ಮಗನ ಮನವೊಲಿಸಿ ಅಮ್ಮನನ್ನು ಮನೆಗೆ ಸೇರಿಸಿದ ತಹಶೀಲ್ದಾರ್‌

ಮನೆಗೆ ಸೇರಿಸಿಕೊಳ್ಳಲು ವೃದ್ಧ ತಾಯಿ ದೂರು

Team Udayavani, May 23, 2024, 1:03 AM IST

ಮಗನ ಮನವೊಲಿಸಿ ಅಮ್ಮನನ್ನು ಮನೆಗೆ ಸೇರಿಸಿದ ತಹಶೀಲ್ದಾರ್‌

ಸುಳ್ಯ: ಮನೆಯಲ್ಲಿ ಮಗ ನೋಡಿಕೊಳ್ಳುತ್ತಿಲ್ಲ, ಮನೆಗೆ ಸೇರಿಸುತ್ತಿಲ್ಲವೆಂದು ವೃದ್ಧೆಯೊಬ್ಬರು ತಹಶೀಲ್ದಾರ್‌ರಿಗೆ ನೀಡಿದ ಹಿನ್ನೆಲೆಯಲ್ಲಿ ತಹಶೀಲ್ದಾರ್‌ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಮನೆಗೆ ಹೋಗಿ ಮಗನ ಮನವೊಲಿಸಿ ವೃದ್ಧೆಯನ್ನು ಮನೆಗೆ ಸೇರಿಸಿದ ಘಟನೆ ಮಂಡೆಕೋಲಿನಲ್ಲಿ ನಡೆದಿದೆ.

ಮಂಡೆಕೋಲು ಗ್ರಾಮದ ಕಲ್ಲಡ್ಕ ಪೆರಾಜೆಯ ಶೇಷಮ್ಮ ಅವರು ತಹಶೀಲ್ದಾರ್‌ರಿಗೆ ಈ ಬಗ್ಗೆ ದೂರು ನೀಡಿದ್ದರು. ನನಗೆ ಅಸೌಖ್ಯವಿದೆ. ನಾನು ಮಗಳ ಮನೆಯಲ್ಲಿದ್ದೇನೆ. ನನಗೆ ನನ್ನ ಮನೆಗೆ ಹೋಗಬೇಕೆಂದು ದೂರು ನೀಡಿದ್ದರು.

ದೂರು ಸ್ವೀಕರಿಸಿದ ತಹಶೀಲ್ದಾರ್‌ ಜಿ. ಮಂಜುನಾಥ್‌ ಅವರು, ತಾ.ಪಂ. ಇ.ಒ. ಪರಮೇಶ್‌, ಸಿಡಿಪಿಒ ಶೈಲಜಾ, ಮಂಡೆಕೋಲು ಪಿಡಿಒ ರಮೇಶ್‌, ಮಂಡೆಕೋಲು ಗ್ರಾಮ ಆಡಳಿತಾಧಿಕಾರಿ ಅಜಯ್‌ ಹಾಗೂ ಶೇಷಮ್ಮರ ಮೂವರು ಪುತ್ರಿಯರ ಜತೆ ತಾಲೂಕು ಕಚೇರಿಯಲ್ಲಿ ಸಮಾಲೋಚನೆ ನಡೆಸಿದರು.

ತಾಯಿಗೆ ಮನೆಗೆ ಹೋಗಬೇಕಂತೆ, ಅಲ್ಲಿ ಸೇರಿಸಿಕೊಳ್ಳುತ್ತಿಲ್ಲ. ಅವರ ಮನೆಗೆ ಹೋದರೆ ಅಲ್ಲಿ ಅವರ ಕೆಲಸ ನಾವೇ ಮಾಡುತ್ತೇವೆ ಎಂದು ಹೆಣ್ಣು ಮಕ್ಕಳು ಹೇಳಿದರು. ಬಳಿಕ ಶೇಷಮ್ಮ ಅವರನ್ನು ಕರೆದುಕೊಂಡು ತಹಶೀಲ್ದಾರ್‌ ನೇತೃತ್ವದ ತಂಡ ಮಂಡೆಕೋಲು ಕಲ್ಲಡ್ಕ ಪೆರಾಜೆಯ ಅವರ ಮನೆಗೆ ತೆರಳಿದರು. ಅಲ್ಲಿ ಶೇಷಮ್ಮರ ಮಗ, ಸೊಸೆ ಇದ್ದು ಪ್ರಮುಖರ ಜತೆ ಸುದೀರ್ಘ‌ ಸಮಾಲೋಚನೆ ನಡೆಯಿತು.

