ರಾಜಾ ಹರಿಶ್ಚಂದ್ರ


Team Udayavani, Feb 16, 2017, 3:45 AM IST

puraana-kathe.jpg

ರಾಜಾ ಹರಿಶ್ಚಂದ್ರನು ಇಕ್ಷ್ವಕು ವಂಶದ ಅರಸು. ಅಯೋಧ್ಯೆಯ ದೊರೆ. ಇವನಿಗೆ ಚಂದ್ರಮತಿ ಎಂಬ ಸುಶೀಲೆಯಾದ ಹೆಂಡತಿಯೂ, ಲೋಹಿತಾಶ್ವ ಎಂಬ ಮಗನೂ ಇದ್ದರು. ಹರಿಶ್ಚಂದ್ರನು ದಕ್ಷನಾದ ಚಕ್ರವರ್ತಿಯಾಗಿದ್ದನು. ರೂಪದಲ್ಲೂ, ಗುಣದಲ್ಲೂ, ಶೌರ್ಯದಲ್ಲೂ ಅವನಿಗೆ ಸರಿಸಾಟಿಯಾಗಿ ಯಾರೂ ಇರಲಿಲ್ಲ. ಅವನು ಸತ್ಯವಂತನೆಂದೂ ಯಾವುದೇ ಕಷ್ಟ ಬಂದರೂ ಸತ್ಯವನ್ನು ಬಿಡಲಾರ ಹಾಗೂ ಮಾತಿಗೆ ತಪ್ಪದವನು ಎಂದು ಪ್ರಸಿದ್ಧನಾಗಿದ್ದನು. ಇವನ ಉದಾತ್ತ ಗುಣಗಳನ್ನು ಕೇಳಿ ತಿಳಿದ ಮಹರ್ಷಿ ವಿಶ್ವಾಮಿತ್ರನಿಗೆ ಹರಿಶ್ಚಂದ್ರನನ್ನು ಪರೀಕ್ಷಿಸಬೇಕೆನಿಸಿತು. ಅದಕ್ಕಾಗಿ ಒಂದು ಕುಟಿಲವಾದ ವ್ಯೂಹವನ್ನು ಹೆಣೆದನು. 

ಹರಿಶ್ಚಂದ್ರನು ಒಮ್ಮೆ ಬೇಟೆಗಾಗಿ ಕಾಡಿಗೆ ಹೋದಾಗ ಇಬ್ಬರು ಮಾಯಾ ಸ್ತ್ರೀಯರು ಅವನನ್ನು ಅಡ್ಡಗಟ್ಟಿ ನಾವು ಅಪಾಯದಲ್ಲಿದ್ದೇವೆ. ರಕ್ಷಿಸೆಂದು ಕೇಳಿಕೊಂಡರು. ಒಪ್ಪಿಕೊಂಡ ರಾಜನಿಗೆ ‘ರಕ್ಷಿಸುವೆನೆಂದು ಮಾತು ಕೊಟ್ಟಿದ್ದೀಯೆ ನೀನೇ ನಮ್ಮನ್ನು ಮದುವೆಯಾಗಬೇಕು’ ಎಂದು ದುಂಬಾಲು ಬಿದ್ದರು. ರಾಜನು ಇದಕ್ಕೆ ಒಪ್ಪಲಿಲ್ಲ. ತಾನು ಏಕಪತ್ನಿàವ್ರತಸ್ಥನಾದ್ದರಿಂದ ಮದುವೆ ಅಸಾಧ್ಯ ಎಂದನು. ಈ ಮಾಯಾನಿಯರು ದೂರನ್ನು ವಿಶ್ವಾಮಿತ್ರನವರೆಗೂ ಕೊಂಡೊಯ್ದರು. ಮಹರ್ಷಿಯೂ ರಾಜನಿಗೆ ಮದುವೆಯಾಗೆಂದೇ ಹೇಳಿದನು. ಮಹರ್ಷಿ ಮಾತಿಗೂ ರಾಜ, ಈ ಮೊದಲು ಮಾಯಾವಿ ಮಹಿಳೆಯರಿಗೆ ಹೇಳಿದ್ದನ್ನೇ ಹೇಳಿ, ಅವರನ್ನು ಮದುವೆಯಾಗಲು ಆಗುವುದೇ ಇಲ್ಲ ಎಂದನು. ಮಹರ್ಷಿಯು ಮಾತಿಗೆ ತಪ್ಪಿದರೆ ದಂಡ ತೆರಬೇಕಾಗುತ್ತದೆ ಎಂದು ಹೆದರಿಸಿದನು. ರಾಜ ದಂಡ ತೆರುವುದಕ್ಕೆ ಒಪ್ಪಿಕೊಂಡನು. ಸೂಕ್ತಕಾಲದಲ್ಲಿ ತಾನು ರಾಜನ ಅರಮನೆಗೇ ಬಂದು ದಂಡ ವಸೂಲು ಮಾಡುವೆನೆಂದು ಮಹರ್ಷಿ ತಿಳಿಸಿದನು. ರಾಜ ತನ್ನ ರಾಜ್ಯಕ್ಕೆ ಂತಿರುಗಿದ. 

