ತಂಬಾಕು ಸೇವನೆ ಅಪಾಯಗಳು 


Team Udayavani, Jul 15, 2018, 6:00 AM IST

tobacco-restrictions.gif

ಹಿಂದಿನ ವಾರದಿಂದ – 4 ಮಿಲಿ ಗ್ರಾಂ ಚಿವಿಂಗ್‌ಗಮ್‌ ಬಳಸುತ್ತಿದ್ದರೆ, ಅದನ್ನು 2 ಮಿಲಿ ಗ್ರಾಂ ಮಾಡಿ ನಂತರ ಮೇಲಿನ ರೀತಿಯಲ್ಲಿ ಹಂತ-ಹಂತವಾಗಿ ಮುಂದುವರಿಸಲಾಗುವುದು
– ದಿನಕ್ಕೆ ಚಪಲವಾದಾಗ ಒಂದೆರಡು ಸಲ ಬಳಕೆಯ ಹಂತದವರೆಗೆ ತಲುಪಿದಾಗ ಇವುಗಳನ್ನು ನಿಲ್ಲಿಸಲಾಗುವುದು
– ಸಾಧಾರಣವಾಗಿ ಇವುಗಳನ್ನು ಮೂರು ತಿಂಗಳಿಗಿಂತ ಹೆಚ್ಚು ಕೊಡುವುದಿಲ್ಲ

ಚಿವಿಂಗ್‌ಗಮ್‌ ನಿಂದ ಆಗಬಹುದಾದ ಅಡ್ಡ ಪರಿಣಾಮಗಳು
ಬಾಯಿ/ಗಂಟಲು ಉರಿಯುವುದು, ವಾಂತಿ ಬರುವುದು, ಬಿಕ್ಕಳಿಕೆ ಬರುವುದು, ಹೆಚ್ಚು ಜೊಲ್ಲು ಸುರಿಯುವುದು.ಚಿವಿಂಗ್‌ಗಮ್‌ ಈ ಜನರಲ್ಲಿ ಕೊಡಲಾಗುವುದಿಲ್ಲ: ಹೊಟ್ಟೆಯಲ್ಲಿ ಹುಣ್ಣಿರುವವರು, ಕಳೆದ ಎರಡು ವಾರಗಳಲ್ಲಿ ಹೃದಯಾಘಾತ (ಹಾರ್ಟ್‌ ಅಟ್ಯಾಕ್‌), ಪಾಲ್ಸಿ (ಸ್ಟ್ರೋಕ್‌) ಆದವರು, ನಿಯಂತ್ರಣದಲ್ಲಿರದ ಹೃದಯದ ಕಾಯಿಲೆಯಿರುವವರು ಮತ್ತು ಇತರ ಗಂಭೀರ ದೈಹಿಕ ಕಾಯಿಲೆಯಿರುವವರು.

2.  ನಿಕೊಟಿನ್‌ ಕೊಡದೇ ಇರುವ ಚಿಕಿತ್ಸೆ (ನಾನ್‌- ನಿಕೊಟಿನ್‌ ರಿಪ್ಲೇಸ್‌ ಮೆಂಟ್‌ ಥೆರಪಿ)
ಈ ಚಿಕಿತ್ಸೆಯಲ್ಲಿ, ನಿಕೊಟಿನ್‌ ಪರಿಣಾಮಬೀರುವ ನರವಾಹಕಗಳ ಮೇಲೆ ಪರಿಣಾಮ ಬೀರುವ ಮಾತ್ರೆಗಳನ್ನು ಉಪಯೋಗಿಸಲಾಗುತ್ತದೆ. ಮೇಲಿನ ವಿಧಾನದಲ್ಲಿ ನಿಕೊಟಿನ್‌ ಶುರುಮಾಡಿದ ಅನಂತರ ತತ್‌ಕ್ಷಣವೇ ತಂಬಾಕು ನಿಲ್ಲಿಸಲಾಗುವುದು. ಆದರೆ ಈ ವಿಧಾನದಲ್ಲಿ ಮಾತ್ರೆ ಪ್ರಾರಂಭಿಸಿದ ಒಂದರಿಂದ ಎರಡು ವಾರದ ಅನಂತರ ತಂಬಾಕನ್ನು ನಿಲ್ಲಿಸಲಾಗುತ್ತದೆ. ಈ ಮಾತ್ರೆಗಳೆಂದರೆ: 

