ಅಕಂಬುಗ್ರೀವನ ಕತೆ
Team Udayavani, Dec 13, 2018, 6:00 AM IST
ಒಂದು ಕೊಳದಲ್ಲಿ ಕಂಬುಗ್ರೀವ ಎಂಬ ಆಮೆ ವಾಸವಾಗಿತ್ತು. ಅಲ್ಲೇ ವಾಸವಿದ್ದ ಎರಡು ಹಂಸಗಳು ಕಂಬುಗ್ರೀವನ ಗೆಳೆಯರು. ಈ ಮೂವರು ಬಹಳ ಕಾಲದಿಂದ ಸುಖವಾಗಿದ್ದರು. ಆದರೆ ಮುಂದೊಂದು ವರ್ಷ ಮಳೆ ಬಾರದೆ ಕೊಳ ಬತ್ತಿ ಹೋಯಿತು. ಹಂಸಗಳು ಮತ್ತೂಂದು ಕೊಳಕ್ಕೆ ಗುಳೇ ಹೋಗಲು ತಯಾರಿ ನಡೆಸಿದವು.
“ಗೆಳೆಯರೆ, ನನ್ನನ್ನೂ ನಿಮ್ಮ ಜತೆ ಒಯ್ಯಿರಿ’ ಎಂದು ಆಮೆ ಕೇಳಿಕೊಂಡಿತು. ಆಮೆಗಾದರೋ ಹಂಸಗಳಿಗಿರುವಂತೆ ರೆಕ್ಕೆಗಳಿಲ್ಲ. ಆದ್ದರಿಂದ ಹಂಸಗಳ ಜತೆ ಅದು ಹಾರಿಹೋಗುವಂತಿಲ್ಲ. ಈಗ ಏನು ಮಾಡಬೇಕು? ಸ್ವಲ್ಪ ಹೊತ್ತು ಯೋಚಿಸಿದ ನಂತರ ಹಂಸಗಳಿಗೆ ಒಂದು ಯೋಚನೆ ಹೊಳೆಯಿತು. ಅವು ಒಂದು ಉದ್ದ ಕಡ್ಡಿಯನ್ನು ತಂದವು. “ಈ ಕೋಲಿನ ಮಧ್ಯಭಾಗವನ್ನು ಗಟ್ಟಿಯಾಗಿ ಕಚ್ಚಿ ಹಿಡಿದುಕೊ. ನಾವಿಬ್ಬರೂ ಒಂದೊಂದು ತುದಿಯನ್ನು ತಮ್ಮ ಕೊಕ್ಕಿನಲ್ಲಿ ಕಚ್ಚಿಕೊಂಡು ಹಾರುತ್ತೇವೆ. ಆಗ ನೀನೂ ನಮ್ಮ ಜತೆ ಬರಲು ಸಾಧ್ಯ. ಆದರೆ ಒಂದು ವಿಷಯ ನೆನಪಿಟ್ಟುಕೋ. ಏನೇ ಆದರೂ ನಡುದಾರಿಯಲ್ಲಿ ಮಾತ್ರ ಬಾಯಿಬಿಡಬೇಡ. ಬಾಯಿಬಿಟ್ಟರೆ ನೀನು ಆಗಸದಿಂದ ಕೆಳಗೆ ಬೀಳುತ್ತೀಯೆ’ ಎಂದಿತು ಗೆಳೆಯ ಹಂಸ. ಅದರಂತೆ ಬಾಯಿ ಬಿಡುವುದಿಲ್ಲವೆಂದು ಆಮೆ ಮಾತು ಕೊಟ್ಟಿತು.
ಹಂಸಗಳು ಕಡ್ಡಿಯನ್ನು ಕಚ್ಚಿಕೊಂಡು ಮೇಲೆ ಹಾರಿದವು. ಸ್ವಲ್ಪ ಹೊತ್ತಿನಲ್ಲೇ ಅವು ಒಂದು ಪಟ್ಟಣದ ಮೇಲೆ ಹಾದುಹೋಗುತ್ತಿದ್ದವು. ಆಮೆಯನ್ನು ಹಂಸ ಸಾಗಿಸುವುದನ್ನು ಪಟ್ಟಣದ ಜನ ಈ ಮೊದಲು ನೋಡಿಯೇ ಇರಲಿಲ್ಲ! ಹಂಸ ಮತ್ತು ಆಮೆಯನ್ನು ನೋಡಿ ಹುಡುಗರು ಗಟ್ಟಿಯಾಗಿ ಕೂಗಿಕೊಂಡು ಕೆಳಗೆ ದೊಡ್ಡಗಲಾಟೆ ಎಬ್ಬಿಸಿದರು. ಕೆಳಗೆ ಏನಾಗುತಿದೆ? ಎಂದು ಕೇಳಲು ಆಮೆ ಬಾಯಿ ತೆರೆಯಿತು. ಬಾಯಿ ತೆರೆದಿದ್ದೇ ತಡ ಅದು ನೆಲಕ್ಕೆ ಅಪ್ಪಳಿಸಿ ಬಿತ್ತು. ಅದರ ಕೆಲಸ ಮುಗಿದುಹೋಯಿತು!
(ಕೃಪೆ- ಓರಿಯೆಂಟಲ್ ಲಾಂಗ್ಮನ್)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