ನಗುವಿಗೇಕೆ ರೇಷನ್?
Team Udayavani, Nov 17, 2018, 2:46 PM IST
ಕಿಸೆಗೂ, ತಲೆಗೂ ಭಾರವಾಗುವ ಸೀರೆ ಮೇಳ, ವಸ್ತು ಮೇಳಗಳ ನಡುವೆ ಮನಸ್ಸನ್ನು ಹಗುರಾಗಿಸುವ ಮೇಳವೊಂದು ನಗರದಲ್ಲಿ ನಡೆಯುತ್ತಿದೆ. ಅದುವೇ ಅಂತರಂಗ ರಂಗತಂಡದ ವತಿಯಿಂದ ಏರ್ಪಾಡಾಗಿರುವ ಹಾಸ್ಯಮೇಳ. ಎಚ್.ವಿ. ನಟರಾಜ್, ಎಸ್. ಷಡಕ್ಷರಿ, ಮೈಸೂರ್ ಆನಂದ್, ಎನ್. ರಾಮನಾಥ್, ಇಂದುಶ್ರೀ, ಅಚ್ಯುತರಾವ್ ಪದಕಿ, ಗಂಗಾವತಿ ಪ್ರಾಣೇಶ್, ನರಸಿಂಹ ಜೋಷಿ, ಮಹಾಮನಿಯವರು ಹಾಸ್ಯದ ರಸದೌತಣ ಬಡಿಸಲಿದ್ದಾರೆ. ವೈ.ವಿ. ಗುಂಡೂರಾವ್, ಎಂ.ಎಸ್ .ನರಸಿಂಹಮೂರ್ತಿ, ಎಚ್.ಎಸ್. ಲಕ್ಷಿ$¾àನಾರಾಯಣ ಭಟ್ಟ ಅವರು ಹಾಸ್ಯ ಅಂದು- ಇಂದು ಎಂಬ ವಿಚಾರ ಕುರಿತು ಮಾತುಕತೆ ನಡೆಸಲಿದ್ದಾರೆ. ಈ ಸಂದರ್ಭದಲ್ಲಿ ಹನಿಗವಿ ಡುಂಡಿರಾಜ್ ಅವರಿಗೆ ಗೌರವಾರ್ಪಣೆಯೂ ನಡೆಯಲಿದೆ.
ಎಲ್ಲಿ?: ಎನ್.ಎಂ.ಕೆ.ಆರ್.ವಿ ಕಾಲೇಜ್,ಜಯನಗರ 3ನೇ ಬ್ಲಾಕ್
ಯಾವಾಗ?: ನ. 18, ಬೆಳಿಗ್ಗೆ 10- ಸಂಜೆ 7