ಚರ್ಲಕೈ: ಚಿನ್ಮಯಾ ತಂಡದಿಂದ ಯಕ್ಷಗಾನ ತಾಳಮದ್ದಳೆ
Team Udayavani, Jun 16, 2019, 6:05 AM IST
ವಿದ್ಯಾನಗರ:ಅಡೂರು ಸಮೀಪದ ಚರ್ಲಕೈ ಜನಾದರನ ರಾಯರ ಮನೆಯಲ್ಲಿ ಚಿನ್ಮಯಾ ಕಲಾನಿಲಯ ಮಾಟೆಬಯಲು ಅಡೂರು ಹಾಗೂ ಶ್ರೀ ಚಿಷ್ಣುಮೂರ್ತಿ ಯಕ್ಷಗಾನ ಕಲಾಸಂಘ ಕುರ್ನೂರು ಇವರ ಜಂಟಿ ಆಶ್ರಯದಲ್ಲಿ ವಾಲಿ ಮೋಕ್ಷ ಎಂಬ ಯಕ್ಷಗಾನ ತಾಳಮದ್ದಳೆ ಕೂಟವು ಅತಿಥಿ ಕಲಾವಿದರ ಸಹಕಾರದೊಂದಿಗೆ ನಡೆಯಿತು.
ಹಿಮ್ಮೇಳದಲ್ಲಿ ಭಾಗವತರಾಗಿ ಕೇರಳ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಯಂ.ಮಾಟೆ ನಾರಾಯಣ ಭಾಗವತರು, ಚೆಂಡೆಯಲ್ಲಿಬಾಲಕೃಷ್ಣ ಬೊಮ್ಮಾರು ಹಾಗೂ ಮದ್ದಳೆಯಲ್ಲಿ ಅಪ್ಪಯ್ಯ ಮಣಿಯಾಣಿ ಸಹಕರಿಸಿದರು. ಮುಮ್ಮೇಳದಲ್ಲಿ ಅರ್ಥಧಾರಿಗಳಾಗಿ ದೇವಾನಂದ ಶೆಟ್ಟಿ ಬೆಳ್ಳೂರು, ಪ್ರದೀಪಕುಮಾರ್ ಉಚ್ಚಿಲ, ಕೃಷ್ಣರಾವ್ ಮಾಟೆ, ವೆಂಕಟ್ರಮಣ ಅಡೂರು, ಮಾಧವ ರಾವ್, ದಾಕೋಜಿ ರಾವ್, ದಾಮೋದರ ರಾವ್ ಮಾಟೆ, ಸೇಸೋಜಿ ರಾವ್ ಅಡೂರು ಮುಂತಾದವರು ಪಾತ್ರಗಳಿಗೆ ಜೀವ ತುಂಬಿದರು.
ಈ ಸಂದರ್ಭದಲ್ಲಿ ಜನಾರ್ದನ ರಾಯರ ತಂದೆ ಭಾಗವತರಾಗಿದ್ದ ದಿ|ಓಬೋಜಿ ರಾಯರು ಮತ್ತು ಅವರ ಪತ್ನಿ ದಿ|ಮೋಹಿನಿ ಓಬೋಜಿ ರಾಯರನ್ನು ಸ್ಮರಿಸಲಾಯಿತು. ಕೇಶವ ಆಚಾರ್ಯ ಸ್ವಾಗತಿಸಿ ಜನಾರ್ದನ ರಾಯರು ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…