ಪ್ರೀತಿ ತಿರಸ್ಕರಿಸಿದ ಯುವತಿ ಕೊಂದು, ಭಗ್ನ ಪ್ರೇಮಿ ಆತ್ಮಹತ್ಯೆ
Team Udayavani, Nov 20, 2021, 1:49 PM IST
ಆನೇಕಲ್: ಪ್ರೇಮವನ್ನು ನಿರಾಕರಿಸಿದ್ದ ಯುವತಿ ಮನೆಗೆ ನುಗ್ಗಿದ ಪ್ರೇಮಿ ಯುವತಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದು, ನಂತರ ತಾನು ಚಾಕುವಿನಿಂದ ಕೈಕೊಯ್ದುಕೊಂಡು ಪ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿ ಕೊಂಡಿರುವ ಘಟನೆ ಆನೇಕಲ್ ತಾಲೂಕಿನ ಜಿಗಣಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದೆ.
ಸಿಂಚನಾ(18) ಕೊಲೆಯಾದ ಯುವತಿ. ಕಿಶೋರ್ ಕುಮಾರ್(22) ಕೊಲೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿರುವ ಯುವಕ ಎಂದು ತಿಳಿದು ಬಂದಿದೆ. ತಾಲೂಕಿನ ಜಿಗಣ ಸಮೀಪದ ನಿಸರ್ಗ ಬಡಾವಣೆಯಲ್ಲಿ ಆರು ತಿಂಗಳ ಹಿಂದೆ ನೂತನವಾಗಿ ಮನೆ ಕಟ್ಟಿ ವಾಸಕ್ಕೆ ಬಂದಿದ್ದ ಗಂಡ-ಹೆಂಡತಿ, ಮಗಳು ಮತ್ತು ಹೆಂಡತಿ ತಮ್ಮನ ಕುಟುಂಬ ಆ ಮನೆಯಲ್ಲಿ ವಾಸವಾಗಿತ್ತು. ಎಂದಿನಂತೆ ಎಲ್ಲರೂ ತಮ್ಮ ತಮ್ಮ ಕೆಲಸದ ನಿಮ್ಮಿತ್ತ ಹೋರ ಹೋಗಿದ್ದರು. ಈ ವೇಳೆ ಮನೆಯ ಮಗಳು ಮಾತ್ರ ಇರುತ್ತಿದ್ದಳು. ಕಳೆದ ಕೆಲ ದಿನಗಳಿಂದ ತನ್ನ ಬೆನ್ನು ಹತ್ತಿದ್ದ ಯುವಕ ಕಿಶೋರ್, ಒಮ್ಮೆಲೆ ಮನೆಗೆ ಬಂದು ಪ್ರೇಮ ನಿವೇದನೆ ಮಾಡಿಕೊಂಡಾಗಲೂ ಯುವತಿ ನಿರಾಕರಿಸಿದ್ದರಿಂದ ರೊಚ್ಚಿಗೆದ್ದು ಕೊಲೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಇದನ್ನೂ ಓದಿ:ಸುರತ್ಕಲ್ ಟೋಲ್ಗೇಟ್ : ಭರವಸೆಯ ಮಹಾಪೂರಗಳ ನಡುವೆ ಮತ್ತೆ ವಿಸ್ತರಣೆ ಭಾಗ್ಯ
ಪೊಲೀಸರಿಗೆ ದೂರು
ಮಾಗಡಿ ಮೂಲದ ದೊಡ್ಡಯ್ಯ ಮತ್ತು ಗಂಗಮ್ಮ ದಂಪತಿ ಪುತ್ರಿ ಸಿಂಚನಾ. ಮೃತ ಯುವಕ ರಾಮನಗರದ ಬಾನವಾಡಿ ಮೂಲದ ಹೇಮಾಪುರ ಕಾಲೋನಿ ನಿವಾಸಿ ಕಿಶೋರ್ ಕುಮಾರ್ ಎಂದು ಗುರುತಿಸಲಾಗಿದೆ. ಕೊಲೆ ಎಷ್ಟು ಸಮಯಕ್ಕೆ ಆಗಿದೆ ಎಂಬುದು ನಿಖರವಾಗಿಲ್ಲ. ಆದರೂ ಮಧ್ಯಾಹ್ನ ಎರಡು ಗಂಟೆ ಸುಮಾರಿಗೆ ಮೃತ ಸಿಂಚನಾ ತಂದೆ ಊಟಕ್ಕೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ಯುವಕ ಕಿಶೋರ್ ಯುವತಿಯನ್ನು ಚಾಕುನಿಂದ ಇರಿದು ಕೊಂದು ಬಳಿಕ ತಾನು ಚಾಕು ಇರಿದುಕೊಂಡು ಸೀರೆ ಕುತ್ತಿಗೆಗೆ ಬಿಗಿದುಕೊಂಡು ನೇಣಿಗೆ ಶರಣಾಗಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಇಬ್ಬರ ನಡುವೆ ಗಲಾಟೆ
ಇತ್ತೀಚೆಗೆ ತಾನೇ ದ್ವೀತಿಯ ಪಿಯುಸಿ ಮುಗಿಸಿದ್ದ ಮೃತ ಸಿಂಚನಾಳನ್ನು ಪ್ರಥಮ ವರ್ಷದ ಬಿ ಪಾರ್ಂಗೆ ಟಿ ಜಾನ್ ಕಾಲೇಜಿಗೆ ಅಡ್ಮಿಷನ್ ಮಾಡಲಾಗಿತ್ತು. ಸೋಮವಾರದಿಂದ ಕಾಲೇಜಿಗೆ ಹೋಗದೆ ಸಿಂಚನಾ ಮನೆಯಲ್ಲಿದ್ದಳು. ತಾಯಿ ಹರಪನಹಳ್ಳಿಯಲ್ಲಿರುವ ತಮ್ಮ ಹಾರ್ಡವೇರ್ ಅಂಗಡಿಗೆ ತೆರಳಿದ್ದರು. ಈ ನಡುವೆ ಮನೆಗೆ ಬಂದ ಕಿಶೋರ್ ಹಾಗೂ ಸಿಂಚನಾ ನಡುವೆ ಗಲಾಟೆ ನಡೆದಿದ್ದು, ಸಿಂಚನಾ ಮೊಬೈಲನ್ನು ಒಡೆದು ಹಾಕಿ ಬಳಿಕ ಮನೆಯಲ್ಲಿದ್ದ ಚಾಕುನಿಂದ ಎದೆ ಹಾಗೂ ಕುತ್ತಿಗೆ ಕೊಯ್ದು ಕೊಲೆ ಮಾಡಿ ಬಳಿಕ ಅದೇ ಚಾಕುನಿಂದ ತನ್ನ ಕೈ ಹಾಗೂ ಎದೆಗೆ ಚುಚ್ಚಿಕೊಂಡು ಮನೆಯಲ್ಲಿದ್ದ ಸೀರೆ ತಂದು ಕುತ್ತಿಗೆಗೆ ಬಿಗಿದು ತಾನೂ ಕೂಡ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ.