ಕೊಲಂಬಸ್‌ ಕಂಡ ಸಮುದ್ರಕನ್ಯೆ


Team Udayavani, Nov 8, 2018, 7:00 AM IST

kolambas.png

ಪ್ರಾಚೀನ ಕಾಲದಲ್ಲಿ ಭಾರತ ದೇಶದ ಸಂಪತ್ತಿನ ಕುರಿತಾದ ಹಲವು ಊಹಾಪೋಹಗಳು, ಚಿತ್ರವಿಚಿತ್ರ ಸುದ್ದಿಗಳು ಐರೋಪ್ಯ ದೇಶದವರ ನಿದ್ದೆಗೆಡಿಸಿದ್ದವು. ಈ ಕಾರಣಕ್ಕೇ ಸ್ಪ್ಯಾನಿಷ್‌ ಸಂಶೋಧಕ ಕ್ರಿಸ್ಟೊಫ‌ರ್‌ ಕೊಲಂಬಸ್‌ ಭಾರತವನ್ನು ಸಮುದ್ರಮಾರ್ಗದಲ್ಲಿ ತಲುಪಲು ಹೆಣಗಾಡಿದ್ದು. ಭಾರತವನ್ನು ಆರಸಿ ಹೊರಟವನಿಗೆ ಭಾರತ ಸಿಕ್ಕಲಿಲ್ಲ. ಸಿಕ್ಕಿದ್ದು ಅಮೆರಿಕ. ಅದನ್ನೇ ಭಾರತವೆಂದು ತಪ್ಪು ತಿಳಿದ ಕೊಲಂಬಸ್‌ ಅಲ್ಲಿನ ಬುಡಕಟ್ಟು ಜನಾಂಗದವರನ್ನೇ ಭಾರತದವರೆಂದುಕೊಂಡು ಇಂಡಿಯನ್ನರೆಂದು ಕರೆದ. ಆದರೆ ಅವರು ತುಸು ಕೆಂಪಗಿದ್ದಿದ್ದರಿಂದ ರೆಡ್‌ ಇಂಡಿಯನ್ನರೆಂದು ಕರೆದ. ಇರಲಿ. ಕೊಲಂಬಸ್‌ ಸಮುದ್ರಪ್ರಯಾಣದ ಸಂದರ್ಭದಲ್ಲಿ ಅಚ್ಚರಿಯ ವಿಷಯವೊಂದನ್ನು ದಾಖಲಿಸಿದ್ದ. ಸಮುದ್ರದ ಮಧ್ಯದಲ್ಲಿ ಮನುಷ್ಯನನ್ನೇ ಹೋಲುವ ಸಮುದ್ರಜೀವಿಯನ್ನು ಕಂಡಿದ್ದಾಗಿ ತನ್ನ ದಿನಚರಿಯಲ್ಲಿ ಬರೆದುಕೊಂಡಿದ್ದ. ಪುರಾಣಕತೆಗಳಲ್ಲಿದ್ದ ‘ಮರ್ಮೈಡ್‌'(ಸಮುದ್ರ ಕನ್ಯೆ) ಅದೇ ಇರಬಹುದೆಂದು ಅನೇಕರು ತಿಳಿದರು. ಆದರೆ ಕೊಲಂಬಸ್‌ನ ದಿನಚರಿಯ ಮುಂದಿನ ಸಾಲುಗಳು ಆ ಅನುಮಾನವನ್ನು ಅಳಿಸಿದವು. ತಾನು ಕಂಡ ಜೀವಿಯ ಮುಖ, ನೋಡಲು ಪುರುಷನಂತಿತ್ತು ಎಂದು ಬರೆದಿದ್ದ. ಈ ವಿಷಯದ ಹಿಂದೆ ಬಿದ್ದ ಸಂಶೋಧಕರು ಕಡೆಗೂ ಕೊಲಂಬಸ್‌ ನೋಡಿದ್ದೇನು ಎನ್ನುವುದನ್ನು ಪತ್ತೆ ಹಚ್ಚಿದರು. ಆ ಜೀವಿ ಮನಾಟಿ ಅಥವಾ ಸಮುದ್ರ ಹಸು. ಅಮೆರಿಕವನ್ನೇ ಭಾರತವೆಂದು ತಪ್ಪಾಗಿ ತಿಳಿದ ಕೊಲಂಬಸ್‌ ಸಮುದ್ರಹಸುವನ್ನೂ ತಪ್ಪಾಗಿ ಗುರುತಿಸಿದ್ದರಲ್ಲಿ ಅಚ್ಚರಿಯೇನೂ ಇಲ್ಲ.

ಟಾಪ್ ನ್ಯೂಸ್

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.