ಅರಣ್ಯ ಇಲಾಖೆಯಿಂದ ಹೀಗೊಂದು ಅರಣ್ಯ ಸೃಷ್ಟಿ!

ದೇಲಂತಬೆಟ್ಟು 50 ಎಕರೆ ಅಕೇಶಿಯಾ ಜಾಲ

Team Udayavani, Jun 26, 2022, 4:52 PM IST

17

ಸುರತ್ಕಲ್‌: ಅಕೇಶಿಯಾ, ನೀಲಗಿರಿ ಸಸಿಗಳನ್ನು ಬೆಳೆಸುವುದನ್ನು ಸರಕಾರ ನಿರ್ಬಂಧಿಸಿದ್ದರೂ ಕೆಲವೊಂದು ಸಬೂಬು ನೀಡಿ ಸುರತ್ಕಲ್‌ ಸಮೀಪದ ಸೂರಿಂಜೆ ದೇಲಂತಬೆಟ್ಟುವಿನ ಗುಡ್ಡದ 50 ಎಕರೆ ಪ್ರದೇಶದಲ್ಲಿ ಅರಣ್ಯ ಇಲಾಖೆಯೇ ಸದ್ದಿಲ್ಲದೆ ಅಕೇಶಿಯಾ ನೆಡಲು ಇದೀಗ ಮುಂದಾಗಿದೆ.

ಅಕೇಶಿಯಾ ಭಸ್ಮಾಸುರನಂತೆ ಪಶ್ಚಿಮಘಟ್ಟ ಹಾಗೂ ಇತರೆಡೆ ಬೆಳೆಯುತ್ತಲೇ ಸಾಗಿದೆ. ಇದರ ಬೀಜಗಳಿಂದ ಮತ್ತೆ ಮತ್ತೆ ಹುಟ್ಟಿ ಬರುತ್ತಿವೆ. ದೇಲಂತಬೆಟ್ಟುವಿನಲ್ಲಿ ಬೃಹತ್‌ ಆಗಿ ಬೆಳೆದ ಅಕೇಶಿಯಾ ಮರಗಳನ್ನು ಕಡಿದು ಸಾಗಾಟ ಮಾಡಿದರೆ, ಅರಣ್ಯ ಇಲಾಖೆ ಮತ್ತೆ ಅಕೇಶಿಯಾ ಸಸಿ ನಾಟಿಗೆ ಮುಂದಾಗಿದ್ದು, ಈಗಾಗಲೇ ಗುತ್ತಿಗೆ ನೀಡಿ ಕೆಲಸ ಪ್ರಾರಂಭಿಸಿದೆ.

ಸುತ್ತಮುತ್ತ ರಾಜೀವ ನಗರ ಸಹಿತ ವಸತಿ ಬಡಾವಣೆಯಿದೆ. ಈ ಪ್ರದೇಶದಲ್ಲಿ ಯಥೇತ್ಛ ನೀರಿನ ಮೂಲಗಳಿವೆ. ಅಂತರ್ಜಲಕ್ಕೆ ಕೊರತೆಯಿಲ್ಲ. ಆದರೆ ಈಗಾಗಲೇ ಅಕೇಶಿಯಾ ಬೆಳೆದ ಪ್ರದೇಶದಲ್ಲೆಲ್ಲ ಅಂತರ್ಜಲ ಕುಸಿದಿದ್ದರೆ, ಇತರ ಸಸ್ಯ ಪ್ರಭೇದ ಬೆಳೆಯಲಾರದು. ದನಕರುಗಳಿಗೆ, ಸಾಕುಪ್ರಾಣಿಗಳಿಗೆ ಸೊಪ್ಪು ತೆಗೆಯಲೂ ಪ್ರಯೋಜನವಿಲ್ಲದ ಅಕೇಶಿಯಾ ನಾಟಿಯಿಂದ ಮಂಗಗಳಿಗೆ, ಪಕ್ಷಿಗಳಿಗೆ ಹಣ್ಣುಹಂಪಲು ಸಿಗದೆ ಸಮೀಪದ ಹಳ್ಳಿಗೆ ಲಗ್ಗೆ ಇಡುತ್ತಿವೆ.