ಕೆಲವು ಕಾಲಾನಂತರ ವಿಶ್ವಾಮಿತ್ರನು ಅಯೋಧ್ಯೆಗೆ ಬಂದು ರಾಜನ ಬಳಿ ದಂಡ ವಸೂಲು ಮಾಡಲು ಬಂದಿರುವೆನೆಂದು ಹೇಳಿ, ದಂಡದ ರೂಪದಲ್ಲಿ ರಾಜನ ರಾಜನ ಸಕಲ ಸಂಪತ್ತು, ರಾಜ್ಯಕೋಶಾದಿಗಳನ್ನು ವಶಪಡಿಸಿಕೊಂಡು ರಾಜನನ್ನು ಕಾಡಿಗೆ ಹೋಗೆಂದನು. ಇಷ್ಟೇ ಅಲ್ಲದೆ ದಂಡಕ್ಕೆ ಅಷ್ಟು ದಿನದ ಬಡ್ಡಿಯನ್ನೂ ಕೇಳಿದನು. ರಾಜ ಬಡ್ಡಿ ಕೊಡಲು ಒಪ್ಪಿ ಕೊಂಚ ಸಮಯಾವಕಾಶ ಕೇಳಿದನು. ಮಹರ್ಷಿ ಒಪ್ಪಿ$ ‘ಅಲ್ಲಿಯವರೆಗೂ ನಿನಗೆ ನೆನಪು ಮಾಡಿಕೊಡಲು ನನ್ನ ಶಿಷ್ಯನನ್ನು ನಿನ್ನ ಜೊತೆ ಕಳಿಸುತ್ತೇನೆ ಆದರೆ ನೀನು ಯಾವುದೇ ಕಾರಣಕ್ಕೂ ಅವನ ಮೇಲೆ ಕೋಪಿಸಬಾರದು’ ಎಂದು ಷರತ್ತು ಹಾಕಿ ನಕ್ಷತ್ರಿಕ ಎಂಬ ಶಿಷ್ಯನನ್ನು ರಾಜನ ಜೊತೆ ಕಳಿಸಿದನು. 

ಮಾತಿಗೆ ತಪ್ಪದ ರಾಜಾ ಹರಿಶ್ಚಂದ್ರ, ತನ್ನ ಪತ್ನಿ ಚಂದ್ರಮತಿ, ರಾಜಕುಮಾರ ಲೋಹಿತಾಶ್ವರೊಂದಿಗೆ  ರಾಜೋಚಿತವಾದ ಉಡುಗೆಗಳನ್ನು  ತೆಗೆದಿಟ್ಟು ನಾರುಮಡಿಯುಟ್ಟು ವನವಾಸಕ್ಕೆ ಹೊರಟುನಿಂತ. ಊರಿನ ಜನರೆಲ್ಲ ಕಣ್ಣೀರು ತುಂಬಿ ರಾಜಪರಿವಾರವನ್ನು ಬೀಳ್ಕೊàಟ್ಟರು. ಈ ಪರಿವಾರದ ಜೊತೆಯಿದ್ದ ನಕ್ಷತ್ರಿಕ ರಾಜನನ್ನು ಪದೇ ಪದೇ ಹೀಯಾಳಿಸುತ್ತಾ ಬಡ್ಡಿಯನ್ನು ನೆನೆಪುಮಾಡುತ್ತಾ ಹೋಗುತ್ತಿದ್ದನು. ಸಂಪಾದನೆಗಾಗಿ ರಾಜ ಕಾಡುಮೇಡಿನಲ್ಲಿ ಬಹುವಾಗಿ ಅಲೆದಾಡಿ ದಣಿದನು. ನಂತರ ಒಂದು ಊರಿನಲ್ಲಿ ಅವನು ತನ್ನ ಪತ್ನಿ ಹಾಗೂ ಪುತ್ರನನ್ನು ಒಬ್ಬ ಬ್ರಾಹ್ಮಣನ ಬಳಿ ಜೀತಕ್ಕಿಟ್ಟು ಹಣವನ್ನು ಪಡೆದನು ಅದನ್ನು ನಕ್ಷತ್ರಿಕನಿಗೆ ಕೊಟ್ಟಾಗ ‘ಇದೇನೋ ಬಡ್ಡಿಯಾಯಿತು. ನಿನ್ನ ಹಿಂದೆ ಅಲೆದದ್ದಕ್ಕಾಗಿ ನನಗೇನೂ ಇಲ್ಲವೇ?’ ಎಂದು ಕೇಳಿದನು. ರಾಜ ಒಬ್ಬ ಸ್ಮಶಾನದ ಕಾವಲುಗಾರನಿಗೆ ತನ್ನನ್ನೇ ತಾನು ಮಾರಿಕೊಂಡು ಆ ಹಣವನ್ನು ನಕ್ಷತ್ರಿಕನಿಗೆ ಕೊಟ್ಟು ಕಳಿಸಿದನು. 

