ವ್ಯಾನಿಶಿಂಗ್‌ ಕಾಯಿನ್‌


Team Udayavani, Dec 6, 2018, 6:00 AM IST

d-32.jpg

ಆನೆ, ತಾಜ ಮಹಲ್, ವಿಧಾನ ಸೌದ ಅಷ್ಟೇ ಯಾಕೆ ಬಿಟ್ರೆ ಲಿಬರ್ಟಿ ಸ್ಟ್ಯಾಚೂನು ಮಾಯಾ ಮಾಡ್ತೀವಿ ಅಂತ ಹೇಳ್ಳೋ ಎಷ್ಟೋ ಮೆಜಿಶೀಯನ್ಸ… ನ ನೀವು ನೋಡಿರಬಹುದು. ನಿಜಕ್ಕೂ ಅವೆಲ್ಲ ಅಸಾಧ್ಯ. ಆದ್ರೆ ಜಾದೂನಲ್ಲಿ ಸಾಧ್ಯ!!?? ಹೇಗೆ ಅಂತೀರಾ? ಇಲ್ಲೊಂದು ಸಣ್ಣ ಟ್ರಿಕ್‌ ಹೇಳಿ ಕೊಡ್ತೀನಿ ಅದನ್ನ ಕಲ್ತು ಜೊತೆಗೆಇನ್ನೂ ಸ್ವಲ್ಪ ತಲೆ ಉಪಯೋಗಿಸಿದ್ರೆ, ನೀವೂ ಕೂಡ ಆನೆಯೇನು….. ಆನೆ ಅಂಬಾರಿನೂ ಮಾಯಾ ಮಾಡಬಹುದು. ಕಲೀಬೇಕಾ? 

ಪ್ರದರ್ಶನ- ಒಂದು ಮ್ಯಾಟ್‌ ಮೇಲೆವೈನ್‌ ಗ್ಲಾಸ್‌ ಅಥವಾ ಯಾವುದೇ ಥರದ ಗ್ಲಾಸ್‌ ಒಂದನ್ನು ತಲೆಕೆಳಗಾಗಿಡಿ. ಪಕ್ಕದಲ್ಲಿ ಒಂದು ಕಾಯಿನ್‌ ಇಡಿ. ಒಂದು ಕರವಸ್ತ್ರ ಅಥವಾ ಟಿಶ್ಯೂ ಪೇಪರನ್ನು ಪ್ರೇಕ್ಷಕರಿಗೆ ಪರೀಕ್ಷಿಸಲು ಕೊಡಿ. ಅದರಲ್ಲೇನೂ ಇಲ್ಲವೆಂದು ಖಾತ್ರಿ ಮಾಡಿಸಿ. ಈಗ ಗ್ಲಾಸ್‌ ಮೇಲೆ ಆ ಕರವಸ್ತ್ರ ಅಥವಾ ಟಿಶ್ಯೂ ಪೇರ್ಪ ಹಾಕಿ ಜಾದೂ ಮಂತ್ರವನ್ನು ಹೇಳುತ್ತಾ ನಿಧಾನವಾಗಿ ಗ್ಲಾಸನ್ನು ಕಾಯಿನ್‌ ಮೇಲೆ ಇಟ್ಟು ಹೊದೆಸಿದ ಕರವಸ್ತ್ರವನ್ನು ತೆಗಿಯಿರಿ. ಏನಾಶ್ಚರ್ಯ!!! ಕಾಯಿನ್‌ ಅಲ್ಲಿರದೆ, ಮಾಯವಾಗಿದೆ!! ಪ್ರೇಕ್ಷಕರಿಗೆ ನೀವು ಹೊದೆಸಿದ ಕರವಸ್ತ್ರವನ್ನು ಮತ್ತೂಮ್ಮೆ ಪರೀಕ್ಷಿಸಲು ಕೊಡಿ ಕಾಯಿನ್‌ ಅಲ್ಲೂ ಇಲ್ಲ ಎನ್ನುವುದನ್ನು ಗಮನಿಸಿ ಅಚ್ಚರಿ ಪಡುವರು. ಈಗ ಮತ್ತೆ ಆ ಕರವಸ್ತವನ್ನು ಗ್ಲಾಸ್‌ ಮೇಲೆ ಹೊದಿಸಿ ಮೊದಲ ಸ್ಥಾನದಲ್ಲಿಡಿ. ಗಿಲಿ ಗಿಲಿ ಪೂವ್ವ ಕಾಯಿನ್‌ ತನ್ನ ಸ್ಥಾನದಲ್ಲೇ ಮತ್ತೆ ಪ್ರತ್ಯಕ್ಷ!!!

