IPL ರಾಜಸ್ಥಾನಕ್ಕೆ ಶರಣಾದ ರಾಯಲ್‌ ಚಾಲೆಂಜರ್

4 ವಿಕೆಟ್‌ಗಳಿಂದ ಸೋಲನುಭವಿಸಿ ಹೊರಬಿದ್ದ ಆರ್‌ಸಿಬಿ ; ಶುಕ್ರವಾರ ಹೈದರಾಬಾದ್‌-ರಾಜಸ್ಥಾನ್‌ 2ನೇ ಕ್ವಾಲಿಫೈಯರ್‌ ಪಂದ್ಯ

Team Udayavani, May 23, 2024, 1:42 AM IST

IPL ರಾಜಸ್ಥಾನಕ್ಕೆ ಶರಣಾದ ರಾಯಲ್‌ ಚಾಲೆಂಜರ್

ಅಹ್ಮದಾಬಾದ್‌: ಆರ್‌ಸಿಬಿಯ ಮತ್ತೊಂದು ಕಪ್‌ ಗೆಲವಿನ ಕನಸು ಛಿದ್ರಗೊಂಡಿದೆ. ಲೀಗ್‌ ಹಂತದಲ್ಲಿ ಸತತ 6 ಪಂದ್ಯಗಳನ್ನು ಗೆದ್ದು ಪ್ಲೇ ಆಫ್ ಪ್ರವೇಶಿಸಿದ ಸಂಭ್ರಮದಲ್ಲಿದ್ದ ಬೆಂಗಳೂರು ತಂಡ ಬುಧವಾರದ ಎಲಿಮಿನೇಟರ್‌ ಪಂದ್ಯದಲ್ಲಿ ರಾಜಸ್ಥಾನ್‌ ರಾಯಲ್ಸ್‌ಗೆ 4 ವಿಕೆಟ್‌ಗಳಿಂದ ಮಂಡಿಯೂರಿ ಕೂಟದಿಂದ ನಿರ್ಗಮಿಸಿತು. ಶುಕ್ರವಾರದ ದ್ವಿತೀಯ ಕ್ವಾಲಿಫೈಯರ್‌ ಪಂದ್ಯದಲ್ಲಿ ಹೈದರಾಬಾದ್‌-ರಾಜಸ್ಥಾನ್‌ ಮುಖಾಮುಖಿ ಆಗಲಿವೆ.

ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಆರ್‌ಸಿಬಿ 8 ವಿಕೆಟಿಗೆ 172 ರನ್‌ ಗಳಿಸಿತು. ರಾಜಸ್ಥಾನ್‌ 19 ಓವರ್‌ಗಳಲ್ಲಿ 6 ವಿಕೆಟಿಗೆ 174 ರನ್‌ ಬಾರಿಸಿ ಜಯಭೇರಿ ಮೊಳಗಿಸಿತು.

ರಾಜಸ್ಥಾನ್‌ ಚೇಸಿಂಗ್‌ ಬಿರುಸಿನಿಂದಲೇ ಕೂಡಿತ್ತು. ಜೈಸ್ವಾಲ್‌ (45)-ಕ್ಯಾಡ್‌ಮೋರ್‌ (20) 46 ರನ್‌ ಜತೆಯಾಟ ನಿಭಾಯಿಸಿದರು. ಜೈಸ್ವಾಲ್‌-ಸ್ಯಾಮ್ಸನ್‌ ಜತೆಯಾಟದಲ್ಲಿ 35 ರನ್‌ ಒಟ್ಟುಗೂಡಿತು. 112ಕ್ಕೆ 4 ವಿಕೆಟ್‌ ಬಿದ್ದಾಗ ಪಂದ್ಯ ಕುತೂಹಲ ಘಟ್ಟ ತಲುಪಿತು. ಆದರೆ ಪರಾಗ್‌-ಹೆಟ್‌ಮೈರ್‌ ಸಿಡಿದು ನಿಂತು 45 ರನ್‌ ಜತೆಯಾಟ ನಿಭಾಯಿಸಿದರು.ಆರ್‌ಸಿಬಿ ಆಸೆಯೆಲ್ಲ ನೆಲಸಮವಾಯಿತು.

