ದೇವರನ್ನು ಎದುರು ಹಾಕಿಕೊಂಡ ಆರಾಕ್ನೆ


Team Udayavani, Dec 7, 2017, 6:30 AM IST

lead.jpg

ಬಹಳ ವರ್ಷಗಳ ಹಿಂದೆ ಗ್ರೀಕ್‌ ದೇಶದಲ್ಲಿ ಅರಾಕ್ನೆ ಎಂಬ ಯುವತಿ ವಾಸವಾಗಿದ್ದಳಂತೆ. ಆಕೆಯ ವೃತ್ತಿ ನೇಯ್ಗೆ. ರೇಶಿಮೆಯ ನೂಲನ್ನು ತೆಗೆದು, ಅದನ್ನು ಸುಂದರವಾಗಿ ನೇಯ್ದು, ವಿಧ ವಿಧವಾದ ರೇಷ್ಮೆಯ ಬಟ್ಟೆಗಳನ್ನು ತಯಾರಿಸುವುದರಲ್ಲಿ ಆಕೆಯದ್ದು ಎತ್ತಿದ ಕೈ. ಆಕೆಯಲ್ಲಿದ್ದ ಕಲಾತ್ಮಕತೆಯಂತೂ ಅದ್ಭುತ. ನೇಯ್ಗೆಯನ್ನೇ ತನ್ನ ಜೀವ ಎಂದುಕೊಂಡಿದ್ದ ಆಕೆ ದಿನದ ಪೂರ್ತಿ ಹೊಸ ಹೊಸ ಮಾದರಿಯ ರೇಷ್ಮೆ ಬಟ್ಟೆಗಳನ್ನು ತಯಾರಿಸುವುದರಲ್ಲಿಯೇ ಕಳೆಯುತ್ತಿದ್ದಳು. ಅಷ್ಟೇ ಅಲ್ಲ, ತಾನು ಮಾಡುವ ಕೆಲಸವನ್ನು ಅಷ್ಟೇ ಪ್ರೀತಿಸುತ್ತಿದ್ದಳು ಕೂಡ.

 ಗ್ರೀಕ್‌ನ ಎಲ್ಲ ಜನರೂ ರೇಷ್ಮೆಯ ಬಟ್ಟೆಗಳನ್ನು ಖರೀದಿಸಲು ಆಕೆಯಲ್ಲಿಗೇ ಬರುತ್ತಿದ್ದರು. ಹೀಗೆ ಸುತ್ತ ಮುತ್ತಲ ಪ್ರದೇಶದಲ್ಲಿ ಆರಾಕ್ನೆಯ ಪ್ರಸಿದ್ಧಿ ಹೆಚ್ಚುತ್ತಾ ಹೋಯಿತು. ಆರಾಕ್ನೆಗೆ ತನ್ನ ಕೈಚಳಕ, ಕಲಾತ್ಮಕತೆಯ ಬಗ್ಗೆ ಎಲ್ಲಿಲ್ಲದ ಹೆಮ್ಮೆ. ಪ್ರಸಿದ್ಧಿ ಹೆಚ್ಚಾದಂತೆಲ್ಲಾ ಅಹಂ ಬೆಳೆಯಿತು. ಆಕೆ ತನ್ನ ಕೌಶಲ್ಯದ ಬಗ್ಗೆ ಎಲ್ಲರಲ್ಲಿಯೂ ಕೊಚ್ಚಿಕೊಳ್ಳಲು ಶುರುಮಾಡಿದಳು. ಎಷ್ಟರಮಟ್ಟಿಗೆಯೆಂದರೆ ಅವಳು ತನ್ನ ಕಲಾತ್ಮಕತೆಯನ್ನು ಮೀರಿಸಲು ಗ್ರೀಕ್‌ ದೇವತೆ ಅಥೆನಾಳಿಗೆ ಕೂಡ ಸಾಧ್ಯವಾಗದು ಎಂದು ತನ್ನನ್ನು ತಾನು ಹೊಗಳಿಕೊಳ್ಳುತ್ತಿದ್ದಳು. 

