ಕೈ ಹಿಡಿವ ಕಡಲೆ


Team Udayavani, Oct 22, 2018, 12:28 PM IST

chana.jpg

ಕಡಲೆ ರೈತರ ಕೈ ಹಿಡಿಯುತ್ತೆ. ಇದು ಹಿಂಗಾರಿನ ಬೆಳೆಯಾಗಿದ್ದು ಹೆಚ್ಚು ಮಳೆಯ ಅವಶ್ಯಕತೆ ಇಲ್ಲ. ತಂಪಾದ ವಾತಾವರಣವಿದ್ದರೆ ಸಾಕು ವಾತಾವರಣದಲ್ಲಿರುವ ನೀರಿನಂಶವನ್ನೇ ಹೀರಿಕೊಂಡು ಬೆಳೆಯುತ್ತವೆ…

ನಾವು ತಿನ್ನುವ ಊಟದಲ್ಲಿ ದಿನನಿತ್ಯ ಕನಿಷ್ಠ 80 ಗ್ರಾಂ.ಗಳಷ್ಟಾದರೂ ದ್ವಿದಳ ಧಾನ್ಯದ ಕಾಳುಗಳು ಇರಲೇಬೇಕು!
ಹೌದು, ದ್ವಿದಳ ಧಾನ್ಯಗಳಿಗೆ ಇರುವ ಮಹತ್ವವೇ ಅಂಥದ್ದು. ಆಹಾರದಲ್ಲಿ ಮುಖ್ಯವಾಗಿ ಇರಬೇಕಾದ ಪ್ರೊಟೀನ್‌/ ಸಸಾರಜನಕ ಅಂಶವನ್ನು ಇವು ಒದಗಿಸುತ್ತವೆ. ಕಾಳುಗಳಲ್ಲಿ 39; ಸಿ39; ಜೀವಸತ್ವ ಹೆಚ್ಚಾಗಿದ್ದು, ಇವುಗಳನ್ನು ನಿರಂತರವಾಗಿ ಸೇವಿಸಿದರೆ ಅನಾರೋಗ್ಯ ನಿಮ್ಮ ಹತ್ತಿರವೂ ಸುಳಿಯಲ್ಲ. ಈ ಹಿನ್ನೆಲೆಯಲ್ಲಿಯೇ ಜಗತ್ತಿನಾದ್ಯಂತ ದ್ವಿದಳ ಧಾನ್ಯಗಳಿಗೆ ಅಧಿಕ ಬೇಡಿಕೆ ಇದೆ.

 ಅದರಲ್ಲೂ ಕಡಲೆ ರೈತರ ಕೈ ಹಿಡಿಯುತ್ತೆ. ಇದು ಹಿಂಗಾರಿನ ಬೆಳೆಯಾಗಿದ್ದು ಹೆಚ್ಚು ಮಳೆಯ ಅವಶ್ಯಕತೆ ಇಲ್ಲ. ತಂಪಾದ ವಾತಾವರಣವಿದ್ದರೆ ಸಾಕು ವಾತಾವರಣದಲ್ಲಿರುವ ನೀರಿನಂಶವನ್ನೇ ಹೀರಿಕೊಂಡು ಬೆಳೆಯುತ್ತವೆ. ಅಕ್ಟೋಬರ್‌, ನವೆಂಬರ್‌ನಲ್ಲಿ ಬಿತ್ತುವುದು ಸೂಕ್ತ. ಇದನ್ನು ಎಲ್ಲ ಥರದ ಮಣ್ಣಿನಲ್ಲಿಯೂ ಬೆಳೆಯಬಹುದಾದರೂ ಎರೆ (ಕಪ್ಪು) ಮಣ್ಣಿನಲ್ಲಿ ಒಳ್ಳೆಯ ಇಳುವರಿ ಬರುತ್ತದೆ. 

ಬೀಜ ಬಿತ್ತನೆ ಹೇಗೆ?
ಕಡಲೆಯಲ್ಲಿ ಕಂದು, ಹಳದಿ, ಕಪ್ಪು, ಬಿಳಿ ಹೀಗೆ ನಾಲ್ಕು ಬಣ್ಣದವುಗಳಿವೆ, ಒಂದೊಂದು ಪ್ರದೇಶದಲ್ಲಿ ಒಂದೊಂದು ವಿಧದ ಕಡಲೆ ಬೆಳೆಯುತ್ತಾರೆ. ಆದರೂ ಅಣ್ಣಿಗೇರಿ- 1 ಕಡಲೆ ಅತ್ಯಂತ ಜನಪ್ರಿಯ ತಳಿ. ಜೊತೆಗೆ ಬಿ.ಜಿ.ಡಿ – 103 ಹಾಗೂ ಜೆ.ಜಿ – 11 ಕೂಡ ಅಧಿಕ ಇಳುವರಿ ಕೊಡುವ ತಳಿಗಳು.

