Pakistan: ನವಾಜ್ಗಿಲ್ಲ ವಾಪಸಾತಿ ಭಾಗ್ಯ!
Team Udayavani, Aug 12, 2023, 12:02 AM IST
ಇಸ್ಲಾಮಾಬಾದ್: ಸುಪ್ರೀಂ ಕೋರ್ಟ್ ತೀರ್ಪನ್ನು ಪ್ರಶ್ನಿಸಿ ಮರು ಪರಿಶೀಲನೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡುತ್ತಿದ್ದ “ಸುಪ್ರೀಂ ಕೋರ್ಟ್ ಕಾಯ್ದೆ-2023’ನ್ನು ಪಾಕಿಸ್ಥಾನ ಸರ್ವೋಚ್ಚ ನ್ಯಾಯಾಲಯವು ಶುಕ್ರವಾರ ಅಸಿಂಧು ಎಂದು ಘೋಷಿಸಿದೆ.
ಶೆಹಬಾಜ್ ಶರೀಫ್ ನೇತೃತ್ವದ ಪಾಕ್ ಸರಕಾರ ಈ ವರ್ಷ ಮೇಯಲ್ಲಿ ಸುಪ್ರೀಂ ಕೋರ್ಟ್ ಆದೇಶ ಪ್ರಶ್ನಿಸಿ ಮರು ಪರಿಶೀಲನೆಗೆ ಅವಕಾಶ ನೀಡುವ ಈ ಕಾನೂನು ರೂಪಿಸಿತ್ತು. ಆದರೆ ಈ ಕಾನೂನನ್ನೇ ಅಸಿಂಧುವೆಂದು ಪಾಕ್ನ ಸುಪ್ರೀಂ ಕೋರ್ಟ್ ಘೋಷಿಸಿದ್ದರಿಂದ ನವಾಜ್ಗೆ ಪಾಕ್ ರಾಜಕೀಯಕ್ಕೆ ಮರಳುವ ಭಾಗ್ಯ ಇಲ್ಲವಾಗಿದೆ.