ಭಾರತ ಬದಲಾಗಿದೆ, ಭೂಪಟವೂ ಬದಲಾಗಲಿದೆ: ಡಾ| ತೇಜಸ್ವಿನಿ ಗೌಡ


Team Udayavani, Sep 30, 2019, 5:00 AM IST

2909KDLM14PH

ಕುಂದಾಪುರ: ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತ ಬದಲಾಗಿದೆ. ಭಾರತದ ಭೂಪಟವೂ ಬದಲಾಗಲಿದೆ. ಈ ಹಿಂದೆ ಮತಬ್ಯಾಂಕಿನ ತುಷ್ಟೀಕರಣಕ್ಕಾಗಿ ಭಾರತದ ಭೂಭಾಗಗಳನ್ನು ಮನಬಂದಂತೆ ಹಂಚಿದಂತೆ ಇನ್ನು ಮುಂದೆ ನಡೆಯುವುದಿಲ್ಲ. ನಮ್ಮ ದೇಶದ ಭೂಭಾಗಗಳು ನಮ್ಮ ಕೈಯಲ್ಲೇ ಇರಲಿವೆ ಎಂದು ವಿಧಾನ ಪರಿಷತ್‌ ಸದಸ್ಯೆ ಡಾ| ತೇಜಸ್ವಿನಿ ಗೌಡ ಹೇಳಿದರು.

ರವಿವಾರ ಇಲ್ಲಿನ ಹರಿಪ್ರಸಾದ್‌ ಹೋಟೆಲ್‌ನ ಅತಿಥಿ ಸಭಾಂಗಣದಲ್ಲಿ ಭಾರತೀಯ ಜನತಾ ಪಕ್ಷದ ವತಿಯಿಂದ ನಡೆದ ಒಂದು ದೇಶ ಒಂದು ಸಂವಿಧಾನ; 370 ವಿಧಿ ರದ್ದತಿ ಕುರಿತು ಜಾಗೃತಿ ಅಭಿಯಾನದಲ್ಲಿ ಉಪನ್ಯಾಸ ನೀಡಿದರು.

ಭಾರತದ ಭಾಗಗಳನ್ನು ಚೀನಾ ಹಾಗೂ ಪಾಕ್‌ ಆಕ್ರಮಿಸಿಕೊಂಡಿವೆ. ನಮ್ಮ ಸೈನಿಕರ ಮೇಲೆ ನಮ್ಮವರೇ ಆಕ್ರಮಣ ಮಾಡುವಂತೆ ಪ್ರಚೋದಿಸುವಾಗ ಕೈಕಟ್ಟಿ ಕೂರುವುದು ಸಾಧ್ಯವೇ ಇಲ್ಲ. ಪಾಕ್‌ ನಮಗೆ ಸಮ ಅಲ್ಲ. ನಮಗೆ ಸವಾಲು ಚೀನಾ. ಆದ್ದರಿಂದ ರಾಜತಾಂತ್ರಿಕವಾಗಿ ಹೆಜ್ಜೆ ಇಡುವಾಗ ಪ್ರಪಂಚದ ಇತರ ರಾಷ್ಟ್ರಗಳ ಕಡೆಗೂ ಎಚ್ಚರಿಕೆ ಇರಬೇಕಾಗುತ್ತದೆ. ಈ ದೃಷ್ಟಿಯಲ್ಲಿ ಮೋದಿಯವರು ಹತ್ತಾರು ದೇಶ ಸುತ್ತಿದರು. ಇದರ ಫ‌ಲವಾಗಿ 54 ಇಸ್ಲಾಂ ರಾಷ್ಟ್ರಗಳು ನಮ್ಮ ಯೋಧ ಅಭಿನಂದನ್‌ ಸೆರೆ ಸಂದರ್ಭವೂ ಸೇರಿದಂತೆ ಉಗ್ರಗಾಮಿ ಚಟುವಟಿಕೆ ಹತ್ತಿಕ್ಕಲು ಬೆಂಬಲ ನೀಡಿದವು. ನಮ್ಮ ತಾಳ್ಮೆಗೂ ಮಿತಿ ಇದೆ. ಕಣ್ಣೆದುರೇ ಇದ್ದರೂ ನಮ್ಮಲ್ಲಿ ಸಾಕಷ್ಟು ವ್ಯವಸ್ಥೆ ಇದ್ದರೂ ದಾಳಿ ಮಾಡಿದ ಶತ್ರು ದೇಶದವರನ್ನು ಕೊಲ್ಲು ಎನ್ನದ ಸರಕಾರ ನಮಗೆ ಬೇಕಾಗಿಲ್ಲ. ಆದ್ದರಿಂದ ಜನತೆ ನೀಡಿದ ಬಹುಮತವನ್ನು ಮೋದಿ ಸರಕಾರ ಜಾಣ್ಮೆಯಿಂದ ಬಳಸಿಕೊಂಡು ಚುನಾವಣಾ ಪ್ರಣಾಳಿಕೆಯನ್ನು ಈಡೇರಿಸಿದೆ ಎಂದರು.

