ಪೊಲೀಸ್ ಸಹಾಯವಾಣಿಗೆ ಕುಡುಕರ ಕರೆಗಳು!
ಅನಗತ್ಯ ಕರೆ ಮಾಡಿ ತುರ್ತುಸೇವೆ ದುರ್ಬಳಕೆ, ಮಾ. 24ರಿಂದ ಏ.15ರವರೆಗೆ 1,03,986 ಕರೆಗಳು
Team Udayavani, Apr 18, 2020, 11:38 AM IST
ಸಾಂದರ್ಭಿಕ ಚಿತ್ರ
ಬೆಂಗಳೂರು: ಲಾಕ್ಡೌನ್ ಹಿನ್ನೆಲೆಯಲ್ಲಿ ನಗರ ಪೊಲೀಸ್ ಸಹಾಯವಾಣಿ “ನಮ್ಮ-100’ಕ್ಕೆ ಇದುವರೆಗೂ 1.03 ಲಕ್ಷಕ್ಕೂ ಅಧಿಕ ಕರೆಗಳು ಬಂದಿದ್ದು, ಈ ಪೈಕಿ ಕುಡುಕರ ಕರೆಗಳೇ ಅಧಿಕವಾಗಿವೆ. ಸಾಮಾನ್ಯವಾಗಿ ಗಲಾಟೆ- ಗದ್ದಲ, ಅಪರಾಧವಾದಾಗ ಕಂಟ್ರೋಲ್ ರೂಂಗೆ ಕರೆ ಮಾಡುತ್ತಿದ್ದವರು. ಆದರೆ, ಇದೀಗ ಕೊರೊನಾ ಸಂಬಂಧಿತ ಕರೆಗಳೇ ಬರುತ್ತಿವೆ. ಈ ಪೈಕಿ ಕುಡುಕರು ಕರೆ ಮಾಡಿ ದಯವಿಟ್ಟು ಮದ್ಯ ಕೊಡಿಸಿ ಇಲ್ಲವಾದರೆ ಬದುಕಲು ಸಾಧ್ಯವಾಗುತ್ತಿಲ್ಲ ಎಂದು ಗೋಳಾಡುತ್ತಿದ್ದರು ಎಂದು ಕಂಟ್ರೋಲ್ ರೂಮ್ ಸಿಬ್ಬಂದಿಯೊಬ್ಬರು ಹೇಳಿದರು.
ಹೆಲ್ಪ್ ಲೈನ್ ದುರ್ಬಳಕೆ: ತುರ್ತುಸೇವೆ ಒದಗಿಸುವ ಹೆಲ್ಪ್ ಲೈನ್ಗಳನ್ನು ಕೆಲವರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಅನಗತ್ಯವಾಗಿ ಕರೆ ಮಾಡಿ ಬಾರ್ ಯಾವಾಗ ಓಪನ್ ಮಾಡಿಸುತ್ತೀರಾ? ನನಗೆ ಈಗ ಡ್ರಿಂಕ್ಸ್ ಬೇಕು ಎಂದು ಕರೆ ಮಾಡಿ ಹೇಳುವವರ ಸಂಖ್ಯೆ ಹೆಚ್ಚಾಗುತ್ತಿವೆ. ಊಟದ ಬಳಿಕ ಬಾಳೆಹಣ್ಣು
ತಿನ್ನಬೇಕು. ಹೀಗಾಗಿ ಬಾಳೆಹಣ್ಣು ತೆಗೆದುಕೊಂಡು ಬರುವಿರಾ? ಹೀಗೆ ಅನಗತ್ಯವಲ್ಲದ ಸೇವೆಗಾಗಿ ಕರೆ ಮಾಡಿ ಕಿರಿಕಿರಿ ಉಂಟು ಮಾಡುತ್ತಿದ್ದಾರೆ ಸಿಬ್ಬಂದಿ
ವಿವರಿಸಿದರು.
ಕೋವಿಡ್ -19 ದೂರು: ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿರುವ ಕಂಟ್ರೋಲ್ ರೂಮ್ಗೆ ಪ್ರತಿದಿನ ಸುಮಾರು 4 ಸಾವಿರ ಕರೆಗಳು ಬರುತ್ತವೆ. ಈ ಪೈಕಿ
ಲಾಕ್ ಡೌನ್ ನಿಂದ ಆಗುತ್ತಿರುವ ತೊಂದರೆಗಳು ಕುರಿತು ದೂರುಗಳು ಬರುತ್ತಿವೆ. ಸಾಮಾನ್ಯ ದಿನ ಗಳಲ್ಲಿ ಕಾನೂನು ಸುವ್ಯವಸ್ಥೆ, ರಸ್ತೆ ಅಪಘಾತ ಸೇರಿದಂತೆ
ಅಪರಾಧ ಕುರಿತಂತೆ ಕರೆ ಮಾಡುತ್ತಿದ್ದರು. ಇದೀಗ ಸಾರ್ವಜನಿಕರು ಕೊರೊನಾದಿಂದಾಗಿ ಆಗಿರುವ ಸಮಸ್ಯೆಗಳ ಬಗ್ಗೆ ಕರೆ ಮಾಡಿ ದೂರು ನೀಡುತ್ತಿದ್ದಾರೆ.
