ಶ್ರೀ ಶರಣಬಸವೇಶ್ವರ ಜಾತ್ರೆಗೆ ಪಾದಯಾತ್ರೆ
Team Udayavani, Mar 5, 2018, 5:45 PM IST
ಯಾದಗಿರಿ: ವಡಗೇರಾ ತಾಲೂಕಿನ ನಾಯ್ಕಲ್ ಗ್ರಾಮದ ಶ್ರೀ ವೀರಭದ್ರೇಶ್ವರ ದೇವಸ್ಥಾನ ಸೇವಾ ಸಮಿತಿ ಹಾಗೂ ಶ್ರೀ
ವೀರ ಮಾರುತಿ ದೇವಸ್ಥಾನ ಸೇವಾ ಸಮಿತಿ ಆಶ್ರಯದಲ್ಲಿ ಕಲಬುರಗಿ ಶ್ರೀ ಶರಣ ಬಸವೇಶ್ವರ ಜಾತ್ರೆಗೆ ಭಕ್ತರು ಪಾದಯಾತ್ರೆ ಆರಂಭಿಸಿದರು.
ಕಳೆದ 21ವರ್ಷಗಳಿಂದ ಗ್ರಾಮದ ಭಕ್ತರು ಪಾದಯಾತ್ರೆ ನಡೆಸುತ್ತಿದ್ದಾರೆ. ಬೆಳಗ್ಗೆ ಗ್ರಾಮಸ್ಥರು ಮತ್ತು ಪಾದಯಾತ್ರೆ ಹಮ್ಮಿಕೊಂಡ ಭಕ್ತರು ಗ್ರಾಮದ ಶ್ರೀ ವೀರಭದ್ರೇಶ್ವರ ದೇವಸ್ಥಾನ ಹಾಗೂ ಶ್ರೀ ಹನುಮಾನ ದೇವಸ್ಥಾನದಲ್ಲಿ ಕೇದಾರನಾಥ ಸ್ವಾಮಿ ಚರ್ತುಚಾರ್ಯಮಠ ವಿಶೇಷ ಪೂಜೆ ಸಲ್ಲಿಸಿದರು.
ಬಲಕಲ್, ಚಟ್ನಳ್ಳಿ, ಇಬ್ರಾಹಿಂಪುರ, ಹುರಸುಗುಂಡಿಗಿ, ಅಣಬಿ, ಹೊಸೂರ, ಆಂದೋಲಾ, ಗೂಡೂರ, ಕಟ್ಟಿಸಂಗಾವಿ, ಫರತಬಾದ, ನಂದಿಕೂರ, ಕೊಟೂರ ಮೂಲಕ ಭಕ್ತರು ಪಾದಯಾತ್ರೆ ಬೆಳೆಸುವ ಮೂಲಕ ಮಾ. 6ರಂದು ಮಂಗಳವಾರ ಬೆಳಗ್ಗೆ 11:30ಕ್ಕೆ ಕಲಬುರಗಿಯ ಶ್ರೀ ಶರಣಬಸವೇಶ್ವರ ದೇವಸ್ಥಾನಕ್ಕೆ ತಲುಪಲಿದ್ದಾರೆ. ಸಂಜೆ ಜರುಗುವ ಮಹಾರಥೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ ಎಂದು ಪಾದಯಾತ್ರೆ ತಂಡದ ನೇತೃತ್ವ ವಹಿಸಿದ ಶಿಕ್ಷಕ ಶರಣಬಸಪ್ಪ ನಾಸಿ ತಿಳಿಸಿದ್ದಾರೆ.
ಪ್ರಮುಖರಾದ ಸತೀಶ ಕುಮಾರ ಹಳಿಮನಿ, ಡಾ|ರಾಜಶೇಖರ ತಡಿಬಿಡಿ, ಶಿಕ್ಷಕ ತಾಯಪ್ಪ ಯಾದಗಿರಿ, ಪ್ರಕಾಶ ಹಳಿಮನಿ, ಪರಮಣ್ಣ ನೀಡಿಗಿ, ಸಂತೋಷಗೌಡ ವಡ್ವಡಿಗಿ, ವಿರುಪಾಕ್ಷರಡ್ಡಿ ಹಿರೇಗೌಡ, ಮಹಿಪಾಲ ರಡ್ಡಿ, ಡಾ| ಮಹ್ಮದ ಮೌಲಾ ರಾಯಚೂರ, ಪರ್ವತಪ್ಪ ನಾಸಿ, ಶರಣಪ್ಪ ಪಸಫೂಲ್, ಮೋನಪ್ಪ ಗೌಂಡಿ, ವಿಶ್ವರಾಧ್ಯ ಹಿರೇಮಠ, ಶೇಖರಡ್ಡಿ ವಡ್ವಡಿಗಿ ಸೇರಿದಂತೆ ಗ್ರಾಮಸ್ಥರು ಪಾದಯಾತ್ರೆ ಭಕ್ತರನ್ನು ಬೀಳ್ಕೊಟ್ಟರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
SSLC Exam Result; ಮತ್ತೆ ಕೊನೆಯ ಸ್ಥಾನ ಪಡೆದ ಯಾದಗಿರಿ..; ಕಾರಣವೇನು?
CD ಮಾಡುವುದರಲ್ಲಿ ಡಿಕೆಶಿ ನುರಿತವರು: ಬಿಜೆಪಿ ಅಭ್ಯರ್ಥಿ ರಾಜುಗೌಡ ವ್ಯಂಗ್ಯ
Yadagiri: ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ; ಪ್ರಕರಣ ದಾಖಲು
JDS ಪ್ರಜ್ವಲ್ ಗೆ ಮೋದಿ ನೆರವು; ದಾರಿ ತೋಚದೆ ಟೀಕಿಸುತ್ತಿದ್ದಾರೆ: ವಿಜಯೇಂದ್ರ ತಿರುಗೇಟು
Road Mishap: ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಸ್ಥಳದಲ್ಲೇ ಮೃತ್ಯು
MUST WATCH
ಹೊಸ ಸೇರ್ಪಡೆ
Madikeri: ಪ್ರೌಢ ಶಾಲಾ ವಿದ್ಯಾರ್ಥಿನಿಯ ಕೊಲೆ ಪ್ರಕರಣ; ಆರೋಪಿ ಪತ್ತೆಗೆ ತನಿಖೆ ಚುರುಕು
Missing Case: ನಾಪತ್ತೆಯಾಗಿದ್ದ ವಿದ್ಯಾರ್ಥಿನಿ ಸುಳ್ಯದ ಅರಂತೋಡಿನಲ್ಲಿ ಪತ್ತೆ
ಭಾರತಕ್ಕೆ ರಾಜತಾಂತ್ರಿಕ ಗೆಲುವು: ಇಸ್ರೇಲಿ ಹಡಗಿನಿಂದ 5 ಭಾರತೀಯರನ್ನು ಬಿಡುಗಡೆ ಮಾಡಿದ ಇರಾನ್
Tragedy: ಪೈಪ್ ಲೈನ್ ತಪಾಸಣೆ ವೇಳೆ ದುರಂತ… ನೀರಿನ ಹೊಂಡಕ್ಕೆ ಬಿದ್ದು ಮೂವರ ದುರ್ಮರಣ
SSLC ಪರೀಕ್ಷೆ-2 ಜೂನ್ 7ರಿಂದ ; ನೋಂದಣಿಗೆ ಮೇ 16ರ ವರೆಗೆ ಅವಕಾಶ