ಬುಪ್ರೋಪಿಯೊನ್‌ ವೆರಿನಿಕ್ಲೈನ್‌
ನಡವಳಿಕೆ ಚಿಕಿತ್ಸೆ ಮತ್ತು ಔಷಧಿ ಚಿಕಿತ್ಸೆಯನ್ನು ಒಟ್ಟಿಗೆ ಕೊಡುವುದು ಅತ್ಯಂತ ಪರಿಣಾಮಕಾರಿ ಚಿಕಿತ್ಸೆ. ಬೇರೆ-ಬೇರೆ ಚಿಕಿತ್ಸಾ ವಿಧಾನಗಳು ಬೇರೆ-ಬೇರೆ ರೀತಿಯಲ್ಲಿ ಕೆಲಸ ಮಾಡುವುದರಿಂದ, ಈ ಚಿಕಿತ್ಸೆಗಳು ಒಟ್ಟಾಗಿ ಕೊಟ್ಟಾಗ ಒಂದಕ್ಕೊಂದು ಪೂರಕವಾಗುವುದಲ್ಲದೇ ಅತ್ಯಂತ ಪರಿಣಾಮಕಾರಿಯಾಗಿರುತ್ತವೆ. ಸ್ವಸಹಾಯ ಪದ್ಧತಿಗಳು ಸ್ವಲ್ಪ$ಮಟ್ಟದಲ್ಲಿ ಮಾತ್ರ ಪರಿಣಾಮಕಾರಿಯಾಗಿರುತ್ತವೆ. ಆದರೆ ಮೇಲೆ ನಮೂದಿಸಿದ ಚಿಕಿತ್ಸಾ ವಿಧಾನಗಳು ಒಂದೇ ತರಹದ ಅಥವಾ ಒಟ್ಟಾಗಿ ಕೊಟ್ಟಾಗ ಪರಿಣಾಮವು ಹೆಚ್ಚಿಗಿರುತ್ತದೆ.

ತಂಬಾಕು ನಿಲ್ಲಿಸಿದ ನಂತರ  ಕಂಡುಬರುವ ತೊಂದರೆಗಳು  ಮತ್ತು ಅವುಗಳ ನಿರ್ವಹಣೆ
ತಂಬಾಕಿನ ಅವಲಂಬಿತ ವ್ಯಕ್ತಿ ತಂಬಾಕು ಸೇವನೆ ನಿಲ್ಲಿಸಿದ ಅನಂತರ ವಿವಿಧ ದೈಹಿಕ/ಮಾನಸಿಕ ತೊಂದರೆಗಳು ಸ್ವಲ್ಪ ಸಮಯದವರೆಗೆ ಅಂದರೆ 2 ದಿನದಿಂದ 2 ವಾರಗಳವರೆಗೆ ಕಂಡುಬರಬಹುದು. ಇವುಗಳ ನಿರ್ವಹಣೆಗೆ ಮೇಲೆ ನಮೂದಿಸಿದ ಚಿಕಿತ್ಸೆಗಳು ಫ‌ಲಕಾರಿಯಾಗಿರುವುವು. ಅದಲ್ಲದೇ ಕೆಲವು ನಡವಳಿಕಾ ವಿಧಾನಗಳನ್ನು ಈ ಕೆಳಗಿನಂತೆ ಕೂಡ ಕಲಿಸಿಕೊಡಲಾಗುವುದು.

ಕಿರಿ-ಕಿರಿಯಾಗುವುದು: ವಾಕಿಂಗ್‌ ಹೋಗುವುದು, ಸ್ನಾನಕ್ಕೆ ಹೋಗುವುದು, ಇಷ್ಟವಾಗುವ ಸಂಗೀತ ಕೇಳುವುದು, ಸ್ನೇಹಿತರೊಂದಿಗೆ ಮಾತಾಡುವುದು, ಯೋಗ ಮಾಡುವುದು, ನಿಧಾನವಾಗಿ ಮತ್ತು ಆಳವಾಗಿ ಉಸಿರಾಡುವುದು.

