ಕಂದಾಯ ಇಲಾಖೆಯ ದೋಷ ಅಕ್ರಮಕ್ಕೊಂದು ರಹದಾರಿ!


Team Udayavani, Aug 3, 2017, 7:30 AM IST

kandaya.jpg

ಉಡುಪಿ: ಕರಾವಳಿ ಜಿಲ್ಲೆಗಳ ಭೂಮಿ ಹಿಂದಿನಿಂದಲೂ ಕೃಷಿ ಭೂಮಿ ಎಂದು ದಾಖಲೆಗಳು ಸಾರುತ್ತವೆ. ಬ್ರಿಟಿಷರ ಕಾಲದಲ್ಲಿ ಮದ್ರಾಸು ಸರಕಾರವಿರುವಾಗಲೇ ಇಲ್ಲಿನೆಲ್ಲಾ ಭೂಮಿಗೆ ಭೂಕಂದಾಯವನ್ನು ನಿಗದಿ ಮಾಡಲಾಗಿತ್ತು. ಹೀಗಾಗಿ ಮನೆ ಕಟ್ಟುವಾಗ ಅಥವಾ ಕೃಷಿಯೇತರ ಉದ್ದೇಶಕ್ಕೆ ಬಳಸುವಾಗ ಭೂಮಿಯನ್ನು ಕೃಷಿಯೇತರವಾಗಿ ಪರಿವರ್ತನೆ ಮಾಡಬೇಕು. ಇದು ಉಭಯ ಜಿಲ್ಲೆಗಳಲ್ಲಿ ಕಂದಾಯ ಇಲಾಖೆಯಲ್ಲಿ ಬಹಳ ಬೇಡಿಕೆ ಇರುವ ಆಯಕಟ್ಟಿನ ಸ್ಥಳ.

ಹೀಗೆ ಕೃಷಿಯೇತರ ಪರಿವರ್ತನೆ ಮಾಡಿದ ಸ್ಥಳವನ್ನು ಮಾರಾಟ ಮಾಡಿದಾಗ ಪಹಣಿ ಪತ್ರಿಕೆಗಳಲ್ಲಿ ಮಾರಾಟ ಮಾಡಿದವನ ಹೆಸರೇ ಇರುತ್ತದೆ.

ಗ್ರಾಮಾಂತರ ಪ್ರದೇಶದಲ್ಲಿ ಗ್ರಾ.ಪಂ.ಗಳು 9/11 ದಾಖಲೆಯಲ್ಲಿ ಖರೀದಿದಾರನ ಹೆಸರು, ನಗರ ಪ್ರದೇಶದಲ್ಲಿ ನಗರ ಸಂಸ್ಥೆಗಳು ಖಾತಾ ನಕಲಿನಲ್ಲಿ ಹೆಸರು ದಾಖಲಿಸು ತ್ತದೆ. ಪಹಣಿ ಪತ್ರಿಕೆಗಳಲ್ಲಿ ಮಾರಾಟ ಮಾಡಿದವನ/ಳ ಹೆಸರೇ ಇರುವುದರಿಂದ ಇದು ಹಲವು ಸಂದರ್ಭಗಳಲ್ಲಿ ದುರ್ಬಳಕೆಯಾಗುವ ಸಾಧ್ಯತೆ ಇದೆ.

ನ್ಯಾಯಾಲಯಗಳಿಗೆ ಜಾಮೀನು ಅರ್ಜಿ ಸಲ್ಲಿಸುವಾಗ ಜಾಗ ವನ್ನು ಮಾರಿದ್ದರೂ ಪಹಣಿಯಲ್ಲಿ ಮಾರಾಟ ಮಾಡಿ ದವರ ಹೆಸರು ಇರುವುದರಿಂದ ಪಹಣಿ ಪತ್ರಿಕೆಗಳನ್ನು ಸಲ್ಲಿಸುವ ಸಾಧ್ಯತೆ ಇದೆ. ಸಾಲ ಪಡೆಯುವಾಗಲೂ ಬ್ಯಾಂಕ್‌ ಅಧಿಕಾರಿಗಳು ಪಹಣಿ ಪತ್ರಿಕೆಗಳನ್ನು ಕೇಳುತ್ತಾರೆ. ಮಾರಾಟ ಮಾಡಿದರೂ ಪಹಣಿ ಪತ್ರಿಕೆಗಳಲ್ಲಿರುವ ಹೆಸರು ಆಧರಿಸಿ ದಾಖಲೆಗಳನ್ನು ಬ್ಯಾಂಕ್‌ ಅಧಿಕಾರಿಗಳಿಗೆ ಸಲ್ಲಿಸುವ ಅಪಾಯವೂ ಇದೆ. ಈಗ ವಿವಿಧೆಡೆ ಅಕ್ರಮಗಳು ನಡೆಯುತ್ತಿರುವಾಗ ಇದೊಂದು ಅಕ್ರಮವೆಸಗಲು ಇರುವ ರಹದಾರಿಯಂತಿದೆ.

