ಶಾರ್ಟ್ ಸರ್ಕ್ನೂಟ್ನಿಂದ ಸಚಿವ ಈಶ್ವರಪ್ಪ ನಿವಾಸದಲ್ಲಿ ಬೆಂಕಿ ಆಕಸ್ಮಿಕ
Team Udayavani, Mar 17, 2020, 1:30 AM IST
ಬೆಂಗಳೂರು: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಕೆ.ಎಸ್.ಈಶ್ವರಪ್ಪ ಅವರ ನಿವಾಸದಲ್ಲಿ ಅಗ್ನಿಆಕಸ್ಮಿಕ ಸಂಭವಿಸಿದೆ. ನಗರದ ಕುಮಾರ ಪಾರ್ಕ್ನಲ್ಲಿರುವ ಸರ್ಕಾರಿ ವಸತಿ ಗೃಹದಲ್ಲಿ ರಾತ್ರಿ 10.30ರ ವೇಳೆಗೆ ಶಾರ್ಟ್ ಸರ್ಕ್ನೂಟ್ನಿಂದ ಈ ಅಗ್ನಿ ಅನಾಹುತ ಸಂಭವಿಸಿದೆ. ಅದೃಷ್ಟವಶಾತ್ ಈಶ್ವರಪ್ಪ ಅವರು ಅಪಾಯದಿಂದ ಪಾರಾಗಿದ್ದಾರೆ.
ಈಶ್ವರಪ್ಪ ಅವರು ಮಲಗುವ ಕೋಣೆಯ ಎಸಿ ಸ್ವಿಚ್ ಹಾಕಿದ ತಕ್ಷಣ ಶಾರ್ಟ್ ಸರ್ಕ್ನೂಟ್ ಸಂಭವಿಸಿದೆ. ತಕ್ಷಣ ಈಶ್ವರಪ್ಪ ಮತ್ತು ಅವರ ಪತ್ನಿ ರೂಂನಿಂದ ಆಚೆ ಬಂದಿದ್ದಾರೆ. ತಕ್ಷಣ ಅಳಿಯ ಸಂತೋಷ್ಗೆ ವಿಷಯ ಮುಟ್ಟಿಸಿದ್ದು, ಅವರು ಅಗ್ನಿ ಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ.
ಈ ದುರಂತದಿಂದಾಗಿ ಕೊಠಡಿಯಲ್ಲಿದ್ದ ಬಟ್ಟೆಗಳು, ಕಬೋರ್ಡ್, ಸೋಫಾ, ಕಾಟ್, ಕರ್ಟನ್ ಸುಟ್ಟು ಭಸ್ಮವಾಗಿವೆ.