ಇತ್ತ ಬ್ರಾಹ್ಮಣನ ಮನೆಯಲ್ಲಿ ರಾಣಿ ಚಂದ್ರಮತಿ ನಾನಾ ಕಷ್ಟಗಳನ್ನು ಅನುಭವಿಸಿದಳು. ರಾಜಕುಮಾರನೂ ಸಹ ಕಠಿಣವಾದ ಕೆಲಸಗಳನ್ನು ಮಾಡುತ್ತಿದ್ದನು. ಸರಿಯಾದ ಊಟೋಪಚಾರಗಳಿಲ್ಲದೆ ಇಬ್ಬರೂ ಸೊರಗಿ ಹೋಗಿದ್ದರು. ಒಮ್ಮೆ ಕಟ್ಟಿಗೆ ತರಲು ಕಾಡಿಗೆ ಹೋದ ಲೋಹಿತಾಶ್ವ ಹಾವು ಕಡಿದು ಸತ್ತು ಹೋದನು. ಚಂದ್ರಮತಿಗೆ ಮಗನ ಶವ ಸಂಸ್ಕಾರ ಮಾಡಲೂ ಹಣವಿರಲಿಲ್ಲ. ಮಗನ ಶವವನ್ನು ಸುಡಲು ಸ್ಮಶಾನಕ್ಕೆ ತಂದಾಗ ಕಾವಲುಗಾರ ಹರಿಶ್ಚಂದ್ರ ಶುಲ್ಕ ಕೊಡೆಂದು ಅವಳನ್ನು ತಡೆದು ನಿಲ್ಲಿಸಿದನು. ಗ್ರಹಚಾರವಶಾತ್‌ ಇಬ್ಬರೂ ಒಬ್ಬರನ್ನೊಬ್ಬರು ಗುರುತಿಸಲಿಲ್ಲ. ಇದರ ಮದ್ಯೆ ಚಂದ್ರಮತಿಯ ಮೇಲೆ ಕಳ್ಳತನದ ಆರೋಪ ಬಂದು ಅವಳನ್ನು ಹಿಡಿಯಲು ಅಡವಿಗೆ ರಾಜಭಟರು ಬಂದರು.

ಅವಳು ಕಳ್ಳತನ ಮಾಡಿಲ್ಲವೆಂಬುದಕ್ಕೆ ಯಾವುದೇ ಆಧಾರ ಸಿಗಲಿಲ್ಲ. ಹರಿಶ್ಚಂದ್ರನಿಗೆ ಅವಳ ತಲೆ ಕಡಿಯಬೇಕೆಂದು ರಾಜಾಜ್ಞೆಯಾುತು. ಹರಿಶ್ಚಂದ್ರ ಇನ್ನೇನು ಚಂದ್ರಮತಿಯ ತಲೆ ಕಡಿಯಬೇಕೆಂದು ಕತ್ತಿ ಮೇಲೆತ್ತಿದಾಗ ಶಿವನ ದಯೆಯಿಂದ ಕತ್ತಿ ಹೂವಿನ ಹಾರವಾಯಿತು. ರಾಜನ ಸತ್ಯಸಂಧತೆಗೆ ಮೆಚ್ಚಿ ಪರಶಿವನು ಪ್ರತ್ಯಕ್ಷನಾದನು. ರಾಜನ ಕಾರ್ಪಣ್ಯ ತೀರಿತು. ಸತ್ಯಕ್ಕೆ ಗೆಲುವಾಯಿತು, ರಾಜನನ್ನು ಬಗೆಬಗೆಯಲ್ಲಿ ಕಷ್ಟಕ್ಕೆ ಗುರಿ ಮಾಡಿದ್ದಕ್ಕೆ ವಿಶ್ವಾಮಿತ್ರನೂ ಕ್ಷಮೆಯಾಚಿಸಿದನು. ಎಲ್ಲವೂ ಸುಖಾಂತಮಾತು. 

– ವೀಣಾ ರಾವ್‌

ಟಾಪ್ ನ್ಯೂಸ್

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.