ವ್ಯಸನಮುಕ್ತ ಪ್ರತಿಜ್ಞೆಯಿಂದ ಭವಿಷ್ಯ ಸದೃಢ: ಡಾ| ಹೆಗ್ಗಡೆ
ಉಜಿರೆ: 153ನೇ ವಿಶೇಷ ಮದ್ಯವರ್ಜನ ಶಿಬಿರ
Team Udayavani, Feb 25, 2020, 12:37 AM IST
ಬೆಳ್ತಂಗಡಿ: ಮನುಷ್ಯ ಜೀವನದಲ್ಲಿ ಚಿಗುರುವ ಹೊಸ ಉತ್ಸಾಹ, ಸ್ಫೂರ್ತಿ, ಬದಲಾವಣೆಗಳು ಪರಿವರ್ತ ನೆಗೆ ನಾಂದಿಯಾಗಿವೆ. ಪರಿವರ್ತನೆ ಗಟ್ಟಿಯಾದರೆ ಯಾವ ಅಡೆತಡೆ ಇದ್ದರೂ ಜಯಿಸಲು ಸಾಧ್ಯ. ಮನಸ್ಸು ದುರ್ಬಲ ಗೊಳಿಸದೆ ವ್ಯಸನಮುಕ್ತ ಪ್ರತಿಜ್ಞೆಯಿಂದ ಸುಂದರ ಜೀವನ ನಿಮ್ಮದಾಗಲಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.ಉಜಿರೆಯ ಜಾಗೃತಿ ಸೌಧದಲ್ಲಿ ನಡೆದ 153ನೇ ವಿಶೇಷ ಮದ್ಯವರ್ಜನ ಶಿಬಿರದ 6ನೇ ದಿನದಂದು ಭಾಗವಹಿಸಿದ್ದ 63 ಜನರನ್ನು ಉದ್ದೇಶಿಸಿ ಅವರು ಮಾತನಾಡಿದರು.
ರಾಜೀವ ರೈ, ಶ್ರೀಕ್ಷೇತ್ರ ಧರ್ಮಸ್ಥಳದ ಶ್ರುತಾ ಉಪಸ್ಥಿತರಿದ್ದರು. ರಾಜ್ಯಾದ್ಯಂತ ಶಿಬಿರಕ್ಕೆ ಆಗಮಿಸಿದ ಶಿಬಿರಾರ್ಥಿಗಳಿಗೆ ಮನೋ-ದೈಹಿಕ ಚಿಕಿತ್ಸೆ, ಸಲಹೆ, ಯೋಗಾಭ್ಯಾಸ, ಭಜನೆ- ಸಾಂಸ್ಕೃತಿಕ ಕಾರ್ಯಕ್ರಮ, ವಿವಿಧ ವಿಷಯಾ ಧಾರಿತ ತರಬೇತಿ ನೀಡಲಾಯಿತು. ಶಿಬಿರಾರ್ಥಿಗಳ ಮನೆಯವರನ್ನು ಕರೆಸಿ ಕೌಟುಂಬಿಕ ಸಲಹೆಯೊಂದಿಗೆ ಸಾಮ ರಸ್ಯದಲ್ಲಿ ಬಾಳುವ ಪ್ರವಚನ ಜತೆಗೆ ಕುಟುಂಬ ದಿನವನ್ನು ಆಚರಿಸಲಾಯಿತು.
ಶ್ರೀ ಧ. ಮಂ. ವ್ಯಸನಮುಕ್ತಿ – ಸಂಶೋಧನ ಕೇಂದ್ರದ ನಿರ್ದೇಶಕ ವಿವೇಕ್ ವಿ. ಪಾಸ್, ಜನಾಧಿಕಾರಿ ಪಿ. ಚೆನ್ನಪ್ಪ ಗೌಡ, ಶಿಬಿರಾಧಿಕಾರಿ ವಿದ್ಯಾಧರ್, ಆರೋಗ್ಯ ಸಹಾಯಕಿ ಫಿಲೋಮಿನಾ ಡಿ’ಸೋಜಾ ಸಹಕರಿಸಿದರು. ಮುಂದಿನ ವಿಶೇಷ ಶಿಬಿರವು ಮಾ. 2ರಂದು ನಡೆಯಲಿದೆ ಎಂದು ವೇದಿಕೆಯ ಪ್ರಕಟನೆ ತಿಳಿಸಿದೆ.
ಸಮಸ್ಯೆ ಪರಿಹಾರ
ಕುಡಿತ, ಡ್ರಗ್ಸ್, ಅನಾಚಾರ, ವ್ಯಭಿಚಾರ ಇವೆಲ್ಲವೂ ಸಂತೋಷದ ಕಲ್ಪನೆಯಿಂದ ಬಳಸಿ ಮಾನಸಿಕ ಭ್ರಮೆಗೆ ಒಳಪಡಿಸುವ ವ್ಯಸನಗಳಾಗಿವೆ. ಇದನ್ನು ನಂಬಿ ಸಮಸ್ಯೆ, ಸೇಡು, ಸಾವು, ನೋವು, ಆತ್ಮಹತ್ಯೆ ಮುಂತಾದ ಸಮಸ್ಯೆಗಳ ಸರಮಾಲೆಯಲ್ಲಿ ಸಿಲುಕಿ ಒದ್ದಾಡುವವರೇ ಬಹಳಷ್ಟು ಮಂದಿ ಇದ್ದಾರೆ. ಇಂತಹವರ ಕಲ್ಯಾಣಕ್ಕಾಗಿ ಆತ್ಮ ನಿರೀಕ್ಷಣೆ ಮಾಡಿಕೊಂಡು, ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ರೂಪಿಸಿದ ಕಾರ್ಯಕ್ರಮವೇ ಮದ್ಯವರ್ಜನ ಶಿಬಿರ.
- ಡಾ| ಡಿ. ವೀರೇಂದ್ರ ಹೆಗ್ಗಡೆ, ಧರ್ಮಸ್ಥಳದ ಧರ್ಮಾಧಿಕಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು
Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
MUST WATCH
ಹೊಸ ಸೇರ್ಪಡೆ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್.ವರಲಕ್ಷ್ಮೀ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