ಚಿರತೆಗಳಿಗೆ ಮರದ ಆಶ್ರಯ ಸಿಗದೆ ನಾಡಿಗೆ ನುಗ್ಗಿ ಕೋಳಿ, ಶ್ವಾನ, ದನ ಕರುಗಳ ಬಲಿ ತೆಗೆದುಕೊಳ್ಳುತ್ತಿವೆ. ಅಕೇಶಿಯಾ ಮರದ ಕೆಳಭಾಗದಲ್ಲಿ ಹುಲ್ಲೂ ಬೆಳೆಯುವುದಿಲ್ಲ ಹೀಗಾಗಿ ಪ್ರಾಣಿ, ಪಕ್ಷಿಗಳಿಗೂ ಬೇಕಾದ ಸ್ವಾಭಾವಿಕ ಅರಣ್ಯ ಬೆಳೆಸುವ ಕಾಯಕವಾಗಬೇಕಿದೆ.

ಸರಕಾರದ ಆದೇಶದಲ್ಲೇನಿದೆ

ರೈತರ, ಸ್ಥಳೀಯರ ಆಗ್ರಹದ ಮೇರೆಗೆ ಸರಕಾರವು 2016-17ನೇ ಸಾಲಿನಲ್ಲಿ ಆದೇಶ ನೀಡಿ ಬೆಂಗಳೂರು ಗ್ರಾಮಾಂತರ,ರಾಮನಗರ ಸಹಿತ ವಿವಿಧೆಡೆ ನೀಲಗಿರಿ, ಆಕೇಶಿಯಾ ಕಟಾವು ಮಾಡಿ ತೆರವು ಮಾಡಲಾಗುತ್ತಿದ್ದರೆ, ಇತ್ತ ದೇಲಂತಬೆಟ್ಟುವಿನಲ್ಲಿ ಕಟಾವು ಮಾಡಿದ ಸ್ಥಳದಲ್ಲಿ ಮತ್ತೆ ಅಕೇಶಿಯಾ ಪೋಷಣೆಗೆ ತಯಾರಿ ನಡೆಯುತ್ತಿದೆ.

ಇದರ ಬದಲಿಗೆ ಉಪಯುಕ್ತ ಸ್ಥಳೀಯ ಜಾತಿಯ ನೆಡು ತೋಪು ಬೆಳಸಬೇಕು. ನೀಲಗಿರಿ ಬೆಳೆಯ ಬಗ್ಗೆ ರೈತರಿಗೆ, ಸಾರ್ವಜನಿಕರಿಗೆ ಪ್ರೋತ್ಸಾಹ, ಅದರ ಮಾಹಿತಿ ನೀಡಬಾರದು ಎಂಬ ಸ್ಪಷ್ಟ ಆದೇಶವಿದೆ.

ಸ್ಥಳೀಯರಲ್ಲಿ ವಿರೋಧದ ಛಾಯೆ ಪರಿಸರಕ್ಕೆ ಹಾನಿಯಾಗುವ ಅಕೇಶಿಯಾ ಮತ್ತೆ ನಾಟಿ ಬೇಡ ಎಂಬ ಕೂಗಿಗೆ ಬಲ ಬರತೊಡಗಿದೆ. ಉರುವಲಿಗೆ ಅಕೇಶಿಯಾ ನೆಡುತ್ತೇವೆ ಹಾಗೂ ದೇಲಂತಬೆಟ್ಟು ಬಂಡೆ ಗಲ್ಲುಗಳ ಪ್ರದೇಶವಾಗಿರುವುದರಿಂದ ಬೇರೆ ಜಾತಿಯ ಸಸಿ ಬೆಳೆಯಲಾರದು ಎಂಬ ಸಬೂಬು ಅರಣ್ಯ ಇಲಾಖೆಯ ಆಧಿಕಾ ರಿಗಳು ಗ್ರಾಮ ಸಭೆಯಲ್ಲಿ ನೀಡಿದ್ದಾರೆ ಎಂಬು ಆರೋಪವಿದ್ದು ಇದಕ್ಕೆ ಸ್ಥಳೀಯ ಪಂಚಾಯತ್‌ ವಿರೋಧ ವ್ಯಕ್ತಪಡಿಸಿದೆ.

