ಕಾರ್‌ಕ್ರೇಝ್, ಹೊಸ ಟ್ರೆಂಡ್‌ ಸೃಷ್ಟಿಸಿದೆ ಬಾಡಿಗೆ ಕಾರು


Team Udayavani, Jan 18, 2019, 6:57 AM IST

18j-anuary-9.jpg

ಸ್ವಂತದ್ದೊಂದು ಕಾರು ಬೇಕು, ಅದರಲ್ಲಿ ಕುಳಿತು ಒಮ್ಮೆಯಾದರೂ ದೂರದೂರಿಗೆ ಹೋಗಬೇಕು ಎಂಬ ಕನಸು ಹಲವರಲ್ಲಿರುತ್ತದೆ. ಅದರೆ ನನಸು ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಕೊರಗುವವರು ಇನ್ನು ಚಿಂತಿಸಬೇಕಿಲ್ಲ. ಯಾಕೆಂದರೆ ಈಗಾಗಲೇ ಹಲವು ನಗರಗಳಲ್ಲಿ ದಿನ, ತಿಂಗಳುಗಟ್ಟಲೆ ಬಾಡಿಗೆ ಕಾರು ಪಡೆದು ಅದರ ಮಾಲಕರು ನೀವಾಗಬಹುದು. ಇದು ಕಾರುಕೊಳ್ಳುವ ಕ್ರೇಝ್ ಕಡಿಮೆ ಮಾಡಿಸಿ ಕಾರು ಬಾಡಿಗೆ ಪಡೆಯುವ ತುಡಿತವನ್ನು ಹೆಚ್ಚಿಸುತ್ತಿದೆ.

ಡ್ರೈವಿಂಗ್‌ ಗೊತ್ತಿದ್ದರೂ, ಹೊಸ ಕಾರು ತೆಗೆದುಕೊಳ್ಳಲು ಹಣಕಾಸಿನ ಸಮಸ್ಯೆ. ಆದರೆ ಈಗ ಅದಕ್ಕಾಗಿ ಚಿಂತಿಸಬೇಕಿಲ್ಲ. ನಿಮಗೆ ಕಾರು ಬಿಡಲು ಗೊತ್ತಿದ್ದರೆ ಸಾಕು, ನೀವೇ ಚಾಲನೆ ಮಾಡಿಕೊಂಡು ಎಲ್ಲಿ ಬೇಕಾದರಲ್ಲಿಗೆ ಹೋಗಿ ಬರುವುದಕ್ಕೆ ಬಾಡಿಗೆ ಕಾರು ನೀಡುವ ಅನೇಕ ಕಂಪೆನಿಗಳು ಮಾರುಕಟ್ಟೆಯಲ್ಲಿ ಈಗ ಹವಾ ಸೃಷ್ಟಿಸಿದೆ.

ಈ ಟ್ರೆಂಡ್‌ ಮೆಟ್ರೋ ಸಿಟಿಗಳಲ್ಲಿ ಹೆಚ್ಚಾಗಿದ್ದು, ಮುಂದಿನ ದಿನಗಳಲ್ಲಿ ಮಂಗಳೂರಿಗೂ ವ್ಯಾಪಿಸಲಿದೆ. ಕಾರು ತೆಗೆದುಕೊಳ್ಳುವ ಕನಸು ಕಾಣುವವರಿಗೆ ಇದೊಂದು ವರದಾನ. ಅಂದಹಾಗೆ ಈ ಹಿಂದೆ ಗಂಟೆಗಳ ಲೆಕ್ಕದಲ್ಲಿ ಕಾರು ಬಾಡಿಗೆಗೆ ಸಿಗುತ್ತಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಒಂದು ದಿನಗಳಿಂದ ತಿಂಗಳುಗಟ್ಟಲೆ ಕಾರುಗಳನ್ನು ಬಾಡಿಗೆಗೆ ಕೊಡುವ ಕಂಪೆನಿಗಳು ಕೂಡ ತಲೆ ಎತ್ತಿವೆ.