ಅವಿಭಜಿತ ದ.ಕ. ಜಿಲ್ಲೆಯ ಎಲ್ಲ ಭೂಮಿಗಳೂ ಒಂದೋ ಸರಕಾರಿ ಅಥವಾ ಖಾಸಗಿ ಪಟ್ಟಾ ಭೂಮಿ ಎಂದು ಕಾನೂನು ಹೇಳುತ್ತದೆ. ಪಹಣಿ ಪತ್ರಿಕೆಯ 9ನೇ ಕಲಂನಲ್ಲಿ ಕಬ್ಬೆ / ಸ್ವಾಧೀನದಾರರ ಹೆಸರು ಇರುವಲ್ಲಿ “ಎ ಕರಾಬ್‌’ ಎಂದು ಮಾಡಿಸುವ ವ್ಯವಸ್ಥೆಯಾದಲ್ಲಿ ಈ ಸಮಸ್ಯೆ ಬಗೆಹರಿಯುತ್ತದೆ.

ಪಹಣಿ ಪತ್ರಿಕೆಗಳಲ್ಲಿರುವ ಹೆಸರೇ ಮಾಲಕತ್ವಕ್ಕೆ ಅಂತಿಮ ದಾಖಲೆ ಅಲ್ಲ ಎಂದು ಕಾನೂನು ಹೇಳಿದರೂ ಪಹಣಿ ಇನ್ನೂ ವ್ಯವಹಾರದಲ್ಲಿ ಜೀವಂತ ಇದೆ. ಸಬ್‌ರಿಜಿಸ್ಟ್ರಾರ್‌ ಕಚೇರಿಯ ಋಣಭಾರ ಪತ್ರದಲ್ಲಿ (ಎನ್‌ಕಂಬ್ರೆನ್ಸ್‌ ಸರ್ಟಿಫಿಕೇಟ್‌) ಎಲ್ಲ ವಿವರಗಳು ದಾಖಲಾಗುತ್ತವೆಯಾದರೂ ಎಲ್ಲರೂ ಇದನ್ನು ಕೊಂಡುಕೊಳ್ಳುವುದಿಲ್ಲ. ಈ ದಾಖಲೆ ಇಲ್ಲದೆ ಬ್ಯಾಂಕ್‌ ಅಧಿಕಾರಿಗಳು ಸಾಲ ಕೊಡುವುದೂ ಇದೆ.

ಸಾರ್ವಜನಿಕರು ಮ್ಯುಟೇಶನ್‌ ಅರ್ಜಿ ಸಲ್ಲಿಸಿದರೂ ಸಬ್‌ರಿಜಿಸ್ಟ್ರಾರ್‌ ಕಚೇರಿಯಿಂದ ಗ್ರಾ.ಪಂ. ಕಚೇರಿಗೆ ದಾಖಲೆಗಳು ಹೋಗುತ್ತವೆಯೇ ಹೊರತು ಕಂದಾಯ ಇಲಾಖೆಗೆ ಆನ್‌ಲೈನ್‌ನಲ್ಲಿ ದಾಖಲೆಗಳು ಹೋಗದ ಕಾರಣ ಕಂದಾಯ ಇಲಾಖಾಧಿಕಾರಿಗಳು ಮಾನ್ಯ ಮಾಡುವುದಿಲ್ಲ. ಸಹಾಯಕ ಕಮಿಷನರರಿಗೆ ಮೇಲ್ಮನವಿ ಸಲ್ಲಿಸಿದರೂ ಅವರೂ ತಿರಸ್ಕರಿಸುತ್ತಾರೆ.