ಪ್ರಾಣಿಗಳ ಉಪಟಳ: ಅಕೇಶಿಯಾ ನೆಡು ತೋಪುಗಳಿಂದ ಪರಿಸರಕ್ಕೆ, ಪ್ರಾಣಿ ಪಕ್ಷಿಗಳಿಗೆ ತೊಂದರೆಯಾಗು ತ್ತದೆ.ಈಗಾಗಲೇ ದೇಲಂತಬೆಟ್ಟು ಪ್ರದೇಶದಲ್ಲಿ ಕಾಡುಕೋಣ, ಚಿರತೆ, ಮಂಗಳಗಳ ಉಪಟಳ ಗ್ರಾಮದಲ್ಲಿ ಕಾಣಸಿಗುತ್ತಿದೆ. ಕಿರು ಆರಣ್ಯ ಪ್ರದೇಶದಲ್ಲಿ ಇವುಗಳಿಗೆ ಆಶ್ರಯ ಸಿಗುತ್ತಿಲ್ಲ. ಅಕೇಶಿಯಾದಿಂದ ಇವುಗಳಿಗೆ ಏನು ಪ್ರಯೋಜನವಿದೆ. ವಾಣಿಜ್ಯ ಬೆಳೆಯ ಮತ್ತು ಆದಾಯದ ದೃಷ್ಟಿಯಿಂದ ಅರಣ್ಯ ಇಲಾಖೆ ಗಮನ ಹರಿಸದೆ ನಮ್ಮ ಜೀವನದ ಕಷ್ಟಕ್ಕೂ ಸ್ಪಂದಿಸಬೇಕು. ಉತ್ತಮ ಸ್ಥಳೀಯ ಸಸಿ ನೆಟ್ಟು ಪೋಷಿಸಿ, ನಾವೂ ಬೆಂಬಲ ನೀಡುತ್ತೇವೆ. ಆದರೆ ಅಕೇಶಿಯಾ ಬೇಡ. –ಜೀತೇಂದ್ರ ಶೆಟ್ಟಿ, ಅಧ್ಯಕ್ಷರು, ಸೂರಿಂಜೆ ಗ್ರಾ.ಪಂ.

ಗ್ರಾಮಸರು ಬಯಸಿದರೆ ಸ್ಥಳೀಯ ಗಿಡ ನಾಟಿ: ದೇಲಂತಬೆಟ್ಟುವಿನ ಅರಣ್ಯ ಭೂಮಿಯ 10 ಎಕರೆ ಪ್ರದೇಶದಲ್ಲಿ ಮಾತ್ರ ಅಕೇಶಿಯಾ ನೆಡುತೋಪು ಮಾಡಲಾಗುತ್ತಿದೆ. ಇಲ್ಲಿನ ಗುಡ್ಡ ಪ್ರದೇಶದ ಮಣ್ಣಿನಲ್ಲಿ ಬೇರೆ ಸಸಿ ಬೆಳೆಯಲಾರದು. ಅತಿಕ್ರಮಣ ಆಗದಂತೆ ತಡೆ, ಉರುವಲು ಉಪಯೋಗ, ಗ್ರಾಮದ ಅರಣ್ಯ ಸಮಿತಿಗೆ ಆದಾಯವೂ ಆಗುತ್ತದೆ. ಗ್ರಾಮಸ್ಥರು ಬಯಸಿದರೆ ಸ್ಥಳೀಯ ಸಸ್ಯ ಗಳನ್ನು ನೆಡಲು ಅಡ್ಡಿಯಿಲ್ಲ. ಆದರೆ ಮಣ್ಣಿನ ಗುಣದಿಂದ ಮರಗಳು ಹೆಚ್ಚಿನ ಬಾಳಿಕೆ ಬರುವುದಿಲ್ಲ. –ಪ್ರಶಾಂತ್‌, ಆರ್‌ಎಫ್‌ಒ

