ಗರಿಗರಿ ತುಪ್ಪದ ದೋಸೆಗೆ ಗುಣವಂತೆ ಭಟ್ಟರ ಹೋಟೆಲ್‌ 


Team Udayavani, Jun 18, 2018, 4:36 PM IST

hotel.jpg

ಭಟ್ಟರ ಹೋಟೆಲ್‌ನಲ್ಲಿ ವಿಶೇಷವಾಗಿ ಅವಲಕ್ಕಿ ಮೊಸರು, ಇಡ್ಲಿ ಮೊಸರು, ಮಿಸಾಳ್‌, ಬೋಂಡಾ, ಇಡ್ಲಿ ವಡೆ ತಯಾರಿಸುತ್ತಾರೆ.  ಇದರ ಜೊತೆಗೆ ರಾಗಿಪಾನಕ, ನಿಂಬೆ ಪಾನಕ, ಕಷಾಯ… ಹೀಗೆ ಮಲೆನಾಡಿನ ಇನ್ನೂ ಹಲವಾರು ತಿಂಡಿಗಳು ದೊರೆಯುತ್ತವೆ. 

ರುಚಿಯಾದ ಆಹಾರ ಯಾರಿಗೆ ಬೇಡ ಹೇಳಿ? ಶುಚಿ ರುಚಿಯಾದ ತಿಂಡಿ ಸಿಗುತ್ತದೆ ಎಂದರೆ ಹುಡುಕಿಕೊಂಡು ಹೋಗಿ ಹೊಟ್ಟೆತುಂಬ ತಿಂದು ಬರ ಬೇಕೆಂದು ಅನಿಸದೇ ಇರುವುದಿಲ್ಲ. ಹೀಗೆಯೇ ಎಲ್ಲರ ಅಚ್ಚು ಮೆಚ್ಚಿಗೆ ಪಾತ್ರವಾಗಿರುವ ಹೋಟೆಲ್‌ ಉತ್ತರಕನ್ನಡ ಜಿಲ್ಲೆ ಹೊನ್ನಾವರ ತಾಲ್ಲೂಕಿನ ಗುಣವಂತೆಯಲ್ಲಿದೆ. ಹೆಸರು ಗುರುಕೃಪ ಭಟ್ಟರ ಹೋಟೆಲ್‌.  ಇದು ರಾಷ್ಟ್ರೀಯ ಹೆದ್ದಾರಿ 66ಕ್ಕೆ ಹೊಂದಿಕೊಂಡಿದೆ. ಇಲ್ಲಿನ ಉಪಹಾರ ಎಲ್ಲರಿಗೂ ಪರಿಚಿತ. ಇಲ್ಲಿ ಸಿಗುವ ಬಿಸಿ ಬಿಸಿ ತುಪ್ಪದ ದೋಸೆಯಿಂದಾಗಿ ಆ ರೀತಿಯ ಘಮ್ಮತ್ತು ಹರಡಿದೆ.  ಈ ಉಪಹಾರ ಗೃಹದ ಮುಂದೆ ರಸ್ತೆಯಲ್ಲಿ ಲಾರಿಗಳು, ಕಾರುಗಳು, ಆಟೋಗಳು, ದ್ವಿಚಕ್ರವಾಹನಗಳು ಸಾಲು ಸಾಲಾಗಿ ನಿಂತಿರುತ್ತವೆ. ಎಲ್ಲರೂ ತುಪ್ಪದ ದೋಸೆಯ ಆಸೆಯಲ್ಲಿ ಬಂದವರೇ ಆಗಿರುತ್ತಾರೆ.  ಅಂಥ ರುಚಿ, ಘಮಲು.

ಮಂಗಳೂರಿನಿಂದ ಕಾರವಾರ ಮಾರ್ಗವಾಗಿ ಸಂಚರಿಸುವವರು ಮತ್ತು ಗೋವಾದಿಂದ ಮಂಗಳೂರಿಗೆ ಸಂಚರಿಸುವವರು ಸಾಮಾನ್ಯವಾಗಿ ಗುಣವಂತೆಯಲ್ಲಿ ನಿಲ್ಲಿಸಿ, ಇಲ್ಲಿಯ ತುಪ್ಪದ ದೋಸೆ ತಿಂದೇ ಪ್ರಯಾಣ ಮುಂದುವರಿಸುತ್ತಾರೆ. 