ತಹಶೀಲ್ದಾರ್‌, ಇ.ಒ ಹಾಗೂ ಸರಸ್ವತಿ ಕಾಮತ್‌ ವಯೋವೃದ್ಧ ತಾಯಿಯನ್ನು ನೋಡಿಕೊಳ್ಳಬೇಕಾದ ಅನಿವಾರ್ಯತೆ ಕುರಿತು ತಿಳಿ ಹೇಳಿ ಮನವೊಲಿಸುವ ಕಾರ್ಯ ಮಾಡಿದರಲ್ಲದೆ ಅವರ ಮೂವರು ಸಹೋದರಿಯರಿಗೂ ತಿಳುವಳಿಕೆಯ ಮಾತುಗಳನ್ನಾಡಿದರು. ತಾಯಿಯನ್ನು ಮನೆಯೊಳಗೆ ಕರೆದುಕೊಂಡು ಹೋಗಲಾಯಿತು. ಅವರ ಆರೈಕೆ ಮಾಡಲು ಮದುವೆಯಾಗಿರುವ ಮೂವರು ಹೆಣ್ಣು ಮಕ್ಕಳು ಮನೆಯಲ್ಲೆ ಒಬ್ಬರಂತೆ ಇದ್ದು ನೋಡಿಕೊಳ್ಳುವುದಾಗಿ ತಹಶೀಲ್ದಾರ್‌ಎದುರು ಹೇಳಿದರು. ಆ ಮೂಲಕ ಕೌಟುಂಬಿಕ ವಿವಾದವೊಂದನ್ನು ಸಮಾಲೋಚನೆ ನಡೆಸಿ ಇತ್ಯರ್ಥ ಪಡಿಸುವಲ್ಲಿ ತಹಶೀಲ್ದಾರ್‌ ನೇತೃತ್ವದ ತಂಡ ಯಶಸ್ವಿಯಾಗಿದೆ.

 

ಟಾಪ್ ನ್ಯೂಸ್

Kasaragod ಮಾತೃತ್ವ ಮೆರೆದ ಆಸ್ಪತ್ರೆಯ ನರ್ಸಿಂಗ್‌ ಆಫೀಸರ್‌

Kasaragod ಮಾತೃತ್ವ ಮೆರೆದ ಆಸ್ಪತ್ರೆಯ ನರ್ಸಿಂಗ್‌ ಆಫೀಸರ್‌

1-aaaaa

PM ಮೋದಿ ಜತೆಗಿನ ಮೆಲೋನಿ ಸೆಲ್ಫಿ ವೀಡಿಯೋ ಭಾರೀ ವೈರಲ್‌

amazon

Break ಇಲ್ಲದೆ ಅಮೆಜಾನ್‌ ಗೋದಾಮುಗಳಲ್ಲಿ ಕಾರ್ಮಿಕರಿಗೆ ಕೆಲಸ?

ಕಡಲಿಗಿಳಿಯುವ ನಾಡದೋಣಿಗಳಿಗೆ ಎನ್‌ಎಂಪಿಎ “ಆಶ್ರಯ’!

ಕಡಲಿಗಿಳಿಯುವ ನಾಡದೋಣಿಗಳಿಗೆ ಎನ್‌ಎಂಪಿಎ “ಆಶ್ರಯ’!

1-sadsdsad

Australia-ಸ್ಕಾಟ್ಲೆಂಡ್‌ ಮುಖಾಮುಖಿ: ಸೂಪರ್‌-8ಕ್ಕೇರುವ ಮತ್ತೊಂದು ತಂಡ ಯಾವುದು?

doctor

Govt Quota; ವೈದ್ಯರಿಗೆ ಗ್ರಾಮೀಣ ಸೇವೆ ಕಡ್ಡಾಯ

1-asaas

Party ಬಿಟ್ಟು ಹೋದವರನ್ನು ವಾಪಸ್‌ ಸೇರಿಸಿಕೊಳ್ಳಲ್ಲ: ಉದ್ಧವ್‌, ಪವಾರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Puttur ತಾಳಿ ಮನೆಯಲ್ಲಿ ಇಟ್ಟು ವಿವಾಹಿತೆ ಪರಾರಿ