„ಲಕ್ಷ್ಮೀ ನಾರಾಯಣ ರಾವ್‌

ಟಾಪ್ ನ್ಯೂಸ್

arvind kejriwal

Delhi Excise Policy Case: ಕೇಜ್ರಿಗೆ ಅಲ್ಪ ರಿಲೀಫ್; ಮಧ್ಯಂತರ ಜಾಮೀನು ನೀಡಿದ ಸುಪ್ರೀಂ

prashanth neel

KGF-3 ಸ್ಕ್ರಿಪ್ಟ್ ಸಿದ್ದವಿದೆ, ಆದರೆ….: ಬಿಗ್ ಅಪ್ಡೇಟ್ ನೀಡಿದ ಪ್ರಶಾಂತ್ ನೀಲ್

2013ರಲ್ಲಿ ನಡೆದ ನರೇಂದ್ರ ದಾಭೋಲ್ಕರ್ ಹತ್ಯೆ ಪ್ರಕರಣ: ಇಬ್ಬರಿಗೆ ಜೀವಾವಧಿ, 3 ಮಂದಿ ಖುಲಾಸೆ

2013ರಲ್ಲಿ ನಡೆದ ನರೇಂದ್ರ ದಾಭೋಲ್ಕರ್ ಹತ್ಯೆ ಪ್ರಕರಣ: ಇಬ್ಬರಿಗೆ ಜೀವಾವಧಿ, ಮೂವರು ಖುಲಾಸೆ

Colin Munro Announced International Retirement

Retired; ಟಿ20 ವಿಶ್ವಕಪ್ ನಲ್ಲಿ ಸಿಗದ ಸ್ಥಾನ; ವೃತ್ತಿಜೀವನಕ್ಕೆ ತೆರೆಎಳೆದ ಕಿವೀಸ್ ಬ್ಯಾಟರ್

pralhad joshi

Hubli; ಕಾಂಗ್ರೆಸ್ ಅಧಿಕಾರಕ್ಕಾಗಿ ದೇಶವನ್ನು ಒಡೆಯಲೂ ಹೇಸುವುದಿಲ್ಲ: ಪ್ರಹ್ಲಾದ ಜೋಶಿ

Prajwal Case; ಸಿಬಿಐ ತನಿಖೆ ಯಾಕೆ? ನಮ್ಮ ಪೊಲೀಸರ ಮೇಲೆ ನಂಬಿಕೆ ಇರಲಿ: ಸಿಎಂ ಸಿದ್ದರಾಮಯ್ಯ

Prajwal Case; ಸಿಬಿಐ ತನಿಖೆ ಯಾಕೆ? ನಮ್ಮ ಪೊಲೀಸರ ಮೇಲೆ ನಂಬಿಕೆ ಇರಲಿ: ಸಿಎಂ ಸಿದ್ದರಾಮಯ್ಯ

Dandeli: ಮದುವೆಗೆ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಕಾರು ಪಲ್ಟಿ… 8 ಮಂದಿಗೆ ಗಾಯ

Dandeli: ಮದುವೆ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಕಾರು ಪಲ್ಟಿ.. ಮಕ್ಕಳು ಸೇರಿ 8 ಮಂದಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Panambur: ರಿಕ್ಷಾ ಚಾಲಕನ ಮೇಲೆ ಸ್ಥಳೀಯ ರಿಕ್ಷಾ ಚಾಲಕರಿಂದ ಹಲ್ಲೆ… ದೂರು ದಾಖಲು

