ಮತ್ತೆ ಹೊಸಬರ ಜೊತೆ ಮಹೇಶ್‌ ಬಾಬು


Team Udayavani, Oct 1, 2018, 11:50 AM IST

mahesh-babu.jpg

ನಿರ್ದೇಶಕ ಮಹೇಶ್‌ ಬಾಬು ವಿಚಾರದಲ್ಲಿ ಕನ್ನಡ ಚಿತ್ರರಂಗದಲ್ಲೊಂದು ಮಾತಿದೆ. ಅದೇನೆಂದರೆ ಮಹೇಶ್‌ ಬಾಬು ಪರಿಚಯಿಸಿದ ಹೊಸಬರು ಮುಂದೆ ಚಿತ್ರರಂಗದಲ್ಲಿ ನೆಲೆ ನಿಲ್ಲುತ್ತಾರೆಂದು. ಅದರಲ್ಲೂ ನಾಯಕಿಯರ ವಿಷಯದಲ್ಲಿ ಮಹೇಶ್‌ ಬಾಬು ಲಕ್ಕಿ ಹ್ಯಾಂಡ್‌ ಎಂದು. ಅದಕ್ಕೆ ಸಾಕ್ಷಿ ಎಂಬಂತೆ ಮಹೇಶ್‌ ಬಾಬು ಚಿತ್ರದ ಮೂಲಕ ಲಾಂಚ್‌ ಆದ ಅನೇಕ ನಟಿಯರು ಇವತ್ತು ಬಿಝಿಯಾಗಿದ್ದಾರೆ. ಈಗ ಯಾಕೆ ಈ ವಿಷಯ ಎಂದರೆ ಮಹೇಶ್‌ ಬಾಬು ಮತ್ತೆ ಹೊಸಬರತ್ತ ಮುಖ ಮಾಡಿದ್ದಾರೆ.

ಸದ್ಯದಲ್ಲೇ ಹೊಸಬರೇ ತುಂಬಿಕೊಂಡಿರುವ ಅವರ ಚಿತ್ರ ಸೆಟ್ಟೇರಲಿದೆ. ಈ ಬಾರಿ ಅವರು ಪರಿಚಯಿಸುವ ನಾಯಕ-ನಾಯಕಿಗೆ ಯಾವ ರೀತಿ ಅದೃಷ್ಟ ಕೈ ಹಿಡಿಯುತ್ತೋ ನೋಡಬೇಕು. “ಕ್ರೇಜಿಬಾಯ್‌’ ಚಿತ್ರದ ಮೂಲಕ ದಿಲೀಪ್‌ ಹಾಗೂ ಆಶಿಕಾ ಅವರನ್ನು ಮಹೇಶ್‌ ಬಾಬು ಪರಿಚಯಿಸಿದ್ದರು. ಆ ನಂತರ ಚೇತನ್‌ ಜೊತೆಗೆ “ಅತಿರಥ’ ಚಿತ್ರದ ಮಾಡಿದ ಮಹೇಶ್‌ ಬಾಬು ಈಗ ಮತ್ತೂಂದು ಹೊಸಬರ ಸಿನಿಮಾಕ್ಕೆ ಅಣಿಯಾಗಿದ್ದಾರೆ.