Puttur ತಾಳಿ ಮನೆಯಲ್ಲಿ ಇಟ್ಟು ವಿವಾಹಿತೆ ಪರಾರಿ

Puttur ಕರಿಮಣಿ ಮುತ್ತಿನ ಕೈ ಬಳೆ ಕಳವು ಪ್ರಕರಣ ಬಾಲಾಪರಾಧಿ ಸಹಿತ ನಾಲ್ವರಿಗೆ ಜಾಮೀನು

Puttur ಕರಿಮಣಿ ಮುತ್ತಿನ ಕೈ ಬಳೆ ಕಳವು ಪ್ರಕರಣ ಬಾಲಾಪರಾಧಿ ಸಹಿತ ನಾಲ್ವರಿಗೆ ಜಾಮೀನು

Sullia ಡಾ| ಆರ್‌.ಕೆ. ನಾಯರ್‌ ನಿರ್ಮಿಸಿದ ಸ್ಮತಿ ವನಕ್ಕೆ ಯುನೆಸ್ಕೋ ಪ್ರಶಸ್ತಿ

Sullia ಡಾ| ಆರ್‌.ಕೆ. ನಾಯರ್‌ ನಿರ್ಮಿಸಿದ ಸ್ಮತಿ ವನಕ್ಕೆ ಯುನೆಸ್ಕೋ ಪ್ರಶಸ್ತಿ

ಫ‌ಲ ನೀಡಿದ 10 ದಿನಗಳ ಕಾರ್ಯಾಚರಣೆ: ಬಂದ ದಾರಿಯಲ್ಲೇ ಮರಳಿದ ಆನೆಗಳು!

ಫ‌ಲ ನೀಡಿದ 10 ದಿನಗಳ ಕಾರ್ಯಾಚರಣೆ: ಬಂದ ದಾರಿಯಲ್ಲೇ ಮರಳಿದ ಆನೆಗಳು!

ಬೆಳ್ತಂಗಡಿಯಲ್ಲಿ ಭತ್ತದ ಬೇಸಾಯಕ್ಕೆ ಯಂತ್ರ ಶ್ರೀ ಬೆಂಗಾವಲು

ಬೆಳ್ತಂಗಡಿಯಲ್ಲಿ ಭತ್ತದ ಬೇಸಾಯಕ್ಕೆ ಯಂತ್ರ ಶ್ರೀ ಬೆಂಗಾವಲು

MUST WATCH

udayavani youtube

ಕಾಪು ಸರ್ವೀಸ್ ರಸ್ತೆಯಲ್ಲಿ ರಿಕ್ಷಾ ಚಾಲಕ ಮತ್ತು ಬೈಕ್ ಸವಾರನ ನಡುವೆ ಹೊಡೆದಾಟ

udayavani youtube

ದರ್ಶನ್ ಗ್ಯಾಂಗ್ ಕ್ರೌರ್ಯ ಹೇಗಿತ್ತು ಗೊತ್ತಾ..? ವೈರಲ್ ಆಡಿಯೋ ಇಲ್ಲಿದೆ

udayavani youtube

Udupi: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

udayavani youtube

ಕಾಂಗ್ರೆಸ್ ಹಿರಿಯ ಶಾಸಕ ಸಿ.ಎಸ್.ನಾಡಗೌಡರಿಂದ ರಾಜಕೀಯ ತ್ಯಾಗದ ಮಾತು

udayavani youtube

ಇಳಿಕೆಯಾದ ಘಟಪ್ರಭಾ ನದಿ

ಹೊಸ ಸೇರ್ಪಡೆ

Kasaragod ಮಾತೃತ್ವ ಮೆರೆದ ಆಸ್ಪತ್ರೆಯ ನರ್ಸಿಂಗ್‌ ಆಫೀಸರ್‌

Kasaragod ಮಾತೃತ್ವ ಮೆರೆದ ಆಸ್ಪತ್ರೆಯ ನರ್ಸಿಂಗ್‌ ಆಫೀಸರ್‌

1-wccc

ವನಿತಾ ಕ್ರಿಕೆಟ್‌ ಸರಣಿಯ ಸಮಯ

1-aaaaa

PM ಮೋದಿ ಜತೆಗಿನ ಮೆಲೋನಿ ಸೆಲ್ಫಿ ವೀಡಿಯೋ ಭಾರೀ ವೈರಲ್‌

amazon

Break ಇಲ್ಲದೆ ಅಮೆಜಾನ್‌ ಗೋದಾಮುಗಳಲ್ಲಿ ಕಾರ್ಮಿಕರಿಗೆ ಕೆಲಸ?

ಕಡಲಿಗಿಳಿಯುವ ನಾಡದೋಣಿಗಳಿಗೆ ಎನ್‌ಎಂಪಿಎ “ಆಶ್ರಯ’!

ಕಡಲಿಗಿಳಿಯುವ ನಾಡದೋಣಿಗಳಿಗೆ ಎನ್‌ಎಂಪಿಎ “ಆಶ್ರಯ’!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.