“ಮಠದ ಸಾಮಾಜಿಕ ಸೇವೆಯನ್ನು ಅಕ್ಷರ ರೂಪಕ್ಕಿಳಿಸಿದ ಕಾರ್ಯ ಸ್ಮರಣೀಯ’
Team Udayavani, Mar 24, 2020, 12:40 AM IST
ಸುಬ್ರಹ್ಮಣ್ಯ: ಸುಬ್ರಹ್ಮಣ್ಯ ಮಠಕ್ಕೆ ನೂರಾರು ವರ್ಷಗಳ ದೀರ್ಘ ಪರಂಪರೆಯಿದೆ. ಮಠವು ತನ್ನದೇ ಜವಾಬ್ದಾರಿಯೊಂದಿಗೆ ಪರಂಪರೆಯನ್ನು ಮುಂದುವರಿಸಿಕೊಂಡು ಬಂದಿದೆ. ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರಗಳ ಸೇವೆಯೇ ಮಠದ ಉದ್ದೇಶ. ಇದನ್ನು ಗುರುತಿಸಿ ಮಣಿಪಾಲದ “ತರಂಗ’ ವಾರಪತ್ರಿಕೆಯು ತನ್ನ ಓದುಗರಿಗಾಗಿ ಮಠದ ಸಮಾಜಮುಖೀ ಕಾರ್ಯಗಳ ವಿಶೇಷ ಸಂಚಿಕೆಯ ಕೊಡುಗೆ ನೀಡುತ್ತಿದೆ. ಮಠದ ಸಮಾಜಮುಖೀ ಸೇವೆಗಳನ್ನು ಅಕ್ಷರ ರೂಪಕ್ಕೆ ಇಳಿಸಿ ಹೊತ್ತಗೆ ರೂಪದಲ್ಲಿ ಹೊರತಂದ “ತರಂಗ’ ಬಳಗದ ಸೇವೆ ಸ್ಮರಣೀಯ ಎಂದು ಶ್ರೀ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರು ನುಡಿದರು.
ಅವರು ಶ್ರೀ ಸುಬ್ರಹ್ಮಣ್ಯ ಮಠದಲ್ಲಿ “ತರಂಗ’ ವಾರಪತ್ರಿಕೆ ಹೊರತಂದಿರುವ “ಸುಪ್ರಸನ್ನ’ ಪುಸ್ತಕವನ್ನು ಸೋಮವಾರ ಮಠದಲ್ಲಿ ಬಿಡುಗಡೆಗೊಳಿಸಿ ಮಾತನಾಡಿದರು. “ತರಂಗ’ ವಾರಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ ಡಾ| ಸಂಧ್ಯಾ ಎಸ್. ಪೈ ಅವರ ನೇತೃತ್ವದಲ್ಲಿ “ತರಂಗ’ ಬಳಗವು ಸಮಾಜಕ್ಕೆ ಉತ್ತಮ ಸೇವೆ ಹಾಗೂ ಕೊಡುಗೆಗಳನ್ನು ನೀಡುತ್ತ ಬಂದಿದೆ. ಅದರಂತೆ ಮಠದ ಸಾಮಾಜಿಕ ಕಾರ್ಯಗಳನ್ನು ಗುರುತಿಸಿ “ಸುಪ್ರಸನ್ನ’ ಎಂಬ ಸುಂದರ ಸಂಚಿಕೆಯೊಂದರ ಮೂಲಕ ಓದುಗರಿಗೆ ನೀಡುತ್ತಿರುವುದು ತುಂಬ ಸಂತಸ ತಂದಿದೆ. ಮಠದ ಸೇವೆ, ಸಾಧನೆಗಳು ಸಮಾಜಕ್ಕೆ ಪರಿಚಯಿಸಿರುವುದು ಉನ್ನತ ಪ್ರಯತ್ನವಾಗಿದೆ. ಅದಕ್ಕಾಗಿ ಬಳಗಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ದೇಶಕ್ಕೆ ಅಂಟಿದ ಸೋಂಕು ದೂರವಾಗಲಿ
ಕೊರೊನಾ ವೈರಸ್ನಿಂದ ಇಡೀ ಪ್ರಪಂಚ ತಲ್ಲಣ ಗೊಂಡಿದೆ. ಸಾಮೂಹಿಕ ಸಹಭಾಗಿತ್ವದ ಮೂಲಕ ಸೋಂಕನ್ನು ತಡೆಗಟ್ಟಲು ಎಲ್ಲರೂ ಸಹಕರಿಸಬೇಕು. ಇಂತಹ ಹೊತ್ತಿನಲ್ಲಿ ಸಾತ್ವಿಕ ಗುಣಗಳ ಜ್ಞಾನಕ್ಕೆ ಪೂರಕವಾದ ಮಠದ ಸಂಚಿಕೆಯೂ ಹೊರಬರುತ್ತಿದೆ. ಪುಸ್ತಕ ಓದುವುದರ ಮೂಲಕ ಧಾರ್ಮಿಕ ಪ್ರಜ್ಞೆ ವೃದ್ಧಿಯಾಗಲಿ, ದೇಶಕ್ಕೆ ಅಂಟಿದ ಸೋಂಕು ದೂರವಾಗಲಿ ಎಂದು ಶ್ರೀಪಾದರು ಆಶಯ ವ್ಯಕ್ತಪಡಿಸಿದರು. ಮಠದ ಆಡಳಿತಾಧಿಕಾರಿ ಸುದರ್ಶನ ಜೋಯಿಷ, ಉದ್ಯಮಿ, ಕಲಾವಿದ ಯಜ್ಞೆಶ್ ಆಚಾರ್ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು
LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ
Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