ಆರ್‌ಸಿಬಿ ನಿಧಾನ ಆರಂಭ
ಆರ್‌ಸಿಬಿ ಆರಂಭ ನಿಧಾನ ಗತಿಯಿಂದ ಕೂಡಿತ್ತು. ಬೌಲ್ಟ್ ಎಸೆತಗಳು ಆರಂಭದಲ್ಲೇ ಭಾರೀ ಸ್ವಿಂಗ್‌ ಆಗುತ್ತಿದ್ದವು. ಹೀಗಾಗಿ ರನ್‌ ಗಳಿಕೆ, ದೊಡ್ಡ ಹೊಡೆತ ಸುಲಭವಾಗಿರಲಿಲ್ಲ. ಕೊಹ್ಲಿ-ಫಾ ಡು ಪ್ಲೆಸಿಸ್‌ ಬಹಳ ಎಚ್ಚರಿಕೆಯಿಂದ ಆಡುತ್ತ 4.4 ಓವರ್‌ಗಳನ್ನು ನಿಭಾಯಿಸಿದರು. 37 ರನ್‌ ಒಟ್ಟುಗೂಡಿತು. ಆಗ ರೋವ¾ನ್‌ ಪೊವೆಲ್‌ ಪಡೆದ ಅದ್ಭುತ ಕ್ಯಾಚ್‌ಗೆ ಡು ಪ್ಲೆಸಿಸ್‌ (17) ವಿಕೆಟ್‌ ಉರುಳಿತು. ಬೌಲ್ಟ್ ಮೊದಲ ಯಶಸ್ಸು ತಂದಿತ್ತರು.

ಕೊಹ್ಲಿ 8 ಸಾವಿರ ರನ್‌
ಇನ್ನೊಂದು ಕಡೆ ಕ್ರೀಸ್‌ ಆಕ್ರಮಿಸಿ ಕೊಂಡಿದ್ದ ವಿರಾಟ್‌ ಕೊಹ್ಲಿ ಐಪಿಎಲ್‌ನಲ್ಲಿ 8 ಸಾವಿರ ರನ್‌ ಬಾರಿಸಿದ ಮೊದಲ ಕ್ರಿಕೆಟಿಗನೆಂಬ ದಾಖಲೆಗೆ ಪಾತ್ರರಾದರು. ಇದು ಅವರ 252ನೇ ಪಂದ್ಯದ 244ನೇ ಇನ್ನಿಂಗ್ಸ್‌. ಈ ಎಲ್ಲ ರನ್‌ ಒಂದೇ ತಂಡದ ಪರವಾಗಿ ಬಂದದ್ದು ಕೂಡ ದಾಖಲೆ. ಅನಂತರದ ಸ್ಥಾನದಲ್ಲಿರುವ ಶಿಖರ್‌ ಧವನ್‌ 6,769 ರನ್‌ ಮಾಡಿದ್ದಾರೆ. ರೋಹಿತ್‌ ಶರ್ಮ 3ನೇ ಸ್ಥಾನದಲ್ಲಿದ್ದಾರೆ (6,628 ರನ್‌).

ಪವರ್‌ ಪ್ಲೇಯಲ್ಲಿ ಒಂದು ವಿಕೆಟಿಗೆ ಭರ್ತಿ 50 ರನ್‌ ಮಾಡಿದ ಆರ್‌ಸಿಬಿ, 56 ರನ್‌ ಆದಾಗ ಕೊಹ್ಲಿ ವಿಕೆಟ್‌ ಕಳೆದುಕೊಂಡಿತು. ಕೊಹ್ಲಿ 24 ಎಸೆತಗಳಿಂದ 33 ರನ್‌ (3 ಬೌಂಡರಿ, 1 ಸಿಕ್ಸರ್‌) ಮಾಡಿ ಚಹಲ್‌ ಅವರ ಮೊದಲ ಓವರ್‌ನಲ್ಲೇ ಔಟಾದರು. ಇದರೊಂದಿಗೆ ಚಹಲ್‌ ರಾಜಸ್ಥಾನ್‌ ಪರ ಸರ್ವಾಧಿಕ 66 ವಿಕೆಟ್‌ ಉರುಳಿಸಿದ ಸಾಧನೆಗೈದರು. ಸಿದ್ಧಾರ್ಥ ತ್ರಿವೇದಿ 65 ವಿಕೆಟ್‌ ಕೆಡವಿದ್ದರು.