ಮುಂಗಾರಿನ ಬೆಳೆಯ ನಂತರ ಜಮೀನನ್ನು ಎರಡು ಸಲ ಉಳುಮೆ ಮಾಡಿ ಕೊನೆಗೊಮ್ಮೆ ಕಪ್ಪು ಮಣ್ಣಿನಲ್ಲಿ ಜಮೀನಿನ ತುಂಬಾ ಮಡಿ ಆಗುವಂತೆ ಕುಂಟೆಯ ಸಹಾಯದಿಂದ ಮಣ್ಣು ಎತ್ತರಿಸಬೇಕು. ಬಿತ್ತನೆಗೆ ಎರಡು ವಾರ ಮೊದಲು ಎಕರೆಗೆ ಕೇವಲ 2- 3 ಟನ್‌ನಷ್ಟು ಕೊಟ್ಟಿಗೆ ಗೊಬ್ಬರ ಹಾಕಿ ಮಣ್ಣಿನಲ್ಲಿ ಬೆರೆಸಿ. ಮೊದಲೇ ಹೇಳಿದಂತೆ ದ್ವಿದಳ ಧಾನ್ಯಗಳಿಗೆ ರಾಸಾಯನಿಕ ಗೊಬ್ಬರಗಳ ಅವಶ್ಯ ಇಲ್ಲ. ಹೊಲ ಫ‌ಲವತ್ತಾಗಿದ್ದರೆ ಅಷ್ಟೇ ಸಾಕು, ಕೂರಿಗೆಯ ಸಹಾಯದಿಂದ ಒಂದು ಅಥವಾ ಒಂದೂವರೆ ಅಡಿ ಅಗಲದ ಸಾಲಿನಲ್ಲಿ ಅರ್ಧ ಅಡಿಗೊಂದು ಬೀಜ ಬೀಳುವಂತೆ ಬಿತ್ತನೆ ಮಾಡಿ. 

ನಿರ್ವಹಣೆ ಹೇಗೆ?
ಕಡಲೆಯ ಹೊಲದಲ್ಲಿ ಮಾಮೂಲಾಗಿ ಹೆಚ್ಚಿನ ಕಳೆಯ ಕಾಟ ಇರಲ್ಲ. ಆದರೂ ಎರಡೂರು ಸಲ ಎಡೆಕುಂಟೆ ಹೊಡೆದು ಮಣ್ಣು ಸಡಿಲ ಮಾಡಿ, ಬಿರುಕುಗಳಿದ್ದರೆ ಮುಚ್ಚುವ ಹಾಗೆ ಮಾಡಿ. ಹಾಗೆಯೇ ಕೊನೆಯ ಸಲ ಎಡೆಕುಂಟೆ ಹೊಡೆಯುವಾಗ ಮಳೆ ಬಂದರೆ ನೀರು ಸಂಗ್ರಹವಾಗುವಂತೆ ಸ್ವಲ್ಪ ಮಣ್ಣನ್ನು ಗಿಡದ ಬುಡಕ್ಕೆ ಒತ್ತಿರಿ. ಪ್ರತಿ ಸಲ ಎಡೆಕುಂಟೆ ಹೊಡೆಯುವಾಗ ತಂಪಾದ ವಾತಾವರಣದಲ್ಲಿ ಇಟ್ಟ ಒಳ್ಳೆ ಸಾವಯವ ಗೊಬ್ಬರ, ಎರೆಹುಳು ಗೊಬ್ಬರ ಹಾಗೂ ಮುಂಗಾರಿನ ಬೆಳೆಗಾಗಿ ತಂದ ಇತರ ಸೂಕ್ಷ್ಮ ಪೋಷಕಾಂಶಗಳು ಉಳಿದಿದ್ದರೆ ಅವುಗಳನ್ನು ಮಿಕ್ಸ್‌ ಮಾಡಿ ಎರಚಬೇಕು. ತೀರ ರಾಸಾಯನಿಕ ಗೊಬ್ಬರ ಕೊಡಲೇಬೇಕು ಅನಿಸಿದರೆ ಎಕರೆಗೆ ಹೆಚ್ಚೆಂದರೆ ಹತ್ತು ಕೇಜಿಯಷ್ಟು ಡಿ.ಎ.ಪಿ ಗೊಬ್ಬರ ಮಾತ್ರ ಕೊಡಿ ಸಾಕು. ಇದರ ನಿವಾರಣೆಗಾಗಿ ಒಂದೆರಡು ಕೀಟಗಳು ಕಂಡಕೂಡಲೇ ಬೆಳ್ಳುಳ್ಳಿ ಮತ್ತು ಹಸಿಮೆಣಸಿನಕಾಯಿ ಕಷಾಯ ಸಿಂಪಡಿಸಬೇಕು. ಜೊತೆಗೆ ಕಡಲೆ ಬಿತ್ತುವಾಗ ಕಡಲೆ ಜೊತೆ ಒಂದಿಷ್ಟು ಸೂರ್ಯಕಾಂತಿ ಹಾಗೂ ಜೋಳದ ಬೀಜಗಳನ್ನು ಮಿಕ್ಸ್‌ ಮಾಡಿ ಬಿತ್ತಬೇಕು. ಆಗ ಪರಭಕ್ಷಕ ಪಕ್ಷಿಗಳು ಇದರ ಮೇಲೆ ಕುಳಿತು ಕೀಟಗಳನ್ನು ಹುಡುಕಿ ತಿನ್ನುತ್ತವೆ.

