ಕುಂದಾಪುರ: ಎಗ್ಗಿಲ್ಲದೆ ಸಾಗಿದೆ ಅಕ್ರಮ ಮರಳುಗಾರಿಕೆ


Team Udayavani, Nov 16, 2019, 4:52 AM IST

tt-19

ಕುಂದಾಪುರ: ಬೈಂದೂರು ವಿಧಾನಸಭಾ ಕ್ಷೇತ್ರಕ್ಕೆ ಮರಳುಗಾರಿಕೆಗೆ 2 ಕಡೆ ಸರಕಾರದಿಂದ ಅನುಮತಿ ದೊರೆತಿದ್ದು ಕುಂದಾಪುರ ವಿಧಾನಸಭಾ ಕ್ಷೇತ್ರದ ಇನ್ನಷ್ಟು ಕಡೆ ಮಾನ್ಯತೆ ದೊರೆಯ ಬೇಕಿದೆ. ಕುಂದಾಪುರ, ಬೈಂದೂರು ತಾಲೂಕಿನ ವಿವಿಧೆಡೆ ಅಕ್ರಮವಾಗಿ ಮರಳುಗಾರಿಕೆ ಅಡ್ಡೆಗಳು ತಲೆಯೆತ್ತಿದ್ದು ಕಾನೂನು ಪಾಲಕರಿಗೆ ಚಿಂತೆಯಾಗಿದೆ. ಸಕ್ರಮವಾಗಿಯೂ ಮರಳುಗಾರಿಕೆ ಆರಂಭವಾದ ಕಾರಣ ಅಕ್ರಮ ಯಾವುದು ಸಕ್ರಮ ಯಾವುದು ಎಂದು ತಿಳಿಯಲು ಬಿಗಿ ತಪಾಸಣೆ ನಡೆಸಬೇಕಿದೆ.

ಕರಾವಳಿ ತೀರದಲ್ಲಿ
ಉಡುಪಿಯ ಉದ್ಯಾವರದಿಂದ ಬ್ರಹ್ಮಾವರದ ಮಾಬುಕಳದವರೆಗೆ ಸಿಆರ್‌ಝಡ್‌ ಪ್ರದೇಶಗಳಲ್ಲಿ ಗುರುತಿಸಲಾದ ಅಂದಾಜು 8 ಲಕ್ಷ ಮೆಟ್ರಿಕ್‌ ಟನ್‌ ಮರಳು ದಿಬ್ಬಗಳನ್ನು ತೆಗೆಯಲು ಸುಮಾರು 165 ನೊಂದಾಯಿತ ಪರವಾನಿಗೆದಾರರಿಗೆ ಅನುಮತಿ ನೀಡಿ ಮರಳುಗಾರಿಕೆ ಆರಂಭಿಸಲಾಗಿತ್ತು. ಸಿಆರ್‌ಝಡ್‌ ವ್ಯಾಪ್ತಿಯ ಪ್ರದೇಶಗಳನ್ನು ಹೊರತು ಪಡಿಸಿ ಸಿಹಿ ನೀರು ಪ್ರದೇಶದಲ್ಲಿನ ಮರಳುಗಾರಿಕೆಗಾಗಿ ಕುಂದಾಪುರ ತಾಲೂಕಿನ ಬಳ್ಕೂರು, ಹಳ್ನಾಡು ಪ್ರದೇಶವನ್ನು ಗುರುತಿಸಿ ಟೆಂಡರ್‌ ಕರೆದು ಅಧಿಕೃತ ಮರಳುಗಾರಿಕೆ ಆರಂಭಿಸಲಾಗಿದೆ.

