ವಿಟ್ಲ ನ್ಯಾಯಬೆಲೆ ಅಂಗಡಿ ಗೋಧಿಯಲ್ಲಿ ಇರುವೆ, ಹಿಕ್ಕೆ
Team Udayavani, Jan 21, 2017, 12:56 AM IST
ವಿಟ್ಲ: ವಿಟ್ಲದ ನ್ಯಾಯಬೆಲೆ ಅಂಗಡಿಯೊಂದರಲ್ಲಿ ದೊರೆತ ಗೋಧಿಯಲ್ಲಿ ಇರುವೆ ಕಂಡುಬಂದಿದೆ ಹಾಗೂ ಪಕ್ಷಿ, ಹೆಗ್ಗಣಗಳ ಹಿಕ್ಕೆ ಲಭಿಸಿದೆ. ಇದರಿಂದ ತೀವ್ರ ಅಸಮಾಧಾನಗೊಂಡ ಪಡಿತರ ಚೀಟಿದಾರರು ಸರಕಾರದ ಹಾಗೂ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಘಟನೆ ಗುರುವಾರ ಸಂಭವಿಸಿದೆ.
ವಿಟ್ಲದ ಪುರಭವನ ಬಳಿಯಿರುವ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಚೀಟಿದಾರರು ಖರೀದಿಸಿದ ಗೋಧಿಯಲ್ಲಿ ಪಾರಿವಾಳಗಳ ಹಿಕ್ಕೆ ಹಾಗೂ ಇರುವೆಗಳು ಪತ್ತೆಯಾದವು. ಕಳೆದ ಕೆಲವು ದಿನಗಳ ಹಿಂದೆ 40 ಚೀಲ ಗೋಧಿ ಇಲ್ಲಿಗೆ ಬಂದಿದ್ದು, ಅವು ಕಳಪೆಯಾಗಿವೆ. ಪಡಿತರ ಚೀಟಿದಾರರು ಗೋಧಿ, ಅಕ್ಕಿಯನ್ನು ಮೂರು ನಾಲ್ಕು ಕಿ.ಮೀ. ದೂರದಿಂದ ಒಯ್ಯುತ್ತಿದ್ದಾರೆ. ಇದರಲ್ಲಿ ಹೆಗ್ಗಣ ಹಿಕ್ಕೆ, ಕಸಕಡ್ಡಿಗಳು, ದೂಳುಗಳು ಸೇರಿವೆ. ಉಚಿತವಾಗಿ ಸಿಗುವ ಆಹಾರದಿಂದ ಬಡಪಾಯಿ ಜನರು ಆಸ್ಪತ್ರೆ ಸೇರುವ ದುಃಸ್ಥಿತಿಯಿದೆ ಎಂದು ನಾಗರಿಕರು ಆರೋಪಿಸಿದ್ದಾರೆ.
ಅಲ್ಲದೇ ಸಿಗುವ ಉಪ್ಪು ಪ್ಯಾಕೆಟ್ಗಳ ಬಾಯಿ ಬಿಚ್ಚಿಕೊಂಡು ನಷ್ಟವಾಗುತ್ತಿದೆ. ಇದನ್ನು ಮನೆಗೆ ಒಯ್ಯುವುದು ಹೇಗೆ ಎಂದವರು ಪ್ರಶ್ನಿಸಿದ್ದಾರೆ. ಸರಕಾರ ಕೂಪನ್ ವ್ಯವಸ್ಥೆ ಜಾರಿಗೆ ತಂದಿದ್ದು, ಮೂರು ನಾಲ್ಕು ದಿನಗಳ ಕಾಲ ನ್ಯಾಯಬೆಲೆ ಅಂಗಡಿಯಲ್ಲಿ ಅಲೆದಾಡುವ ಪರಿಸ್ಥಿತಿ ಬಂದಿದೆ. ವ್ಯವಸ್ಥೆಯ ತಾಂತ್ರಿಕ ದೋಷದಿಂದ ಈ ರೀತಿಯ ತೊಂದರೆ ಆಗುತ್ತಿದೆ. ಕೆಲವು ಪಡಿತರ ಚೀಟಿದಾರರ ಕುಟುಂಬದಲ್ಲಿರುವ ಹೆಸರುಗಳು ನಾಪತ್ತೆಯಾಗಿವೆ ಎಂದು ನಾಗರಿಕರು ತಿಳಿಸಿದರು.
ಪತ್ನಿ, ಮಗನ ಹೆಸರಿಲ್ಲ
ವಿಟ್ಲಕಸಬಾ ಗ್ರಾಮದ ಕೆದುವಡ್ಕ ವಿಕ್ಟರ್ ತಿಮೋತಿ ವೇಗಸ್ ಅವರ ಪಡಿತರ ಚೀಟಿಯಲ್ಲಿ ಹಿಂದೆ ಪತ್ನಿ ಲೆತೀಶ್ ವೇಗಸ್ ಮತ್ತು ಪುತ್ರ ಲ್ಯಾನ್ಸಿ ವೇಗಸ್ ಅವರ ಹೆಸರಿತ್ತು. ಇದೀಗ ಪರಿಷ್ಕೃತಗೊಂಡಾಗ ಅವರ ಪತ್ನಿ ಮತ್ತು ಮಗನ ಹೆಸರಿಲ್ಲ. ಇಡೀ ಕುಟುಂಬದಲ್ಲಿ ಯಜಮಾನನ ಹೆಸರು ಮಾತ್ರ ನಮೂದಾಗಿದೆ. ನ್ಯಾಯಬೆಲೆ ಅಂಗಡಿಯಲ್ಲಿ ಇರುವ ಹೆಸರಿಗೆ ಮಾತ್ರ ಸಾಮಗ್ರಿ ನೀಡುತ್ತಾರೆ. ಆಧಾರ್ ಕಾರ್ಡ್ ನೀಡಬೇಕು ಎಂದು ತಿಳಿಸಿದ ಪ್ರಕಾರ ಒದಗಿಸಲಾಗಿದೆ. ಆದರೂ ಹೆಸರು ನಾಪತ್ತೆಯಾಗಿದೆ. ಸರಕಾರದ ವ್ಯವಸ್ಥೆಯಲ್ಲಿರುವ ಲೋಪದೋಷಗಳಿಂದ ನಮಗೆ ಅನ್ಯಾಯವಾಗಿದೆ. ಇದನ್ನು ಸರಿಪಡಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bantwal: ಮತದಾನ ಮಾಡಿ ಮದುವೆ ಮುಹೂರ್ತಕ್ಕೆ ಅಣಿಯಾದ ನವವಧು
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…