“ಜೀವನ ರೂಪಿಸುವಲ್ಲಿ ತಾಯಿಯ ಪಾತ್ರ ಮಹತ್ತರ’
Team Udayavani, May 17, 2019, 6:16 AM IST
ವಿದ್ಯಾನಗರ: ಮಗುವಿನ ಜೀವನವನ್ನು ರೂಪಿಸುವಲ್ಲಿ ತಾಯಿಯ ಪಾತ್ರ ಮಹತ್ತರವಾಗಿದ್ದು, ಹಂತ ಹಂತವಾಗಿ ಆಕೆ ಮಕ್ಕಳಿಗೆ ನೀಡಬೇಕಾದ ವಾತ್ಸಲ್ಯ, ಸಂಸ್ಕಾರದಿಂದ ಸಾಕಿ ಸಲಹಬೇಕಾಗಿದೆ. ಮಕ್ಕಳನ್ನು ಉತ್ತಮ ನಾಗರಿಕರಾಗಿ ಮಾಡುವ ಜವಾಬ್ದಾರಿ ತಂದೆ-ತಾಯಿಯಲ್ಲಿರ ಬೇಕು ಎಂದು ಕುಂಡಂಗುಳಿ ಹರಿಶ್ರೀ ವಿದ್ಯಾಲಯದ ಶಿಕ್ಷಕಿ ಇಂದಿರಾ ಕುಟ್ಟಿ ಟೀಚರ್ ಅವರು ಹೇಳಿದರು.
ಕುಂಡಂಗುಳಿ ಜಾಲುಮನೆ ಕೋಟೆ ಬಯಲು ವಾಗ್ಮಾನ್ ದೇವರಮನೆಯ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳ ಅಂಗವಾಗಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಕುಲಗುರು ತಾನೋಜಿ ರಾವ್ ವಾಗ್ಮಾನ್ ಅವರು ಸಾಂಸ್ಕೃತಿಕ ಕಾರ್ಯ ಕ್ರಮಗಳನ್ನು ಉದ್ಘಾಟಿಸಿದರು. ಬ್ರಹ್ಮಕ ಲಶೋತ್ಸವ ಸಮಿತಿ ಅಧ್ಯಕ್ಷ ರಾಮೋಜಿ ರಾವ್ ಅವರು ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದ ಅಂಗವಾಗಿ ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಕಲಾಸಂಘ ಪುಂಡೂರು ಇವರಿಂದ ಶಾಂಭವಿ ವಿಲಾಸ ಮಕ್ಕಳ ಯಕ್ಷಗಾನ ನಡೆಯಿತು. ಬುಧವಾರ ವಿಟuಲ ನಾಯಕ್ ಕಲ್ಲಡ್ಕ ಇವರಿಂದ ಗೀತಾ ಸಾಹಿತ್ಯ ವೈಭವ, ಭಜನೆ, ಹರಿಶ್ರೀ ವಿದ್ಯಾಲಯ ಕುಂಡಂಗುಳಿ ಇವರಿಂದ ಯೋಗ ಪ್ರದರ್ಶನ, ವಿವೇಕಾನಂದ ನಾಟ್ಯ ನಿಲಯ ಕುಂಟಾರು ಇವರಿಂದ ಭರತನಾಟ್ಯ, ದೆ„ವಜ್ಞ ಬೇಳ ಪದ್ಮನಾಭ ಶರ್ಮ ಇವರಿಂದ ಅನುಗ್ರಹ ಆಶೀರ್ವಚನ ನಡೆಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