ಅನುಮತಿಯಿಲ್ಲ
ಕುಂದಾಪುರ ಹಾಗೂ ಬೈಂದೂರು ತಾಲೂಕು ವ್ಯಾಪ್ತಿಯ ಸಿಆರ್‌ಝಡ್‌ವ್ಯಾಪ್ತಿಯ ಪ್ರದೇಶದಲ್ಲಿ ಮರಳುಗಾರಿಕೆಗೆ ತಾಂತ್ರಿಕ ಕಾರಣದಿಂದ ಇನ್ನೂ ಅನುಮತಿ ದೊರಕಿಲ್ಲ. ಸೌಪರ್ಣಿಕಾ, ಗಂಗಾವಳಿ, ವರಾಹಿ, ಕುಬ್ಜ, ಚಕ್ರಾ ಮುಂತಾದ ನದಿ ಪಾತ್ರಗಳಲ್ಲಿ ಸಕ್ರಮ ಮರಳುಗಾರಿಕೆಗಿಂತ ಅಕ್ರಮ ಮರಳುಗಾರಿಕೆಯೇ ಹೆಚ್ಚಾಗಿ ನಡೆಯುತ್ತಿದೆ ಎಂದು ಸಾರ್ವಜನಿಕ ದೂರುಗಳಿವೆ. ಹಕ್ಲಾಡಿ ಗ್ರಾಮದ ತೊಪ್ಲು, ನಾವುಂದ ಗ್ರಾಮದ ಬಡಾಕೆರೆ, ಕುಂದಾಪುರದ ಭಟ್ರಹಾಡಿ, ರಿಂಗ್‌ರಸ್ತೆ, ಹಟ್ಟಿಯಂಗಡಿ, ಮೊಗೆಬೆಟ್ಟು, ಬೈಂದೂರಿನ ಸೋಮೇಶ್ವರ ಮೊದಲಾದೆಡೆ ಅಕ್ರಮವಾಗಿ ರಾಜಾರೋಷವಾಗಿ ನಡೆಯುತ್ತಿದೆ. ಇಷ್ಟಲ್ಲದೇ 2 ತಾಲೂಕುಗಳ ಗ್ರಾಮೀಣ ಹಾಗೂ ಕರಾವಳಿ ಭಾಗದ ಹಲವು ಕಡೆ ಬೆಳಕಿಗೆ ಬಾರದೆ ಮರಳು ಅಕ್ರಮ ದಂಧೆ ನಿರಂತರವಾಗಿ ಮುಂದುವರಿದಿದೆ.

ಸಮನ್ವಯ ಕೊರತೆ
ಪೊಲೀಸ್‌ ಇಲಾಖೆ, ಕಂದಾಯ ಇಲಾಖೆ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆ ಪರಸ್ಪರ ಸಮನ್ವಯದೊಂದಿಗೆ ಕಾರ್ಯಾಚರಣೆ ನಡೆಸಿದರೆ ಅಕ್ರಮ ಮರಳುಗಾರಿಕೆಗೆ ಕಡಿವಾಣ ಬೀಳಲಿದೆ ಎನ್ನುತ್ತಾರೆ ಕಲಾಕ್ಷೇತ್ರ ಸಂಸ್ಥೆಯ ಬಿ. ಕಿಶೋರ್‌ ಕುಮಾರ್‌. ಪೊಲೀಸ್‌ ಇಲಾಖೆ ನಿರ್ವಹಣೆ ಮಾಡು ವಂತೆ ಗಣಿ ಹಾಗೂ ಭೂ ವಿಜ್ಞಾನ ಇಲಾಖೆಯೂ ಗೃಹ ರಕ್ಷಕ ಸಿಬಂದಿ ನೆರವಿನೊಂದಿಗೆ ಚೆಕ್‌ಪೋಸ್ಟ್‌ಗಳನ್ನು ತೆರೆಯಬೇಕು, ಪೊಲೀಸ್‌ ಇಲಾಖೆ ಪ್ರಕರಣ ದಾಖ ಲಿಸಿದ ಅನಂತರ ವಿಳಂಬಿಸದೇ ಗಣಿ ಇಲಾಖೆಯೂ ಪ್ರಕರಣ ದಾಖಲಿಸಬೇಕು. ಮರಳುಗಾರಿಕೆಗೆ ನೀಡಿದ ಪರ್ಮಿಟ್‌ ಮೇಲೆ ಪೊಲೀಸರಂತೆ ಗಣಿ ಇಲಾಖೆಯ ಸಿಬಂದಿ ಮರಳುಗಾರಿಕೆಯ ಸ್ಥಳದಲ್ಲಿಯೇ ಸಹಿ ಮಾಡಬೇಕು ಎನ್ನುತ್ತಾರೆ ಅವರು.