ಈ ಮಾತುಗಳು ದೇವತೆ ಅಥೆನಾ ಕಿವಿಗೂ ಬಿದ್ದವು. ಅರಾಕ್ನೆಗೆ ಹೇಗಾದರೂ ಮಾಡಿ ಬುದ್ಧಿ ಕಲಿಸಬೇಕು ಎಂದು ಅಥೆನ್ಸ್‌ ನಿರ್ಧರಿಸಿದಳು. ಮಾರನೆಯ ದಿನ ಆರಾಕ್ನೆ ರೇಷ್ಮೆಯ ನೇಯ್ಗೆಯನ್ನು ಒಂದು ಕಡೆಯಿಂದ ಹೊಲಿಯುತ್ತಾ ಹೋದಂತೆಲ್ಲ, ಇನ್ನೊಂದು ಕಡೆ ತನ್ನಷ್ಟಕ್ಕೆ ತಾನೇ ಬಟ್ಟೆಯ ನೂಲುಗಳು ಬಿಚ್ಚಿಕೊಳ್ಳುತ್ತಾ ಹೋದವು. ಆರಾಕೆ°ಗೆ ಏನು ಮಾಡಲೂ ತೋಚದಾಯ್ತು. ಏಕೆ ಹೀಗಾಗುತ್ತಿದೆ ಎಂದು ತಿಳಿಯದಾಯಿತು. ಮತ್ತೆ ಮರುದಿನ ಅದೇ ಪರಿಸ್ಥಿತಿ ಪುನರಾವರ್ತನೆಯಾಯಿತು. ಅರಾಕ್ನೆಗೆ ಇದರಿಂದ ತುಂಬ ಬೇಜಾರಾಯಿತು. ನೇಯ್ಗೆಯೇ ಜೀವವಾಗಿದ್ದ ಆಕೆಗೆ ಆನೇಕ ದಿನಗಳಿಂದ ಒಂದು ಬಟ್ಟೆಯನ್ನೂ ಪೂರ್ತಿ ಮಾಡಲು ಸಾಧ್ಯವಾಗದಿದ್ದಾಗ ದಿಕ್ಕೇ ತೋಚದಂತಾಯಿತು. ಅರಾಕ್ನೆಯ ಗಿರಾಕಿಗಳೆಲ್ಲರೂ ಅವಳಿಂದ ರೇಷ್ಮೆಯ ಬಟ್ಟೆಯನ್ನು ಕೇಳಲು ಶುರು ಮಾಡಿದರು. ಅವಮಾನವನ್ನು ಸಹಿಸಿಕೊಂಡಳು ಆರಾಕ್ನೆ. ವರ್ಷಗಳೇ ಉರುಳಿದವು. ಆಕೆಗೆ ಎಂದೂ ನೇಯ್ಗೆ ಮಾಡಲಾಗಲೇ ಇಲ್ಲ. ಇದೇ ನೋವಲ್ಲಿ ಆರಾಕ್ನೆ ತೀರಿಕೊಂಡಳು. ನಂತರ ಗ್ರೀಕ್‌ ದೇವತೆ ಅಥೆನಾಗೆ ತಾನು ಮಾಡಿದ್ದು ತಪ್ಪು. ಅನ್ಯಾಯವಾಗಿ ತನ್ನಿಂದ ಒಂದು ಜೀವ ಹೋಯಿತು ಅಂತ ಅನ್ನಿಸಿ ಪಶ್ಚಾತ್ತಾಪವಾಯಿತು. “ಮುಂದಿನ ಜನ್ಮದಲ್ಲಿ ನೀನು ಭೂಮಿಯಲ್ಲಿ ಜೇಡವಾಗಿ ಹುಟ್ಟು. ಜೀವನಪೂರ್ತಿ ನಿನಗೆ ಇಷ್ಟ ಬಂದ ಹಾಗೆ ನೇಯ್ಗೆ ನೇಯುತ್ತಾ ಇರು’ ಎಂದು ಅಥೆನ್ಸ್‌ ಆರಾಕ್ನೆಯನ್ನು ವಾಪಸ್‌ ಭೂಮಿಗೆ ಕಳುಹಿಸಿದಳಂತೆ. 

– ಚೈತ್ರಾ ಹೊಸ್ಮನೆ

ಟಾಪ್ ನ್ಯೂಸ್

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.