ಬೇಕಾಗುವ ವಸ್ತುಗಳು-
ಒಂದು ಗ್ಲಾಸ್‌ ಒಂದು ಕರವಸ್ತ್ರ ಒಂದು ನಾಣ್ಯ ಒಂದು ಯಾವುದೇ ಏಕ ಬಣ್ಣದ ಮ್ಯಾಟ್, ಅಥವಾ ಬಟ್ಟೆ. ಕತ್ತರಿ 

ಅಂಟು ಮಾಡುವ ವಿಧಾನ-
ಪ್ರದರ್ಶನದ ಮೊದಲೇ ನೀವು ಯಾವ ಮ್ಯಾಟ್‌ ಅಥವಾ ಬಟ್ಟೆ ತೆಗೆದು ಕೊಳ್ಳುತ್ತಿದ್ದೀರೋ ಅದೇ ಬಣ್ಣದ ಅಥವಾ ಅದೇ ಮ್ಯಾಟಿನ ತುಂಡೊಂದನ್ನು ಗ್ಲಾಸಿನ ಬಾಯಿಯ ಅಳತೆಗೆ ಸರಿಯಾಗಿ ಕತ್ತರಿಸಿ, ತುಂಡಿನ ಮೇಲ್ಮುಖ ಮೇಲೆ ಬರುವಂತೆ ಗ್ಲಾಸಿನ ಬಾಯಿಗೆ (ಚಿತ್ರದಲ್ಲಿ ತೋರಿಸಿರುವಂತೆ) ಸರಿಯಾಗಿ ಅಂಟಿಸಿ ಬೋರಾಲಾಗಿಡಿ. ಈಗ ನೀವು ಹಾಸಿರುವ ಮ್ಯಾಟ್‌ ಮತ್ತು ಗ್ಲಾಸಿನ ಬಾಯಿಗೆ ಹಚ್ಚಿರುವ ಅದೇ ಮ್ಯಾಟಿನ ತುಂಡು ಒಂದೇ ಆಗಿರುವುದರಿಂದ ನೀವು ಗ್ಲಾಸನ್ನು  ಕರವಸ್ತ್ರದಿಂದ ಮುಚ್ಚಿ ಕಾಯಿನ್‌ ಮೇಲೆ ಇಟ್ಟಾಗ ಕಾಯಿನ್‌ ಎಲ್ಲೂ ಮಾಯವಾಗದೆ ಅಲ್ಲೇ ಗ್ಲಾಸಿನ ಬಾಯಿಗೆ ಹಚ್ಚಿರುವ ಮ್ಯಾಟಿನ ಪೀಸಿನ ಕೆಳಗೆ ಮುಚ್ಚಿರುತ್ತದೆ. ಇಲ್ಲಿ ಕರವಸ್ತ್ರ ಕೇವಲ ಪ್ರೇಕ್ಷಕರ ಗಮನ ಬೇರೆಡೆಗೆ ಸೆಳೆಯಲು ಮತ್ತು ಗ್ಲಾಸಿನ ಬಾಯಿಗೆ ಅಂಟಿಸಿದ ಮ್ಯಾಟ್‌ ತುಂಡು ಸ್ಥಳಾಂತರಿಸುವಾಗ ಕಾಣಿಸದೇ ಇರಲಿ ಎನ್ನುವುದ್ದಕ್ಕೆ ಮಾತ್ರ ಉಪಯೋಗ. ಈ ತಂತ್ರದ ರಹಸ್ಯ ಇಷ್ಟೇ. ಇದನ್ನೇ ಅತ್ಯಂತ ಕಲಾತ್ಮಕವಾಗಿ ಮಾಡೋದನ್ನು ಕರಗತ ಮಾಡಿಕೊಂಡರಾಯಿತು.

ವೀಡಿಯೊ ಲಿಂಕ್‌- https://tinyurl.com/ybdyhrz4

ಟಾಪ್ ನ್ಯೂಸ್

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.