ಕ್ಯಾಮರಾನ್‌ ಗ್ರೀನ್‌ ಮತ್ತು ರಜತ್‌ ಪಾಟಿದಾರ್‌ ಕೂಡ ರಾಜಸ್ಥಾನ್‌ ಬೌಲಿಂಗ್‌ ದಾಳಿಯನ್ನು ಎಚ್ಚರಿಕೆಯಿಂದ ನಿಭಾಯಿಸತೊಡಗಿದರು. ಅರ್ಧ ಹಾದಿ ಕ್ರಮಿಸುವಾಗ ಆರ್‌ಸಿಬಿ 2 ವಿಕೆಟಿಗೆ 76 ರನ್‌ ಮಾಡಿತ್ತು.
13ನೇ ಓವರ್‌ನಲ್ಲಿ ಅಶ್ವಿ‌ನ್‌ ಆರ್‌.ಸಿಬಿಗೆ ಅವಳಿ ಆಘಾತವಿಕ್ಕಿದರು. ಸತತ ಎಸೆತಗಳಲ್ಲಿ ಗ್ರೀನ್‌ ಮತ್ತು ಮ್ಯಾಕ್ಸ್‌
ವೆಲ್‌ ಅವರಿಗೆ ಪೆವಿಲಿಯನ್‌ ಹಾದಿ ತೋರಿಸಿದರು. ಗ್ರೀನ್‌ ಗಳಿಕೆ 27 ರನ್‌.

ಮ್ಯಾಕ್ಸ್‌ವೆಲ್‌ 18 ಸೊನ್ನೆ!
ನಿರ್ಣಾಯಕ ಪಂದ್ಯದಲ್ಲೂ ಬೇಜವಾ ಬ್ದಾರಿಯಿಂದ ಆಡಿದ ಮ್ಯಾಕ್ಸ್‌ವೆಲ್‌ ಗೋಲ್ಡನ್‌ ಡಕ್‌ ಮೂಲಕ ಆರ್‌ಸಿಬಿ ಅಭಿಮಾನಿಗಳ ಆಕ್ರೋಶಕ್ಕೆ ತುತ್ತಾದರು. ಇದರೊಂದಿಗೆ ಐಪಿಎಲ್‌ನಲ್ಲಿ ಅತ್ಯಧಿಕ 18 ಸೊನ್ನೆ ಸುತ್ತಿದ ದಿನೇಶ್‌ ಕಾರ್ತಿಕ್‌ ದಾಖಲೆಯನ್ನು ಸರಿದೂಗಿಸಿದರು. ಇದರಲ್ಲಿ 4 ಸೊನ್ನೆ ಈ ಐಪಿಎಲ್‌ನಲ್ಲೇ ಬಂದಿದೆ.