ನಮ್ಮ ದೇಶದ ಜನರಿಗೇ ಜಮ್ಮುವಿನಲ್ಲಿ ಏನು ನಡೆಯುತ್ತದೆ, ಕಾಶ್ಮೀರದಲ್ಲಿ ವಾತಾವರಣ ಹೇಗೆ ಇದೆ ಎಂದು ಗೊತ್ತಿಲ್ಲ. 50 ಸಾವಿರ ದೇಗುಲಗಳನ್ನು ಜಮ್ಮು ಕಾಶ್ಮೀರದಲ್ಲಿ ಪುನಶ್ಚೇತನ ಮಾಡಲು ನಿರ್ಧರಿಸಲಾಗಿದೆ. ಅಷ್ಟೊಂದು ಪ್ರಮಾಣದ ದೇಗುಲಗಳು ಅಲ್ಲಿರುವುದೇ ತಿಳಿದಿಲ್ಲ. ಕೇವಲ ಬೆರಳೆಣಿಕೆಯ ಜನರ ಕೈಯಲ್ಲಿದ್ದ ಅಲ್ಲಿನ ಸಂಪನ್ಮೂಲ, ಸರಕಾರದಿಂದ ಬಿಡುಗಡೆಯಾದ ಅನುದಾನ ಕೆಲವರಿಗಷ್ಟೇ ಸೇರುತ್ತಿದ್ದುದು ಮುಂದಿನ ದಿನಗಳಲ್ಲಿ ಸಮಾನತಾ ನ್ಯಾಯವಾಗಲಿದೆ ಎಂದರು.

ಬಿಜೆಪಿ ಅಧ್ಯಕ್ಷ ಕಾಡೂರು ಸುರೇಶ ಶೆಟ್ಟಿ ಪ್ರಸ್ತಾವಿಸಿ, ಒಂದು ದೇಶದಲ್ಲಿ ಎರಡು ಸಂವಿಧಾನ, ಎರಡು ದೇಶಧ್ವಜ ಸಾಧ್ಯವಿಲ್ಲ ಎಂದು ಹೇಳಿದ ಬಿಜೆಪಿ ಸಂಸ್ಥಾಪಕ ಶ್ಯಾಮ ಪ್ರಸಾದ ಮುಖರ್ಜಿ ಅವರ ಬಲಿದಾನ ಸಾರ್ಥಕವಾಗಿದೆ ಎಂದರು.

ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅಭಿಯಾನ ಉದ್ಘಾಟಿಸಿದರು.