ರೋಗ ಬಂದಾಗ…
ಕಡಲೆ ಬೆಳೆಗೆ ಸಿಡಿರೋಗ, ಬೂದಿರೋಗ, ಗೊಡ್ಡುರೋಗ ಬರುವುದು ಸಾಮಾನ್ಯ. ಬಿತ್ತುವ ಮೊದಲು ಬೀಜಗಳಿಗೆ ಟ್ರೈಕೊಡಮಾರ್‌ ಜೈವಿಕ ಶಿಲಿಂದ್ರದಿಂದ ಬೀಜೋಪಚಾರ ಮಾಡಿ ಬಿತ್ತಿದರೆ, ಸಿಡಿ ರೋಗ ಬರುವುದಿಲ್ಲ. ಬೂದಿರೋಗ ಬಂದಾಗ, 1 ಲೀ. ನೀರಿಗೆ ಅರ್ಧ ಗ್ರಾಮ್‌ನಷ್ಟು ಕಾರ್ಬನ್‌ ಡೈಜಿಮ್‌ ಬೆರೆಸಿ ಸಿಂಪಡಿಸಬೇಕು. ಗೊಡ್ಡು ರೋಗಕ್ಕೆ ಯಾವುದೇ ಚಿಕಿತ್ಸೆ ಇಲ್ಲ. ಅಂಥ ಗಿಡಗಳನ್ನು ಕಿತ್ತೆಸೆಯುವುದೇ ಸೂಕ್ತ. ಆದಷ್ಟು ಒಳ್ಳೆಯ ಬೀಜಗಳನ್ನು ನೆಟ್ಟರೆ ಇದರ ತಲೆಬಿಸಿ ಇರದು.
-ಎಸ್‌.ಕೆ. ಪಾಟೀಲ್‌

ಟಾಪ್ ನ್ಯೂಸ್

ವಸಂತ ಕಾಲ ಬಂದಾಗ…ತಾಪಮಾನ ಏರಿಕೆ- ಭಾರತದಲ್ಲಿ ವಸಂತ ಋತು ಕಣ್ಮರೆ!

ವಸಂತ ಕಾಲ ಬಂದಾಗ…ತಾಪಮಾನ ಏರಿಕೆ- ಭಾರತದಲ್ಲಿ ವಸಂತ ಋತು ಕಣ್ಮರೆ!

Pan India: ಯಶ್‌ ʼಟಾಕ್ಸಿಕ್‌ʼ ಸಿನಿಮಾದ ಪ್ರಮುಖ ಪಾತ್ರದಲ್ಲಿ ಶ್ರುತಿ ಹಾಸನ್ ನಟನೆ – ವರದಿ

Pan India: ಯಶ್‌ ʼಟಾಕ್ಸಿಕ್‌ʼ ಸಿನಿಮಾದ ಪ್ರಮುಖ ಪಾತ್ರದಲ್ಲಿ ಶ್ರುತಿ ಹಾಸನ್ ನಟನೆ – ವರದಿ

ಪೊಲೀಸರ ಭರ್ಜರಿ ಕಾರ್ಯಾಚರಣೆ: ದಾಖಲೆ ಇಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದ 2.93 ಕೋಟಿ ಜಪ್ತಿ

ಪೊಲೀಸರ ಭರ್ಜರಿ ಕಾರ್ಯಾಚರಣೆ: ದಾಖಲೆ ಇಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದ 2.93 ಕೋಟಿ ಜಪ್ತಿ

