ಶಿರಾಡಿ: ಆನೆ ಹಿಂಡು ದಾಳಿ; ಕೃಷಿ ಹಾನಿ
Team Udayavani, Feb 29, 2020, 1:22 AM IST
ಸಾಂದರ್ಭಿಕ ಚಿತ್ರ
ಉಪ್ಪಿನಂಗಡಿ: ಶಿರಾಡಿ ಗ್ರಾಮ ವ್ಯಾಪ್ತಿಯ ಅರಣ್ಯದ ಅಂಚಿನಲ್ಲಿ ಕಳೆದ 4 ದಿನಗಳಿಂದ ಆನೆಗಳ ಹಿಂಡೊಂದು ಬೀಡು ಬಿಟ್ಟಿದ್ದು, ಹಲವು ತೋಟಗಳಿಗೆ ನುಗ್ಗಿ ಅಪಾರ ಪ್ರಮಾಣದಲ್ಲಿ ಕೃಷಿ ಹಾನಿ ಮಾಡಿದೆ. ಹಲವರಿಗೆ ಲಕ್ಷಾಂತರ ರೂ. ನಷ್ಟ ಉಂಟಾಗಿದೆ. ಮಧ್ಯ ರಾತ್ರಿಯ ಬಳಿಕ ಅರಣ್ಯದಿಂದ ತೋಟಗಳಿಗೆ ನುಗ್ಗುವ ಆನೆಗಳು ಮುಂಜಾನೆ ತನಕವೂ ತೋಟದೊಳಗೆ ಇದ್ದು, ಪುಂಡಾಟಿಕೆ ನಡೆಸುತ್ತಿರುತ್ತವೆ. ರಬ್ಬರ್ ಕೃಷಿ ಮಾಡುವವರು ನಸುಕಿನ 4 ಗಂಟೆಯ ಒಳಗಾಗಿ ಟ್ಯಾಪಿಂಗ್ ಮಾಡಬೇಕಾಗಿದ್ದು, ತೋಟ ದೊಳಗೆ ಆನೆ ಇರುವ ಕಾರಣದಿಂದಾಗಿ ಟ್ಯಾಪಿಂಗ್ ಕಾರ್ಯಕ್ಕೆ ಅಡ್ಡಿಯಾಗಿದೆ.
ಕಲ್ಮಕಾರು: ಕಾಡಾನೆ ಶವ ಪತ್ತೆ
ಸುಬ್ರಹ್ಮಣ್ಯ: ಕಲ್ಮಕಾರು ಗ್ರಾಮದ ಕೊಪ್ಪಡ್ಕದ ಸತೀಶ್ ಕೆ.ಜಿ. ಅವರ ಅರಣ್ಯದಂಚಿನ ತೋಟದಲ್ಲಿ ಗಂಡಾನೆಯ ಶವ ಶುಕ್ರವಾರ ಪತ್ತೆಯಾಗಿದೆ. ಐದಾರು ದಿನಗಳ ಹಿಂದೆ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಈ ಸ್ಥಳ ಜನವಸತಿ ಪ್ರದೇಶದಿಂದ ದೂರದಲ್ಲಿದ್ದು, ಮನೆಯವರು ಆ ಭಾಗಕ್ಕೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಮೃತ ಆನೆಗೆ 8-9 ವರ್ಷ ಅಂದಾಜಿಸಲಾ ಗಿದೆ. ಸ್ಥಳದಲ್ಲಿ ಕಿತ್ತಾಟ ನಡೆದು ಪೊದೆಗಳು, ಅಡಿಕೆ ಸಸಿ ಗಳು ನಜ್ಜುಗುಜ್ಜಾದ ರೀತಿಯಲ್ಲಿ ಕಂಡು ಬಂದಿದ್ದು, ಕಾಡಾನೆಗಳ ಗುಂಪಿನಲ್ಲಿ ಕಾದಾಟ ನಡೆದು ಈ ಆನೆ ಮೃತಟ್ಟಿರಬಹುದು ಎಂದು ಶಂಕಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು
Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
MUST WATCH
ಹೊಸ ಸೇರ್ಪಡೆ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