ಕಾಂತಮಂಗಲ ಸೇತುವೆ ಮೇಲ್ಪದರ ಅಗೆದು ದುರಸ್ತಿ
Team Udayavani, Sep 15, 2018, 11:53 AM IST
ಅಜ್ಜಾವರ: ಕಾಂತಮಂಗಲ ಸೇತುವೆ ದುರಸ್ತಿ ಕಾಮಗಾರಿ ಭರದಿಂದ ನಡೆಯುತ್ತಿದೆ. ಜಿ.ಪಂ. ಎಂಜಿನಿಯರಿಂಗ್ ಇಲಾಖೆಯ ಮಾರ್ಗದರ್ಶನದಲ್ಲಿ ಸೇತುವೆಯ ಮೇಲ್ಪದರವನ್ನು ಪೂರ್ಣವಾಗಿ ಅಗೆದು ಹದಗೊಳಿಸುತ್ತಿದ್ದಾರೆ. ಒಂದು ತಿಂಗಳ ಕಾಲ ಈ ದುರಸ್ತಿ ಕಾಮಗಾರಿ ನಡೆಯಲಿದೆ. ಜನರ ಓಡಾಟ ಕಡಿಮೆಯಾಗದಿದ್ದರೂ ಕಾರ್ಮಿಕರು ಹೊಂದಿಕೊಂಡು ಕೆಲಸ ಮಾಡುತ್ತಿದ್ದಾರೆ. ಬದಲಿ ದಾರಿಯಿಲ್ಲದ ಕಾರಣ ಈ ರಸ್ತೆಯನ್ನೇ ಅವಲಂಬಿಸಬೇಕಾಗಿದೆ ಎಂದು ಗ್ರಾಮಸ್ಥರು ಹೇಳುತ್ತಾರೆ.
ಸೇತುವೆಯ ದುರಸ್ತಿ ಕಾಮಗಾರಿ ನಡೆಯುತ್ತಿರುವುದರಿಂದ ಎಂದಿನಂತೆ ರಸ್ತೆಯ ಇಕ್ಕೆಲಗಳಲ್ಲಿ ಬಸ್ಸು ಮತ್ತು ಆಟೋಗಳು ನಿಂತಿವೆ. ಎರಡು ಭಾಗದಿಂದಲೂ ಜನರನ್ನ ಕೊಂಡೊಯ್ಯುತ್ತಿವೆ. ಅಜ್ಜಾವರ ಗ್ರಾ.ಪಂ. ಅಧ್ಯಕ್ಷೆ ಬೀನಾ ಕರುಣಾಕರ ಸ್ಥಳಕ್ಕೆ ಭೇಟಿ ನೀಡಿದ್ದರು.