ಯಮ ನಿಯಮಗಳ ಪಾಲನೆ : ಯೋಗದ ಮೂಲ ಸಿದ್ಧಾಂತ ಅಳವಡಿಸಿಕೊಳ್ಳಿ


Team Udayavani, Jun 18, 2021, 6:30 AM IST

ಯಮ ನಿಯಮಗಳ ಪಾಲನೆ : ಯೋಗದ ಮೂಲ ಸಿದ್ಧಾಂತ ಅಳವಡಿಸಿಕೊಳ್ಳಿ

ಯೋಗ ಪ್ರಕ್ರಿಯೆಗಳು ಬಾಹ್ಯ ಪ್ರಪಂಚದ ಶುದ್ಧೀಕರಣದ ಹೊರತಾಗಿ ದೈಹಿಕ, ಆಂತರಿಕ ಶುದ್ಧೀಕರಣದ ಮೂಲಕ ಉನ್ನತ ಮಟ್ಟದ ಮನಃಸ್ಥಿತಿಯನ್ನು ಪಡೆಯಲು ಇರುವ ಒಂದು ವಿಧಾನ. ಇದರಲ್ಲಿ ಯಮ ನಿಯಮಗಳ ಪಾಲನೆ ಅತ್ಯಗತ್ಯ. ಇವು ನಮ್ಮ ದಿನಚರಿಯ ಭಾಗವಾದಾಗ ಆರೋಗ್ಯ ಪೂರ್ಣ ಮತ್ತು ಚೈತನ್ಯದಾಯಕ ಜೀವನ ನಮ್ಮದಾಗುತ್ತದೆ. ಅದರಲ್ಲೂ ಮುಖ್ಯವಾಗಿ ಶೌಚ, ಆಹಾರಕ್ರಮ ಮತ್ತು ಪ್ರಾಣವಾಯು.

ಶೌಚ: ಶೌಚದ ಮುಖ್ಯ ಉದ್ದೇಶವೇ ಇನ್ನೊಬ್ಬರ ಸಂಸರ್ಗವನ್ನು ಮಾಡದೇ ಇರುವುದು. ಅಂದರೆ ಸಾಮಾಜಿಕ ಅಂತರ ಪಾಲನೆ ಮಾಡುವುದು. ಇದರಿಂದ ಆರೋಗ್ಯ ರಕ್ಷಣೆ ಸಾಧ್ಯ. ಶುಚಿತ್ವ ಉಳಿಯುತ್ತದೆ.

ತೀರಾ ಆತ್ಮೀಯರು, ಸಂಬಂಧಿಕರ ಹೊರ ತಾಗಿ ನಮ್ಮ ಪರಂಪರೆಯಲ್ಲಿ ಎಲ್ಲೂ ಮೈಮುಟ್ಟಿ ಮಾತನಾಡುವ ಕ್ರಮ ಇಲ್ಲ. ಆದರೆ ಕಾಲಕ್ರಮೇಣ ಇಂಥ ವರ್ತನೆ ಹೆಚ್ಚಾಗಿದೆ. ಇದನ್ನು ನಾವು ಕಡಿಮೆ ಮಾಡಬೇಕು. ಅಗತ್ಯವಿಲ್ಲದೆ ಯಾರನ್ನೂ ಮುಟ್ಟಬಾರದು. ಹಾಗೆಯೇ ಕೈ, ಬಾಯಿ, ಮುಖ, ದೇಹವನ್ನು ದಿನದಲ್ಲಿ ಕನಿಷ್ಠ ಮೂರು ಬಾರಿ ಇಲ್ಲವಾದರೆ ಎರಡು ಬಾರಿಯಾದರೂ ತೊಳೆಯಬೇಕು. ಹಾಗಾಗಿ ಶೌಚ ಎನ್ನುವುದು ಕೊರೊನಾ ಬರುವುದಕ್ಕಿಂತ ಮುಂಚೆಯೂ ಬಂದ ಅನಂತರವೂ ಗುಣಮುಖರಾದ ಮೇಲೂ ಮಾಡಲೇಬೇಕಿರುವ ಕಾರ್ಯ.