ಸ್ಕೋರ್‌ ಪಟ್ಟಿ
ರಾಯಲ್‌ ಚಾಲೆಂಜರ್ ಬೆಂಗಳೂರು
ವಿರಾಟ್‌ ಕೊಹ್ಲಿ ಸಿ ಫೆರೀರ ಬಿ ಚಹಲ್‌ 33
ಫಾ ಡು ಪ್ಲೆಸಿಸ್‌ ಸಿ ಪೊವೆಲ್‌ ಬಿ ಬೌಲ್ಟ್ 17
ಕ್ಯಾಮರಾನ್‌ ಗ್ರೀನ್‌ ಸಿ ಪೊವೆಲ್‌ ಬಿ ಅಶ್ವಿ‌ನ್‌ 27
ರಜತ್‌ ಪಾಟಿದಾರ್‌ ಸಿ ಪರಾಗ್‌ ಬಿ ಆವೇಶ್‌ 34
ಗ್ಲೆನ್‌ ಮ್ಯಾಕ್ಸ್‌ವೆಲ್‌ ಸಿ ಜುರೆಲ್‌ ಬಿ ಅಶ್ವಿ‌ನ್‌ 0
ಎಂ. ಲೊನ್ರೋರ್‌ ಸಿ ಪೊವೆಲ್‌ ಬಿ ಅವೇಶ್‌ 32
ದಿನೇಶ್‌ ಕಾರ್ತಿಕ್‌ ಸಿ ಜೈಸ್ವಾಲ್‌ ಬಿ ಆವೇಶ್‌ 11
ಸ್ವಪ್ನಿಲ್‌ ಸಿಂಗ್‌ ಔಟಾಗದೆ 9
ಕಣ್‌ì ಶರ್ಮ ಸಿ ಪೊವೆಲ್‌ ಬಿ ಸಂದೀಪ್‌ 5
ಇತರ 4
ಒಟ್ಟು (20 ಓವರ್‌ಗಳಲ್ಲಿ 8 ವಿಕೆಟಿಗೆ) 172
ವಿಕೆಟ್‌ ಪತನ: 1-37, 2-56, 3-97, 4-97, 5-122, 6-154, 7-159, 8-172.
ಬೌಲಿಂಗ್‌:
ಟ್ರೆಂಟ್‌ ಬೌಲ್ಟ್ 4-0-16-1
ಸಂದೀಪ್‌ ಶರ್ಮ 4-0-48-1
ಆವೇಶ್‌ ಖಾನ್‌ 4-0-44-3
ಆರ್‌. ಅಶ್ವಿ‌ನ್‌ 4-0-19-2
ಯಜುವೇಂದ್ರ ಚಹಲ್‌ 4-0-43-1
ರಾಜಸ್ಥಾನ್‌ ರಾಯಲ್ಸ್‌
ಯಶಸ್ವಿ ಜೈಸ್ವಾಲ್‌ ಸಿ ಕಾರ್ತಿಕ್‌ ಬಿ ಗ್ರೀನ್‌ 45
ಟಾಮ್‌ ಕ್ಯಾಡ್‌ಮೋರ್‌ ಬಿ ಫ‌ರ್ಗ್ಯುಸನ್‌ 20
ಸಂಜು ಸ್ಯಾಮ್ಸನ್‌ ಸ್ಟಂಪ್ಡ್ ಕಾರ್ತಿಕ್‌ ಬಿ ಕಣ್‌ì 17
ರಿಯಾನ್‌ ಪರಾಗ್‌ ಬಿ ಸಿರಾಜ್‌ 36
ಧ್ರುವ ಜುರೆಲ್‌ ರನೌಟ್‌ 8
ಶಿಮ್ರನ್‌ ಹೆಟ್‌ಮೈರ್‌ ಸಿ ಡು ಪ್ಲೆಸಿಸ್‌ ಬಿ ಸಿರಾಜ್‌ 26
ರೋವ¾ನ್‌ ಪೊವೆಲ್‌ ಔಟಾಗದೆ 16
ಆರ್‌. ಅಶ್ವಿ‌ನ್‌ ಔಟಾಗದೆ 0
ಇತರ 6
ಒಟ್ಟು (19 ಓವರ್‌ಗಳಲ್ಲಿ 6 ವಿಕೆಟಿಗೆ) 174
ವಿಕೆಟ್‌ ಪತನ: 1-46, 2-81, 3-86, 4-112, 5-157, 6-160.
ಬೌಲಿಂಗ್‌:
ಸ್ವಪ್ನಿಲ್‌ ಸಿಂಗ್‌ 2-0-19-0
ಮೊಹಮ್ಮದ್‌ ಸಿರಾಜ್‌ 4-0-33-2
ಯಶ್‌ ದಯಾಳ್‌ 3-0-37-0
ಲಾಕಿ ಫ‌ರ್ಗ್ಯುಸನ್‌ 4-0-37-1
ಕಣ್‌ì ಶರ್ಮ 2-0-19-1
ಕ್ಯಾಮರಾನ್‌ ಗ್ರೀನ್‌ 4-0-28-1
ಪಂದ್ಯಶ್ರೇಷ್ಠ: ಆರ್‌. ಅಶ್ವಿ‌ನ್‌