ಕಾನೂನು ಕ್ರಮ
ಪೊಲೀಸರು ಆಗಾಗ ಅಕ್ರಮ ಮರಳುಗಾರಿಕೆ ಹಾಗೂ ಸಾಗಾಟ ಪತ್ತೆ ಮಾಡುತ್ತಿದ್ದಾರೆ. ಪರವಾನಿಗೆ ಪಡೆದು ಮರಳುಗಾರಿಕೆ ನಡೆಸುವವರು ಸಾಗಾಟ ಮಾಡುವ ಪರ್ಮಿಟ್‌ಗಳನ್ನು ಗುರುತಿಸಿ ಅದಕ್ಕೆ ಪೊಲೀಸ್‌ ಸಿಬಂದಿ ಸಹಿ ಮಾಡುವ, ಸಾರ್ವಜನಿಕ ಮಾಹಿತಿ ಇರುವ ಸ್ಥಳಗಳಿಗೆ ಪೊಲೀಸ್‌ ಸಿಬಂದಿ ಯನ್ನು ಕಳುಹಿಸುವ ಹಾಗೂ ಚೆಕ್‌ಪೋಸ್ಟ್‌ ಗಳನ್ನು ಬಿಗಿಗೊಳಿಸುವ ಕ್ರಮಕ್ಕೆ ಮುಂದಾಗಿತ್ತು. ಸಾರ್ವಜನಿಕ ಆಸ್ತಿಯನ್ನು ಲೂಟಿ ಮಾಡುತ್ತಾರೆ ಎಂದು 379 ಸೆಕ್ಷನ್‌ ಅಡಿಯಲ್ಲಿ ಅಕ್ರಮ ದಂಧೆಕೋರರ ವಿರುದ್ಧ ಪ್ರಕರಣ ದಾಖಲಿಸಿ, ವಾಹನ ಮುಟ್ಟುಗೋಲು ಮಾಡಿಕೊಳ್ಳಲಾಗಿತ್ತು. ಪ್ರಕರಣದಲ್ಲಿ ಜಾಮೀನು ಪಡೆದುಕೊಳ್ಳುವ ದಂಧೆಕೋರರು ಕೆಲವು ದಿನ ಸುಮ್ಮನಿದ್ದು ಮತ್ತೆ ಹಳೆಯ ಚಾಳಿಗೆ ಮರಳುತ್ತಾರೆ. ಅಕ್ರಮ ಮರಳು ಗಣಿ ನಡೆಸುವವರ ವಿರುದ್ಧ ಗೂಂಡಾ ಕಾಯಿದೆ ಹಾಕುವ ಕುರಿತು ಎಚ್ಚರಿಕೆಯನ್ನೂ ನೀಡಲಾಗಿದೆ.

ಮಾಹಿತಿದಾರರು
ಮರಳು ಸಂಗ್ರಹ ಪ್ರದೇಶಗಳನ್ನು ಗುರುತಿಸಿ, ನದಿಯ ಬದಿಯಲ್ಲಿನ ಪೊದೆಗಳಲ್ಲಿ ದೋಣಿಗಳನ್ನು ಇರಿಸಿ ಕಾಯುವ ದಂಧೆಕೋರರು, ಪೊಲೀಸ್‌ ಹಾಗೂ ಇತರ ಇಲಾಖೆಯ ಅಧಿಕಾರಿಗಳ ಚಲನವಲನದ ಮಾಹಿತಿ ಪಡೆಯುವುದಕ್ಕಾಗಿ ಮಾಹಿತಿದಾರರನ್ನು ಇರಿಸಿಕೊಂಡು ರಾತ್ರಿ, ಹಗಲೆನ್ನದೆ ಮರಳುಗಾರಿಕೆ ನಡೆಸುತ್ತಾರೆ. ಇತ್ತೀಚೆಗೆ ಹಕ್ಲಾಡಿ ಗ್ರಾಮ ತೊಪ್ಲು ಯಳೂರಿನಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಮರಳನ್ನು ಜಪ್ತಿ ಮಾಡಿಕೊಂಡಿದ್ದ ಗಣಿ ಮತ್ತು ಭೂವಿಜ್ಞಾನ ಇಲಾಖೆ ಪ್ರಕರಣವನ್ನು ದಾಖಲಿಸಿತ್ತು.

ಕಟ್ಟುನಿಟ್ಟಿನ ಕ್ರಮ
ಇಲಾಖೆ ಹಾಗೂ ಸಾರ್ವಜನಿಕ ಮಾಹಿತಿ ಆಧಾರದಲ್ಲಿ ಪೊಲೀಸರು ಅಕ್ರಮ ಮರಳು ದಂಧೆ ಕಡಿವಾಣಕ್ಕೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಇಲಾಖೆಯ ಕ್ರಮಗಳನ್ನು ಮೀರಿ ಅಕ್ರಮ ನಡೆಸುವವರ ವಿರುದ್ಧ ಇಲಾಖೆ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲಿದೆ.
-ಹರಿರಾಂ ಶಂಕರ್‌, ಎಎಸ್‌ಪಿ, ಕುಂದಾಪುರ.

ಟಾಪ್ ನ್ಯೂಸ್

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-asaa

Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್‌ಕುಮಾರ್‌

ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್‌ಕುಮಾರ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-asaa

Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.