ತೆರಿಗೆ ಸಂಗ್ರಹ ಹೆಚ್ಚಳ ಜಿಎಸ್‌ಟಿ ಇನ್ನಷ್ಟು ಸುಧಾರಿಸಲಿ


Team Udayavani, May 3, 2018, 6:00 AM IST

3.jpg

ಒಂದು ದೇಶ ಒಂದು ತೆರಿಗೆ ಎಂಬ ಧ್ಯೇಯದೊಂದಿಗೆ ಜಾರಿಯಾಗಿರುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಏಪ್ರಿಲ್‌ನಲ್ಲಿ ತೆರಿಗೆ ಸಂಗ್ರಹದಲ್ಲಿ ಹೊಸ ಮೈಲುಗಲ್ಲು ನೆಟ್ಟಿದೆ. ಸಿಜಿಎಸ್‌ಟಿ, ಎಸ್‌ಜಿಎಸ್‌ಟಿ, ಐಜಿಎಸ್‌ಟಿ ಮತ್ತು ಸೆಸ್‌ ಸೇರಿ ಒಟ್ಟು 1,03,458 ಕೋ.ರೂ. ತೆರಿಗೆ ಸಂಗ್ರಹವಾಗಿದೆ. ಇದು ಸಂಕೀರ್ಣ ಆರ್ಥಿಕ ಪದ್ಧತಿಯಿರುವ ದೇಶದಲ್ಲಿ ಜಿಎಸ್‌ಟಿ ಯಶಸ್ಸಾಗುವುದಿಲ್ಲ ಎಂಬ ಟೀಕೆಗೆ ಸಿಕ್ಕಿದ ಉತ್ತರ. ಯಾವುದೇ ಹೊಸ ವ್ಯವಸ್ಥೆಯನ್ನು ಆರಂಭಿಸುವಾಗ ಅದಕ್ಕೆ ಅಭಿಪ್ರಾಯ ಬೇಧ ಮತ್ತು ರಾಜಕೀಯ ವಿರೋಧಗಳು ವ್ಯಕ್ತವಾಗುವುದು, ಹೊಂದಿಕೊಳ್ಳಲು ಕಷ್ಟ ಆಗುವುದು ಸಾಮಾನ್ಯ. ಜಿಎಸ್‌ಟಿ ವಿಚಾರದಲ್ಲೂ ಹೀಗೆ ಆಗಿತ್ತು. ಆದರೆ ಜಾರಿಗೆ ತಂದು ವರ್ಷ ತುಂಬುವ ಮೊದಲೇ ಶೇ. 90ರಷ್ಟು ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಸರಕಾರ ಸಫ‌ಲವಾಗಿದೆ. ಈಗ ತೆರಿಗೆ ಸಂಗ್ರಹ ತಿಂಗಳಿಂದ ತಿಂಗಳಿಗೆ ಹೆಚ್ಚುತ್ತಾ ಹೋಗುತ್ತಿರುವುದು ಜಿಎಸ್‌ಟಿ ನಮ್ಮ ಆರ್ಥಿಕತೆಗೆ ಹೊಂದಿಕೊಳ್ಳದು ಎಂಬ ವಾದವನ್ನು ಹುಸಿ ಮಾಡಿದೆ. 