ಸುಘೋಷ್‌ ಎಂಬ ಹೊಸ ಪ್ರತಿಭೆ ಮಹೇಶ್‌ ಬಾಬು ಚಿತ್ರದ ಮೂಲಕ ಹೀರೋ ಆಗುತ್ತಿದ್ದಾರೆ. ಸುಘೋಷ್‌ ಈಗಾಗಲೇ ಚಿತ್ರಕ್ಕೆ ಬೇಕಾದ ತಯಾರಿ ಮಾಡಿಕೊಂಡಿದ್ದಾರೆ. ಈ ಬಾರಿಯೂ ಮಹೇಶ್‌ ಬಾಬು ಒಂದು ಔಟ್‌ ಅಂಡ್‌ ಔಟ್‌ ಲವ್‌ಸ್ಟೋರಿ ಹೇಳಲು ಮುಂದಾಗಿದ್ದಾರೆ. ಅವರದೇ ಮಾತಲ್ಲಿ ಹೇಳುವುದಾದರೆ, ರೆಗ್ಯುಲರ್‌ ಪ್ಯಾಟರ್ನ್ ಬಿಟ್ಟ ಲವ್‌ಸ್ಟೋರಿ. ಇನ್ನು, ಕಥೆ, ಪಾತ್ರಕ್ಕೆ ಹೊಂದಿಕೆಯಾಗುವ ನಾಯಕಿಯ ಹುಡುಕಾಟದಲ್ಲಿ ಮಹೇಶ್‌ ಬಾಬು ಬಿಝಿ.

ಈಗಾಗಲೇ ಒಂದಷ್ಟು ನಟಿಯರ ಜೊತೆ ಮಾತುಕತೆಯಾಗಿದ್ದು, ಸದ್ಯದಲ್ಲೇ ಅಂತಿಮವಾಗಲಿದ್ದಾರೆ. ಉಳಿದಂತೆ ಚಿತ್ರಕ್ಕೆ ಶೀರ್ಷಿಕೆ, ತಾರಾಗಣ, ತಾಂತ್ರಿಕ ವರ್ಗ ಇನ್ನಷ್ಟೇ ಅಂತಿಮವಾಗಬೇಕಿದೆ. ಈ ನಡುವೆಯೇ ಮಹೇಶ್‌ ಬಾಬುಗೆ “ಅತಿರಥ’ ಚಿತ್ರ ಖುಷಿಕೊಟ್ಟಿದೆ. ಕನ್ನಡದಲ್ಲಿ ದೊಡ್ಡ ಮಟ್ಟದಲ್ಲಿ ಆ ಚಿತ್ರ ಸದ್ದು ಮಾಡದೇ ಹೋದರೂ ಹಿಂದಿ ಡಬ್ಬಿಂಗ್‌ನಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆಯಂತೆ. ಟ್ರೆಂಡಿಂಗ್‌ ಓಟದಲ್ಲಿ “ಅತಿರಥ’ನ ಓಟ ಜೋರಾಗಿದ್ದು, ಮಹೇಶ್‌ ಬಾಬು ಖುಷಿಯಾಗಿದ್ದಾರೆ. 

ಟಾಪ್ ನ್ಯೂಸ್

1-wewqeqeewq

ICMR ಸಲಹೆ; ಸಕ್ಕರೆ, ಉಪ್ಪು ಬಳಕೆಯಲ್ಲಿ ನಿಯಂತ್ರಣ ಇರಲಿ

covid

Covishield ಅಡ್ಡ ಪರಿಣಾಮ ಭಾರತದಲ್ಲಿ ಅತ್ಯಲ್ಪ: ಹಿರಿಯ ಅಧಿಕಾರಿ

kejriwal 2

Supreme Courtನಲ್ಲಿ ಕೇಜ್ರಿ ಜಾಮೀನು ಅರ್ಜಿ; ಚುನಾವಣ ಪ್ರಚಾರವು ಮೂಲಭೂತ ಹಕ್ಕಲ್ಲ: ED

love birds

Married ಮುಸ್ಲಿಮರಿಗೆ ಲಿವ್‌ ಇನ್‌ ಸಂಬಂಧ ಹಕ್ಕು ಇಲ್ಲ: ಹೈಕೋರ್ಟ್‌

1-w-eeq

Congress ಮತ್ತೊಬ್ಬ ನಾಯಕನ ವಿವಾದ;ಭಾರತೀಯರು ನಿಗ್ರೋ!