ಅಭಿಯಾನ ಜಿಲ್ಲಾ ಸಹ ಸಂಚಾಲಕಿ ಪೂರ್ಣಿಮಾ ಎಸ್‌. ನಾಯಕ್‌, ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಶಂಕರ ಅಂಕದಕಟ್ಟೆ, ಭಾಸ್ಕರ ಬಿಲ್ಲವ ಉಪಸ್ಥಿತರಿದ್ದರು.
ಸದಾನಂದ ಬಳ್ಕೂರು ನಿರ್ವಹಿಸಿದರು.

ಟಾಪ್ ನ್ಯೂಸ್

IPL ರಾಜಸ್ಥಾನಕ್ಕೆ ಶರಣಾದ ರಾಯಲ್‌ ಚಾಲೆಂಜರ್

IPL ರಾಜಸ್ಥಾನಕ್ಕೆ ಶರಣಾದ ರಾಯಲ್‌ ಚಾಲೆಂಜರ್

Udupi ರಘುಪತಿ ಭಟ್‌ ಉಚ್ಚಾಟನೆಗೆ ಜಿಲ್ಲಾ ಬಿಜೆಪಿ ಶಿಫಾರಸು

Udupi ರಘುಪತಿ ಭಟ್‌ ಉಚ್ಚಾಟನೆಗೆ ಜಿಲ್ಲಾ ಬಿಜೆಪಿ ಶಿಫಾರಸು

Belthangady ಶಾಸಕ ಹರೀಶ್‌ ಪೂಂಜ ಠಾಣೆಗೆ ಹಾಜರು; ಜಾಮೀನು

Belthangady ಶಾಸಕ ಹರೀಶ್‌ ಪೂಂಜ ಠಾಣೆಗೆ ಹಾಜರು; ಜಾಮೀನು

Congress ಅಧಿಕಾರಕ್ಕೆ ಬಂದ ತಿಂಗಳಲ್ಲೇ ಅದಾನಿ ಹಗರಣ ತನಿಖೆಗೆ ಜೆಪಿಸಿ ರಚನೆ

Congress ಅಧಿಕಾರಕ್ಕೆ ಬಂದ ತಿಂಗಳಲ್ಲೇ ಅದಾನಿ ಹಗರಣ ತನಿಖೆಗೆ ಜೆಪಿಸಿ ರಚನೆ

PM Modi ವಿಪಕ್ಷಗಳು ಜನಧನ ಖಾತೆ ಮುಚ್ಚಿ ಹಣ ದೋಚಲಿವೆ

PM Modi ವಿಪಕ್ಷಗಳು ಜನಧನ ಖಾತೆ ಮುಚ್ಚಿ ಹಣ ದೋಚಲಿವೆ

ಮಗನ ಮನವೊಲಿಸಿ ಅಮ್ಮನನ್ನು ಮನೆಗೆ ಸೇರಿಸಿದ ತಹಶೀಲ್ದಾರ್‌

ಮಗನ ಮನವೊಲಿಸಿ ಅಮ್ಮನನ್ನು ಮನೆಗೆ ಸೇರಿಸಿದ ತಹಶೀಲ್ದಾರ್‌

Panambur ಫಿನಾಯಿಲ್‌ ಸೇವಿಸಿ ಇಬ್ಬರು ಕಾರ್ಮಿಕರ ಆತ್ಮಹತ್ಯೆ ಯತ್ನ

Panambur ಫಿನಾಯಿಲ್‌ ಸೇವಿಸಿ ಇಬ್ಬರು ಕಾರ್ಮಿಕರ ಆತ್ಮಹತ್ಯೆ ಯತ್ನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi ರಘುಪತಿ ಭಟ್‌ ಉಚ್ಚಾಟನೆಗೆ ಜಿಲ್ಲಾ ಬಿಜೆಪಿ ಶಿಫಾರಸು