ಜಿಎಸ್‌ಟಿ ಜಾರಿಗೆ ಬಂದ ಬಳಿಕ ನಿಧಾನವಾಗಿಯಾದರೂ ದೇಶದಲ್ಲಿ ತೆರಿಗೆ ಶಿಸ್ತು ಮೂಡುತ್ತಿದೆ ಎನ್ನುವುದು ಆಶಾದಾಯಕ ಬೆಳವಣಿಗೆ. ತೆರಿಗೆ ಪಾವತಿಸುತ್ತಿರುವವರ ಸಂಖ್ಯೆ ಹೆಚ್ಚಿರುವುದು ಮಾತ್ರವಲ್ಲದೆ ತೆರಿಗೆ ವಂಚನೆ ಪ್ರಮಾಣವೂ ಕಡಿಮೆಯಾಗುತ್ತಿರುವುದು ಇದಕ್ಕೆ ಸಾಕ್ಷಿ. ಅಭಿವೃದ್ಧಿ ಯೋಜನೆಗಳು ದಕ್ಷವಾಗಿ ನಡೆಯಬೇಕಾದರೆ, ಆಡಳಿತ ವ್ಯವಸ್ಥೆ ಸುಸೂತ್ರವಾಗಿ ಸಾಗಬೇಕಾದರೆ ಸಮರ್ಪಕವಾಗಿ ತೆರಿಗೆ ಸಂಗ್ರಹ ಆಗುವುದು ಅನಿವಾರ್ಯ. ತೆರಿಗೆ ವಸೂಲಿಯಲ್ಲಿ ಶಿಸ್ತನ್ನು ಕಾಯ್ದು ಕೊಂಡಿರುವ ದೇಶಗಳು ಅಭಿವೃದ್ಧಿಯಲ್ಲಿ ಮುಂದುವರಿದಿರು ವುದನ್ನು ಕಾಣಬಹುದು. ಆದರೆ ನಮ್ಮಲ್ಲಿ ತೆರಿಗೆ ಪಾವತಿಸುವುದು ಎಂದರೆ ನಾವು ದುಡಿದು ಸಂಪಾದಿಸಿದ ಹಣವನ್ನು ಸರಕಾರಕ್ಕೆ ಪುಕ್ಕಟೆ ಕೊಡುವುದು ಎಂಬ ಮನೋಭಾವ ಇದೆ. ಅದರಲ್ಲೂ ದೊಡ್ಡ ಕುಳಗಳು ತೆರಿಗೆ ತಪ್ಪಿಸಲು ನಾನಾ ದಾರಿ ಹುಡುಕುವುದರಲ್ಲಿ ನಿಷ್ಣಾತವಾಗಿವೆ. ಇದೀಗ ಜಿಎಸ್‌ಟಿ ಇಂದಾಗಿ ತೆರಿಗೆ ವಂಚಿಸುವ ಅವಕಾಶಗಳು ಕಡಿಮೆಯಿರುವುದರಿಂದ ಆರ್ಥಿಕ ಶಿಸ್ತು ಕಂಡುಬರುತ್ತಿದೆ. 

ರಾಜ್ಯಗಳ ನಡುವೆ ಏ.1ರಿಂದ ಜಾರಿಗೆ ಬಂದಿರುವ ಇ-ವೇ ಬಿಲ್‌ ವ್ಯವಸ್ಥೆ ಜಾರಿಗೆ ತಂದಿರುವುದರಿಂದಲೂ ತೆರಿಗೆ ಸಂಗ್ರಹ ಹೆಚ್ಚಳವಾಗಿದೆ. ಇ-ವೇ ಬಿಲ್‌ನಿಂದಾಗಿ ವ್ಯವಹಾರಗಳು ಇನ್ನಷ್ಟು ತ್ವರಿತ ಮತ್ತು ಪಾರದರ್ಶಕವಾಗಿದೆ.ಇದು ಆರ್ಥಿಕ ಅಭಿವೃದ್ಧಿಗೆ ಪೂರಕವಾಗಿ ವರ್ತಿಸುತ್ತಿದೆ.  ಜಗತ್ತಿನ 165 ದೇಶಗಳಲ್ಲಿ ಜಿಎಸ್‌ಟಿ ತೆರಿಗೆ ವ್ಯವಸ್ಥೆ ಒಂದಲ್ಲ ಒಂದು ರೂಪದಲ್ಲಿ ಜಾರಿಯಲ್ಲಿದೆ. ಕೇವಲ ಐದು ಪುಟ್ಟ ರಾಷ್ಟ್ರಗಳು ಮಾತ್ರ ಜಿಎಸ್‌ಟಿ ಅನುಷ್ಠಾನಗೊಳಿಸಿದ ಬಳಿಕ ಹಿಂಪಡೆದಿದ್ದವು. ಆದರೆ ಬಳಿಕ ಈ ದೇಶಗಳೂ ಅದನ್ನು ಪರಿಷ್ಕರಿಸಿ ಮರಳಿ ಜಾರಿಗೊಳಿಸಿವೆ. ಹೀಗೆ ಬಹುತೇಕ ದೇಶಗಳಲ್ಲಿ ಇದ್ದ ತೆರಿಗೆ ವ್ಯವಸ್ಥೆಯನ್ನು ನಾವು ಜಾರಿಗೊಳಿಸಲು ಹೊರಟಾಗ ಎದುರಾದ ರಾಜಕೀಯ ವಿರೋಧಗಳನ್ನು ನೋಡಿದಾಗ ಈ ದೇಶದಲ್ಲಿ ಹೊಸದನ್ನು ಅನುಷ್ಠಾನಿಸಲು ಸಾಧ್ಯವೇ ಇಲ್ಲವೇನೋ ಎಂಬ ಭಾವನೆ ಉಂಟಾಗಿತ್ತು. ಆದರೆ ವಿರೋಧಕ್ಕೆ ಮಣಿಯದೆ ಬದ್ಧತೆಯಿಂದ ಅನುಷ್ಠಾನಕ್ಕೆ ತಂದ ಫ‌ಲ ಈಗ ಕಾಣಿಸುತ್ತಿದೆ. 