1-wewewe

Kerala ದೇಗುಲಗಳಲ್ಲಿ ವಿಷಕಾರಿ ಅರಳಿ ಹೂಗಳ ಬಳಕೆಗೆ ನಿರ್ಬಂಧ

Revanna 2

Parappana Agrahara Central Prison; ಸಾಮಾನ್ಯರಂತೆ ದಿನ ಕಳೆದ ರೇವಣ್ಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

the suit kannada movie

Sandalwood; ಬದುಕು – ಭಾವನೆಗಳ ಸಂಗಮ ‘ದಿ ಸೂಟ್’

Jyothi Rai: ನಟಿ ಜ್ಯೋತಿ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ವೈರಲ್; ಮೌನ ಮುರಿದ ನಟಿ

Jyothi Rai: ನಟಿ ಜ್ಯೋತಿ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ವೈರಲ್; ಮೌನ ಮುರಿದ ನಟಿ

Kannada Cinema; ರಾಜಕಾರಣದ ಸುತ್ತ ‘ಭಗೀರಥ’; ಟೀಸರ್ ರಿಲೀಸ್

Kannada Cinema; ರಾಜಕಾರಣದ ಸುತ್ತ ‘ಭಗೀರಥ’; ಟೀಸರ್ ರಿಲೀಸ್

Ravichandran ಡ್ರೀಮ್‌ ಪ್ರಾಜೆಕ್ಟ್ ಪ್ರೇಮಲೋಕ-2ಗೆ ತಮಿಳಿನ ತೇಜು ಅಶ್ವಿ‌ನಿ?

Ravichandran ಡ್ರೀಮ್‌ ಪ್ರಾಜೆಕ್ಟ್ ಪ್ರೇಮಲೋಕ-2ಗೆ ತಮಿಳಿನ ತೇಜು ಅಶ್ವಿ‌ನಿ?

ಎಲ್ಲಾ ಶೆಡ್ಯೂಲ್ ಮುಗಿದ ಬಳಿಕವಷ್ಟೇ ʼ‌KGF -3ʼ.. ಬಿಗ್‌ ಅಪ್ಡೇಟ್ ಕೊಟ್ಟ ನಿರ್ದೇಶಕ ನೀಲ್

ಎಲ್ಲಾ ಶೆಡ್ಯೂಲ್ ಮುಗಿದ ಬಳಿಕವಷ್ಟೇ ʼ‌KGF -3ʼ.. ಬಿಗ್‌ ಅಪ್ಡೇಟ್ ಕೊಟ್ಟ ನಿರ್ದೇಶಕ ನೀಲ್

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

1-wewqeqeewq

ICMR ಸಲಹೆ; ಸಕ್ಕರೆ, ಉಪ್ಪು ಬಳಕೆಯಲ್ಲಿ ನಿಯಂತ್ರಣ ಇರಲಿ

Udupi: ವಿಡಿಯೋ ಕರೆ ರೆಕಾರ್ಡ್‌ ಮಾಡಿ ಹಣಕ್ಕೆ ಬೇಡಿಕೆ

Udupi: ವಿಡಿಯೋ ಕರೆ ರೆಕಾರ್ಡ್‌ ಮಾಡಿ ಹಣಕ್ಕೆ ಬೇಡಿಕೆ

covid

Covishield ಅಡ್ಡ ಪರಿಣಾಮ ಭಾರತದಲ್ಲಿ ಅತ್ಯಲ್ಪ: ಹಿರಿಯ ಅಧಿಕಾರಿ

Fraud: ಅಪರಿಚಿತ ವ್ಯಕ್ತಿಯಿಂದ 2.41 ಲಕ್ಷ ರೂ. ವಂಚನೆ

Fraud: ಅಪರಿಚಿತ ವ್ಯಕ್ತಿಯಿಂದ 2.41 ಲಕ್ಷ ರೂ. ವಂಚನೆ

kejriwal 2

Supreme Courtನಲ್ಲಿ ಕೇಜ್ರಿ ಜಾಮೀನು ಅರ್ಜಿ; ಚುನಾವಣ ಪ್ರಚಾರವು ಮೂಲಭೂತ ಹಕ್ಕಲ್ಲ: ED

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.