ಆಹಾರ ಕ್ರಮಗಳು: ಬಹುತೇಕ ಸೋಂಕುಗಳು ಸಸ್ಯಜನ್ಯವಾಗಿರುವುದು ಕಡಿಮೆ. ಈ ಕಾರಣದಿಂದಾಗಿಯೇ ಮಾಂಸಾಹಾರಕ್ಕಿಂತ ಸಸ್ಯಾಹಾರ ಉತ್ತಮ ಎನ್ನುವುದು ಈಗಾಗಲೇ ಸಾಬೀತಾಗಿದೆ. ಹೀಗಾಗಿ ನಾವು ಆದಷ್ಟು ಸಸ್ಯಾಹಾರಕ್ಕೆ ಆದತ್ಯೆ ಕೊಡುವುದು ಒಳ್ಳೆಯದು. ಅಲ್ಲದೇ ಆಹಾರ ತಯಾರಿ, ಸೇವನೆಯ ವೇಳೆಯಲ್ಲಿ ಶುದ್ಧತೆಯನ್ನು ಪಾಲಿಸಬೇಕು. ಎಂಜಲು, ಮುಸುರೆಯಿಂದ ಸಾಂಕ್ರಾಮಿಕ ರೋಗಗಳು ಬರುವ ಅಪಾಯ ಅಧಿಕವಾಗಿರುತ್ತದೆ. ಇಲ್ಲೂ ಶುಚಿತ್ವವೇ ಪ್ರಾಧಾನ್ಯ.

ಪ್ರಾಣವಾಯು: ದೇಹದಲ್ಲಿ ಪ್ರಾಣವಾಯು ಅಥವಾ ಆಕ್ಸಿಜನ್‌ ಎಲ್ಲ ಅಂಗಾಂಗ ಗಳಿಗೂ ಸರಿಯಾಗಿ ಪೂರೈಕೆಯಾಗುವ ರೀತಿಯಲ್ಲಿ ನೋಡಿಕೊಳ್ಳುವುದು ಮುಖ್ಯ. ಇದಕ್ಕಾಗಿ ಸ್ಥೂಲವಾಗಿ ಮಾಡಬೇಕಿರುವುದು ಬೇರೆಬೇರೆ ಕೆಲಸಗಳು. ಇದನ್ನು ಸ್ವಲ್ಪ ಸೂಕ್ಷ್ಮವಾಗಿ ಹೇಳುವುದಿದ್ದರೆ ಆಸನಗಳು, ಪ್ರಾಣಾಯಾಮಗಳು ಈ ದಿಸೆಯಲ್ಲಿ ಬಲು ಉಪಯುಕ್ತ. ಕೊರೊನಾ ಮುಖ್ಯವಾಗಿ ಕಾಣಿಸಿಕೊಳ್ಳುವುದು ಮೂಗು, ಗಂಟಲು, ಶ್ವಾಸನಾಳ, ಶ್ವಾಸಕೋಶದಲ್ಲಿ. ಇಲ್ಲಿ ಶ್ವಾಸೋಚಾÌಸ ಸರಿಯಾಗಿದ್ದರೆ ವೈರಾಣುವಿಗೆ ಅಲ್ಲಿ ಹೆಚ್ಚು ಹೊತ್ತು ನಿಲ್ಲಲು ಸಾಧ್ಯವಿಲ್ಲ. ಇದಕ್ಕೆ ಪೂರಕವಾಗಿ ನಮ್ಮ ದೇಹದಲ್ಲಿ ಆಕ್ಸಿಜನ್‌ ಬಿಡುಗಡೆ ಸರಿಯಾಗಿರಬೇಕು. ಅದಕ್ಕಾಗಿ ಹೃದಯ, ಲಿವರ್‌ ಸರಿಯಾಗಿರಬೇಕು. ಹೀಗಾಗಿ ಇವೆರಡಕ್ಕೂ ಪೂರಕ ವಾದ ಆಹಾರ, ಆಸನಗಳನ್ನು ಪಾಲಿಸುವುದು ಅಗತ್ಯ. ಕೊರೊನಾದ ಇನ್ನೆಷ್ಟು ಅಲೆಗಳು ಬರು ತ್ತವೆ ಎಂಬುದು ತಿಳಿದಿಲ್ಲ. ಹೀಗಾಗಿ ಆರೋಗ್ಯವನ್ನು ಕಾಪಾಡುವುದು ಅತ್ಯಗತ್ಯ.