ಟಾಪ್ ನ್ಯೂಸ್

ನಾಯಕರ ಬೆನ್ನು ಬಿಡಿ, ಕ್ಷೇತ್ರ ಸುತ್ತಾಡಿ: ಪದಾಧಿಕಾರಿಗಳಿಗೆ ಡಿಕೆಶಿ ತಾಕೀತು

ನಾಯಕರ ಬೆನ್ನು ಬಿಡಿ, ಕ್ಷೇತ್ರ ಸುತ್ತಾಡಿ: ಪದಾಧಿಕಾರಿಗಳಿಗೆ ಡಿಕೆಶಿ ತಾಕೀತು

hdಚನ್ನಪಟ್ಟಣದ ಮೇಲೆ ಅಣ್ಣ ತಮ್ಮಂದಿರ ವಕ್ರದೃಷ್ಟಿ: ಎಚ್‌ಡಿಕೆ

ಚನ್ನಪಟ್ಟಣದ ಮೇಲೆ ಅಣ್ಣ ತಮ್ಮಂದಿರ ವಕ್ರದೃಷ್ಟಿ: ಎಚ್‌ಡಿಕೆ

ಬೊಮ್ಮಾಯಿ, ಕುಮಾರಸ್ವಾಮಿ, ಕೋಟ ಶ್ರೀನಿವಾಸ ಪೂಜಾರಿ ರಾಜೀನಾಮೆ

ಬೊಮ್ಮಾಯಿ, ಕುಮಾರಸ್ವಾಮಿ, ಕೋಟ ಶ್ರೀನಿವಾಸ ಪೂಜಾರಿ ರಾಜೀನಾಮೆ

ಕೇಂದ್ರ ಸಚಿವ ಎಚ್‌ಡಿಕೆ ಬಳಿ ಅಭಿವೃದ್ಧಿ ಯೋಜನೆಗಳ ಪಟ್ಟಿ ಇಟ್ಟ ಸ್ಪೀಕರ್‌ ಖಾದರ್‌

ಕೇಂದ್ರ ಸಚಿವ ಎಚ್‌ಡಿಕೆ ಬಳಿ ಅಭಿವೃದ್ಧಿ ಯೋಜನೆಗಳ ಪಟ್ಟಿ ಇಟ್ಟ ಸ್ಪೀಕರ್‌ ಖಾದರ್‌

Basavaraj Bommai ಅಂತಾರಾಜ್ಯ ಜಲ ವಿವಾದ ಪರಿಹಾರಕ್ಕೆ ಯತ್ನ

Basavaraj Bommai ಅಂತಾರಾಜ್ಯ ಜಲ ವಿವಾದ ಪರಿಹಾರಕ್ಕೆ ಯತ್ನ

ಆಯಾ ರಾಜ್ಯಗಳೇ “ನೀಟ್‌’ ಪರೀಕ್ಷೆ ನಡೆಸಲು ಕೇಂದ್ರಕ್ಕೆ ಮನವಿ: ಡಿಕೆಶಿ

ಆಯಾ ರಾಜ್ಯಗಳೇ “ನೀಟ್‌’ ಪರೀಕ್ಷೆ ನಡೆಸಲು ಕೇಂದ್ರಕ್ಕೆ ಮನವಿ: ಡಿಕೆಶಿ

B. S. Yediyurappa ಕುತಂತ್ರಿಗಳಿಗೆ ಜನರಿಂದ ತಕ್ಕ ಪಾಠ

B. S. Yediyurappa ಕುತಂತ್ರಿಗಳಿಗೆ ಜನರಿಂದ ತಕ್ಕ ಪಾಠ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-male

WC; ಭಾರತ-ಕೆನಡಾ ಪಂದ್ಯ ರದ್ದು: ಸೂಪರ್‌-8 ಮೊದಲ ಎದುರಾಳಿ ಅಫ್ಘಾನ್

TT

TT: ಭಾರತ ವನಿತೆಯರಿಗೆ ಕಂಚು

Trent Boult confirms “This is my last T20I World Cup

T20 WorldCup; ಕ್ರಿಕೆಟ್ ವಿಶ್ವಕ್ಕೆ ಶಾಕ್ ನೀಡಿದ ಕಿವೀಸ್ ಬೌಲರ್ ಟ್ರೆಂಟ್ ಬೌಲ್ಟ್ ನಿರ್ಧಾರ

T20 World Cup: ಬಲಿಷ್ಠ ಹರಿಣಗಳಿಗೆ ಸೋಲಿನ ಭೀತಿ ತೋರಿಸಿ ಗೆಲುವು ಕೈಚೆಲ್ಲಿದ ನೇಪಾಳ