ಇತ್ತೀಚಿನ ನಿಯಮಾವಳಿ ಪ್ರಕಾರ 15 ಸೆಂಟ್ಸ್‌ಗಿಂತ ಕಡಿಮೆ ಜಾಗವನ್ನು ಪರಿವರ್ತನೆ ಮಾಡಿದ್ದಲ್ಲಿ ಸರ್ವೇಯರ್‌ ನಕ್ಷೆ ಮಾಡಿ ಕೊಡುತ್ತಾರೆ. ಅದಕ್ಕಿಂತ ಹೆಚ್ಚಿನ ಜಾಗವಿದ್ದರೆ 11 ಇ ನಕ್ಷೆ ಮಾಡಿಸಿಕೊಡಬೇಕಾಗುತ್ತದೆ. ಆದರೆ ಆರ್‌ಟಿಸಿಯಲ್ಲಿ ಹೆಸರು ತಿದ್ದುಪಡಿ ಆಗುತ್ತಿಲ್ಲ.

ಕರಾವಳಿ ಹೊರತುಪಡಿಸಿದ ಘಟ್ಟದ ಮೇಲಿನ ಪ್ರದೇಶದಲ್ಲಿ ಈ ಸಮಸ್ಯೆ ಇಲ್ಲ. ಹೀಗಾಗಿ ಪಹಣಿ ಪತ್ರಿಕೆಯ 9ನೇ ಕಲಂನಲ್ಲಿ ಮಾರಾಟಗಾರನ/ಳ ಹೆಸರು ಇಲ್ಲದಂತೆ ಮಾಡುವ ಅಗತ್ಯವಿದೆ. ಇದಕ್ಕೆ ಬೇಕಾದ ತಿದ್ದುಪಡಿಗಳನ್ನು ಸರಕಾರ ಮಾಡಬೇಕಾಗಿದೆ.

- ಮಟಪಾಡಿ ಕುಮಾರಸ್ವಾಮಿ

ಟಾಪ್ ನ್ಯೂಸ್

arvind kejriwal

Delhi Excise Policy Case: ಕೇಜ್ರಿಗೆ ಅಲ್ಪ ರಿಲೀಫ್; ಮಧ್ಯಂತರ ಜಾಮೀನು ನೀಡಿದ ಸುಪ್ರೀಂ

prashanth neel

KGF-3 ಸ್ಕ್ರಿಪ್ಟ್ ಸಿದ್ದವಿದೆ, ಆದರೆ….: ಬಿಗ್ ಅಪ್ಡೇಟ್ ನೀಡಿದ ಪ್ರಶಾಂತ್ ನೀಲ್

2013ರಲ್ಲಿ ನಡೆದ ನರೇಂದ್ರ ದಾಭೋಲ್ಕರ್ ಹತ್ಯೆ ಪ್ರಕರಣ: ಇಬ್ಬರಿಗೆ ಜೀವಾವಧಿ, 3 ಮಂದಿ ಖುಲಾಸೆ

2013ರಲ್ಲಿ ನಡೆದ ನರೇಂದ್ರ ದಾಭೋಲ್ಕರ್ ಹತ್ಯೆ ಪ್ರಕರಣ: ಇಬ್ಬರಿಗೆ ಜೀವಾವಧಿ, ಮೂವರು ಖುಲಾಸೆ

Colin Munro Announced International Retirement

Retired; ಟಿ20 ವಿಶ್ವಕಪ್ ನಲ್ಲಿ ಸಿಗದ ಸ್ಥಾನ; ವೃತ್ತಿಜೀವನಕ್ಕೆ ತೆರೆಎಳೆದ ಕಿವೀಸ್ ಬ್ಯಾಟರ್

pralhad joshi

Hubli; ಕಾಂಗ್ರೆಸ್ ಅಧಿಕಾರಕ್ಕಾಗಿ ದೇಶವನ್ನು ಒಡೆಯಲೂ ಹೇಸುವುದಿಲ್ಲ: ಪ್ರಹ್ಲಾದ ಜೋಶಿ

Prajwal Case; ಸಿಬಿಐ ತನಿಖೆ ಯಾಕೆ? ನಮ್ಮ ಪೊಲೀಸರ ಮೇಲೆ ನಂಬಿಕೆ ಇರಲಿ: ಸಿಎಂ ಸಿದ್ದರಾಮಯ್ಯ

Prajwal Case; ಸಿಬಿಐ ತನಿಖೆ ಯಾಕೆ? ನಮ್ಮ ಪೊಲೀಸರ ಮೇಲೆ ನಂಬಿಕೆ ಇರಲಿ: ಸಿಎಂ ಸಿದ್ದರಾಮಯ್ಯ

Dandeli: ಮದುವೆಗೆ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಕಾರು ಪಲ್ಟಿ… 8 ಮಂದಿಗೆ ಗಾಯ