ಆಯಾಸ: ವಿಶ್ರಮಿಸುವುದು, ನಿದ್ದೆ ಮಾಡುವುದು, ನೀರು/ಜ್ಯೂಸ್‌ ಕುಡಿಯುವುದು.
ನಿದ್ರಾಹೀನತೆ: 6 ಗಂಟೆಯ ಅನಂತರ ಟೀ, ಕಾಫಿ, ಕೋಲ್ಡ… ಡ್ರಿಂಕ್ಸ್‌ ಕುಡಿಯಬಾರದು, ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬಹುದು
ಕೆಮ್ಮು: ಬಿಸಿ ಆವಿ/ಹೊಗೆ ತೆಗೆದುಕೊಳ್ಳುವುದು
ಏಕಾಗ್ರತೆಗೆ ಕಷ್ಟವಾಗುವುದು: ಕೆಲಸ ಮಾಡುವ ಬಗ್ಗೆ ಮುಂಚೆಯೇ ಯೋಜನೆ ಮಾಡಿಕೊಳ್ಳುವುದು, ಸಮಯ ಪಾಲನೆ ಮಾಡುವುದು, ಕೆಲಸವನ್ನು ವಿಭಜಿಸುವುದು
ಮಲಬದ್ಧತೆ: ಹೆಚ್ಚು ನಾರಿರುವ ಆಹಾರ ತೆಗೆದುಕೊಳ್ಳುವುದು ಉದಾ: ಹಣ್ಣು, ತರಕಾರಿ, ಇತ್ಯಾದಿ; ಹೆಚ್ಚಿನ ದ್ರವ್ಯ ತೆಗೆದುಕೊಳ್ಳುವುದು
ತಲೆನೋವು: ಸರಿಯಾಗಿ ದ್ರವ್ಯ ಸ್ವೀಕರಿಸುವುದು, ಸ್ವಲ್ಪ-ಸ್ವಲ್ಪ ತಿನ್ನುತ್ತಾ ಇರುವುದು, ವಿಶ್ರಮಿಸುವುದು
ಹಸಿವು ಹೆಚ್ಚಾಗುವುದು: ಸ್ವಲ್ಪ ಸ್ವಲ್ಪ ಆಹಾರ ಪದೇ-ಪದೇ ತೆಗೆದುಕೊಳ್ಳುವುದು 
ತಂಬಾಕಿನ ಆಸೆಯಾಗುವುದು/ಚಪಲ: ಗಮನ ಬೇರೆ ಕಡೆ ಹರಿಸುವುದು- ಸಂಗೀತ ಕೇಳುವುದು, ಓದುವುದು, ಮಾತನಾಡುವುದು, ವಾಕಿಂಗ್‌ ಮಾಡುವುದು, ನೀರು ಕುಡಿಯುವುದು. ತನ್ನಷ್ಟಕ್ಕೆ ತಾನೆ ಹೇಳಿಕೊಳ್ಳುವುದು: ಈ ಚಪಲ ತಾತ್ಕಾಲಿಕ ಮತ್ತು ಕೆಲವು ಕ್ಷಣಗಳಿಗಾಗಿ ಮಾತ್ರ ಇರುವುದು; ನಾನಿದನ್ನು ನಿಯಂತ್ರಿಸಬಲ್ಲೆ.

ಕೊನೆಯದಾಗಿ ಹೆಳುವುದಾದರೆ, ತಂಬಾಕು ಒಂದು ಜೀವನಶೈಲಿಯ ಅಂಗವಾಗಿ ಕೆಲವರಲ್ಲಿ ಜೀವನದ ಭಾಗವಾಗಿ ಹೋಗಿ ತನ್ನದಲ್ಲದೇ ಕುಟುಂಬ, ಸಮಾಜದ ಆರೋಗ್ಯಕ್ಕೆ ಶಬ್ದವಿಲ್ಲದೇ ಗಂಭೀರವಾಗಿ ಹಾನಿಮಾಡುತ್ತಿದೆ. ಇವುಗಳಿಗಾಗಿ ಚಿಕಿತ್ಸೆ ಲಭ್ಯವಿದ್ದು, ಕುಟುಂಬದವರು, ಸ್ನೇಹಿತರು, ಸಹೋದ್ಯೋಗಿಗಳು, ವೈದ್ಯರೊಟ್ಟಿಗೆ ಈ ನಿಟ್ಟಿನಲ್ಲಿ ತಂಬಾಕು ಸೇವಿಸುವ ವ್ಯಕ್ತಿಗೆ ಸಹಾಯ ನೀಡಿದರೆ ಈ ತಂಬಾಕಿನ ಪಿಡುಗನ್ನು ಆತನಿಂದ ಶಾಶ್ವತವಾಗಿ ದೂರವಿಡಬಹುದು. ಇವುಗಳಿಗಾಗಿ ಮಾನಸಿಕ ರೋಗ ಚಿಕಿತ್ಸಾ ವಿಭಾಗದಲ್ಲಿ ಸೂಕ್ತ ಚಿಕಿತ್ಸೆಯನ್ನು ಕೊಡಲಾಗುವುದು.
(ಆಧಾರ: ವಿಶ್ವ ಆರೋಗ್ಯ ಸಂಸ್ಥೆ ಕೈಪಿಡಿ 2012, ತಂಬಾಕು ಅವಲಂಬನೆ ಚಿಕಿತ್ಸಾ ಮಾರ್ಗದರ್ಶಿ, ಭಾರತ ಸರಕಾರ, 2011)
Mob: 9972028881; 
Email: 
ravindra.nmhotmail.com

ಟಾಪ್ ನ್ಯೂಸ್

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-health-1

Autism: ಸ್ವಲೀನತೆ: ಹಾಗೆಂದರೇನು?

12-health

Ankylosing Spondylitis: ಹಾಗೆಂದರೇನು ? ಕಾರಣವೇನು ? ಚಿಕಿತ್ಸೆ ಹೇಗೆ

5-health

Health: ಸಿರಿಧಾನ್ಯಗಳು: ಪುಟ್ಟ ಧಾನ್ಯಗಳಾದರೂ ಪೌಷ್ಟಿಕಾಂಶಗಳ ಗಣಿ

5-ginger

Ginger: ಶುಂಠಿ ಆರೋಗ್ಯಕ್ಕೆ ಉಪಕಾರಿ

7-

Obsessive Psychiatry: ಗೀಳು ಮನೋರೋಗ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.