ಕಾರುಗಳ ನಿರ್ವಹಣೆ ಮತ್ತು ಭದ್ರತೆಯ ಉದ್ದೇಶದಿಂದ ನಗರದಲ್ಲಿರುವ ಹೆಚ್ಚಿನ ಕಾರ್‌ ಡೀಲರ್‌ಗಳು ಸೆಲ್ಫ್ ಕಾರ್‌ ಡ್ರೈವಿಂಗ್‌ಗೆ ಬಾಡಿಗೆಗೆ ನೀಡುವುದಿಲ್ಲ. ಆದರೆ ಆ್ಯಪ್‌ ಆಧಾರಿತ ಕಾರು ಬಾಡಿಗೆ ಸಂಸ್ಥೆಗಳು ಮಾತ್ರ ನಿಮ್ಮ ಕೈಗೆ ಕಾರುಗಳನ್ನು ನೀಡುತ್ತಿವೆ. ಕಾರು ಬಾಡಿಗೆಗೆ ನೀಡುವ ಸಂಸ್ಥೆಗಳಲ್ಲಿ ಮುಖ್ಯವಾದುದು ಅಂದರೆ ಝೂಮ್‌ ಸಂಸ್ಥೆ. ಆ್ಯಪ್‌ ಆಧಾರಿತ ಬುಕ್ಕಿಂಗ್‌ ಇದಾಗಿದ್ದು, ಒಂದು ಗಂಟೆ, ವಾರ, ತಿಂಗಳುಗಳ ಲೆಕ್ಕದಲ್ಲಿ ಬಾಡಿಗೆಗೆ ನೀಡುತ್ತಾರೆ. ಆನ್‌ಲೈನ್‌ ಮುಖೇನ ಬುಕ್ಕಿಂಗ್‌ ಮಾಡುವ ಸಂದರ್ಭದಲ್ಲಿ ಗ್ರಾಹಕರು ದಿನಗಳ ಬಗ್ಗೆ ನಮೂದಿಸಬೇಕಿದೆ.

ಸೆಲ್ಫ್ ಬಾಡಿಗೆ ಕ್ರಮ
ಕೆಲವೊಂದು ಸೆಲ್ಫ್ ಬಾಡಿಗೆ ಕಾರು ಕಂಪೆನಿಗಳು ಬಾಡಿಗೆಗೆ ಕಾರು ಕೊಡುವ ಮುನ್ನ ಗ್ರಾಹಕನಿಂದ ಸುಮಾರು 5,000 ರೂ. ನಷ್ಟು ಅಡ್ವಾನ್ಸ್‌ ಪಡೆದುಕೊಳ್ಳುತ್ತಾರೆ. ಆ ಹಣವನ್ನು ಕಾರು ಹಿಂಪಡೆಯು ವಾಗ ವಾಪಸ್‌ ನೀಡಲಾಗುತ್ತದೆ. ಸಾಮಾನ್ಯವಾಗಿ ಫಿಗೋ, ಅಮೇಝ್, ಸಿಟಿ, ಇಕೋ ನ್ಪೋರ್ಟ್‌, ಸ್ಕಾರ್ಪಿಯೋ, ಸಫಾರಿ, ಇ-20, ವ್ಯಾಗನರ್‌, ಇ-20 ಪ್ಲಸ್‌, ಮಾರುತಿ ಸ್ವಿಪ್ಟ್, ಮಹೇಂದ್ರ ಕೆಯುವಿ ಸಹಿತ ಮತ್ತಿತರ ಕಾರುಗಳು ಬಾಡಿಗೆಗೆ ಇವೆ.