Dandeli: ಮದುವೆ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಕಾರು ಪಲ್ಟಿ.. ಮಕ್ಕಳು ಸೇರಿ 8 ಮಂದಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಲಾ ಸೇವ್ಯು ಬೇಕರಿ – ಸಂಸ್ಥೆಯಿಂದ ಬೀಡಿನಗುಡ್ಡೆಯಲ್ಲಿ ಮೇ 24-26: “ಆಹಾರ-ವ್ಯಾಪಾರ ಮೇಳ-2024′

ಲಾ ಸೇವ್ಯು ಬೇಕರಿ – ಸಂಸ್ಥೆಯಿಂದ ಬೀಡಿನಗುಡ್ಡೆಯಲ್ಲಿ ಮೇ 24-26: “ಆಹಾರ-ವ್ಯಾಪಾರ ಮೇಳ-2024′

Udupi: ವಿಡಿಯೋ ಕರೆ ರೆಕಾರ್ಡ್‌ ಮಾಡಿ ಹಣಕ್ಕೆ ಬೇಡಿಕೆ

Udupi: ವಿಡಿಯೋ ಕರೆ ರೆಕಾರ್ಡ್‌ ಮಾಡಿ ಹಣಕ್ಕೆ ಬೇಡಿಕೆ

Fraud: ಅಪರಿಚಿತ ವ್ಯಕ್ತಿಯಿಂದ 2.41 ಲಕ್ಷ ರೂ. ವಂಚನೆ

Fraud: ಅಪರಿಚಿತ ವ್ಯಕ್ತಿಯಿಂದ 2.41 ಲಕ್ಷ ರೂ. ವಂಚನೆ

8

ಬಡಾನಿಡಿಯೂರು: ಊಟ ಮಾಡುತ್ತಿರುವಾಗಲೇ ವ್ಯಕ್ತಿ ಸಾವು

Missing: ಕನ್ನರ್ಪಾಡಿ; ಮದುವೆಗೆ ಬಂದ ವ್ಯಕ್ತಿ ನಾಪತ್ತೆ

Missing: ಕನ್ನರ್ಪಾಡಿ; ಮದುವೆಗೆ ಬಂದ ವ್ಯಕ್ತಿ ನಾಪತ್ತೆ

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

arvind kejriwal

Delhi Excise Policy Case: ಕೇಜ್ರಿಗೆ ಅಲ್ಪ ರಿಲೀಫ್; ಮಧ್ಯಂತರ ಜಾಮೀನು ನೀಡಿದ ಸುಪ್ರೀಂ

7-kundapura

Rank: ಕುಂದಾಪುರ ತಾಲೂಕಿಗೆ ಪ್ರಥಮ ಹಾಗೂ ರಾಜ್ಯಕ್ಕೆ 5ನೇ ರ್‍ಯಾಂಕ್ ಪಡೆದ ಶುಕ್ತಿಜಾ

prashanth neel

KGF-3 ಸ್ಕ್ರಿಪ್ಟ್ ಸಿದ್ದವಿದೆ, ಆದರೆ….: ಬಿಗ್ ಅಪ್ಡೇಟ್ ನೀಡಿದ ಪ್ರಶಾಂತ್ ನೀಲ್

2013ರಲ್ಲಿ ನಡೆದ ನರೇಂದ್ರ ದಾಭೋಲ್ಕರ್ ಹತ್ಯೆ ಪ್ರಕರಣ: ಇಬ್ಬರಿಗೆ ಜೀವಾವಧಿ, 3 ಮಂದಿ ಖುಲಾಸೆ

2013ರಲ್ಲಿ ನಡೆದ ನರೇಂದ್ರ ದಾಭೋಲ್ಕರ್ ಹತ್ಯೆ ಪ್ರಕರಣ: ಇಬ್ಬರಿಗೆ ಜೀವಾವಧಿ, ಮೂವರು ಖುಲಾಸೆ

Colin Munro Announced International Retirement

Retired; ಟಿ20 ವಿಶ್ವಕಪ್ ನಲ್ಲಿ ಸಿಗದ ಸ್ಥಾನ; ವೃತ್ತಿಜೀವನಕ್ಕೆ ತೆರೆಎಳೆದ ಕಿವೀಸ್ ಬ್ಯಾಟರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.