ಇಸ್ಪೀಟೆಲೆಯ ಮೇಲೆ ನಿಂತ ಲೋಟ


Team Udayavani, Jul 26, 2018, 6:00 AM IST

1.jpg

ತಲೆ ಮೇಲೆ ನೋಟ್‌ಬುಕ್‌ ಇಟ್ಟು ಓಡುವ, ಬಾಯಲ್ಲಿ ಚಮಚ ಕಚ್ಚಿ ಹಿಡಿದು ಅದರ ಮೇಲೆ ಲಿಂಬೆಹಣ್ಣನ್ನಿಟ್ಟು ನಡೆಯುವಂಥ ಸ್ಪರ್ಧೆಗಳಲ್ಲಿ ನೀವೂ ಭಾಗವಹಿಸಿರುತ್ತೀರಿ. ಅದಕ್ಕೆ ಏಕಾಗ್ರತೆ ಹಾಗೂ ವಸ್ತುವನ್ನು ಬ್ಯಾಲೆನ್ಸ್‌ ಮಾಡುವ ಚಾಕಚಕ್ಯತೆ ಬೇಕು. ಆದರೆ, ಇಸ್ಪೀಟ್‌ ಕಾರ್ಡ್‌ ಮೇಲೆ ಪ್ಲಾಸ್ಟಿಕ್‌ ಲೋಟವನ್ನು ಇಡುವ ಬ್ಯಾಲೆನ್ಸ್‌ ಮಾಡಬಲ್ಲಿರಾ?…

ಬೇಕಾಗುವ ವಸ್ತು: ಇಸ್ಪೀಟ್‌ ಕಾರ್ಡ್‌, ನೀರು/ಜ್ಯೂಸ್‌ ತುಂಬಿದ ಪ್ಲಾಸ್ಟಿಕ್‌ ಲೋಟ.

ಪ್ರದರ್ಶನ: ಜಾದೂಗಾರನ ಟೇಬಲ್‌ ಮೇಲೆ ಒಂದು ಇಸ್ಟೀಟ್‌ ಕಾರ್ಡ್‌ ಹಾಗೂ ಜ್ಯೂಸ್‌/ ನೀರಿನಿಂದ ಅರ್ಧ ತುಂಬಿದ ಪ್ಲಾಸ್ಟಿಕ್‌ ಲೋಟ ಇದೆ. ಜಾದೂಗಾರ ಇಸ್ಪೀಟ್‌ ಕಾರ್ಡ್‌ ಅನ್ನು ನೇರವಾಗಿ ನಿಲ್ಲಿಸಿ, ಅದರ ಮೇಲೆ ಪ್ಲಾಸ್ಟಿಕ್‌ ಲೋಟವನ್ನು ಸರಾಗವಾಗಿ ಇಟ್ಟು ಬಿಡುತ್ತಾನೆ. ಅಲ್ಲಾ, ಒಂದು ಇಸ್ಪೀಟೆಲೆಯ ಮೇಲೆ ನೀರಿನ ಲೋಟ ಅಲುಗಾಡದೆ ನಿಂತಿದ್ದು ಹೇಗೆ?

ತಯಾರಿ: ಈ ಜಾದೂವಿನ ರಹಸ್ಯ ಅಡಗಿರುವುದು ಇಸ್ಪೀಟ್‌ ಕಾರ್ಡ್‌ನಲ್ಲಿ. ಅಂದರೆ ಒಂದು ಇಸ್ಪೀಟ್‌ ಕಾರ್ಡ್‌ ಪ್ರೇಕ್ಷಕರಿಗೆ ಕಾಣಿಸುತ್ತಿದರೂ, ಅದರ ಹಿಂದೆ ಇನ್ನೊಂದು ಇಸ್ಪೀಟ್‌ ಕಾರ್ಡ್‌ ಅಡಗಿರುತ್ತದೆ. ನೀವು ಒಂದು ಕಾರ್ಡ್‌ನ ಹಿಂದೆ ಇನ್ನೊಂದು ಕಾರ್ಡ್‌ ಇಟ್ಟು, ಅದರ ಅರ್ಧಭಾಗವನ್ನು ಮಾತ್ರ (ಚಿತ್ರದಲ್ಲಿ ತೋರಿಸಿರುವಂತೆ) ಅಂಟಿಸಿ. ಕಾರ್ಡ್‌ ಅನ್ನು ನೇರ ನಿಲ್ಲಿಸಿದಾಗ, ಇನ್ನರ್ಧ ಭಾಗ ಸ್ಟಾಂಡ್‌ನ‌ಂತೆ ಆಧಾರವಾಗಿ ನಿಲ್ಲುತ್ತದೆ. ಆಗ ಅದರ ಮೇಲೆ ಪ್ಲಾಸ್ಟಿಕ್‌ ಲೋಟವನ್ನಿಟ್ಟು ಸುಲಭವಾಗಿ ಬ್ಯಾಲೆನ್ಸ್‌ ಮಾಡಬಹುದು.

ಇಲ್ಲಿ ಗಮನಿಸಬೇಕಾದ ಎರಡು ಅಂಶಗಳಿವೆ: ಪ್ಲಾಸ್ಟಿಕ್‌ ಲೋಟ ಹಗುರವಾಗಿರುವುದರಿಂದ, ಅದರಲ್ಲಿ ಸ್ವಲ್ಪ ನೀರು ಹಾಕಬೇಕು. ಆದರೆ, ಜಾಸ್ತಿ ನೀರು ಹಾಕಿದರೆ ಅದರ ಭಾರವನ್ನು ಇಸ್ಪೀಟ್‌ ಕಾರ್ಡ್‌ ತಡೆಯುವುದಿಲ್ಲ. ಇನ್ನೊಂದು ಸಂಗತಿಯೇನೆಂದರೆ, ಚಾಕಚಕ್ಯತೆಯ ಈ ಜಾದೂವನ್ನು ಪ್ರಯೋಗಿಸಿ ನೋಡದೆ ಪ್ರದರ್ಶನಕ್ಕಿಳಿಯಬೇಡಿ. 

ವಿನ್ಸೆಂಟ್‌ ಲೋಬೋ

ಟಾಪ್ ನ್ಯೂಸ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-aaaa

Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-aaaa

Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.