ದರ ಎಷ್ಟು?
ನಾವು ಯಾವ ಕಾರುಗಳನ್ನು ಬಾಡಿಗೆಗೆ ಆಯ್ಕೆ ಮಾಡುತ್ತೇವೆ, ಎಷ್ಟು ತಿಂಗಳುಗಳವರೆಗೆ ಕಾರು ಬೇಕು ಎನ್ನುವುದರ ಮೇಲೆ ಕಾರಿನ ಬಾಡಿಗೆ ದರ ನಿಗದಿಯಾಗುತ್ತದೆ. ಬಾಡಿಗೆ ಕಾರು ಗಳಲ್ಲಿ ಡೀಸೆಲ್‌ ಜತೆ ಮತ್ತು ಡೀಸೆಲ್‌ ಇಲ್ಲದೆಯೇ ಎರಡು ಪ್ರಕಾರದಲ್ಲಿ ಆಯ್ಕೆ ಇದೆ. ಡೀಸೆಲ್‌ ಇದ್ದು ಕಾರು ಬಾಡಿಗೆಗೆ ತೆಗೆದುಕೊಳ್ಳುವುದಾದರೆ 3 ಗಂಟೆಗೆ 15 ಕಿಲೋ ಮೀಟರ್‌ಗೆ 180 ರೂ. ದರದಿಂದ ಪ್ರಾರಂಭವಾಗುತ್ತದೆ. ತಿಂಗಳುಗಳ ಕಾಲ ಬಾಡಿಗೆ ಕಾರ್‌ ಬುಕ್ಕಿಂಗ್‌ ಮಾಡುವುದಾದರೆ ಡೀಸೆಲ್‌ ಇಲ್ಲದೇ ಕಾರು ಪಡೆಯುವ ಆಯ್ಕೆ ಉತ್ತಮ. ಈ ವೇಳೆ ಹೆಚ್ಚಿನ ಆಫರ್‌ಗಳನ್ನು ಆಯಾ ಕಂಪೆನಿಗಳು ನೀಡುತ್ತವೆ.

ಉಪಯೋಗ ಬಹಳ
ಬಾಡಿಗೆ ಕಾರುಗಳನ್ನು ಪಡೆಯುವು ದರಿಂದ ಉಪಯೋಗ ಬಹಳಷ್ಟಿದೆ. ಲಕ್ಷಾಂತರ ರೂಪಾಯಿ ಕೊಟ್ಟು ಹೊಸ ಕಾರು ಖರೀದಿ ಮಾಡಲು ಕಷ್ಟವಾಗುವವರಿಗೆ ಇದು ವರದಾನವಾಗಿದೆ. ಹೊಸ ಕಾರು ಕೊಂಡುಕೊಳ್ಳುವುದು ಸುಲಭ. ಆದರೆ ಮುಂದಿನ ನಿರ್ವಹಣೆ ಕಷ್ಟ. ಬಾಡಿಗೆ ಕಾರು ಪಡೆದುಕೊಂಡರೆ ಇದು ತಪ್ಪಲಿದೆ.

ಆ್ಯಪ್‌ ಮೂಲಕವೇ ಬುಕ್ಕಿಂಗ್‌
ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನ ಮುಂದುವರಿದಿದ್ದು, ಬೆರಳ ತುದಿಯಲ್ಲೇ ಕ್ಲಿಕ್‌ ಮಾಡುವ ಮೂಲಕ ಕಾರು ಬುಕ್‌ ಮಾಡಬಹುದಾಗಿದೆ. ಸ್ಮಾರ್ಟ್‌ಫೋನ್‌ನ ಗೂಗಲ್‌ ಪ್ಲೇಸ್ಟೋರ್‌ನಲ್ಲಿ ಬಾಡಿಗೆ ಕಾರುಗಳ ಹತ್ತಾರು ಆ್ಯಪ್‌ ಇದ್ದು, ಇದರ ಮೂಲಕ ಮನೆಯಲ್ಲೇ ಕೂತು ಕಾರು ಬುಕ್‌ ಮಾಡಬಹುದು. ಅದರಲ್ಲಿಯೂ ಜೂಮ್‌, ಎಕೋ ಕಾರ್‌ ರೆಂಟ್, ಮೈಲ್ಸ್‌, ಎವಿಸ್‌, ಡ್ರೈವ್‌ ಈಸೀ, ಲೆಟ್ ಮಿ ಡ್ರೈವ್‌ ಮುಂತಾದ ಆ್ಯಪ್‌ಗ್ಳು ಪ್ರಸಿದ್ಧಿ ಪಡೆದಿವೆ.