ಗುರುಕೃಪ ಭಟ್ಟರ ಹೋಟೆಲ್‌ ಸ್ಥಾಪನೆಯಾಗಿ ಸುಮಾರು 50 ವರ್ಷಗಳು ಕಳೆದಿವೆ. ಇಲ್ಲಿನ ವಿಶೇಷತೆ ಏನೆಂದರೆ ಇಲ್ಲಿ ಬಳಸುವ ಶುದ್ಧವಾದ ದೇಸಿತುಪ್ಪ. ದೇಸಿ ಹಾಲನ್ನು ಮಡಿಕೆಯಲ್ಲಿ ಹೆಪ್ಪು ಹಾಕುತ್ತಾರೆ.  ಕಟ್ಟಿಗೆಯನ್ನೇ ಉರುವಲನ್ನಾಗಿ ಬಳಸುತ್ತಾರೆ. ಆದ್ದರಿಂದ ಇಲ್ಲಿ ಸಿಗುವ ಎಲ್ಲಾ ತಿಂಡಿಗಳು ಹೆಚ್ಚು ರುಚಿಯಿಂದ ಕೂಡಿರುತ್ತವೆ. ಹಸುವಿನ ತುಪ್ಪ ಬಳಸಿ ಇಲ್ಲಿ ದೋಸೆಯನ್ನು ಮಾಡುತ್ತಾರೆ.  ಅದರ ಜೊತೆಗೆ ಕಾಯಿ ಚಟ್ನಿಯಿಂದಾಗಿ ರುಚಿಯೋ ರುಚಿ.

ವಿಶೇಷವಾಗಿ ಅವಲಕ್ಕಿ ಮೊಸರು, ಇಡ್ಲಿ ಮೊಸರು, ಮಿಸಾಳ್‌, ಬೋಂಡಾ, ಇಡ್ಲಿ ವಡೆ ತಯಾರಿಸುತ್ತಾರೆ.  ಇದರ ಜೊತೆಗೆ ರಾಗಿಪಾನಕ, ನಿಂಬೆ ಪಾನಕ, ಕಷಾಯ… ಹೀಗೆ ಮಲೆನಾಡಿನ ಇನ್ನೂ ಹಲವಾರು ತಿಂಡಿಗಳು ದೊರೆಯುತ್ತವೆ. 

“ಜನ ಸೇವೆಗೆ ಮೊದಲ ಆಧ್ಯತೆ ರುಚಿ, ಶುಚಿಯ ಜೊತೆಗೆ ಗುಣಮಟ್ಟವನ್ನು ಕಾಪಾಡಿಕೊಂಡು ಬಂದಿದ್ದೇವೆ. ನಮ್ಮಲ್ಲಿ ಸಿಗುವ ಎಲ್ಲಾ ಆಹಾರಗಳು ಜನರ ಇಷ್ಟಪಡುತ್ತಾರೆ ಇದಕ್ಕಿಂತ ಹೆಚ್ಚಿನ ಸಂತೋಷ ಏನು ಬೇಕು ಹೇಳಿ? ಜನರ ಬೇಡಿಕೆಗೆ ಅನುಗುಣವಾಗಿ ಇನ್ನೂ ಒಳ್ಳೆಯ ರೀತಿಯಲ್ಲಿ ಆಹಾರವನ್ನು ನೀಡಲು ಪ್ರಯತ್ನಿಸುತ್ತೇವೆ’ ಎನ್ನುತ್ತಾರೆ ಹೋಟೆಲ್‌ ಮಾಲೀಕ ಗಣೇಶ್‌.

ಭಟ್ಟರ ಹೋಟೆಲ್‌ಗೆ ಸಿನಿಮಾ ನಟರ ದಂಡು ಬಂದಿದೆ.  ವರನಟ ಡಾ.ರಾಜ್‌ಕುಮಾರ್‌, ವಿ.ಮನೋಹರ್‌, ಪಂಡರಿಭಾಯಿ, ನೀರ್ನಳ್ಳಿ ರಾಮಕೃಷ್ಣ , ಬಂಗಾರಪ್ಪ, ರಾಮಕೃಷ್ಣಹೆಗಡೆ ಹೀಗೆ ಹಲವರು ಇಲ್ಲಿಯ ತುಪ್ಪದ ದೋಸೆಯನ್ನು ಸದಿದ್ದಾರೆ. ಈ ಹೋಟೆಲ್‌ ಇರುವುದು ಹೊನ್ನಾವರದಿಂದ 9 ಕಿ.ಮೀ ದೂರ ಭಟ್ಕಳದಿಂದ 20 ಕಿ.ಮೀ ದೂರ.  ವಾರದ ಎಲ್ಲ ದಿನವೂ, ಬೆಳಿಗ್ಗೆ 6.30ರಿಂದ ಸಂಜೆ 8.30ರವರೆಗೆ ತೆರೆದಿರುತ್ತದೆ.

ಮಾಹಿತಿಗೆ: 9481806684

– ಬಳಕೂರು .ಎಸ್‌ ನಾಯಕ

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.