11-kushtagi

Kushtagi: ವಸತಿ ನಿಲಯದ ಅವ್ಯವಸ್ಥೆ; ವಿದ್ಯಾರ್ಥಿಗಳಿಂದ ಪ್ರತಿಭಟನೆ

Bengaluru:ನಗರ್ತಪೇಟೆಯಲ್ಲಿ ಬಿಜೆಪಿ ಪ್ರತಿಭಟನೆಯ ಕಿಚ್ಚು; ಕ್ರಮದ ಭರವಸೆ, ಪ್ರತಿಭಟನೆ ವಾಪಸ್

Bengaluru:ನಗರ್ತಪೇಟೆಯಲ್ಲಿ ಬಿಜೆಪಿ ಪ್ರತಿಭಟನೆಯ ಕಿಚ್ಚು; ಕ್ರಮದ ಭರವಸೆ, ಪ್ರತಿಭಟನೆ ವಾಪಸ್

Tollywood: ‘ಪುಷ್ಪʼ ನಿರ್ದೇಶಕನ ಜೊತೆ ರಾಮ್‌ ಚರಣ್ ಸಿನಿಮಾ? 2ನೇ ಬಾರಿಯೂ ಮಾಡ್ತಾರಾ ಮೋಡಿ?

Tollywood: ‘ಪುಷ್ಪʼ ನಿರ್ದೇಶಕನ ಜೊತೆ ರಾಮ್‌ ಚರಣ್ ಸಿನಿಮಾ? 2ನೇ ಬಾರಿಯೂ ಮಾಡ್ತಾರಾ ಮೋಡಿ?

vijayapura

ಅನೈತಿಕ ಸಂಬಂಧ: ಜೋಡಿ ಹತ್ಯೆಗೈದು ಮೈಮೇಲೆ ಮುಳ್ಳುಕಂಟಿ ಹಾಕಿಹೋದ ಹಂತಕರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

ವಸಂತ ಕಾಲ ಬಂದಾಗ…ತಾಪಮಾನ ಏರಿಕೆ- ಭಾರತದಲ್ಲಿ ವಸಂತ ಋತು ಕಣ್ಮರೆ!

ವಸಂತ ಕಾಲ ಬಂದಾಗ…ತಾಪಮಾನ ಏರಿಕೆ- ಭಾರತದಲ್ಲಿ ವಸಂತ ಋತು ಕಣ್ಮರೆ!

Pan India: ಯಶ್‌ ʼಟಾಕ್ಸಿಕ್‌ʼ ಸಿನಿಮಾದ ಪ್ರಮುಖ ಪಾತ್ರದಲ್ಲಿ ಶ್ರುತಿ ಹಾಸನ್ ನಟನೆ – ವರದಿ

Pan India: ಯಶ್‌ ʼಟಾಕ್ಸಿಕ್‌ʼ ಸಿನಿಮಾದ ಪ್ರಮುಖ ಪಾತ್ರದಲ್ಲಿ ಶ್ರುತಿ ಹಾಸನ್ ನಟನೆ – ವರದಿ

ಪೊಲೀಸರ ಭರ್ಜರಿ ಕಾರ್ಯಾಚರಣೆ: ದಾಖಲೆ ಇಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದ 2.93 ಕೋಟಿ ಜಪ್ತಿ

ಪೊಲೀಸರ ಭರ್ಜರಿ ಕಾರ್ಯಾಚರಣೆ: ದಾಖಲೆ ಇಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದ 2.93 ಕೋಟಿ ಜಪ್ತಿ

11-kushtagi

Kushtagi: ವಸತಿ ನಿಲಯದ ಅವ್ಯವಸ್ಥೆ; ವಿದ್ಯಾರ್ಥಿಗಳಿಂದ ಪ್ರತಿಭಟನೆ

Bengaluru:ನಗರ್ತಪೇಟೆಯಲ್ಲಿ ಬಿಜೆಪಿ ಪ್ರತಿಭಟನೆಯ ಕಿಚ್ಚು; ಕ್ರಮದ ಭರವಸೆ, ಪ್ರತಿಭಟನೆ ವಾಪಸ್

Bengaluru:ನಗರ್ತಪೇಟೆಯಲ್ಲಿ ಬಿಜೆಪಿ ಪ್ರತಿಭಟನೆಯ ಕಿಚ್ಚು; ಕ್ರಮದ ಭರವಸೆ, ಪ್ರತಿಭಟನೆ ವಾಪಸ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.