ಹೊಸ ಕಾರು ಖರೀದಿ ಮಾಡುವುದಕ್ಕಿಂತ ಆನ್‌ಲೈನ್‌ನಲ್ಲಿ ಕಾರು ಬಾಡಿಗೆಗೆ ಪಡೆಯುವುದೇ ಉತ್ತಮ. ಇದರಿಂದ ಲಕ್ಷಾಂತರ ರೂಪಾಯಿ ಹಣ ಹೊಂದಿಸುವುದು ಉಳಿಯುತ್ತದೆ. ಅಲ್ಲದೆ, ಇನ್ಶೂರೆನ್ಸ್‌ ಸಹಿತ ಕಾರಿನ ನಿರ್ವಹಣೆಯ ವೆಚ್ಚ ಕಡಿಮೆಯಾಗಲಿದೆ.
– ಸತ್ಯನಾರಾಯಣ, ಉದ್ಯೋಗಿ 

ಮಂಗಳೂರಿನಲ್ಲಿ ಇತ್ತೀಚೆಗೆ ಆನ್‌ಲೈನ್‌ ಕಾರುಗಳಿಗೆ ಬೇಡಿಕೆ ಬರುತ್ತಿದೆ. ಅದರಲ್ಲಿಯೂ ಇಲ್ಲಿಗೆ ಬರುವ ಪ್ರವಾಸಿಗರು, ಕಾಲೇಜು ವಿದ್ಯಾರ್ಥಿಗಳು ಹೆಚ್ಚಾಗಿ ಬಳಸುತ್ತಿದ್ದಾರೆ. ಬಾಡಿಗೆಗೆ ವಾಹನ ನೀಡುವಾಗ ದೃಢೀಕೃತ ಚಾಲನಾ ಪರವಾನಗಿಯನ್ನು ಕಡ್ಡಾಯವಾಗಿ ಇರಿಸಿಕೊಳ್ಳುತ್ತೇವೆ.
 – ಆದೇಶ್‌,
ಕಾರು ಡೀಲರ್‌ ಹಂಪನಕಟ್ಟೆ

ಮಂಗಳೂರಿನಲ್ಲೂ ಬೇಡಿಕೆ
ಮಂಗಳೂರಿನಲ್ಲಿ ಆನ್‌ಲೈನ್‌ ಕಾರುಗಳಿಗೆ ಇತ್ತೀಚಿನ ದಿನಗಳಲ್ಲಿ ಬೇಡಿಕೆ ಬರುತ್ತಿದೆ. ಅದರಲ್ಲಿಯೂ ಬೇರೆ ರಾಜ್ಯದಿಂದ ಮಂಗಳೂರಿಗೆ ಬಂದವರು, ಪ್ರವಾಸಿಗರು, ಕಾಲೇಜು ವಿದ್ಯಾರ್ಥಿಗಳಿಂದ ಬೇಡಿಕೆ ಬರುತ್ತಿದೆ. ಮಂಗಳೂರಿನಲ್ಲಿ ಹೆಚ್ಚಾಗಿ ಗಂಟೆಯ ಲೆಕ್ಕದಲ್ಲಿ ಕಾರು ಬಾಡಿಗೆಗೆ ಸಿಗುತ್ತಿದೆ.

ನವೀನ್‌ ಭಟ್ ಇಳಂತಿಲ

ಟಾಪ್ ನ್ಯೂಸ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.