ದೇಶಕ್ಕೊಂದೇ ತೆರಿಗೆ ದರ ಎನ್ನುವುದು ಜಿಎಸ್‌ಟಿಯ ಮೂಲ ಆಶಯ ಆಗಿದ್ದರೂ ಇದು ಪೂರ್ಣವಾಗಿ ನಿಜವಲ್ಲ. ಪ್ರಸ್ತುತ ನಾಲ್ಕು ಶ್ರೇಣಿಯ ದರವಿದೆ. ಇದನ್ನು ಮೂರಕ್ಕಿಳಿಸಿ ಕ್ರಮೇಣ ಎರಡಕ್ಕಿಳಿಸುವ ಅಗತ್ಯವಿದೆ. ಬಹುಶ್ರೇಣಿ ದರದಿಂದ ಸರಕುಗಳನ್ನು ಮತ್ತು ಸೇವೆಗಳನ್ನು ವರ್ಗೀಕರಿಸುವ ಸಮಸ್ಯೆ ತಲೆದೋರುತ್ತದೆ ಹಾಗೂ ಜನರಿಗೂ ಇದರಿಂದ ಗೊಂದಲ. ಸಾಮಾನ್ಯ ಬಳಕೆಯ ವಸ್ತುಗಳಿಗೆ ಒಂದು ದರ ಮತ್ತು ಐಷಾರಾಮಿ ವಸ್ತುಗಳಿಗೆ ಒಂದು ದರ ನಿಗದಿಯಾದರೆ ಎಲ್ಲರಿಗೂ ಪ್ರಯೋಜನವಿದೆ. ಅಂತೆಯೇ ಈಗಿರುವ ನೂರಾರು ನಿಯಮಗಳನ್ನು ಕಡಿಮೆಗೊಳಿಸುವುದರ ಜತೆಗೆ ಸರಳಗೊಳಿಸುವ ಅಗತ್ಯವೂ ಇದೆ. ಒಬ್ಬ ಸಾಮಾನ್ಯ ವ್ಯಾಪಾರಿ ಯಾವುದೇ ಸಹಾಯಕರ ಅಗತ್ಯವಿಲ್ಲದೆ ಸ್ವತಹ ಲೆಕ್ಕ ಹಾಕಿ ಸರಕು ಮತ್ತು ಸೇವಾ ತೆರಿಗೆ ಪಾವತಿಸುವಂತಾಗಬೇಕು. ಮಧ್ಯಮ ಶ್ರೇಣಿಯ ಕೈಗಾರಿಕೋದ್ಯಮಗಳನ್ನು ಮತ್ತು ವ್ಯಾಪಾರಿ ಸಂಸ್ಥೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಜಿಎಸ್‌ಟಿ ವ್ಯವಹಾರ ಮಿತಿಯನ್ನು ಕ್ರಮೇಣ 50 ಲ. ರೂ.ಗೇರಿಸುವ ಸಾಧ್ಯತೆಯನ್ನು ಪರಿಶೀಲಿಸಬೇಕು. ಇದರಿಂದ ಆಗುವ ಕಂದಾಯ ನಷ್ಟ ದೊಡ್ಡದೇನೂ ಅಲ್ಲ. 

ಆದರೆ ಇದೇ ವೇಳೆ ಸಣ್ಣ ಮತ್ತು ಮಧ್ಯಮ ಶ್ರೇಣಿಯ ಕೈಗಾರಿಕೋದ್ಯಮ ಮತ್ತು ವ್ಯಾಪಾರಕ್ಕೆ ಭಾರೀ ಉತ್ತೇಜನ ನೀಡಿದಂತಾಗುತ್ತದೆ. ಇದರಿಂದ ಉದ್ಯೋಗ ಸೃಷ್ಟಿಯಂತಹ ಇನ್ನಿತರ ಲಾಭಗಳಿವೆ. ಅಂತೆಯೇ ಪೆಟ್ರೋಲಿಯಂ ಉತ್ಪನ್ನಗಳನ್ನು ಸರಕು ಮತ್ತು ಸೇವಾ ತೆರಿಗೆಯ  ವ್ಯಾಪ್ತಿಯೊಳಗೆ ತರುವ ಕುರಿತು ಕೂಡ ಗಂಭೀರವಾಗಿ ಚಿಂತಿಸುವ ಅಗತ್ಯವಿದೆ. 

ಟಾಪ್ ನ್ಯೂಸ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-aaaa

Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-aaaa

Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.