ಇದಕ್ಕಾಗಿ ಯೋಗಾಭ್ಯಾಸ ತುಂಬಾ ಅನುಕೂಲ.
ಪ್ರಾಣಾಯಾಮ, ಆಸನಗಳನ್ನು ಒಂದೇ ಬಾರಿ ಮಾಡಲು ಸಾಧ್ಯವಿಲ್ಲ. ಪ್ರತಿಯೊಬ್ಬರ ಸಾಮರ್ಥ್ಯ ಭಿನ್ನವಾಗಿರುತ್ತದೆ. ಹಂತಹಂತವಾಗಿ ಎಷ್ಟು ಮಾಡ ಬೇಕು ಎಂಬುದನ್ನು ತಜ್ಞರ ಸಲಹೆ ಪಡೆದು ಮಾಡ ಬೇಕು. ಯೋಗದ ಮೂಲ ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಕೊರೊನಾ ಮಾತ್ರವಲ್ಲ ಯಾವುದೇ ಸಾಂಕ್ರಾಮಿಕ ಕಾಯಿಲೆಗಳು ಬರದಂತೆ ತಡೆಯಬಹುದು.

ವಿವಿಧ ಆಸನಗಳು
ಟಿವಿ, ಲ್ಯಾಪ್‌ಟಾಪ್‌, ಮೊಬೈಲ್‌ನ ಬಳಕೆ ಕಡಿಮೆ ಮಾಡಬೇಕು. ಉಸಿರಾಟ ಪ್ರಕ್ರಿಯೆಗೆ ಪೂರಕವಾಗುವಂಥ ಚಲನವಲನಗಳನ್ನು ನಮ್ಮದಾಗಿಸಿಕೊಳ್ಳಬೇಕು. ಒಂದೇ ಕಡೆ ಗಂಟೆಗಟ್ಟಲೆ ಕುಳಿತಿರುವುದು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಕೊರೊನಾ ಮುಖ್ಯವಾಗಿ ಶ್ವಾಸಕೋಶದ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ನಾವು ಶ್ವಾಸಕೋಶವನ್ನು ಸುಸ್ಥಿತಿಯಲ್ಲಿಟ್ಟುಕೊಂಡರೆ ಇದರ ಅಪಾಯ ಖಂಡಿತಾ ಕಡಿಮೆಯಾಗುವುದು. ಇದನ್ನು ಸುಸ್ಥಿತಿಯಲ್ಲಿಡಲು ಅದಕ್ಕೆ ಅನುಕೂಲವಾದ ಸುಲಭವಾದ ಆಸನಗಳು ಮುಖ್ಯವಾಗಿ ವೃಕ್ಷಾಸನ, ತ್ರಿಕೋನಾಸನ, ಪಾರ್ಶ್ವಕೋನಾಸನ, ಪೂರ್ವತ್ಥಾನಾಸಾನ, ಭುಜಂಗಾಸನ, ವಿಪರೀತ ಕರಣಿ ಮುದ್ರಾ ಮಾಡುವುದು ಉತ್ತಮ. ಹಾಗೆಯೇ ಎಲ್ಲ ಪ್ರಾಣಾಯಾಮಗಳು ಕೂಡ ಶ್ವಾಸಕೋಶವನ್ನು ವಿಕಾಸಮಾಡುತ್ತದೆ. ಪರಿಣಾಮ ಕೊರೊನಾದಿಂದಾಗುವ ಅಪಾಯ ಕಡಿಮೆಯಾಗುವುದು. ಮುಂಚಿತವಾಗಿಯೇ ಅಭ್ಯಾಸಮಾಡುತ್ತಿದ್ದರೆ ಉತ್ತಮ. ಕೊರೊನಾ ಬಂದ ಮೇಲೆ, ಅದರಿಂದ ಗುಣಮುಖ ರಾದ ಮೇಲೆ ಯೋಗ ತಜ್ಞರ ಸಲಹೆ ಪಡೆದು ಈ ಆಸನಗಳನ್ನು ಮಾಡುವುದು ಮತ್ತು ಅಭ್ಯಸಿಸುವುದು ಉತ್ತಮ.

– ಡಾ| ಕೃಷ್ಣ ಭಟ್‌, ಯೋಗ ತಜ್ಞರು, ಮಂಗಳೂರು

ಟಾಪ್ ನ್ಯೂಸ್

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

ಗದಗ: ತೋಟದಾರ್ಯ ಮಠ ಅನ್ನ-ಅಕ್ಷರ ದಾಸೋಹಕ್ಕೆ ಪ್ರಸಿದ್ಧ

ಗದಗ: ತೋಟದಾರ್ಯ ಮಠ ಅನ್ನ-ಅಕ್ಷರ ದಾಸೋಹಕ್ಕೆ ಪ್ರಸಿದ್ಧ

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.