Udupi ರಘುಪತಿ ಭಟ್‌ ಉಚ್ಚಾಟನೆಗೆ ಜಿಲ್ಲಾ ಬಿಜೆಪಿ ಶಿಫಾರಸು

ವಸತಿ ಶಾಲೆಗಳೂ ಎಸೆಸೆಲ್ಸಿ ಫ‌ಲಿತಾಂಶದಲ್ಲಿ ಮುಂದೆ

ವಸತಿ ಶಾಲೆಗಳೂ ಎಸೆಸೆಲ್ಸಿ ಫ‌ಲಿತಾಂಶದಲ್ಲಿ ಮುಂದೆ

Udupi ಜೂ. 4: ಮತ ಎಣಿಕೆ, ನಿಷೇಧಾಜ್ಞೆ ಜಾರಿ; ಜಿಲ್ಲಾಧಿಕಾರಿ ಆದೇಶ

Udupi ಜೂ. 4: ಮತ ಎಣಿಕೆ, ನಿಷೇಧಾಜ್ಞೆ ಜಾರಿ; ಜಿಲ್ಲಾಧಿಕಾರಿ ಆದೇಶ

Karkala ಬಸ್‌ ಪ್ರಯಾಣಿಕರಿಂದ ಟಿಪ್ಪರ್‌ ಚಾಲಕನಿಗೆ ಹಲ್ಲೆ: ದೂರು

Karkala ಬಸ್‌ ಪ್ರಯಾಣಿಕರಿಂದ ಟಿಪ್ಪರ್‌ ಚಾಲಕನಿಗೆ ಹಲ್ಲೆ: ದೂರು

Kota ಮಧುವನ; ರೈಲ್ವೇ ಹಳಿ ಪಕ್ಕದಲ್ಲಿ ಬೆಂಕಿ ಅಗ್ನಿಶಾಮಕದಳ ಕಾರ್ಯಚರಣೆ

Kota ಮಧುವನ; ರೈಲ್ವೇ ಹಳಿ ಪಕ್ಕದಲ್ಲಿ ಬೆಂಕಿ ಅಗ್ನಿಶಾಮಕದಳ ಕಾರ್ಯಚರಣೆ

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

IPL ರಾಜಸ್ಥಾನಕ್ಕೆ ಶರಣಾದ ರಾಯಲ್‌ ಚಾಲೆಂಜರ್

IPL ರಾಜಸ್ಥಾನಕ್ಕೆ ಶರಣಾದ ರಾಯಲ್‌ ಚಾಲೆಂಜರ್

Udupi ರಘುಪತಿ ಭಟ್‌ ಉಚ್ಚಾಟನೆಗೆ ಜಿಲ್ಲಾ ಬಿಜೆಪಿ ಶಿಫಾರಸು

Udupi ರಘುಪತಿ ಭಟ್‌ ಉಚ್ಚಾಟನೆಗೆ ಜಿಲ್ಲಾ ಬಿಜೆಪಿ ಶಿಫಾರಸು

Belthangady ಶಾಸಕ ಹರೀಶ್‌ ಪೂಂಜ ಠಾಣೆಗೆ ಹಾಜರು; ಜಾಮೀನು

Belthangady ಶಾಸಕ ಹರೀಶ್‌ ಪೂಂಜ ಠಾಣೆಗೆ ಹಾಜರು; ಜಾಮೀನು

Congress ಅಧಿಕಾರಕ್ಕೆ ಬಂದ ತಿಂಗಳಲ್ಲೇ ಅದಾನಿ ಹಗರಣ ತನಿಖೆಗೆ ಜೆಪಿಸಿ ರಚನೆ

Congress ಅಧಿಕಾರಕ್ಕೆ ಬಂದ ತಿಂಗಳಲ್ಲೇ ಅದಾನಿ ಹಗರಣ ತನಿಖೆಗೆ ಜೆಪಿಸಿ ರಚನೆ

PM Modi ವಿಪಕ್ಷಗಳು ಜನಧನ ಖಾತೆ ಮುಚ್ಚಿ ಹಣ ದೋಚಲಿವೆ

PM Modi ವಿಪಕ್ಷಗಳು ಜನಧನ ಖಾತೆ ಮುಚ್ಚಿ ಹಣ ದೋಚಲಿವೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.