ತೆಂಕಿಲ ಗುಡ್ಡ ಬಿರುಕು: ಸರ್ವೆ ಆಧರಿಸಿ ಕ್ರಮ
ಸಮಗ್ರ ಪರಿಶೀಲನೆ ಮಾಡುವಂತೆ ಸಲ್ಲಿಸಿದ ಮನವಿ ಸ್ವೀಕರಿಸಿದ ಡಿಸಿ ಸಿಂಧೂ ಭರವಸೆ
Team Udayavani, Sep 21, 2019, 5:00 AM IST
ಪುತ್ತೂರು: ಕೆಲವು ತಿಂಗಳ ಹಿಂದೆ ತೆಂಕಿಲ ದರ್ಖಾಸ್ ಗುಡ್ಡದಲ್ಲಿ ಕಾಣಿಸಿಕೊಂಡ ಬಿರುಕಿನ ಕಾರಣಗಳ ಬಗ್ಗೆ ಸಮರ್ಪಕ ಪರಿಶೀಲನೆ ಆಗಿಲ್ಲ. ಹಾಗಾಗಿ ಪುನಃ ತಜ್ಞರ ತಂಡದಿಂದ ಸರ್ವೆ ಮಾಡಿಸಿ, ಆ ವರದಿ ಬಗ್ಗೆ ಸ್ಥಳೀಯರಿಗೆ ಮಾಹಿತಿ ನೀಡಿದ ಬಳಿಕವೇ ಸ್ಥಳಾಂತರದ ಅಗತ್ಯದ ಕುರಿತು ತೀರ್ಮಾನ ಕೈಗೊಳ್ಳಬೇಕು ಎಂದು ತೆಂಕಿಲ, ಕಮ್ನಾರು, ಕಟ್ಟತ್ತಾರು ಪ್ರದೇಶದ ನಿವಾಸಿಗಳು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಅವರಿಗೆ ಮನವಿ ಸಲ್ಲಿಸಿದರು.
ಶುಕ್ರವಾರ ಮಿನಿ ವಿಧಾನಸೌಧದಲ್ಲಿ ನಗರಸಭೆ ಸದಸ್ಯೆ ದೀಕ್ಷಾ ಪೈ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಅವರನ್ನು ಭೇಟಿ ಮಾಡಿದ ನಿವಾಸಿಗಳು, ಸ್ಥಳಾಂತರಿಸುವ ನಿರ್ಧಾರದ ಮೊದಲು ಬಿರುಕಿಗೆ ಕಾರಣಗಳ ಬಗ್ಗೆ ಸಮಗ್ರ ವರದಿ ನೀಡಬೇಕು ಎಂದು ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಈ ತನಕದ ಸರ್ವೆ ವರದಿ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಳ್ಳುತ್ತೇನೆ. ಬೇಡಿಕೆಗಳ ಬಗ್ಗೆ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಪ್ರತ್ಯೇಕ ಸರ್ವೆಯ ಅಗತ್ಯದ ಕುರಿತಾಗಿಯೂ ತೀರ್ಮಾನಿಸಲಾಗುವುದು ಎಂದರು.
ಕ್ರಮಬದ್ಧ ಸರ್ವೆ ಆಗಿಲ್ಲ
ಗುಡ್ಡ ಬಿರುಕು ಬಿಟ್ಟ ಸಂದರ್ಭ ಭೂ ವಿಜ್ಞಾನಿಗಳು ಸಹಿತ ಎರಡು ಮೂರು ತಂಡಗಳು ಸ್ಥಳಕ್ಕೆ ಬಂದಿವೆ. ಆದರೆ ಈ ಬಗ್ಗೆ ಸ್ಥಳೀಯ ನಿವಾಸಿಗಳಿಗೆ, ಜನಪ್ರತಿನಿಧಿಗಳಿಗೆ ಮಾಹಿತಿ ನೀಡದೆ, ವೈಜ್ಞಾನಿಕ ಮಾದರಿಯಲ್ಲಿ ತನಿಖೆ ಮಾಡದೆ ಭೂಕಂಪ ಎಂಬ ಹೇಳಿಕೆ ನೀಡಿದ್ದಾರೆ. ಅನಂತರ ಸ್ಯಾಟಲೈಟ್ ಮೂಲಕ ಸರ್ವೆ ನಡೆಸಲಾಗಿದೆ ಎಂದಿದ್ದರೂ ಆ ವರದಿಯನ್ನು ಈ ತನಕ ಬಹಿರಂಗಪಡಿಸಿಲ್ಲ. ಈವರೆಗಿನ ಯಾವುದೇ ಸರ್ವೆಗಳು ಕ್ರಮಬದ್ಧವಾಗಿ ನಡೆದಿಲ್ಲ ಎಂದು ಸಂತ್ರಸ್ತರು ಅಳಲು ತೋಡಿಕೊಂಡರು.
