯೆಯಲ್ಲಿ ಮನಸ್ಸು ಮಾಡಿದ್ದಾರೆ. ಬಿತ್ತನೆ ಬಳಿಕ ಮೂರು ದಿನಗಳಲ್ಲಿ ಧಾನ್ಯ ಮೊಳಕೆಯೊಡೆದು ಎರಡು ತಿಂಗಳಲ್ಲೇ ಫಸಲು ಕೈಸೇರುತ್ತದೆ. ಧಾನ್ಯದ ಕೃಷಿಯಲ್ಲಿ ಹೆಚ್ಚಿನ ಲಾಭದ ನಿರೀಕ್ಷೆಯಿಂದ ಈ ಭಾಗದಲ್ಲಿ ರೈತರು ಹೆಚ್ಚಿನ ಕೃಷಿಗೆ ಒತ್ತು ನೀಡಿದ್ದಾರೆ ಎನ್ನಲಾಗಿದೆ. ಸದ್ಯ ಹಿಂಗಾರು ಕ್ಷೀಣವಾದ್ದರಿಂದ ಕೃತಕ ನೀರಾವರಿಯೇ ಧಾನ್ಯ ಕೃಷಿಗೆ ಮೂಲವಾಗಿದೆ. ಕಾತಿ ಬೆಳೆಯಲ್ಲಿ ಹೇಳುವಂತಹ ಲಾಭವನ್ನೇನೂ ಪಡೆದಿಲ್ಲ. ಈಗ ಸುಗ್ಗಿಯ ಬದಲು ಉದ್ದನ್ನು ಬಿತ್ತಿದ್ದೇನೆ. ಎರಡು ತಿಂಗಳಲ್ಲಿ ಧಾನ್ಯದ ಫಸಲು ಕೈಗೆ ಬರಲಿದೆ. ನಾವು ಬೇಸಾಯವನ್ನೇ ನಂಬಿ ಬದುಕುವವರಾದ್ದರಿಂದ ಕೃಷಿಯಲ್ಲಿ ಸ್ವಲ್ಪವಾದರೂ ಲಾಭ ಬಂದರೆ ಸಮಾಧಾನವಾಗುತ್ತದೆ ಎನ್ನುತ್ತಾರೆ ಧಾನ್ಯ ಬಿತ್ತನೆ ಮಾಡಿದ ಬಳ್ಕೂರಿನ ಕೃಷಿಕ ನಾಗರಾಜ ಪೂಜಾರಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಉಡುಪಿ ಪತ್ರಕರ್ತರಿಗೆ ‘ಪೋಕ್ಸೊ ಕಾಯಿದೆ ಮತ್ತು ಮಾಧ್ಯಮ’ ಕಾರ್ಯಾಗಾರ
ದೊಡ್ಡಣ್ಣಗುಡ್ಡೆ: ಕ್ಷೇತ್ರದಲ್ಲಿ ಬ್ರಹ್ಮಕಲಾಶೋತ್ಸವದ ಪೂರ್ವಭಾವಿ ಕಾರ್ಯಕ್ರಮ ಸಂಪನ್ನ
ಗೋರ್ಕಲ್ಲುಮನೆ ಕೆರೆ ಹೂಳೆತ್ತಿದರೆ ಹತ್ತಾರು ಎಕರೆ ಕೃಷಿಗೆ ವರದಾನ
SSLC ಪರೀಕ್ಷೆ -2, 3ಕ್ಕೆ ಕೃಪಾಂಕ ಇಲ್ಲ; ಸಚಿವ ಮಧು ಬಂಗಾರಪ್ಪ
Madhu Bangarappa ಎಲ್ಲ ಕ್ಷೇತ್ರಗಳಲ್ಲೂ ಕಾಂಗ್ರೆಸ್ಗೆ ಗೆಲುವು
MUST WATCH
ಹೊಸ ಸೇರ್ಪಡೆ
Bidar; ಘಾತುಕ ಶಕ್ತಿಗಳಿಗೆ ಪೊಲೀಸ್ ಠಾಣೆಯಲ್ಲಿ ರಾಜ ಮರ್ಯಾದೆ ಸಿಗುತ್ತಿದೆ: ಬೊಮ್ಮಾಯಿ
Gadag; ಬೈಕ್ ಗೆ ಹಿಂಬದಿಯಿಂದ ಟಿಪ್ಪರ್ ಡಿಕ್ಕಿ; ಬೈಕ್ ಗೆ ಸವಾರನ ಕಾಲು ಕಟ್!
Swindon Borough ಕೌನ್ಸಿಲ್ನ ಮೇಯರ್ ಆಗಿ ಭಾರತೀಯ ಮೂಲದ ಇಮ್ತಿಯಾಜ್ ಶೇಖ್ ಆಯ್ಕೆ
W.Bengal; ಬಿಜೆಪಿ ಅಭ್ಯರ್ಥಿಗೆ 24 ಗಂಟೆ ಕಾಲ ಪ್ರಚಾರ ಮಾಡದಂತೆ ತಡೆ ನೀಡಿದ ಚುಣಾವಣಾ ಆಯೋಗ
Mollywood: 5 ತಿಂಗಳಿನಲ್ಲಿ 1000 ಕೋಟಿಗೂ ಅಧಿಕ ಗಳಿಕೆ: ಈ 3 ಸಿನಿಮಾಗಳ ಕೊಡುಗೆಯೇ ಹೆಚ್ಚು