ಕೊರೊನಾ ಸಂಬಂಧಿತ ಕರೆಗಳ ಜತೆ ಅಪರಾಧಕ್ಕೂ ಸಂಬಂಧಿಸಿದ ಕರೆಗಳು ಬರುತ್ತಿದ್ದು, ದಿನಕ್ಕೆ ಸುಮಾರು 4 ಸಾವಿರ ಕರೆಗಳು ಬರುತ್ತಿವೆ..ಕಳೆದ ತಿಂಗಳು
ಮಾರ್ಚ್ 24ರಿಂದ ಏ.15 ರವರೆಗೆ 1,03,986 ಕರೆಗಳು ಬಂದಿವೆ. ಈ ಪೈಕಿ 22,007 ಕರೆಗಳಿಗೆ ಸ್ಪಂದಿಸಲಾಗಿದೆ.
ಇನ್ನೂ ಸೈಬರ್ ಕ್ರೈಂ ಅಪರಾಧ, ಹಿರಿಯ ನಾಗರಿಕರಿಗೆ ಶೋಷಣೆ, ಪೆಂಕ್ಷನ್ ತೊಂದರೆ ಸೇರಿದಂತೆ ಹೀಗೆ ಎಲ್ಲಾ ರೀತಿಯ ಕರೆಗಳು ಬರಲಿವೆ. ತ್ವರಿತವಾಗಿ ಹೊಯ್ಸಳ ಸಿಬ್ಬಂದಿಗೆ ಮಾಹಿತಿ ನೀಡಿ ಸ್ಥಳಕ್ಕೆ ಹೋಗಿ ಸಮಸ್ಯೆ ಪರಿಹರಿಸಲು ನಮ್ಮ ತಂಡ ಪ್ರಯತ್ನಿಸುತ್ತಿದೆ ಎಂದು ನಗರ ಕಂಟ್ರೋಲ್ ರೂಮ್
ವಿಭಾಗದ ಡಿಸಿಪಿ ಇಶಾಪಂಥ್ ಮಾಹಿತಿ ನೀಡಿದರು.
714 ಮಂದಿಗೆ ಸೇವೆ
ಲಾಕ್ ಡೌನ್ ಘೋಷಣೆಯಿಂದ ಹಿರಿಯ ನಾಗರಿಕರು ಆಸ್ಪತ್ರೆಗೆ ಹೋಗಲಾರದಂತಹ ಪರಿಸ್ಥಿತಿ ಕಂಡು ಆಯುಕ್ತರಾದ ಭಾಸ್ಕರ್ ರಾವ್ ಅವರು ಏ.4 ರಿಂದ ಹಿರಿಯ ನಾಗರಿಕರು ತುರ್ತು ವೈದ್ಯಕೀಯ ಸೇವೆ ಹೊಯ್ಸಳ ಸೇವೆ ಪ್ರಾರಂಭಿಸಿದ್ದರು. ಇದರಂತೆ ಈವರೆಗೂ 714 ಮಂದಿ ಪೊಲೀಸ್ ಸೇವೆ ಪಡೆದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಬರ್ತ್ ಡೇ ಹೆಸರಲ್ಲಿ ಮಾಡೆಲ್, ಟೆಕ್ಕಿಗಳ ರೇವ್ ಪಾರ್ಟಿ; ಸಿಸಿಬಿ ಪೊಲೀಸರ ದಾಳಿ
Crime: ಜಗಳ ವೇಳೆ ತಳ್ಳಿದಾಗ ವಿದ್ಯುತ್ ತಂತಿ ಮೇಲೆ ಬಿದ್ದ ಯುವಕ ಸಾವು: 2 ಆರೋಪಿಗಳ ಬಂಧನ
ಇನ್ಸ್ಪೆಕ್ಟರ್ ಹೆಸರಲ್ಲಿ ಸುಲಿಗೆ: ಬೆಸ್ಕಾಂ ಎಂಜಿನಿಯರ್ ಸೆರೆ
Bengaluru: 14 ಲಕ್ಷ ರೂ. ಒಡವೆ ಕದಿದ್ದ ಬಾಲಕ ವಶಕ್ಕೆ
Bengaluru: ಬೆದರಿಸಲು ನೇಣಿಗೆ ಕೊರಳೊಡ್ಡಿದ ಪತಿ ದಿಢೀರ್ ಕುಣಿಕೆ ಬಿಗಿದು ಸಾವು
MUST WATCH
ಹೊಸ ಸೇರ್ಪಡೆ
CET Results: ದ್ವಿತೀಯ ಪಿಯುಸಿ 2ನೇ ಪರೀಕ್ಷೆ ಫಲಿತಾಂಶ ನಂತರವೇ ಸಿಇಟಿ ಫಲಿತಾಂಶ
Hubli: ರೌಡಿಶೀಟರ್ ಮೇಲೆ ಗ್ಯಾಂಗ್ ನಿಂದ ಹಲ್ಲೆ; ಪೊಲೀಸರಿಗೆ ಅವಾಜ್ ಹಾಕಿದ ರೌಡಿ
Davanagere ನೇಹಾ-ಅಂಜಲಿ ಹಂತಕರಿಗೆ ಗಲ್ಲು ಶಿಕ್ಷೆ ವಿಧಿಸಿ; ಮಡಿವಾಳ ಸಮಾಜದ ಪ್ರತಿಭಟನೆ
Iran President ಇಬ್ರಾಹಿಂ ರೈಸಿ ದುರ್ಮರಣ; ಅಧಿಕಾರ ಕೈಗೆತ್ತಿಕೊಂಡ ಮೊಹಮ್ಮದ್ ಮೊಖ್ಬರ್
Boys Drowned: ಬನಹಟ್ಟಿ ಕೆರೆಯಲ್ಲಿ ಮುಳುಗಿ ಇಬ್ಬರು ಬಾಲಕರು ಸಾವು