ಇಂಗುಗುಂಡಿಯೇ ಕಾರಣ
ಗುಡ್ಡ ಬಿರುಕಿಗೆ ಇಂಗುಗುಂಡಿ ಕಾರಣ. ತಜ್ಞ ಗಂಗಾಧರ ಭಟ್ ಅವರನ್ನು ಸ್ಥಳೀಯರು ಕರೆಯಿಸಿ ಪರಿಶೀಲಿಸಿದ ಸಂದರ್ಭ ಅವರು ಈ ಅಂಶವನ್ನು ದೃಢಪಡಿಸಿದ್ದಾರೆ. ಸರ್ವೆಗೆ ಅವಕಾಶ ಕೊಟ್ಟಲ್ಲಿ ಈ ಬಗ್ಗೆ ತಾನು ಸಂಪೂರ್ಣ ಪರಿಶೀಲಿಸಿ ಮಾಹಿತಿ ನೀಡುವುದಾಗಿ ತಿಳಿಸಿದ್ದಾರೆ. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ ಎನ್ನುವುದನ್ನು ಅವರು ತಿಳಿಸಿದ್ದಾರೆ. ಹೀಗಾಗಿ ಸಂತ್ರಸ್ತ ನಿವಾಸಿಗಳ ಸಮ್ಮುಖದಲ್ಲಿ ಉಪಸ್ಥಿತಿಯಲ್ಲಿ ಸರ್ವೆ ನಡೆಸುವಂತೆ ಅವರು ಆಗ್ರಹಿಸಿದರು. ಮನವಿ ಸ್ವೀಕಾರ ಸಂದರ್ಭ ಉಪವಿಭಾಧಿಕಾರಿ ಎಚ್.ಕೆ. ಕೃಷ್ಣಮೂರ್ತಿ ಉಪಸ್ಥಿತರಿದ್ದರು.
1,200ಕ್ಕೂ ಅಧಿಕ ಇಂಗುಗುಂಡಿ
ತೆಂಕಿಲ ದರ್ಖಾಸ್ ಗುಡ್ಡದ ಮೇಲೆ ಕೆಸಿಡಿಸಿಗೆ ಸಂಬಂಧಿಸಿದ ನೂರಾರು ಎಕರೆ ಗೇರು ತೋಟವಿದ್ದು, ಅದರಲ್ಲಿ 1,200ಕ್ಕೂ ಅಧಿಕ ಇಂಗುಗುಂಡಿಗಳನ್ನು ತೋಡಲಾಗಿದೆ. ಸುಮಾರು 4 ಅಡಿ ಆಳವಿರುವ ಈ ಇಂಗುಗುಂಡಿಗಳಲ್ಲಿ ನೀರು ಇಂಗುವುದೇ ಗುಡ್ಡ ಬಿರುಕು ಬಿಡಲು ಕಾರಣವಾಗಿದೆ ಎಂದು ಜಿಲ್ಲಾಧಿಕಾರಿ ಅವರ ಗಮನಕ್ಕೆ ತಂದರು. ಈ ಪರಿಸರದಲ್ಲಿ 100ಕ್ಕಿಂತ ಅಧಿಕ ಮನೆಗಳಿವೆ. ಆದರೆ 12 ಮನೆಯವರನ್ನು ಮಾತ್ರ ಸ್ಥಳಾಂತರಿಸಲು ನಿರ್ಧರಿಸಿದ್ದಾರೆ. ಇದು ಸರಿಯಲ್ಲ. ಇದರಲ್ಲಿ 10 ಮನೆಯವರು ಸಮಗ್ರ ತನಿಖೆ ಆಗದೆ ನಾವು ಸ್ಥಳಾಂತರಗೊಳ್ಳುವುದಿಲ್ಲ. ಇಲ್ಲಿ ಪುನಃ ಸರ್ವೆ ಮಾಡಿ ಮಾಹಿತಿ ನೀಡಬೇಕು ಎಂದು ಸಂತ್ರಸ್ತರು ಮನವಿ ಸಲ್ಲಿಸಿದರು. ಗುಡ್ಡಭಾಗದಲ್ಲಿ ನಡೆಯುವ ಅವೈಜ್ಞಾನಿಕ ಕಾಮಗಾರಿಗೆ ತಡೆ ನೀಡುವಂತೆಯೂ ಆಗ್ರಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು
Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
MUST WATCH
ಹೊಸ ಸೇರ್ಪಡೆ
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್