T20 World Cup: ಬಲಿಷ್ಠ ಹರಿಣಗಳಿಗೆ ಸೋಲಿನ ಭೀತಿ ತೋರಿಸಿ ಗೆಲುವು ಕೈಚೆಲ್ಲಿದ ನೇಪಾಳ

1-ct

T20 WC; ಕೆನಡಾ ಎದುರಾಳಿ, ಮಳೆ ಭೀತಿ: ಭಾರತಕ್ಕೆ ಪ್ರಾಯೋಗಿಕ ಪಂದ್ಯ

MUST WATCH

udayavani youtube

ಕಾಪು ಸರ್ವೀಸ್ ರಸ್ತೆಯಲ್ಲಿ ರಿಕ್ಷಾ ಚಾಲಕ ಮತ್ತು ಬೈಕ್ ಸವಾರನ ನಡುವೆ ಹೊಡೆದಾಟ

udayavani youtube

ದರ್ಶನ್ ಗ್ಯಾಂಗ್ ಕ್ರೌರ್ಯ ಹೇಗಿತ್ತು ಗೊತ್ತಾ..? ವೈರಲ್ ಆಡಿಯೋ ಇಲ್ಲಿದೆ

udayavani youtube

Udupi: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

udayavani youtube

ಕಾಂಗ್ರೆಸ್ ಹಿರಿಯ ಶಾಸಕ ಸಿ.ಎಸ್.ನಾಡಗೌಡರಿಂದ ರಾಜಕೀಯ ತ್ಯಾಗದ ಮಾತು

udayavani youtube

ಇಳಿಕೆಯಾದ ಘಟಪ್ರಭಾ ನದಿ

ಹೊಸ ಸೇರ್ಪಡೆ

ನಾಯಕರ ಬೆನ್ನು ಬಿಡಿ, ಕ್ಷೇತ್ರ ಸುತ್ತಾಡಿ: ಪದಾಧಿಕಾರಿಗಳಿಗೆ ಡಿಕೆಶಿ ತಾಕೀತು

ನಾಯಕರ ಬೆನ್ನು ಬಿಡಿ, ಕ್ಷೇತ್ರ ಸುತ್ತಾಡಿ: ಪದಾಧಿಕಾರಿಗಳಿಗೆ ಡಿಕೆಶಿ ತಾಕೀತು

1-ssdad

ಅನುಚಿತ ವರ್ತನೆ‌ ; ಜೆಸ್ಕಾಂ ಗುತ್ತಿಗೆದಾರನಿಗೆ‌ ಚಪ್ಪಲಿಯಿಂದ ಹೊಡೆದ ಮಹಿಳೆ

hdಚನ್ನಪಟ್ಟಣದ ಮೇಲೆ ಅಣ್ಣ ತಮ್ಮಂದಿರ ವಕ್ರದೃಷ್ಟಿ: ಎಚ್‌ಡಿಕೆ

ಚನ್ನಪಟ್ಟಣದ ಮೇಲೆ ಅಣ್ಣ ತಮ್ಮಂದಿರ ವಕ್ರದೃಷ್ಟಿ: ಎಚ್‌ಡಿಕೆ

ಬೊಮ್ಮಾಯಿ, ಕುಮಾರಸ್ವಾಮಿ, ಕೋಟ ಶ್ರೀನಿವಾಸ ಪೂಜಾರಿ ರಾಜೀನಾಮೆ

ಬೊಮ್ಮಾಯಿ, ಕುಮಾರಸ್ವಾಮಿ, ಕೋಟ ಶ್ರೀನಿವಾಸ ಪೂಜಾರಿ ರಾಜೀನಾಮೆ

ಕೇಂದ್ರ ಸಚಿವ ಎಚ್‌ಡಿಕೆ ಬಳಿ ಅಭಿವೃದ್ಧಿ ಯೋಜನೆಗಳ ಪಟ್ಟಿ ಇಟ್ಟ ಸ್ಪೀಕರ್‌ ಖಾದರ್‌

ಕೇಂದ್ರ ಸಚಿವ ಎಚ್‌ಡಿಕೆ ಬಳಿ ಅಭಿವೃದ್ಧಿ ಯೋಜನೆಗಳ ಪಟ್ಟಿ ಇಟ್ಟ ಸ್ಪೀಕರ್‌ ಖಾದರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.