Panambur: ರಿಕ್ಷಾ ಚಾಲಕನ ಮೇಲೆ ಸ್ಥಳೀಯ ರಿಕ್ಷಾ ಚಾಲಕರಿಂದ ಹಲ್ಲೆ… ದೂರು ದಾಖಲು

Fraud: ಕ್ರೈಂ ಬ್ರಾಂಚ್‌ ಹೆಸರಲ್ಲಿ 1.60 ಕೋ.ರೂ. ಪಡೆದು ವಂಚನೆ   

Fraud: ಕ್ರೈಂ ಬ್ರಾಂಚ್‌ ಹೆಸರಲ್ಲಿ 1.60 ಕೋ.ರೂ. ಪಡೆದು ವಂಚನೆ   

Mangaluru: ಅಪಹರಿಸಲು ಸುಪಾರಿ; ಇಬ್ಬರ ಬಂಧನ

Mangaluru: ಅಪಹರಿಸಲು ಸುಪಾರಿ; ಇಬ್ಬರ ಬಂಧನ

Mangaluru: ಟಿಪ್ಪರ್‌ ಲಾರಿ ಹರಿದು ಸ್ಕೂಟರ್‌ ಸವಾರ ಸಾವು

Mangaluru: ಟಿಪ್ಪರ್‌ ಲಾರಿ ಹರಿದು ಸ್ಕೂಟರ್‌ ಸವಾರ ಸಾವು

Mangaluru: ರೈಲು ನಿಲ್ದಾಣದ ಬಳಿ ಗಲಾಟೆ; ಪ್ರಕರಣ ದಾಖಲು

Mangaluru: ರೈಲು ನಿಲ್ದಾಣದ ಬಳಿ ಗಲಾಟೆ; ಪ್ರಕರಣ ದಾಖಲು

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

arvind kejriwal

Delhi Excise Policy Case: ಕೇಜ್ರಿಗೆ ಅಲ್ಪ ರಿಲೀಫ್; ಮಧ್ಯಂತರ ಜಾಮೀನು ನೀಡಿದ ಸುಪ್ರೀಂ

7-kundapura

Rank: ಕುಂದಾಪುರ ತಾಲೂಕಿಗೆ ಪ್ರಥಮ ಹಾಗೂ ರಾಜ್ಯಕ್ಕೆ 5ನೇ ರ್‍ಯಾಂಕ್ ಪಡೆದ ಶುಕ್ತಿಜಾ

prashanth neel

KGF-3 ಸ್ಕ್ರಿಪ್ಟ್ ಸಿದ್ದವಿದೆ, ಆದರೆ….: ಬಿಗ್ ಅಪ್ಡೇಟ್ ನೀಡಿದ ಪ್ರಶಾಂತ್ ನೀಲ್

2013ರಲ್ಲಿ ನಡೆದ ನರೇಂದ್ರ ದಾಭೋಲ್ಕರ್ ಹತ್ಯೆ ಪ್ರಕರಣ: ಇಬ್ಬರಿಗೆ ಜೀವಾವಧಿ, 3 ಮಂದಿ ಖುಲಾಸೆ

2013ರಲ್ಲಿ ನಡೆದ ನರೇಂದ್ರ ದಾಭೋಲ್ಕರ್ ಹತ್ಯೆ ಪ್ರಕರಣ: ಇಬ್ಬರಿಗೆ ಜೀವಾವಧಿ, ಮೂವರು ಖುಲಾಸೆ

Colin Munro Announced International Retirement

Retired; ಟಿ20 ವಿಶ್ವಕಪ್ ನಲ್ಲಿ ಸಿಗದ ಸ್ಥಾನ; ವೃತ್ತಿಜೀವನಕ್ಕೆ ತೆರೆಎಳೆದ ಕಿವೀಸ್ ಬ್ಯಾಟರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.